ಅಪರಿಚಿತ ಅಜ್ಜಿಯ ಕಣ್ಣುಗಳಲ್ಲಿ ನಾನು ಮೊಮ್ಮಗ !
ಅನುಭವ ಜಾತ್ರೆ
Team Udayavani, Apr 15, 2019, 6:00 AM IST
ನೀಡುವುದರಲ್ಲೇ ಇದೆ ಬದುಕಿನ ಸಂತೋಷ.
ರಾತ್ರಿ ಬಸ್ನಲ್ಲಿ ಬೆಂಗಳೂರಿಗೆ ಹೊರಟಿದ್ದೆ. ಆರಂಭದಲ್ಲಿ ಪಯಣ ಸುಖಕರವಾಗಿತ್ತು. ಬಸ್ ಯಾವಾಗ ಸುಳ್ಯ ದಾಟಿತೋ ಆಗ ಚಳಿ ಶುರುವಾಗತೊಡಗಿತು. ಹೊರಡುವ ಗಡಿಬಿಡಿಯಲ್ಲಿ ಜರ್ಕಿನ್ ತರಲು ಮರೆತಿದ್ದೆ.
ಬಸ್ ಸಂಪಾಜೆ ದಾಟಿ ಘಾಟಿ ಏರುತ್ತಿದ್ದಂತೆ ಚಳಿಯ ತೀವ್ರತೆಯೂ ಏರಿ ನಡುಗತೊಡಗಿದೆ. ಟೀ ಶರ್ಟ್ ಮೇಲೆ ಶರ್ಟ್ ಹಾಕಿಕೊಂಡರೂ ಪ್ರಯೋಜನವಾಗಲಿಲ್ಲ. ಮಡಿಕೇರಿ ತಲುಪಿದ ಮೇಲೆ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತು. ಪ್ರಯಾಣ ಅಸಹನೀಯವಾಗುತ್ತಿತ್ತು. ಏನೂ ಮಾಡಿದರೂ ಚಳಿ ಕಡಿಮೆಯಾಗುತ್ತಿಲ್ಲ. ಬಸ್ ಇಳಿದು ಬಿಡಲೆ ಎನ್ನುವಷ್ಟರ ಮಟ್ಟಿಗೆ ಕಂಗಾಲಾಗಿದ್ದೆ. ಸುತ್ತಲೂ ನೋಡಿದೆ. ಎಲ್ಲರೂ ಬೆಚ್ಚನೆ ಮಲಗಿ ಸಕ್ಕರೆ ನಿದ್ದೆಯಲ್ಲಿದ್ದರು. ಅಷ್ಟರಲ್ಲಿ ನನ್ನನ್ನೇ ಗಮನಿಸುತ್ತಿದ್ದ ಪಕ್ಕದ ಸೀಟಿನಲ್ಲಿ ಮಲಗಿದ್ದ ಅಜ್ಜಿ ನಿಧಾನವಾಗಿ ಎದ್ದು ಕುಳಿತು “ತುಂಬಾ ಚಳಿ ಆಗ್ತಾ ಇದೆಯಾ?’ ಎಂದು ಕಕ್ಕುಲತೆಯಿಂದ ವಿಚಾರಿಸಿದರು. ಅವರೇನೂ ನನಗೆ ಪರಿಚಿತರಲ್ಲ. ಬಸ್ ಹತ್ತುವಾಗ ಅವರನ್ನು ನೋಡಿ ಮುಗುಳ್ನಕ್ಕಿದ್ದೆ ಅಷ್ಟೇ.
“ಹೌದಜ್ಜಿ ಸಿಕ್ಕಾಪಟ್ಟೆ ಚಳಿ’ ಎಂದೆ. “ಒಂದು ನಿಮಿಷ ಇರು’ ಎಂದವರೇ ತಮ್ಮ ಬಾಗ್ನಿಂದ ರಗ್ನಂತಹ ದಪ್ಪನೆಯ ಬೆಡ್ಶೀಟ್ ತೆಗೆದು ನನ್ನತ್ತ ಚಾಚಿದರು. “ಹೊದ್ದುಕೋ ಚಳಿ ಕಡಿಮೆಯಾಗುತ್ತದೆ’ ಎಂದರು.
“ಥಾಂಕ್ಸ್ ಅಜ್ಜಿ ‘ಎಂದು ಹೇಳಿ ಮೈಗೆ ಸುತ್ತಿಕೊಂಡೆ. “ನಿನ್ನ ನೋಡುವಾಗ ನನ್ನ ಮೊಮ್ಮಗನ ನೆನಪಾಯಿತು’ ಎಂದರು ಅಜ್ಜಿ ಸೀಟಿಗೊರಗುತ್ತ. ಅಪರಿಚಿತನಲ್ಲೂ ತಮ್ಮವನನ್ನು ಕಂಡ ಅಜ್ಜಿಯ ಔದಾರ್ಯಕ್ಕೆ ಸಾಟಿ ಇಲ್ಲ ಎನಿಸಿತು.
– ರಮೇಶ್ ಬಳ್ಳಮೂಲೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ