ಬೈಕ್‌ ಏರ್‌ ಫಿಲ್ಟರ್‌ ನಿರ್ವಹಣೆ ಹೇಗೆ? 


Team Udayavani, Jul 20, 2018, 3:11 PM IST

20-july-14.jpg

ಎಂಜಿನ್‌ ಒಳಗಡೆ ಪೆಟ್ರೋಲ್‌ ಅನ್ನು ದಹಿಸಲು ನೆರವಾಗುವ ಗಾಳಿ ಹಾದು ಹೋಗುವುದು ಏರ್‌ಫಿಲ್ಟರ್‌ ಮೂಲಕ. ಇದರಿಂದ ಎಂಜಿನ್‌ ಒಳಗಡೆ ಕಸ, ಧೂಳು ಹೋಗುವುದಕ್ಕೆ ತಡೆಯಾಗುತ್ತದೆ. ಪ್ರತಿ ಬಾರಿ ಸರ್ವೀಸ್‌ ವೇಳೆ ಏರ್‌ ಫಿಲ್ಟರ್‌ ಅನ್ನು ತೆಗೆದು ಪರೀಕ್ಷಿಸುತ್ತಿರಬೇಕು. ಏರ್‌ ಫಿಲ್ಟರ್‌ ಶುಚಿಯಾಗಿರುವುದರಿಂದ ಉತ್ತಮ ಮೈಲೇಜ್‌, ಪಿಕಪ್‌ ಸಾಧ್ಯವಾಗುತ್ತದೆ.

ಎಲ್ಲಿರುತ್ತವೆ?
ಏರ್‌ ಫಿಲ್ಟರ್‌ಗಳು ಬೈಕ್‌ನ ಪಾರ್ಶ್ವದಲ್ಲಿ ಅಥವಾ ರೈಡರ್‌ ಸೀಟ್‌ ಕೆಳಭಾಗದಲ್ಲಿ ಇರಬಹುದು. ಎಂಜಿನ್‌ ಏರ್‌ ಇಂಟೇಕ್‌ನ ಪೈಪ್‌ ಮುಂಭಾಗ ಇವುಗಳನ್ನು ಅಳವಡಿಸಲಾಗಿರುತ್ತದೆ. ಏರ್‌ ಫಿಲ್ಟರ್‌ಗಳಲ್ಲಿ ವೃತ್ತಾಕಾರವಾದ, ಚಪ್ಪಟೆಯಾದ ಏರ್‌ಫಿಲ್ಟರ್‌ಗಳು, ರೇಸಿಂಗ್‌ ಬೈಕ್‌ಗಳಲ್ಲಿ ತ್ರಿಕೋನಾಕೃತಿ ಶೈಲಿಯ ಏರ್‌ಫಿಲ್ಟರ್‌ಗಳು ಇರುತ್ತವೆ. 

ಎಂಜಿನ್‌ ಉಸಿರಾಟಕ್ಕೆ ನೆರವು
ಉತ್ತಮ ಏರ್‌ಫಿಲ್ಟರ್‌ನಿಂದಾಗಿ ಎಂಜಿನ್‌ ಶುದ್ಧ ಗಾಳಿ ಹೋಗಲು ನೆರವಾಗುತ್ತದೆ. ಏರ್‌ ಫಿಲ್ಟರ್‌ನಲ್ಲಿ ಧೂಳು, ಕಸ ಇದ್ದರೆ ಎಂಜಿನ್‌ ಶಬ್ದದಲ್ಲಿ ವ್ಯತ್ಯಾಸ ಬರಬಹುದು ಅಥವಾ ಎಂಜಿನ್‌ ಬಂದ್‌ ಬೀಳುವುದು, ಬೇಗನೆ ಸ್ಟಾರ್ಟ್‌ ಆಗದೇ ಇರುವುದು ಇತ್ಯಾದಿ ಸಮಸ್ಯೆಗಳು ಕಾಡಬಹುದು.

ಶುಚಿಗೊಳಿಸೋದು ಹೇಗೆ?
ನಿಮ್ಮ ಬೈಕ್‌ನಲ್ಲಿ ಏರ್‌ಫಿಲ್ಟರ್‌ ಎಲ್ಲಿದೆ ಎಂಬುದನ್ನು ಯೂಸರ್‌ ಮ್ಯಾನ್ಯುವಲ್‌ ನೋಡಿ ತೆರೆಯಿರಿ. ಏರ್‌ಫಿಲ್ಟರ್‌ ನಲ್ಲಿ ವ್ಯಾಪಕ ಧೂಳು ಕೂತಿದ್ದರೆ ಸ್ಪಾಂಜ್‌ನಿಂದ ಅದನ್ನು ಕ್ಲೀನ್‌ ಮಾಡಬೇಕು. ಈ ವೇಳೆ ಅದರ ಮೇಲೆ ಯಾವುದೇ ಒತ್ತಡ ಹಾಕುವಂತಿಲ್ಲ ಅಥವಾ ವ್ಯಾಕ್ಯೂಮ್‌ ಕ್ಲೀನರ್‌ ಮೂಲಕ ಹಾಗೂ ಹೈಪ್ರಶರ್‌ ಏರ್‌ ಹಿಡಿಯುವ ಮೂಲಕ ಧೂಳನ್ನು ತೆಗೆಯಬೇಕು. ಬಳಿಕ ಮೊದಲಿದ್ದಂತೆಯೇ ಬೈಕ್‌ ಒಳಗಡೆ ಅದನ್ನು ಅಳವಡಿಸಿ.

ಏರ್‌ಫಿಲ್ಟರ್‌ ಕ್ಲೀನರ್‌
ಆರಂಭದಲ್ಲಿ ಧೂಳನ್ನು ತೆಗೆದ ಬಳಿಕ ಏರ್‌ ಫಿಲ್ಟರ್‌ನಲ್ಲಿ ಇರಬಹುದಾದ ಕಿರು ಕಣಗಳನ್ನು ತೆಗೆದು ಹಾಕಲು ಏರ್‌ ಫಿಲ್ಟರ್‌ ಕ್ಲೀನರ್‌ ಎಂಬಸ್ಟ್ರೆ ಇದೆ. ಇದು ಮಾರುಕಟ್ಟೆಯಲ್ಲಿ ಲಭ್ಯ. ಈಸ್ಟ್ರೆಯನ್ನು ಬಿಟ್ಟ ಮೇಲೆ ಕನಿಷ್ಠ 15 ನಿಮಿಷ ಬಿಸಿಲಿನಲ್ಲಿ ಏರ್‌ಫಿಲ್ಟರನ್ನು ಒಣಗಲು ಬಿಡಬೇಕು. ಸಂಪೂರ್ಣ ಒಣಗಿದ ಬಳಿಕವಷ್ಟೇ ಅದನ್ನು ಬೈಕ್‌ಗೆ ಅಳವಡಿಸಿ. 

ಬದಲಾವಣೆ ಯಾವಾಗ?
ಸಾಮಾನ್ಯವಾಗಿ ಏರ್‌ ಫಿಲ್ಟರ್‌ ಗಳು 12- 18 ಸಾವಿರ ಕಿ.ಮೀ. ವರೆಗೆ ಬಾಳಿಕೆ ಬರುತ್ತವೆ. ಇದರ ಭವಿಷ್ಯ ನಿಮ್ಮ ರಸ್ತೆ, ಚಲಿಸುವ ಪರಿಸರವನ್ನು ಹೊಂದಿಕೊಂಡಿರುತ್ತದೆ. ನಿಮ್ಮ ಬೈಕ್‌ ಅತಿ ಧೂಳಿನ ರಸ್ತೆಯಲ್ಲೇ ಓಡಾಡುತ್ತಿದೆ ಎಂದರೆ ಏರ್‌ಫಿಲ್ಟರ್‌ ಆಯುಷ್ಯ ಕಡಿಮೆಯಾಗಬಹುದು. ಆದರೂ ಸಾಮಾನ್ಯ ಟಾರು ರಸ್ತೆಯಲ್ಲಿ ಸಂಚರಿಸುವ ಬೈಕ್‌ಗಳ ಏರ್‌ಫಿಲ್ಟರ್‌ ಅನ್ನು ಪರಿಶೀಲಿಸುತ್ತ ಉತ್ತಮ ನಿರ್ವಹಣೆ ಮಾಡುತ್ತಿದ್ದಲ್ಲಿ 22 ಸಾವಿರ ಕಿ.ಮೀ. ವರೆಗೂ ಸಮಸ್ಯೆಯಾಗದು. ಬೈಕ್‌ ಪಿಕಪ್‌, ಸ್ಟಾರ್ಟಿಂಗ್‌ ಸಮಸ್ಯೆ, ಎಂಜಿನ್‌ ಎಕ್ಸಲರೇಶನ್‌ ಸಮಸ್ಯೆ ಇದ್ದರೆ ಏರ್‌ಫಿಲ್ಟರ್‌ ಅನ್ನು ಕೂಡಲೇ ಬದಲಾಯಿಸುವುದು ಉತ್ತಮ

 ಈಶ 

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.