ಧಾನ್ಯ ದಾಸ್ತಾನು; ನಷ್ಟ, ಕೀಟಬಾಧೆ ನಿಯಂತ್ರಣ


Team Udayavani, Nov 3, 2019, 4:34 AM IST

nn-55

ಧಾನ್ಯಗಳನ್ನು ಸಮರ್ಪಕವಾಗಿ ದಾಸ್ತಾನು ಮಾಡುವುದು ಅತ್ಯಗತ್ಯ. ಇಲ್ಲದಿದ್ದರೆ ಕೀಟಬಾಧೆ ಅಧಿಕವಾಗಿ ಭಾರಿ ನಷ್ಟ ಉಂಟಾಗ ಬಹುದು. “ಮುಂಜಾಗ್ರತೆ ವಹಿಸಿದ್ದೆವು. ಆದರೂ ಧಾನ್ಯಕ್ಕೆ ಹುಳು ಬಾಧೆ ತಗುಲಿದೆ’ ಎಂಬ ಮಾತನ್ನು ರೈತರು ಹೇಳುತ್ತಿರುತ್ತಾರೆ. ಅವರು ಮುಂಜಾಗ್ರತಾ ಕ್ರಮ ಅನುಸರಿಸಿದ್ದರೂ ಯಾವುದೋ ಒಂದು ಹಂತದಲ್ಲಿ ಎಡವುತ್ತಾರೆ. ಸಣ್ಣದೊಂದು ಪ್ರಮಾದ ದಿಂದಲೂ ಕೀಟಗಳ ಬಾಧೆ ವಿಪರೀತವಾಗುತ್ತದೆ. ದ್ವಿದಳ ಧಾನ್ಯಗಳ ಸಂಗ್ರಹಣೆಯಲ್ಲಿ ಹೆಚ್ಚು ಜಾಗರೂಕತೆ ಬೇಕು. ಏಕೆಂದರೆ, ಚಿಪ್ಪಿನಹುಳು ಬಾಧೆ ತಗುಲುವ ಸಾಧ್ಯತೆ ಹೆಚ್ಚಿರುತ್ತದೆ. ಚಿಪ್ಪಿನಹುಳುಗಳನ್ನು “ಬ್ರು ಬೆಡ್ಸ್‌’ ಎಂದು ಕರೆಯಲಾಗುತ್ತೆ. ಇವು ಚಿಕ್ಕದಾಗಿದ್ದು ದುಂಡಗಿನ ಆಕಾರ ಹೊಂದಿರುತ್ತವೆ. ಕಾಯಿ ಅಥವಾ ಕಾಳುಗಳ ಮೇಲೆ ಮೊಟ್ಟೆ ಇಡುತ್ತವೆ. ಅಗಾಧ ಸಂಖ್ಯೆಯ ಮೊಟ್ಟೆಗಳಿಂದ ಹೊರಬರುವ ಹುಳುಗಳು ದ್ವಿದಳ ಧಾನ್ಯಗಳ ಕಾಯಿ ಅಥವಾ ಕಾಳಿನೊಳಗೆ ಸೇರಿಕೊಳ್ಳುತ್ತವೆ. ಧಾನ್ಯವನ್ನು ತಿನ್ನಲು ಪ್ರಾರಂಭಿಸುತ್ತವೆ. ಈ ಹುಳುಗಳು ಕೋಶಾವಸ್ಥೆ ತಲುಪಿ ಪ್ರೌಢಾವಸ್ಥೆಯಲ್ಲಿ ಕೀಟಗಳಾಗಿ ಮಾರ್ಪಾಡಾಗುತ್ತವೆ. ಆಗ ಕಾಳುಗಳಿಗೆ ರಂಧ್ರ ಕೊರೆದು ಹೊರಬರುತ್ತವೆ. ಮತ್ತೆ ಇವುಗಳಿಂದ ಮೊಟ್ಟೆ ಇಡುವ ಕ್ರಿಯೆ ನಡೆಯುತ್ತದೆ. ಇದರಿಂದಾಗಿ ಕೀಟಗಳ ಸಂಖ್ಯೆ ದ್ವಿಗುಣಗೊಳ್ಳುತ್ತದೆ.

ದಾಸ್ತಾನು ಮಾಡದಿದ್ದರೂ ತೊಂದರೆ
ದಾಸ್ತಾನು ಹಂತದಲ್ಲಿ ಈ ಕೀಟಗಳ ಹಾವಳಿ ತೀವ್ರವಾಗುತ್ತದೆ. ಸಾಮಾನ್ಯವಾಗಿ ಈ ಕೀಟಗಳು ದ್ವಿದಳ ಧಾನ್ಯಗಳು ಕೊಯಾಗುವ ಮೊದಲೇ ದಾಳಿ ಇಡುತ್ತವೆ. ಇವುಗಳ ಆಕ್ರಮಣಕ್ಕೆ ತುತ್ತಾದ ಧಾನ್ಯಗಳನ್ನೇ ಸಂಗ್ರಹಿಸುವುದರಿಂದ ಇವುಗಳ ಬೆಳವಣಿಗೆ ನಿರಾತಂಕವಾಗಿ ಸಾಗುತ್ತದೆ. ಇದಕ್ಕೆ ಕಾರಣ, ಕಳೆದ ಬಾರಿ ಉಪಯೋಗಿಸಿದ ಚೀಲಗಳು, ಕಣಜಗಳಲ್ಲಿ ಚಿಪ್ಪುಹುಳುಗಳು ಸುಪ್ತಾವಸ್ಥೆಯಲ್ಲಿರುವುದು ಗೊತ್ತಾಗದೆ, ಇವುಗಳಿರುವ ಚೀಲಗಳನ್ನು ಉಪಯೋಗಿಸಿದಾಗ ಮತ್ತೆ ಕೀಟಬಾಧೆ ಆರಂಭ. ಸಂಗ್ರಹಣೆಯಲ್ಲಿ ಉಂಟಾಗುವ ಇಂಥ ತೊಡಕಿನಿಂದಾಗಿ ರೈತರಿಗೆ ನಷ್ಟ ಉಂಟಾಗುತ್ತದೆ. ಆದ್ದರಿಂದಲೇ ಬಹಳಷ್ಟು ರೈತರು ಧಾನ್ಯ ದಾಸ್ತಾನು ಮಾಡಲು ಹೋಗುವುದಿಲ್ಲ. ಆಯಾ ಸಂದರ್ಭದಲ್ಲಿ ಮಾರುಕಟ್ಟೆ ಬೆಲೆಗೆ ಮಾರಿಬಿಡುತ್ತಾರೆ. ಮಾರುಕಟ್ಟೆಗೆ ಒಮ್ಮೆಲೇ ಧಾನ್ಯ ಹೆಚ್ಚಿನ ಪ್ರಮಾಣದಲ್ಲಿ ಹೋದಾಗ ಬೆಲೆಯನ್ನೂ ಕಡಿಮೆ ನಿಗದಿ ಪಡಿಸಲಾಗುತ್ತದೆ. ಇದರಿಂದ ನಷ್ಟ ವಾ ಗು ವುದು ರೈತರಿಗೇ.

ಬಿಸಿಲಿನಿಂದ ಸಹಾಯ
ಇಂಥ ಪರಿಸ್ಥಿತಿ ನಿವಾರಿಸುವುದು ಅಗತ್ಯ. ಇದಕ್ಕಾಗಿ ಸುರಕ್ಷಿತ ಸಂಗ್ರಹಣಾ ವ್ಯವಸ್ಥೆ ಮಾಡಿಕೊಳ್ಳಬೇಕು. ಧಾನ್ಯಗಳನ್ನು ಒಕ್ಕಣೆ ಮಾಡಿದ ತಕ್ಷಣವೇ ಅವುಗಳಲ್ಲಿರುವ ಕೀಟಗಳನ್ನು ನಾಶಗೊ ಳಿಸಬೇಕು. ಕಟಾವಾದ ತಕ್ಷಣ ಮೂಟೆ ಕಟ್ಟಿ ಇಟ್ಟರೆ ಕೀಟಗಳಿಗೆ ಅವಕಾಶ ಒದಗಿಸಿಕೊಟ್ಟಂತೆ. ಆದ್ದರಿಂದ, ಧಾನ್ಯಗಳ ತೇವಾಂಶ ಕಡಿಮೆ ಮಾಡಲು ಬಿಸಿಲಿನಲ್ಲಿ ಒಣಗಿಸಬೇಕು. ಕನಿಷ್ಠ 5ರಿಂದ 6 ದಿನ ಒಣಗಿಸಿದರೆ ಕೀಟಗಳು, ಮೊಟ್ಟೆಗಳು ನಾಶವಾಗುತ್ತವೆ. ಸಿಮೆಂಟ್‌ನಿಂದ ಮಾಡಿದ ಕಣದಲ್ಲಿ ಒಣಗಿಸುವುದು ಸೂಕ್ತ. ಒಣಗಿದ ಹಂತದಲ್ಲಿ ಪ್ರತಿದಿನ ಸಂಜೆ ಧಾನ್ಯಗಳನ್ನು ಗಾಳಿ ಸೇರದಂತೆ ಲೋಹದ ಅಥವಾ ಪ್ಲಾಸ್ಟಿಕ್‌ನ ದೊಡ್ಡ ಬ್ಯಾರೆಲ್‌ಗ‌ಳಲ್ಲಿ ಸಂಗ್ರಹಿಸಬೇಕು. ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿದ ಧಾನ್ಯಗಳನ್ನು ಮಾತ್ರ ಸಂಗ್ರಹಣೆ ಮಾಡಬೇಕು. ಧಾನ್ಯದ ಮೇಲೆ ಮರಳನ್ನು ತುಂಬಬೇಕು. ನಂತರ ಭದ್ರವಾಗಿ ಬ್ಯಾರೆಲ್‌ ಮುಚ್ಚಬೇಕು.

-  ಕುಮಾರ ರೈತ

ಟಾಪ್ ನ್ಯೂಸ್

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.