ಆಸೆಯಲ್ಲೊಂದು ಧನಾತ್ಮಕ ಚಿಂತನೆ ಇರಲಿ


Team Udayavani, Feb 24, 2020, 5:32 AM IST

Positive-02

ಎಷ್ಟೋ ಬಾರಿ ನಮ್ಮದಲ್ಲದ ತಪ್ಪಿಗೆ ನಮ್ಮನ್ನು ಗುರಿಮಾಡಿದಾಗ ಕೋಪ, ಅಸಹನೆ, ದಃಖ ಹೀಗೆ ಎಲ್ಲೂವೂ ಒಟ್ಟಿಗೆ ಅಭಿವ್ಯಕ್ತಗೊಳ್ಳುವುದು ಸಹಜ. ಇಂತಹ ಸಂದರ್ಭದಲ್ಲಿ ಆಂತರಿಕ ಕೋಪ ಅಭಿವ್ಯಕ್ತಿಸುವ ಕಲೆ ಪ್ರಧಾನ ಪಾತ್ರವಹಿಸುತ್ತದೆ. ನಮ್ಮ ವರ್ತನೆ ಹೀಗೇ ಇರಬೇಕೆಂಬ ಬೇಲಿ, ಕಟ್ಟುಬದ್ಧ ನಿಯಮಗಳನ್ನು ಹಾಕಿದಾಗ ಅದನ್ನು ಮೀರಿ ಹೋಗಲೇಬೇಕೆಂಬ ಒಂದು ವಿಚಿತ್ರವಾದ ಹಠಮಾರಿತನ ಹೆಚ್ಚಾಗುತ್ತದೆಯೇ ವಿನಹ ಬೇರೆಯವರು ಹೇಳಿದಂತೆ ಸ್ವಭಾವ ಬದಲಿಸಲು ಮುಂದಾಗಲಾರೆವು. ಆದರೆ ಈ ರೀತಿ ಮಾಡುವುದರಿಂದ ನಮ್ಮ ವ್ಯಕ್ತಿತ್ವದ ಕೊಲೆಗಡುಕ‌ರು ನಾವಾಗುತ್ತೇವೆ ವಿನಹ ಬೇರೆನಿಲ್ಲ. ಇಂತ ಸಂದರ್ಭದಲ್ಲಿ ಕೊಪದ ಕೈಗೆ ಬುದ್ಧಿ ಕೊಡದಿರುವುದು ಒಳ್ಳೆಯದು.

ಆಂತರಿಕ ಅಭಿವ್ಯಕ್ತಿ
ಆಂತರಿಕ ಅಭಿವ್ಯಕ್ತಿ ನಮ್ಮ ಆಂತರ್ಯದಲ್ಲಿ ಅಡಗಿರುವ ನೋವು, ನಲಿವು, ಬೇಸರ ಮುಂತಾದವುಗಳ ಹೊರಹಾಕುವ ಪರಿಯಾಗಿದೆ. ಇದು ಏಷ್ಟೋ ಬಾರಿ ನಮಗರಿವಿಲ್ಲದಂತೆ ನಮ್ಮ ಏಕಾಂತ ಕಾಲದಲ್ಲಿ ಹೋರಹೊಮ್ಮುತ್ತದೆ. ನಮ್ಮನ್ನು ನಾವೇ ಸಮಾಧಾನ ಪಡಿಸಿಕೊಳ್ಳುವುವುದು, ಒಬ್ಬರೇ ಏನೆನೋ ನೆನೆದು ನಗುವುದು, ಯಾವತ್ತೋ ಆದ ಘಟನೆ ನೆನೆಸಿ ಅಳವುದು, ನಮ್ಮಷ್ಟಕ್ಕೆ ನಾವೇ ಮಾತಾಡುವುದು ಎಲ್ಲವೂ ಇದರ ಸಾಲಿಗೆ ಸೇರಿದೆ. ಈ ಅಭಿವ್ಯಕ್ತಿ ಮಿತಿ ಮೀರಿದರೆ ಒಂದು ಕಾಯಿಲೆ ಆಗಿಯೂ ಬದಲಾಗುತ್ತದೆ. ಹಾಗೆಂದು ಇದು ತಪ್ಪಲ್ಲ ಇದರಲ್ಲೂ ಹಲವಾರು ಉಪಯುಕ್ತತೆಗಳಿರುವುದನ್ನು ಸಹ ನೀವು ಗಮನಿಸಬೇಕಾಗಿದೆ. ನಿಮಗೆ ಯಾರೊಂದಿಗಾದರೂ ಬೇಸರ ಬಂದಾಗ ಎಲುಬಿಲ್ಲದ ನಾಲಿಗೆ ಬುದ್ದಿಯ ಸ್ಥಿಮಿತವಿಲ್ಲದೆ ಬಡಬಡಾಯಿಸುತ್ತದೆ. ಅಂತಹ ಸಂದರ್ಭದಲ್ಲಿ ನೀವು ಕನ್ನಡಿ ನೋಡಿ ಕೋಪವನ್ನು ಅಭಿವ್ಯಕ್ತಿಸಿದಾಗ ನಿಮಗೂ ಸಮಾಧಾನವಾಗುತ್ತದೆ ಜತೆಗೆ ಇತರರಿಗೂ ಬೇಸರ ಆಗಲಾರದು.

ನಿಮ್ಮನ್ನು ನೀವು ಪ್ರೀತಿಸಲು ಕಲಿಯಬೇಕು. ಆಗ ಇತರರ ಪ್ರೀತಿ ಅವರ ಸ್ವ-ಗೌರವವನ್ನು ನೀವು ಅರಿಯುತ್ತೀರಿ. ನಮ್ಮ ಸ್ವ-ಗೌರವಕ್ಕೆ ಕೆಲವೊಂದು ಬಾರಿ ಧನಾತ್ಮಕ ವ್ಯಕ್ತಿತ್ವ ಬುನಾದಿಯಾಗಿದೆ. ಏಷ್ಟೋ ಬಾರಿ ನೀವೇನು ಮಾಡುತ್ತಿದ್ದಿರಿ ಎಂದು ನಿಮಗೆ ಸ್ಪಷ್ಟತೆ ಇಲ್ಲದೆ ತಲ್ಹಣಗೊಳ್ಳುವಿರಿ. ಗೊತ್ತಿಲ್ಲದನ್ನು ಹೇಳಿಕೊಳ್ಳಿ ಅದನ್ನು ಕಲಿಯಲು ಪ್ರಯತ್ನಿಸಿ ಮೊದ ಮೊದಲು ಹಿಂಜರಿಕೆ ಆಗುವುದು ಸಹಜ. ಅನುಮಾನ, ಪರರ ಕುರಿತು ಅನಗತ್ಯ ಚಿಂತೆೆಯೂ ನಿಮ್ಮ ಧನಾತ್ಮಕ ಚಿಂತನೆಯ ಕುಸಿತಕ್ಕೆ ಕಾರಣವಾಗುತ್ತದೆ. ಪ್ರಯತ್ನ, ಪರಿಶ್ರಮ, ಧನಾತ್ಮಕ ವಿಚಾರಗಳು ನಿಮ್ಮ ಯಶಸ್ಸಿಗೆ ಹಿಡಿದ ಕೈಗನ್ನಡಿಯಾಗಿದೆ.

ಬೊಗಸೆಯಲ್ಲೂಂದು ಆಸೆ
ಎಷ್ಟೋ ಸಲ ನಮ್ಮ ಪುಟ್ಟ ಪುಟ್ಟ ಕನಸುಗಳು ಈಡೇರದಿದ್ದಾಗ ಹತಾಶರಾಗುತ್ತೇವೆ. ಇಂತಹ ಹತಾಶೆ ಮಾನಸಿಕ ಖನ್ನತೆಗೂ ಕಾರಣವಾಗಬಹುದು. ಆದರೆ ಈಡೇರದ ಆಸೆಯನ್ನೇ ಮನದಲ್ಲಿಟ್ಟುಕೊಂಡು ಇತರರ ಮೇಲೆ ಕೆಂಡಕಾರಿ ಅವರ ಭಾವನೆಗಳಿಗೆ ಘಾಸಿಗೊಳಿಸುವ ಮನೋಭಾವನೆ ನಿಮ್ಮದಾಗದಿರಲಿ. ಬದಲಾಗಿ ಎಂದಾದರೂ ಅಂತಹ ಆಸೆ ಈಡೇರುತ್ತದೆ ಎಂಬ ಭರವಸೆ ನಿಮ್ಮಲ್ಲಿದ್ದರೆ ನಿಮ್ಮ ಬೇಸರವೂ ದೂರ ಸರಿಯುತ್ತದೆ.

-ರಾಧಿಕಾ,ಕುಂದಾಪುರ

ಟಾಪ್ ನ್ಯೂಸ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kundapur: ಕುಸಿದು ಬಿದ್ದು ಸಾವು

Kundapur: ಕುಸಿದು ಬಿದ್ದು ಸಾವು

Electric shock: ಯುವಕನ ಸಾವು

Electric shock: ಯುವಕನ ಸಾವು

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.