ನಮ್ಮೊಳಗೇ ಇರುವ ಆತ…


Team Udayavani, Dec 9, 2019, 5:49 AM IST

this-wat

ನೀವು ದಿನಕ್ಕೊಮ್ಮೆಯಾದರೂ ನಿಮ್ಮೊಳಗೆ ನೀವೇ ಮಾತನಾಡಿಕೊಳ್ಳಿ, ಆಗ ನೀವು ಒಬ್ಬ ಅತ್ಯದ್ಭುತ ವ್ಯಕ್ತಿಯನ್ನೇ ಭೇಟಿಯಾಗುತ್ತೀರಿ ಎಂದು ಸ್ವಾಮಿ ವಿವೇಕಾನಂದರು ಒಂದು ಮಾತು ಹೇಳಿದ್ದಾರೆ.

ಹೌದು! ಇದು ಸತ್ಯ.. ನಮ್ಮೊಳಗೊಬ್ಬ ಇಂತಹ ವ್ಯಕ್ತಿ ಇದ್ದಾನೆ ಎಂಬ ಅರಿವು ಬರುವುದೇ ನಮಗೆ ನಾವೇ ಮಾತನಾಡಿಕೊಂಡಾಗ. ನಮಗೆ ನಾವೇ ಮಾತನಾಡಿಕೊಳ್ಳುವುದು ಎಂದರೆ ಕೆಲವರು ಅದೊಂದು ಹುಚ್ಚು ಎನ್ನಬಹುದು. ಆದರೆ ಈ ಮಾತು ಒಪ್ಪದಿರೋಣ. ನಮ್ಮನ್ನು ನಾವು ಅರಿಯುವುದೇ ನಮಗೆ ನಾವೇ ಮಾತನಾಡಿಕೊಂಡಾಗ ಮಾತ್ರ.

ಒಬ್ಬ ಮನುಷ್ಯ ಬೆತ್ತಲೆಯಾದಷ್ಟು ಆತ ಪರಿಶುದ್ಧನಾಗುತ್ತಾನೆ ಎಂಬ ಜ್ಞಾನಿಯೊಬ್ಬರ ಮಾತಿದೆ. ಇಲ್ಲಿ ಬೆತ್ತಲು ಎಂದರೆ ವಿವಸ್ತ್ರವಾಗುವುದು ಎಂದರ್ಥವಲ್ಲ, ಬದಲಿಯಾಗಿ ಚಿಂತನೆಯಲ್ಲಿ ತಮ್ಮನ್ನು ತಾವು ಪ್ರಶ್ನಿಸಿಕೊಳ್ಳುವುದು ಎಂದರ್ಥ. ನನ್ನ ಸರಿ- ತಪ್ಪುಗಳನ್ನು ಎಲ್ಲರ ಮುಂದೆ ಹೇಳಲಾಗದಿದ್ದರೂ ಕೂಡ ನಮಗೆ ನಾವೇ ಕೇಳಿಕೊಂಡು ಕ್ಷಮಾಪಣ ಭಾವವನ್ನು ಕಾಣುತ್ತೇವೆ. ಅದಕ್ಕಾಗಿ ಈ ಕ್ಷಮಾಪಣ ಭಾವ ನಮಗೆ ಬರಬೇಕಾದರೆ ನಮಗೆ ನಾವೇ ಮಾತನಾಡಿಕೊಳ್ಳಬೇಕು.

ಸ್ವ ಪ್ರಜ್ಞೆ : ಮನುಷ್ಯನಿಗೆ ವಿಚಾರವಂತಿಕೆಯ ಜತೆಗೆ ಆತನಿಗೆ ವಿಚಾರ ಸ್ಪಷ್ಟತೆ ಇರಬೇಕಾದುದು ಅಗತ್ಯ. ಈ ಕಾರಣಕ್ಕಾಗಿ ಆತನು ಮೊದಲು ಯಾವುದೇ ಸಂಗತಿಗಳನ್ನು ಸಾರ್ವಜನಿಕವಾಗಿ ಮಾತನಾಡುತ್ತಾನೆ ಎಂದರೆ ಮೊದಲು ತನ್ನೊಂದಿಗೆ ತಾನು ಮಾತನಾಡಿಕೊಂಡಿರಬೇಕು. ತನ್ನನ್ನು ತಾನು ಪ್ರಶ್ನಿಸಿಕೊಂಡಿರಬೇಕು. ಈಗ ಮಾತನಾಡಿದಾಗ ನನಗೆ ಯಾವ ರೀತಿಯ ಪ್ರಶ್ನೆಗಳು ಎದುರಾಗಬಹುದು. ಇಲ್ಲವೇ ಏನಾದರೂ ವಿವಾದ ಉಂಟಾಗಬಹುದೇ ಅಥವಾ ಯಾರಿಗಾದರೂ ನೋವುಂಟಾಗಬಹುದೇ ಎಂಬ ಅನೇಕ ಸಂಗತಿಗಳ ಪ್ರಶ್ನೆಗಳೊಂದಿಗೆ ನಮಗೆ ನಾವೇ ಕಂಡುಕೊಂಡಾಗ ಇದರಿಂದ ನಮ್ಮಲ್ಲಿ ಸ್ವಪ್ರಜ್ಞೆ ಬರುತ್ತದೆ. ಇದು ಬರಬೇಕಾದರೆ ನಮ್ಮ ಮನಸ್ಸಿನೊಂದಿಗೆ ಮಾತನಾಡಿಕೊಳ್ಳಬೇಕು.

ದಾರಿಯಲ್ಲಿ ಒಂಟಿಯಾಗಿ ಕಿಲೋ ಮೀಟರ್‌ಗಟ್ಟಲೆ ನಡೆಯುತ್ತೀರಿ. ಈ ಉರಿಬಿಸಿಲು ಹೇಗೆ ನಡೆಯುವುದು ಎಂಬ ಅಸಾಧ್ಯದ ಮಾತುಗಳನ್ನು ಆಡುವ ಬದಲು ನೀವು ಒಂಟಿಯಾಗಿ ನಡೆಯಿರಿ ಮೊದಲು. ಅನಂತರ ಯೋಚಿಸಿ, ಬಳಿಕ ನಿಮ್ಮೊಂದಿಗೆ ನೀವೇ ಮಾತನಾಡುತ್ತ ಹೋಗಿ, ಆಗ ನಿಮ್ಮಲ್ಲೊಬ್ಬ ಅದ್ಭುತ ವ್ಯಕ್ತಿಯ ಪರಿಚಯವಾಗುತ್ತದೆ. ನಿಮ್ಮನ್ನು ಆತ ಚೆನ್ನಾಗಿ ಕೌನ್ಸೆಲಿಂಗ್‌ ಮಾಡುತ್ತಾನೆ. ನಿಮ್ಮ ನೋವುಗಳನ್ನು ಕೇಳುತ್ತಾನೆ, ಸಂತೋಷವನ್ನು ಹಂಚುತ್ತಾನೆ. ಆಗ ನಿಮ್ಮ ಮುಖದಲ್ಲಿ ನಗು ಅರಳುತ್ತದೆ. ಇದನ್ನೇ ಕೆಲವರು ಹುಚ್ಚೇನೂ ಎಂದು ಪ್ರಶ್ನಿಸಬಹುದು. ಇದರ ಬಗ್ಗೆ ತಲೆನೇ ಕೆಡಿಸಿಕೊಳ್ಳಬೇಡಿ.

ನಿಮ್ಮಲ್ಲಿ ನೀವು ಮಾತನಾಡಿಕೊಳ್ಳುವುದು ಎಂಬುದು ಕ್ಷಣಿಕದಲ್ಲಿ ಸಿಗುವ ಅತ್ಯಮೂಲ್ಯ ಸಂತೋಷ ಎಂದು ಭಾವಿಸುತ್ತೇನೆ. ಮನಃಶಾಸ್ತ್ರಜ್ಞರು ಕೂಡ ಈ ಮಾತನ್ನು ಹೇಳಿದ್ದಾರೆ. ನಮಗೆ ಅರಿವು ಬರುವುದೇ ನಮ್ಮೊಂದಿಗೆ ನಾವು ಮಾತನಾಡಿಕೊಂಡಾಗ. ಸರಿ ತಪ್ಪುಗಳನ್ನು ನಮಗೆ ಕೇಳಿಕೊಳ್ಳುವ ಭಾವನೆ ಇದರಿಂದ ಮೂಡುತ್ತದೆ. ಅದಕ್ಕೆ ಇದೊಂದು ಮಾರ್ಗೋಪಾಯ ಸರಿಯಾದುದು.

ಹೋ! ಹೌದಾ! ಎನ್ನುವ ಮುನ್ನ ನಿಮಗೆ ನೀವೇ ಮಾತನಾಡಿಕೊಂಡಿಲ್ಲ ಎಂದಾದರೆ ಇವತ್ತೇ, ಈ ಕ್ಷಣಕ್ಕೆ ಮಾತನಾಡಿಕೊಳ್ಳಿ. ಆ ಅದ್ಭುತ ವ್ಯಕ್ತಿಯನ್ನು ಒಮ್ಮೆ ನೀವು ಭೇಟಿಯಾಗಿ… ಶುಭಾಶಯಗಳೊಂದಿಗೆ….

 - ಅಭಿನವ

ಟಾಪ್ ನ್ಯೂಸ್

1-asaasa

250 km per hour; ಶೀಘ್ರದಲ್ಲೇ ಬುಲೆಟ್‌ ರೈಲಿನಲ್ಲೂ ಆತ್ಮನಿರ್ಭರತೆ!

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

aaa

ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ

CHandrababu Naidu

Andhra ಮಾಜಿ ಸಿಎಂ ಚಂದ್ರಬಾಬು ನಾಯ್ಡು ಆಸ್ತಿ 810 ಕೋಟಿ ರೂ.!

PM Modi

Pakistan ವಿರುದ್ಧ ಆಕ್ರೋಶ ; ಉಗ್ರವಾದ ಬಿತ್ತಿದ್ದ ರಾಷ್ಟ್ರಕ್ಕೆ ಗೋಧಿಗೂ ಬರ: ಮೋದಿ

1-ewqwqewq

LS Election; ಅತೀ ದೊಡ್ಡ ಹಂತದಲ್ಲಿ 62.37% ಮತದಾನ

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-asaasa

250 km per hour; ಶೀಘ್ರದಲ್ಲೇ ಬುಲೆಟ್‌ ರೈಲಿನಲ್ಲೂ ಆತ್ಮನಿರ್ಭರತೆ!

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

aaa

ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ

CHandrababu Naidu

Andhra ಮಾಜಿ ಸಿಎಂ ಚಂದ್ರಬಾಬು ನಾಯ್ಡು ಆಸ್ತಿ 810 ಕೋಟಿ ರೂ.!

PM Modi

Pakistan ವಿರುದ್ಧ ಆಕ್ರೋಶ ; ಉಗ್ರವಾದ ಬಿತ್ತಿದ್ದ ರಾಷ್ಟ್ರಕ್ಕೆ ಗೋಧಿಗೂ ಬರ: ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.