ಸಂತೋಷ ಬೇರೆಲ್ಲೂ ಇಲ್ಲ, ನಮ್ಮಲ್ಲೇ ಇದೆ


Team Udayavani, Jun 21, 2019, 1:22 PM IST

santhosha

ಬೇಕಿದ್ದರೆ ಕೇಳಿ ನೋಡಿ. ಜಗತ್ತಿನ 90 ಪ್ರತಿಶತ ಜನರು ಸಂತೋಷದಿಂದಿಲ್ಲ. ಒಂದಿಲ್ಲೊಂದು ಸಮಸ್ಯೆಯಲ್ಲಿ ಬಳಲುತ್ತಿದ್ದೇನೆ ಎನ್ನುವುದು ಪ್ರತಿಯೊಬ್ಬರ ಉತ್ತರ.

ಎಲ್ಲ ಇದ್ದವನಿಗೆ ನೆಮ್ಮದಿಯಿಲ್ಲ ಎಂಬ ಕೊರಗಾದರೆ ಏನೂ ಇಲ್ಲದವನಿಗೆ ಅಯ್ಯೋ ನನ್ನ ಬಳಿ ಏನೂ ಇಲ್ಲವಲ್ಲಾ ಎಂಬುದೇ ಬಹುದೊಡ್ಡ ಕೊರಗು.ಒಂದೇ ಜೋಕಿಗೆ ಪದೇ ಪದೇ ನಗದ ನಾವು ಒಂದೇ ದುಃಖಕ್ಕೆ ಜೀವನಪೂರ್ತಿ ಕೊರಗುತ್ತಲೇ ಇರುತ್ತೇವೆ. ಹೀಗಾದರೆ ನಮ್ಮ ಬಳಿಗೆ ಸಂತೋಷವೆಂಬುದು ಸುಳಿಯುವ ಮಾತಾದರೂ ಎಲ್ಲಿ ಬಂತು ಹೇಳಿ?

ನೆನಪಿರಲಿ, ಪ್ರತಿಯೊಬ್ಬರಿಗೂ ಒಂದಿಲ್ಲೊಂದು ಸಮಸ್ಯೆಗಳು ಇದ್ದೇ ಇವೆ. ಅವುಗಳು ಬೇರೆ ಬೇರೆ ವಿಧಗಳಲ್ಲಿ ಇರಬಹುದಷ್ಟೆ. ಪ್ರತಿ ಸಮಸ್ಯೆಗೂ ಪರಿಹಾರವಿದೆ. ಇದರಲ್ಲಿಯೇ ಜೀವನದ ಸಂತೋಷ ಅಡಕವಾಗಿದೆ. ಇವುಗಳು ಅನುಭವಕ್ಕೆ ಬರಬೇಕೋ? ಹಾಗಾದರೆ ಸಮಸ್ಯೆಗಳನ್ನು ನೋಡುವ ದೃಷ್ಟಿಯನ್ನು ಮೊದಲು ನಾವು ಬದಲಾಯಿಸಿಕೊಳ್ಳಬೇಕಷ್ಟೆ.

ಮನೆಯ ಹೊರಗಡೆ ಸ್ನೇಹಿತರೊಡನೆ ಅಡಲು ತೆರಳಿದ್ದ ಬಾಲಕನೋರ್ವ ಅಟ ಮುಗಿಸಿ ಮನೆಯತ್ತ ಓಡಿ ಬರುತ್ತಾನೆ. ಆತನ ತಾಯಿ ಏನೋ ಮಾಡುತ್ತಿರುವುದನ್ನು ಕಂಡ ಆತ ಮರುಕ್ಷಣವೇ ಅಮ್ಮ ಏನು ಮಾಡುತ್ತಿದ್ದೀಯಾ? ಎಂದು ಪ್ರಶ್ನಿಸಿದ.

ತಾಯಿ ತಾನು ಮಾಡುತ್ತಿದ್ದ ಕಸೂತಿ ಕೆಲಸವನ್ನು ತೋರಿಸಿ, ಬಟ್ಟೆಯ ಮೇಲೊಂದು ಚೆಂದದ ಚಿತ್ರ ರಚಿಸುತ್ತಿದ್ದೇನೆ ಮಗನೆ ಎಂದು ಉತ್ತರಿಸುತ್ತಾಳೆ. ಬಾಲಕ ನಕ್ಕು ಪುನಃ ಪ್ರಶ್ನಿಸುತ್ತಾನೆ.

ಅಮ್ಮಾ ಅಲ್ಲಿ ಚೆಂದದ ಚಿತ್ರ ಎಲ್ಲಿದೆ. ಬರೀ ಕೆಂಪು, ನೀಲಿ, ಹಳದಿ ಬಣ್ಣದ ನೂಲುಗಳು ಮಾತ್ರ ಬಟ್ಟೆಗೆ ಅಂಟಿಕೊಂಡಿವೆ ಎಂದು. ಬಳಿಕ ತಾಯಿ ಮಗನನ್ನು ಕಾಲಿನ ಮೇಲೆ ಕುಳ್ಳಿರಿಸಿಕೊಂಡು ತಾನು ರಚಿಸುತ್ತಿರುವ ಚಿತ್ರ ತೋರಿಸಿ ಹೇಳುತ್ತಾಳೆ, ಮಗೂ ಬಟ್ಟೆಯ ಒಂದು ಮಗ್ಗುಲಿನಿಂದ ನಿನಗೆ ಕಾಣುವುದು ಬರೀ ಬಣ್ಣದ ನೂಲುಗಳೇ. ಅದರ ಬದಲು ಇನ್ನೊಂದು ಬದಿಯನ್ನು ನೋಡು. ನಿನಗೆ ಆಗ ಮಾತ್ರ ನಾನು ರಚಿಸುತ್ತಿರುವ ಚೆಂದದ ಚಿತ್ರ ಕಾಣಿಸುತ್ತದೆ ಎಂದು.

ಇದೊಂದು ಚಿಕ್ಕ ಕತೆಯಷ್ಟೆ. ಇಲ್ಲಿ ತಾಯಿ ಬಟ್ಟೆಯಲ್ಲಿ ರಚಿಸಲು ಹೊರಟ ಚಿತ್ರದಂತೆಯೇ ಜೀವನದಲ್ಲಿನ ಸಮಸ್ಯೆಗಳೂ ಕೂಡ.

ಒಂದೇ ಮಗ್ಗುಲಿನಿಂದ ನಾವದನ್ನು ನೋಡುತ್ತಿ ದ್ದೇವೆಯೇ ಹೊರತು ಮತ್ತೂಂದು ಮಗ್ಗುಲಿನಲ್ಲಿ ಅದನ್ನು ನೋಡುವ ಗೋಜಿಗೆ ಹೋಗುತ್ತಲೇ ಇಲ್ಲ. ಜೀವನದಲ್ಲಿ ಬೇರೆಯ ವರೊಂದಿಗೆ ನಮ್ಮ ಹೋಲಿಕೆ, ಸಮಸ್ಯೆಗಳನ್ನು ಬಗೆಹರಿಸುವಲ್ಲಿ ನಾವು ವಿಫ‌ಲರಾಗುತ್ತಿರುವುದೇ ನಮ್ಮ ಜೀವನ ಸಂತೋಷದಾಯಕ ವಾಗಿರದಿರಲು ಕಾರಣ ಸುಮ್ಮನೆ ಹುಡುಕಬೇಡಿ, ಸಂತೋಷ ನಮ್ಮಲ್ಲೇ ಇದೆ.

-  ಪ್ರಸನ್ನ ಹೆಗಡೆ ಊರಕೇರಿ

ಟಾಪ್ ನ್ಯೂಸ್

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

7

Kundapur: ಬೈಕ್‌ ಢಿಕ್ಕಿ; ಸ್ಕೂಟರ್‌ ಸವಾರೆಗೆ ಗಾಯ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

1-wqeqwew

BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.