ಯಶಸ್ಸು ಅನುಭವಿಸಲು ಕಷ್ಟಗಳಿರಲಿ: ಡಾ| ಎ.ಪಿ.ಜೆ. ಅಬ್ದುಲ್ ಕಲಾಂ
Team Udayavani, Sep 3, 2018, 12:37 PM IST
ದೇವರು ಕಠಿನ ಪರಿಶ್ರಮ ಪಡುವವರಿಗೆ ಮಾತ್ರ ಸಹಾಯ ಮಾಡುತ್ತಾನೆ. ಈ ತಣ್ತೀ ಅತ್ಯಂತ ಸ್ಪಷ್ಟ ಎನ್ನುತ್ತಾರೆ ಇನ್ನೋರ್ವ ಶ್ರೇಷ್ಠ ಶಿಕ್ಷಕ ಡಾ| ಎ.ಪಿ.ಜೆ. ಅಬ್ದುಲ್ ಕಲಾಂ. ಬದುಕಿನಲ್ಲಿ ಪರಿಶ್ರಮದ ಮಹತ್ವವನ್ನು ಸಾರುವಂತಿದೆ ಈ ಮಾತು. ತನ್ನ, ತನ್ನವರ ಜೀವನ ಸುಂದರವಾಗಿರುವುದಕ್ಕಾಗಿಯೇ ಜನರು ಶ್ರಮ ಪಡುತ್ತಾರೆ. ಏನೂ ಬೇಡ ಎಂದಿರುವವರು ಹೆಚ್ಚು ಶ್ರಮ ಪಡಲು ಹೋಗುವುದಿಲ್ಲ. ಶ್ರಮಕ್ಕೆ ತಕ್ಕುದಾದ ಫಲ ಸಿಗಲೇ ಬೇಕು. ಅದಕ್ಕೆ ದೇವರ ಸಹಾಯ ಸಿಗುತ್ತದೆ ಎಂಬುದನ್ನು ನಾವಿಲ್ಲಿ ಅರ್ಥ ಮಾಡಿಕೊಳ್ಳಬಹುದಾಗಿದೆ.
‘ಮನುಷ್ಯನಿಗೆ ಕಷ್ಟಗಳು ಬೇಕು. ಏಕೆಂದರೆ, ಯಶಸ್ಸನ್ನು ಅನುಭವಿಸಲು ಅವು ಅತ್ಯಗತ್ಯ’ ಎನ್ನುತ್ತಾರೆ ಕಲಾಂ. ಕಷ್ಟಗಳೇ ಇರದಿದ್ದರೆ ಸುಖದ ಮಹತ್ವ ತಿಳಿಯಲಾರದು. ಕಷ್ಟವೊಂದು ಬಂದಾಗ, ಎದುರಿಸಿ, ಒಂದು ದೊಡ್ಡ ಪ್ರಯತ್ನದಲ್ಲಿ ಅದನ್ನು ಗೆದ್ದಾಗ ಸಿಗುವ ಆನಂದ ಬಹಳ ಸುಂದರವಾದದ್ದು. ಆ ಗೆಲುವೇ ಯಶಸ್ಸು. ಹಸಿವಾದಾಗಲೇ ಊಟ ರುಚಿಸುವುದಾದ್ದರಿಂದ ಯಶಸ್ಸನ್ನು ಅನುಭವಿಸಲು ಕಷ್ಟಗಳು ಬೇಕು.