ಸಂತೋಷದ ಹಸಿವಿರಲಿ


Team Udayavani, Sep 9, 2019, 5:07 AM IST

HAPPY

ಬಾಲ್ಯ, ಯೌವನ, ಮುಪ್ಪು ಈ ಮೂರು ದಿನದ ಜೀವನದಲ್ಲಿ ಅಡಗಿದೆ ಮನುಷ್ಯನ ಬಾಳು. ವೈದ್ಯ ಲೋಕ ಹುಟ್ಟಿಗೆ ದಿನ ಸೂಚಿಸುವಷ್ಟು ಮುಂದುವರೆದಿದೆ. ಆದರೆ ಸಾವಿನ ದಿನ ನಿರ್ಧರಿತವಾಗದೇ ಮನುಷ್ಯ ತನ್ನ ಆಸ್ತಿತ್ವವನ್ನು ರೂಪಿಸಲು ಜೀವನದಲ್ಲಿ ನಾನಾ ತೆರನಾಗಿ ಪರಿತಪಿಸುತ್ತಾನೆ. ಬಾಲ್ಯದಲ್ಲಿ ದೊಡ್ಡವರನ್ನು ನೋಡಿ ನಾನು ಬೇಗ ಪ್ರೌಢಿಮೆ ಹೊಂದಿ, ಈ ಶಾಲೆ ಹೋಂವರ್ಕ್‌ ಇಲ್ಲದೇ ಆರಾಮವಾಗಿರಬಹುದೆಂಬ ಚಿಂತೆ. ಪ್ರೌಢಿಮೆಗೆ ಬಂದಾಗ ಛೇ ಬಾಲ್ಯವೇ ಒಳ್ಳೆದಿತ್ತು ಎಂಬ ಭಾವನೆ. ಇನ್ನೂ ವೃದ್ಧಾಪ್ಯದಲ್ಲಿ ಯಾರು ಆಸರೆಯಾಗುತ್ತಾರೆಂಬ ಆತಂಕ ಹೀಗೆ ಮನುಷ್ಯನ ನಿಲುವು ಗೊಂದಲದಲ್ಲೇ ಮುಂದುವರಿಯುತ್ತದೆ.

ಹೊಟ್ಟೆ ಹಸಿವೆಂಬುವುದಿಲ್ಲದಿದ್ದರೆ ಮನುಷ್ಯ ಯಾವುದೇ ಉನ್ನತ ಸ್ಥಾನಮಾನ, ಹುದ್ದೆ, ಆಸ್ತಿ ಸಂಪತ್ತುಗಳತ್ತ ಚಿತ್ತ ಹರಿಸುವ ಗೋಜಿಗೆ ಹೋಗುತ್ತಿರಲಿಲ್ಲವೇನೋ. ಆದರೆ ಈ ಮನುಷ್ಯನ ಹಸಿನಿಂದ ಒಂದೊಂದೇ ವಿಷಯಗಳು ಜೀವನ ಸರಪಳಿಯಲ್ಲಿ ಪೋಣಿಸುತ್ತ ಸಾಗುತ್ತವೆ. ಇಂದು ನಾವು ಸಮಾಜದಲ್ಲಿ ಕಾಣುತ್ತಿರುವುದು ಒಳಿತಿಗಿಂತ ಹೆಚ್ಚು ಕೆಡುಕಿನ ಸಂಗತಿಗಳು. ಅದು ಸಂಬಂಧಗಳ ನಡುವಿನ ಕಲಹ, ವಿದ್ಯಾರ್ಥಿಗಳಲ್ಲಿ ಕಡಿಮೆಯಾಗುತ್ತಿರುವ ಆತ್ಮಸ್ಥೈರ್ಯ, ಯುವಕರಲ್ಲಿ ತಲೆದೋರುವ ಮದ್ಯ ತಾಂಬಾಕು, ಮಾದಕ ದ್ರವ್ಯದಂತಹ ಪಿಡುಗು, ಅತ್ಯಾಚಾರ ಅನಾಚಾರ, ಭ್ರಷ್ಟಾಚಾರದಂತಹ ಸಮಸ್ಯೆಗೆ ಯಾರನ್ನು ಹೊಣೆ ಮಾಡುವುದು. ಒಂದೊಮ್ಮೆ ನಾವು ವಾಸಿಸುವ ಪರಿಸರಕ್ಕಿಂತ ಪ್ರಾಣಿ, ಪಕ್ಷಿಗಳು ವಾಸಿಸುವ ಸ್ಥಳಗಳು ಏಷ್ಟೋ ಯೋಗ್ಯವಾಗಿರುವುದು ಗಮನಿಸಬಹುದು.

ಇದಕ್ಕೆ ಕಾರಣ ಕಷ್ಟಪಡದೇ ಎಲ್ಲವೂ ದೊರಕಬೇಕು ಅನ್ನುವ ಮನೋಭಾವ. ಚೂರು ಕಷ್ಟ ಬಂದರೂ ಜೀವನದಲ್ಲಿ ಜಿಗುಪ್ಸೆಗೆ ಹೊಂದುತ್ತೇವೆ. ಹಾಗೇ ಆಧುನಿಕ ಜಗತ್ತಿನಲ್ಲಿ ಆಗುತ್ತಿರುವ ನಾನಾ ಆವಿಷ್ಕಾರಗಳು ಕೂಡ ಇದರ ಹೊಣೆಹೊತ್ತಿವೆ. ಇಂದು 4-5 ಇಂಚು ಮೊಬೈಲ್‌ನಲ್ಲಿ ನಮ್ಮ ದೈನಂದಿನ ಚಟುವಟಿಕೆಯ ಸ್ಟೇಟಸ್‌ ಹಾಕುವ ಮೂಲಕ ಭಾವನೆಗಳನ್ನು ವ್ಯಕ್ತಪಡಿಸುವಂಥ‌ ಸಮಯ ಬಂದಿರುವುದೇ ಇದಕ್ಕೆ ಉತ್ತಮ ನಿದರ್ಶನ. ಜಗತ್ತು ಹೀಗೆಯೇ ಮುಂದುವರಿದರೆ ಭವಿಷ್ಯತ್‌ ಹೇಗಿರಬಹುದೋ ಎನ್ನುವ ಭಯ ಎಲ್ಲರನ್ನೂ ಕಾಡುವುದು ಸತ್ಯ.

ಜೀವನ ಸಮುದ್ರದಂತೆ. ಆಳ ಸಮುದ್ರದಲ್ಲಿ ಅಬ್ಬರದ ಅಲೆಗಳ ನಡುವೆ ಮೀನುಗಳು ಹೇಗೆ ವಾಸಿಸುತ್ತವೆಯೋ, ಹಾಗೆಯೇ ಬಂದದ್ದೆಲ್ಲಾ ಬರಲಿ ಎದುರಿಸುತ್ತೇನೆಂದುಕೊಂಡು ಮುಂದುವರೆಯುವುದನ್ನು ಕಲಿತರಷ್ಟೇ ಜೀವನ ಮತ್ತಷ್ಟು ಸುಂದರವಾಗಿ ರೂಪುಗೊಳ್ಳುತ್ತದೆ.

-ಕಾರ್ತಿಕ್‌ ಚಿತ್ರಾಪುರ

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.