ಹುಡುಗರ ಉಡುಗೆ ಲೋಕದಲ್ಲಿ ಕುರ್ತಾಗಳದ್ದೇ ದರ್ಬಾರು


Team Udayavani, Mar 6, 2020, 3:28 AM IST

kurta-fashion

ಸಾಂಪ್ರದಾಯಿಕ ಉಡುಗೆಗಳು ಫ್ಯಾಷನ್‌ ಆಗುತ್ತಿರುವ ಜಮಾನಾದಲ್ಲಿ ಕುರ್ತಾ ಶರ್ಟ್‌ಗಳ ಕಾರುಬಾರು ಜೋರಾಗಿಯೇ ನಡೆದಿದೆ. ವಿನೂತನ ಶೈಲಿಯಿಂದ ಟ್ರೆಂಡ್‌ ಆಗುತ್ತಿರುವ ಈ ದಿರಿಸುಗಳು ವಿವಿಧ ಮಾದರಿಗಳಲ್ಲಿ ಲಭ್ಯವಾಗುತ್ತಿದ್ದು, ಹಿಂದಿನ ಮಾದರಿಯ ವಿನ್ಯಾಸಕ್ಕಿಂತ ಮತ್ತಷ್ಟು ಭಿನ್ನ ಮತ್ತು ಸ್ಟೈಲಿಶ್‌ ಆಗಿ ವಿನ್ಯಾಸ ಮಾಡಿ ಮಾರುಕಟ್ಟೆಗೆ ಬಿಡಲಾಗುತ್ತಿದೆ. ಇನ್ನು ಇದಕ್ಕೆ ಧೋತಿ, ಫಾರ್ಮಲ್‌ ಪ್ಯಾಂಟ್‌ಗಳನ್ನು ಹೊಂದಾಣಿಕೆ ಮಾಡಿಕೊಳ್ಳಲಾಗುತ್ತಿದೆ. ಭಾರತೀಯ ವಸ್ತ್ರ ಪರಂಪರೆಯಲ್ಲಿ ಪುರುಷರ ಪ್ರಮುಖ ಉಡುಗೆಯಾಗಿದ್ದ ಧೋತಿಯನ್ನು ಮತ್ತಷ್ಟು ನವೀಕರಣಗೊಳಿಸಿ ವಿಭಿನ್ನ ಶೈಲಿಯ ಮೂಲಕ ಯುವಕರನ್ನು ಸೆಳೆಯಲಾಗುದೆ. ಮಾರುಕಟ್ಟೆ ಟ್ರೆಂಡ್‌ ಆಗುತ್ತಿರುವ ಸಂಪ್ರಾದಾಯಿಕ ಸೊಗಡಿನ ಆಧುನಿಕ ಮೆರುಗನ್ನು ಹೊಂದಿರುವ ಕುರ್ತಾ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.

ಕುರ್ತಾ ಶರ್ಟ್‌ಗಳು
ತುಂಬು ತೋಳು, ಗಿಡ್ಡ ತೋಳಿನ ಶರ್ಟ್‌, ಟೀ ಶರ್ಟ್‌ಗಳು, ಪೈಜಾಮಾದಂತಹ ಕೆಲವೇ ಆಯ್ಕೆಗಳಿಗೆ ಸೀಮಿತವಾಗಿದ್ದ ಹುಡುಗರ ವಸ್ತ್ರ ಲೋಕಕ್ಕೆ ಈಗ ನಾನಾ ಶೈಲಿಯ ಕುರ್ತಾಗಳು ಎಂಟ್ರಿಯಾಗಿವೆ. ಮಾರುಕಟ್ಟೆಯಲ್ಲಿ ಇಂದು ಸಖತ್‌ ಟ್ರೆಂಡ್‌ ಆಗುತ್ತಿರುವ ಈ ಮಾದರಿಯ ಉಡುಗೆ ಇಂದಿನ ಯುವಕರ ಮೆಚ್ಚಿನ ಧಿರಿಸಾಗಿ ಗುರುತಿಸಿಕೊಳ್ಳುತ್ತಿದೆ. ಫಾರ್ಮಲ್‌ ಫ‌ಂಕ್ಷನ್‌ಗಳಲ್ಲಿ ಶಾರ್ಟ್‌ ಕುರ್ತಾ, ಲಾಂಗ್‌ ಕುರ್ತಾಗಳು ಮನ್ನಣೆ ಪಡೆದುಕೊಳ್ಳುತ್ತಿ¤ವೆ.

ಕಣ್ಮನ ಸೆಳೆದ ಕೌಲ್‌ ಕುರ್ತಾದ ವಿನ್ಯಾಸ
ಎಡ ಭುಜದಿಂದ ಇಳಿದ ಐದು ನೆರಿಗೆಗಳು ಕುರ್ತಾದ ಕೊನೆಯಿಂದ ಸೊಂಟದ ಬಲಭಾಗದತ್ತ ಹೊರಳುತ್ತವೆ. ಕುರ್ತಾಕ್ಕೆ ಅಸಾಮಾನ್ಯ ನೋಟ ನೀಡುವುದೇ ಆ ನೆರಿಗೆಗಳು. ಭುಜದ ಬಳಿ ನೆರಿಗೆಗಳಿಗೆ ಮೇಲ್ಭಾಗದಲ್ಲೇ ಹೊಲಿಗೆ ಹಾಕಿರುವ ಕ್ಲಾಸಿ ಲುಕ್‌ ನೀಡುತ್ತದೆ. ಮದುವೆ ಮನೆ, ಶುಭ ಸಮಾರಂಭಗಳಲ್ಲಿ ಮದುಮಗ ಮತ್ತು ಅವನ ಅಕ್ಕಪಕ್ಕ ನಿಲ್ಲುವ ಸಹೋದರರಿಗೆ, ಸ್ನೇಹಿತರಿಗೆ ಪಕ್ಕಾ ಟ್ರೆಂಡಿ ಉಡುಗೆ ಎಂಬ ಹೆಗ್ಗಳಿಕೆ ಗಳಿಸಿದೆ.

ಭಿನ್ನವಾಗಿ ಕಾಣಲು ಜಾಕೆಟ್‌
ಭಿನ್ನವಾಗಿ ಕಾಣಲು ಕೌಲ್‌ ಕುರ್ತಾದ ಮೇಲೆ ಜಾಕೆಟ್‌ಗಳನ್ನು ಧರಿಸುತ್ತಿದ್ದು, ಕುರ್ತಾಕ್ಕೆ ಹೊಂದಾಣಿಕೆ ಆಗುವಂತೆ ವಾಸ್ಕೋಟ್‌ಗಳನ್ನು ವಿನ್ಯಾಸ ಮಾಡಲಾಗುತ್ತಿದೆ. ಜಾಕೆಟ್‌ ಆರಿಸುವಾಗಲೂ ಜಾಣತನ ಮತ್ತು ಸೌಂದರ್ಯಪ್ರಜ್ಞೆ ತೋರುವ ಯುವಕರು ಕೆನೆಬಣ್ಣದ ಕೌಲ್‌ ಕುರ್ತಾ ಮತ್ತು ಪೈಜಾಮದ ಮೇಲೆ ಗಂಧದ ಬಣ್ಣದ ಜಾಕೆಟ್‌, ತಿಳಿಗುಲಾಬಿ ಬಣ್ಣದ ಕೌಲ್‌ ಕುರ್ತಾ ಪೈಜಾಮಾಕ್ಕೆ ಗುಲಾಬಿ ಬಣ್ಣದ್ದೇ ಹೂಬಳ್ಳಿಯಂತಹ ವಿನ್ಯಾಸವಿರುವ ಜಾಕೆಟ್‌ ಮತ್ತು ಗ್ರೀಸ್‌ ಬಣ್ಣದ ಕುರ್ತಾಕ್ಕೆ ಅದೇ ಬಣ್ಣ ಮತ್ತು ತಿಳಿ ನೀಲಿ (ಇಂಡಿಗೊ)ವಿನ್ಯಾಸವಿರುವ ಜಾಕೆಟ್‌ಗಳನ್ನು ತೊಡುತ್ತಿದ್ದಾರೆ.

ಫಾರ್ಮಲ್‌ ಪ್ಯಾಂಟ್‌ ಮ್ಯಾಚಿಂಗ್‌
ಕುರ್ತಾ ಶರ್ಟ್‌ಗಳಿಗೆ ಜಿನ್ಸ್‌ ಪ್ಯಾಂಟ್‌ಗಳಿಗಿಂತ್‌ ಫಾರ್ಮಲ್ಸ್‌ ಮತ್ತು ಆಂಕ್ಯಲ್‌ ಪ್ಯಾಂಟ್‌ಗಳು ಹೊಂದಾಣಿಕೆಯಾದರೆ, ಮೊಣಕಾಲಿನವರೆಗೆ ಬರುವ ಕುರ್ತಾಗಳಿಗೆ ಪುಶ್‌ ಆಪ್‌ ಪ್ಯಾಂಟ್‌ಗಳು ಅಥವ ಪೈಜಾಮಾಗಳು ಸೂಟ್‌ ಆಗುತ್ತವೆ.

ಆಕರ್ಷಕ ವಿನ್ಯಾಸ
ಸೈಡ್‌ ಬಟನ್‌ ಮತ್ತು ಮಿಡ್‌ಲ್‌ ಬಟನ್‌ ಹೀಗೆ ಎರಡು ಮಾದರಿಯಲ್ಲಿ ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದ್ದು, ರೌಂಡ್‌ ನೆಕ್‌ ಅಥವಾ ಚೈನಿಸ್‌ ಕಾಲರ್‌ ಇದರ ಅಂದವನ್ನು ಹೆಚ್ಚಿಸುತ್ತಿದೆ. ಪುಲ್‌ ಹ್ಯಾಂಡ್‌ ಮತ್ತು ತ್ರೀ ಫೋರ್ಥ್ ಕೈ ತೋಳುಗಳ ಮಾದರಿಯಲ್ಲಿ ಲಭ್ಯ. ಸಮಾರಂಭ ಮಾತ್ರವಲ್ಲ ಎಲ್ಲ ಸಂದರ್ಭಗಳಿಗೂ ಸೂಟ್‌ ಆಗುವ ಈ ಅಂಗಿಯನ್ನು ಕಾಲೇಜ್‌ ಹೈಕಳುಗಳಿಂದ ಹಿಡಿದು ಕಚೇರಿಗೆ ಹೋಗುವವರೂ, ಮಧ್ಯ ವಯಸ್ಕರೂ ತೊಡಲು ಆಸಕ್ತಿ ತೋರುತ್ತಿದ್ದಾರೆ.

– ಸುಶ್ಮಿತಾ ಜೈನ್‌

ಟಾಪ್ ನ್ಯೂಸ್

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Congress ಆಳ್ವಿಕೆಯಲ್ಲಿ ಹಿಂದುಗಳಿಗೆ ಉಳಿಗಾಲ ಇಲ್ಲ : ಯಶ್‌ಪಾಲ್‌

Congress ಆಳ್ವಿಕೆಯಲ್ಲಿ ಹಿಂದುಗಳಿಗೆ ಉಳಿಗಾಲ ಇಲ್ಲ : ಯಶ್‌ಪಾಲ್‌

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

BJP ನಿರ್ದೇಶಿಸಿದರೆ ಮಂಡ್ಯದಲ್ಲೂ ಪ್ರಚಾರ: ಸುಮಲತಾ ಅಂಬರೀಷ್‌

BJP ನಿರ್ದೇಶಿಸಿದರೆ ಮಂಡ್ಯದಲ್ಲೂ ಪ್ರಚಾರ: ಸುಮಲತಾ ಅಂಬರೀಷ್‌

ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

Brahmavar ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Congress ಆಳ್ವಿಕೆಯಲ್ಲಿ ಹಿಂದುಗಳಿಗೆ ಉಳಿಗಾಲ ಇಲ್ಲ : ಯಶ್‌ಪಾಲ್‌

Congress ಆಳ್ವಿಕೆಯಲ್ಲಿ ಹಿಂದುಗಳಿಗೆ ಉಳಿಗಾಲ ಇಲ್ಲ : ಯಶ್‌ಪಾಲ್‌

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.