ಅಂದ ಹೆಚ್ಚಿಸುವ ಮರ, ಬಿದಿರಿನ ಪೀಠೊಪಕರಣ


Team Udayavani, Sep 7, 2019, 5:13 AM IST

v-20

ಮನೆಯ ಅಂದ ಹೆಚ್ಚಿಸುವುದರಲ್ಲಿ ಬಿದಿರು, ಮರದ ಪೀಠೊಪಕರಣಗಳ ಪಾತ್ರವೂ ಮಹತ್ವದ್ದು. ಬಲಿಷ್ಠತೆ, ಗರಿಷ್ಠ ಬಾಳಿಕೆ, ಅಂದ, ನುಣುಪು, ಆಕರ್ಷಕ ಲುಕ್‌ ಇತ್ಯಾದಿ ವೈಶಿಷ್ಟ್ಯಗಳ ಈ ಪೀಠೊಪಕರಣಗಳು ಹಲವು ಬಣ್ಣ, ವಿನ್ಯಾಸಗಳಲ್ಲಿ ಇಂದು ಲಭ್ಯ.

ಹಿಂದೆಲ್ಲ ಗ್ರಾಮೀಣ ಪ್ರದೇಶಗಳ ಮನೆಗಳಲ್ಲಿ ಕಂಡುಬರುತ್ತಿದ್ದ ಬಿದಿರಿನ ಪೀಠೊಪಕರಣಗಳ ಬಳಕೆ ಈಗ ನಗರ ಜೀವನದಲ್ಲೂ ಹಾಸುಹೊಕ್ಕಾಗಿವೆ. ಮರದ ಪೀಠೊಪಕರಣಗಳು ಒಂದು ಹಂತಕ್ಕೆ ಔಟ್ಡೇಟೆಡ್‌ ಅನ್ನಿಸಿದರೂ ಈಗ ಹಾಗಿಲ್ಲ. ಫ್ಯಾಷನ್‌ ಎಂಬುದು ಎಂದೂ ಒಂದೇ ರೀತಿ ಇರುವುದಿಲ್ಲ. ಮರದ ಉತ್ಪನ್ನಗಳು ಅಗ್ಗದ ಸೊತ್ತುಗಳೂ ಅಲ್ಲ. ಸ್ಥಾನಮಾನದ ದೃಷ್ಟಿಯಿಂದಲೂ ಮರದ ಪೀಠೊಪಕರಣಗಳು ಹೆಚ್ಚುಗಾರಿಕೆ ಹೊಂದಿವೆ. ಮರ ಮತ್ತು ಬಿದಿರಿನ ಪೀಠೊಪಕರಣಗಳಲ್ಲಿ ಕಲಾತ್ಮಕತೆಗೆ ಅವಕಾಶ ಹೆಚ್ಚು. ಇದು ಮನೆಯ ಮೆರುಗನ್ನು ಹೆಚ್ಚಿಸುತ್ತದೆ.

ಆಗ್ರ್ಯಾನಿಕ್‌ ಸಿಟ್ಟಿಂಗ್‌ ರೂಂ, ಬ್ಯಾಂಬೂ ಫ್ಲೋರಿಂಗ್‌: ಮನೆ ಎಂದ ಮೇಲೆ ಲಿವಿಂಗ್‌ ರೂಂ ಅಥವಾ ಸಿಟ್ಟಿಂಗ್‌ ರೂಂ ಬಹಳ ಪ್ರಮುಖ. ಬಿದಿರಿನಿಂದ ತಯಾರಿಸಿದ ಕುರ್ಚಿ, ಸೋಫಾ ಸೆಟ್ ಇತ್ಯಾದಿ ಪೀಠೊಪಕರಣಗಳು ಲಿವಿಂಗ್‌ ರೂಂಗೆ ಉತ್ತಮ ಲುಕ್‌ ನೀಡಬಲ್ಲವು. ಅತಿಥಿಗಳ ಮನಸ್ಸಿಗೆ ಉತ್ತಮ ಅನುಭೂತಿ ನೀಡಬಲ್ಲವು. ಮರದ ಆಸನಗಳು, ಮರ ಮತ್ತು ಕುಶನ್‌-ಎರಡೂ ಇರುವ ಪಾರಂಪರಿಕ ವಿನ್ಯಾಸ ಆಸನಗಳಿವೆ. ಲಿವಿಂಗ್‌ ರೂಂಗೆ ಬಿದಿರಿನ ಫ್ಲೋರಿಂಗ್‌ ಕೂಡ ಉತ್ತಮ ಆಯ್ಕೆ. ಇದರ ನಿರ್ವಹಣೆಯೂ ಸುಲಭ. ಮರದ ಲಾಂಗ್‌ ಸೋಫಾಗಳು ಲಿವಿಂಗ್‌ ರೂಂ ಗೆ ಸೂಕ್ತ. ದೊಡ್ಡ ಮಟ್ಟದ ಕಾರ್ಯಕ್ರಮಗಳು ಮನೆಯಲ್ಲಿ ನಡೆದಾಗ ಅತಿಥಿಗಳಿಗೆ ಬೆಡ್‌ ಆಗಿಯೂ ಇವು ಉಪಯೋಗಕ್ಕೆ ಬರುತ್ತವೆ.

ಹೊರಾಂಗಣ ಆಸನಗಳು: ಯಾವುದೇ ವಾತಾವರಣಕ್ಕೆ ಸುಲಭವಾಗಿ ಹಾನಿಗೊಳಗಾಗದೆ ಇರುವುದರಿಂದ ಹೊರಾಂಗಣಕ್ಕೆ ಬಿದಿರಿನ ಪೀಠೊಪಕರಣಗಳು ಸೂಕ್ತ. ಬಿದಿರು ಮತ್ತು ಮರದ ಸಂಯೋಜನೆ ಇಲ್ಲಿ ಬಹಳ ಉತ್ತಮ. ಮನೆಯಲ್ಲಿ ಹಿರಿಯರಿದ್ದರೆ ಸಿಟೌಟ್‌ನಲ್ಲಿ ಅವರಿಗೊಂದು ಮರದ ಕುರ್ಚಿ ಬಹಳ ಗೌರವಯುತವಾಗಿ ಕಾಣುತ್ತದೆ. ಮನೆಯಲ್ಲಿ ಪುಟ್ಟ ಪಾರ್ಕ್‌ ಇದ್ದರೆ ಅಲ್ಲಿ ಬಿದಿರಿನ ಪೀಠೊಪಕರಣಗಳನ್ನು ಬಳಸಬಹುದು.

ಬಾಗಿಲು
ಮರದ ಬಾಗಿಲಿಗೆ ಅತ್ಯಂತ ಬೇಡಿಕೆ. ಅದ್ಭುತ ಕಲಾತ್ಮಕತೆಯನ್ನು ಇದರಲ್ಲಿ ತರಬಹುದು. ನುರಿತ ಬಡಗಿಗಳಿಂದ ಚಿತ್ತಾರಗಳನ್ನು ಕೆತ್ತಿಸಿದ ಬಾಗಿಲುಗಳು ಮನೆಗೆ ವಿಶೇಷ ಮೆರುಗು ನೀಡುತ್ತವೆ.

ಡ್ರೆಸ್ಸರ್‌

ಬೆಡ್‌ರೂಂನಲ್ಲಿ ಬಟ್ಟೆ, ಆಭರಣಗಳನ್ನು ನೇತುಹಾಕಲು ಬಳಕೆಯಾಗುವ, ಹಲವು ಡ್ರಾಯರ್‌ಗಳಿರುವ ಡ್ರೆಸ್ಸರ್‌ ಮರದಿಂದ ತಯಾರಾಗುತ್ತದೆ.

ಬ್ಯಾಂಬೂ ಸ್ಟಿಕ್ಸ್‌
ಮನೆಯ ಗೋಡೆಗಳನ್ನು ಬಿದಿರಿನ ಕೋಲುಗಳಿಂದ ಅಲಂಕರಿಸುವುದು ಹೊಸ ಟ್ರೆಂಡ್‌. ರೂಂ ಡಿವೈಡರ್‌ ಆಗಿಯೂ ಬಿದಿರು ಬಳಕೆಯಾಗುತ್ತದೆ. ವಿದ್ಯುತ್‌ ದೀಪಗಳನ್ನು ಬಿದಿರಿನ ಬೊಂಬುಗಳಿಗೆ ಅಳವಡಿಸಿ, ದೀಪಗಳನ್ನು ತಯಾರಿಸುವುದು, ಗೋಡೆಗಳಲ್ಲಿ ಬಿದಿರುಗಳ ಹಿನ್ನೆಲೆಯಲ್ಲಿ ವಿದ್ಯುತ್‌ ದೀಪಗಳನ್ನು ಬಳಸಿ ಮನೆಯ ಕೊಠಡಿಗಳನ್ನು ಅದ್ಭುತವಾಗಿ ಸಿಂಗರಿಸುವ ಟ್ರೆಂಡ್‌ ಕೂಡ ಇದೆ.

ಬಿದಿರಿನ ಪೀಠೊಪಕರಣಗಳು ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ.

ಕಬೋರ್ಡ್‌
ಸಣ್ಣ ಸಣ್ಣ ಅಪಾರ್ಟ್‌ಮೆಂಟ್‌ಗಳಲ್ಲಿ ಸುಮಾರು 5-6 ಡ್ರಾಯರ್‌ಗಳಿರುವ ಕಬೋರ್ಡ್‌ಗಳ ಬಳಕೆ ಈಗ ಟ್ರೆಂಡ್‌. ತೀರಾ ಅಗತ್ಯದ ವಸ್ತುಗಳಿಗೆ ಇದು ಉತ್ತಮ ಸ್ಥಳ. ಸುಂದರ ವಿನ್ಯಾಸಗಳಲ್ಲಿ ಇದು ಲಭ್ಯವಾಗುವುದರಿಂದ ಮನೆಗೆ ಅಂದ. ಮಾಡರ್ನ್ ಬಾತ್‌ರೂಂಗಳಲ್ಲಿ ಸ್ನಾನದ ಸಾಮಗ್ರಿಗಳನ್ನಿಡುವುದಕ್ಕೆ ದೊಡ್ಡ ಕನ್ನಡಿ ಹೊಂದಿರುವ ಮರದಿಂದ ತಯಾರಿಸಿದ, ಬಿದಿರಿನಿಂದ ಫ್ರೇಮ್‌ ಇರುವ ಕಬೋರ್ಡ್‌ ಗಳು ಒಳ್ಳೆಯ ಲುಕ್‌ ನೀಡುತ್ತವೆ.

– ಎಸ್ಕೆ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.