ಜವಾಬ್ದಾರಿ ಹೆಚ್ಚಿದರೆ ಭಯ ಬೇಡ 


Team Udayavani, Jan 21, 2019, 7:56 AM IST

21-january-11.jpg

ವೃತ್ತಿ ಅಥವಾ ಖಾಸಗಿ ಬದುಕು ಯಾವುದೇ ಇರಲಿ ಹೆಣ್ಮಕ್ಕಳು ಜವಾಬ್ದಾರಿ ಹೊತ್ತುಕೊಳ್ಳಲು ಹೆಚ್ಚಾಗಿ ಹಿಂಜರಿಯುತ್ತಾರೆ. ಇದಕ್ಕೆ ಕಾರಣ ಅವರಲ್ಲಿ ಆತ್ಮವಿಶ್ವಾಸದ ಕೊರತೆ ಇರಬಹುದು. ಆದರೆ ಸಮಯಕ್ಕೆ ಸರಿಯಾಗಿ ನಿರ್ಧಾರಗಳನ್ನು ಕೈಗೊಳ್ಳದೇ ಹೋದರೆ ಉತ್ತಮ ಅವಕಾಶವೊಂದು ಕೈ ತಪ್ಪಿದಂತಾಗುತ್ತದೆ.

ವೃತ್ತಿಯಲ್ಲಿ ಪರಿಣತಳಾಗಿದ್ದ ರೇಷ್ಮಾಳಿಗೆ ಸಾಕಷ್ಟು ಉತ್ತಮ ಆಫ‌ರ್‌ ಗಳು ಬಂದರೂ ನಿರಾಕರಿಸುತ್ತಲೇ ಇದ್ದಳು. ಕಾರಣ ಈಗ ಇರುವ ವೃತ್ತಿ ಚೆನ್ನಾ ಗಿದೆ. ಬದುಕಿನಲ್ಲಿ ಹೆಚ್ಚಿನ ಯಾವುದೇ ನಿರೀಕ್ಷೆಗಳಿಲ್ಲ. ಇದ್ದಷ್ಟು ದಿನ ಇದ್ದುದರಲ್ಲೇ ತೃಪ್ತಿ ಪಡುವ ಜಾಯಮಾನ. ಹೀಗಾಗಿ ಬೇರೆ ಆಫ‌ರ್‌ ಗಳತ್ತ ಕಣ್ಣೆತ್ತಿಯೂ ನೋಡಲಿಲ್ಲ. ಆದರೆ ಇತ್ತೀಚೆಗೆ ಕಂಪೆನಿಯಲ್ಲಿ ಬಂದ ಹೊಸ ನಿಯ ಮವೊಂದು ಆಕೆಯನ್ನು ಕಂಗೆಡಿಸಿತು ಜತೆಗೆ ಜವಾಬ್ದಾರಿ ಹೆಚ್ಚಾಯಿತು. ಇದು ಆಕೆಯ ಮನೋ ಸಾಮರ್ಥ್ಯವನ್ನು ಮತ್ತಷ್ಟು ಕುಗ್ಗಿಸಿತು.

ಇಂಥ ಪರಿಸ್ಥಿತಿಗಳನ್ನು ಹಲವು ಮಂದಿ ಹೆಣ್ಮಕ್ಕಳು ತಮ್ಮ ವೃತ್ತಿ ಕ್ಷೇತ್ರದಲ್ಲಿ ಅನುಭವಿಸಿರುತ್ತಾರೆ. ಕಾರಣ ಅವರು ಕಂಫ‌ರ್ಟ್‌ ಝೋನ್‌ ನೊಳಗೆ ಕುಳಿತಿರುತ್ತಾರೆ. ಅದರಿಂದ ಹೊರಗಿನ ವಿಚಾರಗಳನ್ನು ತಿಳಿಯುವ ಕುತೂಹಲವಾಗಲಿ, ಅನಿವಾರ್ಯತೆಯಾಗಲಿ ಅವರಿಗೆ ಬಂದಿರುವುದಿಲ್ಲ. ಹೀಗಾಗಿ ಕೆಲವು ಅನಿರೀಕ್ಷಿತವಾಗಿ ಬಂದ ಘಟನೆಗಳಿಗೆ ಕಂಗೆಟ್ಟು ಹೋಗುತ್ತಾರೆ. ಇದು ವೃತ್ತಿ ಬದುಕಿಗೆ ಸೀಮಿತವಾಗಿರುವುದಿಲ್ಲ. ಬದಲಿಗೆ ಹೆಚ್ಚಿನವರ ಖಾಸಗಿ ಬದುಕಿನಲ್ಲೂ ಇಂಥ ಪ್ರಸಂಗಗಳಿವೆ.

ಭಯ ಬಿಟ್ಟು ಬಿಡಿ. ಭಯ ಎಂಬುದು ನಮ್ಮನ್ನು ದುರ್ಬಲರನ್ನಾಗಿ ಮಾಡುತ್ತದೆಯೇ ಹೊರತು ಅದರಿಂದ ಏನೂ ಲಾಭವಿಲ್ಲ. ಹೀಗಾಗಿ ಮೊದಲಿಗೆ ಏನಾಗಲಿ ಮುಂದೆ ಸಾಗು ನೀ ಎಂಬಂತೆ ಮುನ್ನಡೆಯುತ್ತಾ ಸಾಗಬೇಕು. ಆಗ ಭಯ ತನ್ನಿಂತಾನೇ ಕಡಿಮೆಯಾಗುತ್ತಾ ಹೋಗುತ್ತದೆ. ಸವಾಲುಗಳನ್ನು ಸ್ವೀಕರಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಆರಂಭದಲ್ಲಿ ಸಣ್ಣ ಪುಟ್ಟ ಸವಾಲುಗಳನ್ನು ಸ್ವೀಕರಿಸಬೇಕು. ಇದು ಕ್ರಮೇಣ ನಮ್ಮ ಭಯವನ್ನು ನಿವಾರಿಸುತ್ತಾ ಹೋಗುತ್ತದೆ. 

ಸವಾಲುಗಳನ್ನು ನಮ್ಮನ್ನು ಸದೃಢರನ್ನಾಗಿ ಮಾಡುತ್ತದೆ. ಜತೆಗೆ ಸಾಕಷ್ಟು ಅನುಭವಗಳನ್ನೂ ಕಟ್ಟಿಕೊಡುತ್ತದೆ. ಇದರಿಂದ ಮುಂದಿನ ಸವಾಲುಗಳನ್ನು ಎದುರಿಸುವುದು, ಬದುಕಿನಲ್ಲಿ ಹೊಸ ನಿರ್ಧಾರ ಕೈಗೊಳ್ಳುವುದು ಸುಲಭವಾಗುತ್ತದೆ.

ರಿಲ್ಯಾಕ್ಸ್‌ ಮಾಡಿಕೊಳ್ಳಿ. ಕೆಲಸ ಮಾಡುತ್ತಿರುವ ವೇಳೆ ಹೆಚ್ಚು ಸುಸ್ತು, ಟೆನ್ಶನ್‌ ಆದರೆ ಒಂದಷ್ಟು ಹೊತ್ತು ರಿಲ್ಯಾಕ್ಸ್‌ ಮಾಡಿಕೊಳ್ಳಿ. 10- 15 ಬಾರಿ ದೀರ್ಘ‌ವಾಗಿ ಉಸಿರಾಡಿ. ಇಲ್ಲವೇ ಸಣ್ಣದೊಂದು ವಾಕಿಂಗ್‌ ಹೋಗಿ ಬನ್ನಿ ಅಥವಾ ಹಾಸ್ಯ ಲೇಖನ ಓದಿ. ಇದು ನಿಮ್ಮ ಮನಸ್ಸನ್ನು ರಿಫ್ರೆಶ್‌ ಮಾಡುತ್ತದೆ.

ಜ್ಞಾನ ಭಂಡಾರ ಹೆಚ್ಚಿಸಿಕೊಳ್ಳಬೇಕು. ಯಾವುದೇ ಕ್ಷೇತ್ರವಿರಲಿ. ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳುವುದರಲ್ಲಿ ತಪ್ಪಿಲ್ಲ. ಜ್ಞಾನ ಎಂಬುದು ಎಲ್ಲೇ ಇದ್ದರೂ ಅದನ್ನು ಮುಕ್ತ ವಾಗಿ ನಮ್ಮ ಬಳಿ ಹರಿದುಬರಲು ಬಿಡಬೇಕು. ಇದರಿಂದ ನಾವು ಹೊಸತನಕ್ಕೆ ತೆರೆದುಕೊಳ್ಳುವುದು ಸುಲಭವಾಗುತ್ತದೆ.

 ವಿಕೆ

ಟಾಪ್ ನ್ಯೂಸ್

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Food ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Food ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

2-maski

Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.