ತ್ಯಾಜ್ಯ ವಸ್ತುಗಳಿಂದ ಮನೆಯ ಅಲಂಕಾರ


Team Udayavani, Jul 6, 2019, 5:00 AM IST

q-62

ಮನೆ ಎಂದ ಮೇಲೆ ಅಲಂಕಾರಕ್ಕಾಗಿ ಹೊಸ ಹೊಸ ವಸ್ತುಗಳನ್ನು ಖರೀದಿಸುವುದು ಸಾಮಾನ್ಯ. ಆದರೆ ಮನೆಯಲ್ಲಿರುವ ತ್ಯಾಜ್ಯವಸ್ತುಗಳನ್ನೇ ಬಳಸಿಕೊಂಡು ಅಲಂಕಾರ ಮಾಡಿದರೆ ಮನೆಯ ಅಂದ ಹೆಚ್ಚಾಗುವುದು ಮಾತ್ರವಲ್ಲ ಮನೆಯಲ್ಲಿರುವ ಪ್ರತಿ ವಸ್ತುವಿನ ಮೇಲೂ ವಿಶೇಷ ನಂಟು ಬೆಸೆದುಕೊಳ್ಳುವುದು.

ದಿನನಿತ್ಯ ನಾವು ಬಳಸಿ ಬಿಸಾಡುವ ಅದೆಷ್ಟೋ ಉತ್ಪನ್ನಗಳಿರುತ್ತವೆ. ಅಂತವುಗಳಿಗೆ ಹೊಸ ರೂಪ ಒದಗಿಸಿ ಮನೆಯನ್ನು ಅಲಂಕಾರ ಮಾಡುವುದು ಕೂಡ ಒಂದು ರೀತಿಯ ಕ್ರಿಯಾಶೀಲತೆ. ಮಾತ್ರವಲ್ಲದೇ ಅತಿ ಕಡಿಮೆ ವೆಚ್ಚದಲ್ಲಿ ಮನೆಯ ಸೌಂದರ್ಯ ಹೆಚ್ಚಿಸಲು ಇರುವ ಇನ್ನೊಂದು ದಾರಿ.

ಗೆರಟೆಗೆ ಹೊಸ ರೂಪ
ಸಾಮಾನ್ಯವಾಗಿ ಅಡುಗೆಗೆ ನಾವು ಕಾಯಿತುರಿಯನ್ನು ಬಳಸಿ ಗೆರಟೆಯನ್ನು ಬಿಸಾಡುತ್ತೇವೆ. ಹಳ್ಳಿಗಳಲ್ಲಿ ಇದನ್ನು ಒಲೆ ಉರಿಸಲು ಬಳಸುತ್ತಾರೆ. ಆದರೆ ಪೇಟೆಗಳಲ್ಲಿ ಇದು ಕಸದ ಬುಟ್ಟಿ ಸೇರುತ್ತದೆ. ಆದರೆ ಇದನ್ನು ಎಸೆಯುವ ಬದಲು ಚೆಂದದ ಆಕೃತಿಗಳನ್ನು ಮಾಡಬಹುದು. ಮಕ್ಕಳಿಗೆ ಪೆನ್ನು ಪೆನ್ಸಿಲ್ಗಳನ್ನು ಇಡಲು ಸ್ಟಾಂಡ್‌ಗಳ ರೂಪ ಕೊಡಬಹುದು. ಇಲ್ಲವಾದಲ್ಲಿ ಇದಕ್ಕೆ ಪೈಂಟ್ ಮಾಡಿ ಕಪ್‌ ಆ್ಯಂಡ್‌ ಸಾಸರ್‌, ಮಗ್ಗ ಅಥವಾ ಶೋಫಿಸ್‌ ಆಗಿ ಬಳಸಬಹುದು. ಗೆರಟೆಗೆ ಬಣ್ಣ ಬಳಿದು ಮಣಿಗಳನ್ನು ಅಂಟಿಸಿ ಅಲಂಕಾರಕ್ಕೆ ಬಳಸಿಕೊಳ್ಳ ಬಹದು.

ಬಾಟಲ್ನ ಅಂದ ಹೆಚ್ಚಿಸಿ
ಸ್ಟಾಫ್ಟ್ ಡ್ರಿಂಕ್ಸ್‌, ಬಿಯರ್‌ ಬಾಟಲಿಗಳು ಖಾಲಿಯಾದ ಮೇಲೆ ಅವುಗಳಿಗೆ ಬಣ್ಣ ಹಚ್ಚಿ ಅದರಲ್ಲಿ ಪ್ಲಾಸ್ಟಿಕ್‌ ಹೂ, ಗಿಡಗಳನ್ನು ಇಡಬಹುದು. ಇದರಿಂದ ಬಾಟಲಿಗಳ ತ್ಯಾಜ್ಯ ಕಡಿಮೆಯಾಗಿ ಮರುಬಳಕೆಯಾದಂತಾಗುತ್ತದೆ. ಇನ್ನು ಪ್ಲಾಸ್ಟಿಕ್‌ ಬಾಟಲ್ಗಳನ್ನು ಅರ್ಧ ಕತ್ತರಿಸಿ ಚಿಕ್ಕ ಚಿಕ್ಕ ಗಿಡಗಳನ್ನು ನೆಡಬಹುದು. ಮನೆಯ ಒಳಾಂಗಣ, ಹೊರಾಂಗಣದ ಗಾರ್ಡನಿಂಗ್‌ಗೆ ಬಳಸಬಹುದು.

ಪೈಂಟ್ ಡಬ್ಬಗಳನ್ನು ಚೆನ್ನಾಗಿ ತೊಳೆದು ಅದಕ್ಕೆ ಬೇರೆ ಬೇರೆ ಬಣ್ಣಗಳನ್ನು ನೀಡಿ ಪ್ಲಾಸ್ಟಿಕ್‌ ಹೂಗಳನ್ನು ಇಟ್ಟು ಡೈನಿಂಗ್‌ ಟೇಬಲ್ ಅಥವಾ ಲೀವಿಂಗ್‌ ರೂಮ್‌ನ ಟೇಬಲ್ಗಳಲ್ಲಿ ಇಡಬಹುದು ಅಥವಾ ಇದರಲ್ಲಿ ಗಿಡಗಳನ್ನೂ ನೆಡಬಹುದು. ಅಲ್ಲದೇ ಇದಕ್ಕೆ ಬಣ್ಣ ಹೋಗದ ಪೈಂಟ್ ಮಾಡಿ ಮಗ್‌ಗಳಾಗಿ ಬಳಸಬಹುದು.

ನ್ಯೂಸ್‌ ಪೇಪರ್‌ ಬಿಸಾಡದಿರಿ
ದಿನ ಓದಿ ಬಿಸಾಡುವ ನ್ಯೂಸ್‌ ಪೇಪರ್‌ಗಳಿಂದ ಮನೆಯ ಅಂದವನ್ನು ಹೆಚ್ಚಿಸಬಹುದು. ಗೋಡೆಗಳ ಅಲಂಕಾರಕ್ಕೆ ಹಣವನ್ನು ವ್ಯಯಿಸುವ ಬದಲು ಸುದ್ದಿ ಪತ್ರಿಕೆಯಿಂದಲೇ ಅಲಂಕರಿಸಬಹುದು. ಅದಕ್ಕೆ ಬಣ್ಣ ಹಚ್ಚಿ ಚಿಕ್ಕದಾಗಿ ಹೂ, ಎಲೆಯಾಕೃತಿಯಲ್ಲಿ ಕತ್ತರಿಸಿ, ಬಳ್ಳಿ ಕಟ್ಟಿ ಅದನ್ನು ಸೂಜಿಯಲ್ಲಿ ಪೋಣಿಸಿ ಅದಕ್ಕೆ ಚೆಂದದ ರೂಪ ನೀಡಬಹುದು.

ಸಿಡಿಯ ಅಲಂಕಾರಿಕ ರೂಪ
ಹಳೆಯ ಸಿಡಿಗಳನ್ನು ಬಿಸಾಡುವುದಕ್ಕಿಂತ ಅದರ ಸುತ್ತಲು ಮಣಿಗಳನ್ನು ಜೋಡಿಸಿ, ಸಣ್ಣದಾದ ದಾರದಲ್ಲಿ ಅದನ್ನು ಒಂದರ ಹಿಂದೆ ಒಂದನ್ನು ಸೇರಿಸಿ ವಿದ್ಯುತ್‌ ದೀಪದ ಬೆಳಕು ಜಾಗದಲ್ಲಿ ಇಟ್ಟರೆ ರಾತ್ರಿ ವೇಳೆ ಮನೆ ಸುಂದರ ವಾಗಿ ಕಾಣುತ್ತದೆ. ಅಲ್ಲದೇ ನೆಲದ ಮೇಲೆ ರಂಗೋಲಿ ಹಾಕಿ ಅದರ ಸುತ್ತ ಅಥವಾ ಮಧ್ಯೆ ಸಿಡಿಗಳನ್ನಿಟ್ಟು ಅದರ ಮೇಲೆ ಬಾಟಲ್ಗಳ ಮುಚ್ಚಳವನ್ನಿಡಬೇಕು. ಇದರ ಮೇಲೆ ಮೇಣದ ಬತ್ತಿಯಿಂದ ದೀಪ ಉರಿಸಿದರೆ ರಂಗೋಲಿಯ ಸೌಂದರ್ಯ ವೃದ್ಧಿಯಾಗುವುದು. ರಾತ್ರಿ ವೇಳೆ ಹೆಚ್ಚು ಆಕರ್ಷಕವಾಗಿ ಕಾಣುವುದು.

ಮನೆಯಲ್ಲಿ ಹಾಳಾದ ಏಣಿಯಿದ್ದರೆ ಅದಕ್ಕೆ ಬಣ್ಣ ಹಚ್ಚಿ ಬಾತ್‌ರೂಮ್‌ಗಳ ಟವೆಲ್ ಇಡಲು ಅಥವಾ ಫೋಟೊ ಫ್ರೇಮ್‌ಗಳನ್ನು ನೇತಾಡಿ ಸಲು ಬಳಕೆ ಮಾಡಬಹುದು.

ಹೀಗೆ ಮನೆಯಲ್ಲಿ ಬೇಡವಾದ ಸಾಮಗ್ರಿ ಗಳು ಇರುವುದು ಸಾಮಾನ್ಯ. ಇವುಗಳಿಗೆ ಸುಂದರ ರೂಪ ನೀಡಿ ಮನೆಯ ಅಲಂಕಾರಕ್ಕೆ ಬಳಸಿಕೊಳ್ಳಬಹುದು.

ಬಟ್ಟೆ, ಟೀ ಕಪ್‌ ಮರುಬಳಕೆ
ಹಳೆಯ ಬಟ್ಟೆಗಳಿಂದ ಮ್ಯಾಟ್‌ಗಳನ್ನು ಮಾಡಬಹದು. ಹಾಗೆಯೇ ಚಿಕ್ಕ ಚಿಕ್ಕ ಬಟ್ಟೆಗಳನ್ನು ಕೂಡಿಸಿ ಕರ್ಟ್‌ನ್‌ಗಳನ್ನು ಮಾಡಬಹುದು. ಹಳೆ ಸೀರೆಗಳನ್ನು ಸೇರಿಸಿ ದಪ್ಪದ ಬೆಡ್‌ಶೀಟ್ ತಯಾರಿಸಬಹುದು.

ಮನೆಯಲ್ಲಿ ಕಟ್ಟಾದ ಟೀ ಕಪ್‌ಗಳಿದ್ದರೆ ಅದರ ಕೆಳಗಿನಿಂದ ತೂತು ಮಾಡಿ ಅದರಲ್ಲಿ ಚಿಕ್ಕ ಬಲ್ಬ್ ಇಟ್ಟು ಮನೆಯ ಹೊರಗೆ ಶೃಂಗರಿಸಬಹುದು.

•ಪ್ರೀತಿ ಭಟ್ ಗುಣವಂತೆ

ಟಾಪ್ ನ್ಯೂಸ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

15

Ramnagar: ಜಿಲ್ಲೆಯಲ್ಲಿ 25 ಕೋಟಿ ರೂ. ಅಕ್ರಮ ವಸ್ತು ಪತ್ತೆ

Department of Health: ಜನರಿಗೆ ಅರಿವಿನ ಟಾನಿಕ್‌ ನೀಡುತ್ತಿರುವ ಆರೋಗ್ಯ ಇಲಾಖೆ

Department of Health: ಜನರಿಗೆ ಅರಿವಿನ ಟಾನಿಕ್‌ ನೀಡುತ್ತಿರುವ ಆರೋಗ್ಯ ಇಲಾಖೆ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.