ಮುಳ್ಳು ಸೌತೆ ಬೆಳೆದರೆ ನಿತ್ಯವೂ ಆದಾಯ


Team Udayavani, Sep 16, 2018, 2:56 PM IST

16-sepctember-17.jpg

ತರಕಾರಿ ಬೆಳೆಯಿಂದ ದಿನನಿತ್ಯ ಆದಾಯ ಗಳಿಸಲು ಸಾಧ್ಯವೇ? ಈ ಪ್ರಶ್ನೆಗೆ ಹೌದು ಎಂಬ ಉತ್ತರ ನೀಡುತ್ತಿದೆ ಉಬರಡ್ಕ ಗ್ರಾಮದ ಅಮೈಯಲ್ಲಿ ಎಕರಗಟ್ಟೆಲೆ ಪ್ರದೇಶದಲ್ಲಿ ಮೈದುಂಬಿರುವ ತರಕಾರಿ ತೋಟ..!

ಯುವ ಕೃಷಿಕ ಬಾಲಚಂದ್ರ ಅಮೈ ಅವರು ಸುಮಾರು ಒಂದು ಎಕರೆ ಜಾಗದಲ್ಲಿ ನಿರ್ಮಿಸಿದ ಮುಳ್ಳು ಸೌತೆಯ ತೋಟ ಈಗ ಅವರ ಪಾಲಿಗೆ ದಿನ ನಿತ್ಯ ಆದಾಯ ತರುವ ಕೃಷಿ. ಬಹು ಬೆಳೆ ಪ್ರಯೋಗಶೀಲತೆಯ ಕೃಷಿಕನಾಗಿರುವ ಇವರು, ಈ ಬಾರಿ ಮುಳ್ಳು ಸೌತೆ ನಾಟಿ ಮಾಡಿ ಅದರಿಂದ ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದಾರೆ. ನಾಟಿ ಸಂದರ್ಭದಲ್ಲಿ ಇಬ್ಬರು ಕೂಲಿ ಕಾರ್ಮಿಕರನ್ನು ಬಳಸಿದ್ದು ಬಿಟ್ಟರೆ, ಮಿಕ್ಕ ಎಲ್ಲ ಅವಧಿಯಲ್ಲಿ ಇವರೇ ದುಡಿಯುತ್ತಿದ್ದಾರೆ. ಬಳ್ಳಿ- ಬಳ್ಳಿ ಯೋಗ ಕ್ಷೇಮ ವಿಚಾರಿಸಿ, ಚೆನ್ನಾಗಿ ಸಲಹಿ ಬದುಕಿನ ಬಂಡಿ ದೂಡುತ್ತಿದ್ದಾರೆ.

ನಾಟಿ ಮಾಡಿದ 45 ದಿನಗಳ ಬಳಿಕ ಇದು ಫಸಲು ನೀಡಲು ಆರಂಭಿಸುತ್ತದೆ. ಈಗ 15 ದಿನಗಳಿಂದ ಪ್ರತಿ ದಿನ ಕಟಾವಿಗೆ ಸಿಕ್ಕಿದೆ. 1.5 ಕ್ವಿಂಟಾಲ್‌ನಷ್ಟು ಮುಳ್ಳು ಸೌತೆ ದೊರೆಯುತ್ತಿದೆ. ಬೆಳಗ್ಗೆ ಕೊಯ್ದು ಸುಳ್ಯದ ಪೇಟೆಯಲ್ಲಿ ಮಾರಾಟ ಮಾಡುತ್ತೇನೆ ಎನ್ನುತ್ತಾರೆ ಕೃಷಿಕ ಬಾಲಚಂದ್ರ ಅವರು.

ಒಂದು ಎಕರೆಯಲ್ಲಿ ಈ ಕೃಷಿ ಇದೆ. ಮಣ್ಣು ಹದ ಮಾಡಿದ ಆರಂಭದಲ್ಲಿ ಬೀಜ ಬಿತ್ತನೆಗೆ 15 ದಿವಸಕ್ಕೆ ಮೊದಲು ಕೋಳಿ ಗೊಬ್ಬರ ಮಣ್ಣಿನ ಜತೆಗೆ ಮಿಶ್ರಣ ಮಾಡಿದ್ದಾರೆ. ಬಿತ್ತನೆಯ ಬಳಿಕ ಹೊಂಗೆ ಹಿಂಡಿ, ಸುಫಲಾ ಸಹಿತ ವಿವಿಧ ಗೊಬ್ಬರವನ್ನು ನೀಡಿದ್ದಾರೆ. ದಿನಂಪ್ರತಿ ಮೂರು ಕ್ವಿಂಟಾಲ್‌ನಷ್ಟು ಇಳುವರಿ ಸಿಗಬೇಕು. ಒಂದು ವಾರದಿಂದ ಮಳೆ ಕಡಿಮೆ ಆದ ಕಾರಣ ಇಳುವರಿ ಸ್ವಲ್ಪ ಕಡಿಮೆ ಆಗಿದೆ. ಮಳೆ ಬಂದರೆ ಫಸಲು ಹೆಚ್ಚಾಗಬಹುದು ಎನ್ನುತ್ತಾರೆ ಅವರು.

ಮೂರು ವರ್ಷದ ಹಿಂದೆ ಮನೆ ಮುಂಭಾಗದಲ್ಲಿ ಕಳೆಗಿಡಗಳು ತುಂಬಿ ಕಾಡಿನಂತಿದ್ದ ಪ್ರದೇಶವನ್ನು ಸಮತಟ್ಟು ಮಾಡಿ ಕೃಷಿ ಆರಂಭಿಸಿದ್ದಾರೆ. ತೊಂಡೆ, ಬದನೆ, ಹರಿವೆ ಹೀಗೆ ನಾನಾ ಬಗೆಯ ಕೃಷಿ ಪ್ರಯೋಗ ಮಾಡಿ ಅದರಿಂದ ಯಶಸ್ಸು ಕಂಡಿದ್ದಾರೆ. ಅಡಿಕೆ, ತೆಂಗು ಕೃಷಿಯ ಜತೆಗೆ ತರಕಾರಿ ಉಪ ಬೆಳೆಯಾಗಿ ಇವರಿಗೆ ಆದಾಯ ತಂದೊಡ್ಡುತ್ತಿದೆ.

ಮುಳ್ಳು ಸೌತೆ ಕೃಷಿಗೆ ನೀರು ಮುಖ್ಯ. ನೀರು ಪೋಲಾಗದಂತೆ ಹನಿ ನೀರಾವರಿ ಪದ್ಧತಿ ಮೂಲಕ ಬಳ್ಳಿಗಳಿಗೆ ನೀರೊದಗಿಸುತ್ತಿದ್ದಾರೆ. ಚಪ್ಪರದ ಬದಲು ಅಲಸಂಡೆ ನಾಟಿ ಮಾದರಿಯಂತೆ ಮುಳ್ಳು ಸೌತೆ ಬಳ್ಳಿಯನ್ನು ಬಿಟ್ಟಿದ್ದಾರೆ. ಸಾಲು ಮಾದರಿ ಈ ಕೃಷಿಯಿಂದ ಕಟಾವು, ಬಳ್ಳಿಗಳ ಆರೋಗ್ಯ ಗಮನಿಸಲು ಸುಲಭವಾಗುತ್ತದೆ

3 ತಿಂಗಳು ಫ‌ಸಲು
ಮುಳ್ಳು ಸೌತೆ ಸುಮಾರು 3 ತಿಂಗಳ ಕಾಲ ಫಸಲು ನೀಡುತ್ತದೆ. ಹೆಚ್ಚು ಬಳಿತರೆ ಅದು ಹಳದಿ ಬಣ್ಣಕ್ಕೆ ತಿರುಗುತ್ತದೆ. ಹಾಗಾಗಿ ದಿನಲೂ ಬೆಳಗ್ಗೆ ಹದವಾಗಿ ಬೆಳೆತ ಸೌತೆ ಕೊಯ್ದು ಮಾರಾಟ ಮಾಡಬೇಕು. ಈಗ ಕೆ.ಜಿ.ಗೆ 30 ರೂ. ಧಾರಣೆ ಇದೆ. 
 - ಬಾಲಚಂದ್ರ, ಕೃಷಿಕರು

ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.