ಪುರುಷರಲ್ಲೂ ಹೆಚ್ಚಾಗುತ್ತಿದೆ ‘ಶ್ರಗ್‌’ ಟ್ರೆಂಡ್‌,


Team Udayavani, Aug 17, 2018, 2:01 PM IST

17-agust-13.jpg

ಫ್ಯಾಶನ್‌ ಜಗತ್ತಿಗೆ ಇಂದಿನ ಯುವಜನತೆಗೆ ಎಷ್ಟು ವಾಲಿದ್ದಾರೆ ಅಂದರೆ, ದಿನ ಬೆಳಗಾಗುವುದರಲ್ಲಿ ಹೊಸ ಟ್ರೆಂಡ್‌ ಸೃಷ್ಟಿಯಾಗುತ್ತಿವೆ. ಇಂದಿನ ಯುವಕ -ಯುವತಿಯರು ಕೂಡ ಈ ಟ್ರೆಂಡ್‌ಗೆ ಒಗ್ಗಿಕೊಂಡಿದ್ದು, ಮಾರುಕಟ್ಟೆಗೆ ಬರುವಂತಹ ಹೊಸ ಟ್ರೆಂಡ್‌ ಬಗ್ಗೆ ಕಾತುರದಿಂದ ಕಾಯುತ್ತಿರುತ್ತಾರೆ. ಅಂದಹಾಗೆ, ಸದ್ಯ ಮಳೆಗಾಲವಾಗಿದ್ದರೂ, ಸೆಕೆ ನಿಂತಿಲ್ಲ. ಈ ಸಮಯದಲ್ಲಿ ಬಟ್ಟೆ ಮೇಲೆ ಜಾಕೆಟ್‌ ಧಿರಿಸುವುದು ಕಷ್ಟ. ಹೀಗಿದ್ದಾಗ ಶ್ರಗ್‌ ಧರಿಸುವಂತಹ ಹೊಸ ಟ್ರೆಂಡ್‌ ಪ್ರಾರಂಭವಾಗಿದೆ.

ಮಂಗಳೂರಿನ ಅಂಗಡಿಗಳಲ್ಲಿಯೂ ವಿವಿಧ ಬಣ್ಣದ ಶ್ರಗ್‌ಗಳಿಂದು ಹೆಚ್ಚಾಗಿ ಮಾರಾಟವಾಗುತ್ತಿದೆ. ಒಂದು ಕಾಲದಲ್ಲಿ ಮಹಿಳೆಯರೇ ಹೆಚ್ಚಾಗಿ ಧಿರಿಸುತ್ತಿದ್ದ ಶ್ರಗ್‌ ಗಳಿಂದು ಪುರುಷರು, ಮಕ್ಕಳ ಫೆವರೇಟ್‌ ಡ್ರೆಸ್‌ ಗಳಾಗಿವೆ. ನೋಡಲು ಥೇಟ್‌ ಅಂಗಿಯಂತಿರುವ ಶ್ರಗ್‌ಗೆ ಬಟನ್‌, ಗುಂಡಿಗಳಿರುವುದಿಲ್ಲ. ಇದೇ ಕಾರಣದಿಂದಾಗಿ ಇದನ್ನು ಮೇಲುಡುಪಿನಂತೆ ಧರಿಸುತ್ತಾರೆ. ಜಾಕೆಟ್‌ನಂತೆ ಧರಿಸುವುದು ಕೂಡ ಫ್ಯಾಶನ್‌ ಆಗಿದೆ.

ಹೆಚ್ಚಾಗಿ ಜೀನ್ಸ್‌ ಪ್ಯಾಂಟ್‌-ಟೀ ಶರ್ಟ್‌ ತೊಡುವ ಮಂದಿಗೆ ಶ್ರಗ್‌ಗಳು ಅಂದವಾಗಿ ಕಾಣುತ್ತವೆ. ಇತ್ತೀಚಿನ ದಿನಗಳಲ್ಲಿ ಶ್ರಗ್‌ನ ಆಕಾರದಲ್ಲಿಯೂ ತುಂಬಾ ಬದಲಾವಣೆಯಾಗಿವೆ. ಚಿಕ್ಕ ಶ್ರಗ್‌, ಕಾಟನ್‌, ನೆಟೆಡ್‌, ಲೈಕ್ರಾ, ಜೆರ್ಸಿ, ಲೇಸ್‌, ಡೆನಿಮ್‌, ಮಿಕ್ಸ್‌ ಆ್ಯಂಡ್‌ ಮ್ಯಾಚ್‌, ಕಾಟನ್‌ ಕಾರ್ಗೊ, ಉಲ್ಲನ್‌ನಿಂದ ಮಾಡಿರುವಂತಹ ಶ್ರಗ್‌ಗಳಿಗಿಂದು ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದೆ.

ಕಲರ್‌ ಕಾಂಬಿನೇಷನ್‌
ಯಾವುದೇ ಡ್ರೆಸ್‌ ಧರಿಸುವಾಗ ಕಲರ್‌ ಕಾಂಬಿನೇಷನ್‌ ಆಯ್ಕೆ ಬಹುಮುಖ್ಯ. ಹಳದಿ ಅಂಗಿಗೆ ಕೆಂಪು ಬಣ್ಣದ ಶ್ರಗ್‌ ಹೊಂದಿಕೆ ಆಗುವುದಿಲ್ಲ. ಅದರ ಬದಲು ಪುರುಷರಿಗೆ ಹೊಂದಿಕೊಳ್ಳುವ ಕಪ್ಪು, ನೀಲಿ, ಬೂದು, ನೇರಳೆ ಬಣ್ಣದ ಶ್ರಗ್‌ಗಳು ಸಾಧಾರಣವಾಗಿ ಎಲ್ಲಾ ಬಗೆಯ ಡ್ರೆಸ್‌ಗಳಿಗೆ ಹೊಂದಿಕೆಯಾಗುತ್ತದೆ. ಶ್ರಗ್‌ ಖರೀದಿ ಮಾಡುವ ಸಮಯದಲ್ಲಿನ ಹೆಚ್ಚಿನ ಮಂದಿ ಸಣ್ಣ ಗಾತ್ರದ ಶ್ರಗ್‌ಗಳನ್ನು ಆಯ್ಕೆ ಮಾಡುವುದಿಲ್ಲ. ಪುರುಷರು ಶ್ರಗ್‌ ಆಯ್ಕೆ ಮಾಡುವಾಗ ಸೊಂಟದವರೆಗೆ ಉದ್ದವಿರುವ ಶ್ರಗ್‌ಗಳನ್ನು ಆಯ್ಕೆ ಮಾಡುತ್ತಾರೆ. ಸಮ್ಮರ್‌ ಸಮಯದಲ್ಲಿ ಕಾಟನ್‌, ಫುಲ್‌ ಸ್ಲೀವ್‌ ಶ್ರಗ್‌,ವಾಟರ್‌ ಫಾಲ್‌ ಫುಲ್‌ ಸ್ಲೀವ್‌ ಶ್ರಗ್‌, ಕಟನ್‌ ಬ್ಲೆಂಡ್‌ ಶ್ರಗ್‌ ಸೇರಿದಂತೆ ಮತ್ತಿತರ ವಿನ್ಯಾಸಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. 

ಸಿನಿಮಾದಿಂದ ಟ್ರೆಂಡ್‌ ಶುರು
ಈ ಹಿಂದೆ ಮಹಿಳೆಯರು ಹೆಚ್ಚಾಗಿ ಶ್ರಗ್‌ಗಳನ್ನು ಧಿರಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಬರುವಂತಹ ಚಲನಚಿತ್ರಗಳಲ್ಲಿ ಶ್ರಗ್‌ ಬಳಕೆ ಕಂಡು ಹುಡುಗರು ಕೂಡ ಈ ಟ್ರೆಂಡ್‌ನ‌ತ್ತ ವಾಲಲು ಪ್ರಾರಂಭಿಸಿದ್ದಾರೆ. ಅದಕ್ಕೆ ತಕ್ಕಂತೆಯೇ ಮಾರುಕಟ್ಟೆಗೂ ವಿಸ್ತರಿಸಿದ್ದು, ವಿವಿಧ ಬಗ್ಗೆಯ ಆಯ್ಕೆಗಳು ಸಿಗುತ್ತಿವೆ. ಅಲ್ಲದೆ, ಶ್ರಗ್‌ಗಳಿಗೆ ಅನ್‌ಲೈನ್‌ ಮಾರುಕಟ್ಟೆಯಲ್ಲಿಯೂ ಬೇಡಿಕೆ ಹೆಚ್ಚಿದೆ. ಮಾರುಕಟ್ಟೆಯಲ್ಲಿ ಪುರುಷರ ಶ್ರಗ್‌ ಗಳು ಸುಮಾರು 500 ರೂ. ನಿಂದ ಪ್ರಾರಂಭವಾಗಿ 3000ರೂ.ಗಳಿಗೂ  ಮೇಲ್ಪಟ್ಟ ಧಿರಿಸುಗಳಿವೆ.

ಟ್ರೆಂಡ್‌ ಹೆಚ್ಚಾಗಿದೆ
ಮಂಗಳೂರು ಮಾರುಕಟ್ಟೆಯಲ್ಲಿ ಶ್ರಗ್‌ ಟ್ರೆಂಡ್‌ ಹೆಚ್ಚಾಗಿದೆ. ಈ ಹಿಂದೆ ಮಹಿಳೆಯರು ಮಾತ್ರ ಶ್ರಗ್‌ ಧರಿಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಪುರುಷರು, ಮಕ್ಕಳಲ್ಲಿಯೂ ಈ ಟ್ರೆಂಡ್‌ ಬಂದುಬಿಟ್ಟಿದೆ.
– ಪ್ರಕಾಶ್‌ ಬಟ್ಟೆ ವ್ಯಾಪಾರಸ್ಥ

 ನವೀನ್‌ ಭಟ್‌ ಇಳಂತಿಲ

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.