ಸಸ್ಪೆನ್ಷನ್ ಬುಶ್‌ಗಳ ಬಗ್ಗೆ ನಿಮಗೆಷ್ಟು ಗೊತ್ತು?


Team Udayavani, Nov 8, 2019, 4:46 AM IST

cc-38

ಮಳೆಗಾಲದಲ್ಲಂತೂ ನಮ್ಮ ರಸ್ತೆಗಳ ಪರಿಸ್ಥಿತಿ ಹೇಳುವುದೇ ಬೇಡ. ಇಂತಹ ಸಂದರ್ಭಗಳಲ್ಲಿ ಕಾರುಗಳ ಟಯರ್‌, ಸಸ್ಪೆನ್ಸ್ ನ್‌ ವ್ಯವಸ್ಥೆ, ಅದರ ಬುಶ್‌ಗಳು, ಬ್ರೇಕ್‌ ಮೇಲೆ ಹೆಚ್ಚಿನ ಪರಿಣಾಮವಾಗುತ್ತದೆ. ಹೊಂಡ-ಗುಂಡಿಯ ರಸ್ತೆಯಿಂದಾಗಿ ಮೊದಲು ಸಮಸ್ಯೆ ಎದುರಿಸುವುದು ಸಸ್ಪೆನ್ಷನ್ ಬುಶ್‌ಗಳು. ಈ ಬುಶ್‌ಗಳು ರಬ್ಬರ್‌ನದ್ದಾಗಿದ್ದು, ಇದು ಒಡೆದು ಹೋದರೆ ಅಥವಾ ಹಾಳಾದರೆ, ಅದರ ಪರಿಣಾಮ ಚಾಲನೆಯ ಮೇಲಾಗುತ್ತದೆ. ಇಂತಹ ಬುಶ್‌ಗಳು ಹಾಳಾದರೆ ಏನಾಗುತ್ತದೆ? ಗೊತ್ತಾಗುವುದು ಹೇಗೆ? ವಿವರ ಇಲ್ಲಿದೆ.

ಏನಿದು ಸಸ್ಪೆನ್ಷನ್ ಬುಶ್‌?
ಕಾರುಗಳ ಸಸ್ಪೆನ್ಷನ್ ಮಧ್ಯೆ ಇವುಗಳನ್ನು ಅಳವಡಿಸಲಾಗಿರುತ್ತದೆ. ಸಸ್ಪೆನ್ಷನ್ ವ್ಯವಸ್ಥೆಯ ಕಬ್ಬಿಣದ ಉಪಕರಣಗಳ ಮಧ್ಯೆ ಘರ್ಷಣೆಯನ್ನು ತಪ್ಪಿಸಲು ಈ ಬುಶ್‌ಗಳು ಇರುತ್ತವೆ. ಇವುಗಳು ಉತ್ತಮ ಗುಣಮಟ್ಟದ ಬುಶ್‌ಗಳು. ಸುಗಮ ಸಂಚಾರಕ್ಕೆ, ವಾಹನದ ತತ್‌ಕ್ಷಣ ನಿಯಂತ್ರಣಕ್ಕೆ, ಸ್ಟೀರಿಂಗ್‌ ವ್ಯವಸ್ಥೆ ಚೆನ್ನಾಗಿರಲು ಇವುಗಳು ನೆರವು ನೀಡುತ್ತವೆ. ಈ ಬುಶ್‌ಗಳಿಗೆ ವಿಸೊನ್‌ ಬುಶ್‌ ಎಂದೂ ಹೆಸರಿದೆ. ರಸ್ತೆ ಕೆಟ್ಟದಿರುವಾಗ ಅದುರುವಿಕೆ ಕಡಿಮೆಗೊಳಿಸುವುದು, ನಿಯಂತ್ರಣ ಸಲಾಕೆಗಳು ಚೆನ್ನಾಗಿರುವಂತೆ ಇವುಗಳು ನೋಡಿಕೊಳ್ಳುತ್ತವೆ.

ಸಸ್ಪೆನ್ಷನ್ ಬುಶ್‌ಗಳ ಬದಲಾವಣೆ ಯಾಕೆ?
ಹಲವು ಸಾವಿರ ಕಿ.ಮೀ.ಗಳ ಬಳಿಕ ಈ ಸಸ್ಪೆನ್ಷನ್ ಬುಶ್‌ಗಳು ತುಂಡಾಗುತ್ತವೆ ಅಥವಾ ಬಿರುಕು ಬಿಡುತ್ತವೆ. ಇವುಗಳು ಕಾರಿನ ತಳ ಭಾಗದಲ್ಲಿರುವುದರಿಂದ ಕೆಸರು, ನೀರು, ಬಿಸಿಯನ್ನು ಸಹಿಸಿಕೊಳ್ಳುತ್ತವೆ. ಜತೆಗೆ ರಸ್ತೆಯ ಹೊಂಡ-ಗುಂಡಿಗಳ ಪೆಟ್ಟು ನೇರವಾಗಿ ಇವುಗಳ ಮೇಲಾಗುತ್ತವೆ. ಆದ್ದರಿಂದಲೂ ಇವುಗಳು ಹಾಳಾಗುತ್ತವೆ. ಇಂತಹ ಸಂದರ್ಭದಲ್ಲಿ ಕೂಡಲೇ ಬುಶ್‌ಗಳನ್ನು ಬದಲಾವಣೆ ಮಾಡಬೇಕು. ಕೆಲವೊಮ್ಮೆ ನಿರ್ದಿಷ್ಟ ಕಾರಿನ ಕಂಪೆನಿಗಳು ಇಂತಿಷ್ಟು ಕಿ.ಮೀ.ಗೆ ಎಂದು ಬುಶ್‌ಗಳನ್ನು ಬದಲಾಯಿಸಲು ತಿಳಿಸುತ್ತವೆ.

ಬುಶ್‌ಗಳು ಹಾಳಾದ್ದು ತಿಳಿಯುವುದು ಹೇಗೆ?
ಬುಶ್‌ಗಳು ಹಾಳಾಗಿದ್ದನ್ನು ತಿಳಿಯುವುದು ಸುಲಭವಿದೆ. ನಿಮ್ಮ ಕಾರಿನ ಚಾಲನೆ ಸುಗಮವಾಗಿಲ್ಲದಿರಬಹುದು. ಉತ್ತಮ ಪಿಕಪ್‌, ಕೂಡಲೇ ಬ್ರೇಕಿಂಗ್‌, ಹೊಂಡ ಗುಂಡಿಯ ವೇಳೆ ಟಕ್‌ ಟಕ್‌ ಶಬ್ದಗಳು, ಸ್ಟೀರಿಂಗ್‌ ತಿರುಗಿಸುವ ವೇಳೆ ಶಬ್ದ ಇತ್ಯಾದಿ ಬರಬಹುದು. ಪ್ರಮುಖವಾಗಿ ಕಾರಿನ ಹ್ಯಾಂಡ್ಲಿಂಗ್‌ ಉತ್ತಮವಾಗಿಲ್ಲದಿರುವುದು ನಿಮಗೆ ಚಾಲನೆ ವೇಳೆ ಅನುಭವಕ್ಕೆ ಬರುತ್ತದೆ. ಒಂದು ವೇಳೆ ಸಸ್ಪೆನ್ಷನ್ ಹಾಳಾಗಿದ್ದರೂ ಬದಲಾವಣೆ ಮಾಡಿಲ್ಲ ಎಂದಾದರೆ ಅದರ ಪರಿಣಾಮ ಕಬ್ಬಿಣದ ಉಪಕರಣ-ಸಲಾಕೆಗಳ ಮೇಲಾಗುತ್ತವೆ. ಇದರಿಂದ ಅವುಗಳು ಬೇಗನೆ ಬಾಗಬಹುದು ಮತ್ತು ಇನ್ನಷ್ಟು ಸಮಸ್ಯೆಗಳು ಸೃಷ್ಟಿಯಾಗುವ ಅಪಾಯವಿದೆ. ಸಸ್ಪೆನ್ಷನ್ ಹಾಳಾಗಿರುವುದು ಕಚ್ಚಾ ರಸ್ತೆಯಲ್ಲಿ ಸಂಚರಿಸುವ ವೇಳೆ ಸ್ಪಷ್ಟ ಅನುಭವಕ್ಕೆ ಬರುತ್ತದೆ. ಟಯರ್‌ ಒಂದು ಭಾಗ ಹೆಚ್ಚು ಸವೆಯಬಹುದು. ಕಾರು ಚಾಲನೆ ವೇಳೆ ಎಂದಿಗಿಂತ ಹೆಚ್ಚು ಹಾರಿದಂತೆಯೂ ಭಾಸವಾಗಬಹುದು.

ಬದಲಾವಣೆ ಹೇಗೆ?
ಬುಶ್‌ ಬದಲಾವಣೆಗೆ ಸೂಕ್ತ ಮೆಕ್ಯಾನಿಕ್‌ಗಳ ನೆರವು ಅಗತ್ಯವಿದೆ. ಕೆಲವು ಬುಶ್‌ಗಳು ಸಸ್ಪೆನ್ಷನ್ ವ್ಯವಸ್ಥೆಯ ಜತೆಗೆ ಬರುತ್ತವೆ. ನಿಮ್ಮ ಕಾರಿನ ಬುಶ್‌ ಹೋಗಿದೆಯೇ? ಇಲ್ಲವೇ ಎಂಬುದರ ಬಗ್ಗೆ ಇನ್ನೂ ಸಂಶಯಗಳಿದ್ದರೆ ಮೆಕ್ಯಾನಿಕ್‌ ಜತೆಗೆ ಒಂದು ಟೆಸ್ಟ್‌ ಡ್ರೈವ್‌ ಹೋಗಿ. ಮೆಕ್ಯಾನಿಕ್‌ ಬುಶ್‌ಗಳು ಹೇಗಿವೆ ಎಂದು ಚೆನ್ನಾಗಿ ತಿಳಿಸಬಲ್ಲರು.

-  ಈಶ

ಟಾಪ್ ನ್ಯೂಸ್

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.