ಕಾಂಕ್ರೀಟ್ ರಸ್ತೆಗಳ ನಡುವೆ ಅಂತರ: ವಾಹನ ಸವಾರರರಿಗೆ ಸಂಕಷ್ಟ
Team Udayavani, May 12, 2019, 6:00 AM IST
ನಗರದ ಬಹುತೇಕ ಭಾಗಗಳ ಕಾಂಕ್ರೀಟ್ ರಸ್ತೆಗಳು ಸಮತಟ್ಟಾಗಿ ಇಲ್ಲದಿರುವುದು ದ್ವಿಚಕ್ರವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.
ನಗರದಲ್ಲಿ ಡಾಮರು ರಸ್ತೆಗಳ ಬದಲಿಗೆ ಕಾಂಕ್ರೀಟ್ ರಸ್ತೆಗಳಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಬಹುತೇಕ ಭಾಗಗಳಲ್ಲಿ ಕಾಂಕ್ರೀಟ್ ರಸ್ತೆಗಳನ್ನೇ ಮಾಡಲಾಗಿದೆ. ಆದರೆ ಇತ್ತೀಚೆಗೆ ರಸ್ತೆಗಳ ಮಧ್ಯದಲ್ಲಿ ಬಿರುಕು ಬಿಟ್ಟಂತಹ ಅಂತರಗಳು ಗೋಚರಿಸುತ್ತಿದೆ. ಇದು ಹೆಚ್ಚಾಗಿ ದ್ವಿಚಕ್ರ ವಾಹನ ಸವಾರ ಮೇಲೆ ಪರಿಣಾಮ ಬೀರುತ್ತಿದೆ. ಇನ್ನೂ ಕೆಲವು ಭಾಗಗಳಲ್ಲಿ ಹಂಪ್ಸ್ಗಳಿಗೆ ಬಣ್ಣ ಬಳಿಯದೆ ಇರುವುದು, ರಸ್ತೆಯ ನಡುವಿನ ಅಂತರಗಳು ರಸ್ತೆಯಲ್ಲಿ ಗುಂಡಿಗಳುಂಟಾಗುವುದಕ್ಕಿಂತಲೂ ಅಪಾಯಕಾರಿಯಾಗಿದೆ. ಗುಂಡಿಗಳು ದೂರದಿಂದಲೇ ಕಾಣುತ್ತವೆ. ಆದರೆ ಅನಿರೀಕ್ಷಿತ ಹಂಪ್ಸ್ಗಳು ರಸ್ತೆಯಲ್ಲಿ ಬಿರುಕುಗಳು ದೂರದಿಂದ ಗೋಚರಿಸದೆ ಇರುವುದರಿಂದ ಅಪಘಾತಗಳಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅನಿರೀಕ್ಷಿತ ಹಂಪ್ಸ್ಗಳು, ರಸ್ತೆಗಳು ಸಮತಟ್ಟಾಗಿ ಇಲ್ಲದಿರುವುದು ದೂರದಿಂದ ಕಾಣದೆ ಇರುವುದರಿಂದ ವೇಗವಾಗಿ ಬರುವ ದ್ವಿಚಕ್ರ ವಾಹನ ಸವಾರರು ಅಪಘಾತಕ್ಕೀಡಾಗುವ ಸಾಧ್ಯತೆ ಹೆಚ್ಚು. ಎರಡು ರಸ್ತೆಗಳ ನಡುವಿನ ಅಂತರದಲ್ಲಿ ದ್ವಿಚಕ್ರ ವಾಹನಗಳ ಟೈರ್ ಸಿಲುಕಿ ಆಯತಪ್ಪಿ ವಾಹನ ಸಮೇತ ಸವಾರರು ನೆಲಕ್ಕೆ ಬೀಳುತ್ತಾರೆ. ಇದರಿಂದ ತರುಚಿದ ಗಾಯದಿಂದ ಗಂಭೀರ ಗಾಯಗೊಂಡ ಪ್ರಕರಣಗಳೂ
ನಗರದಲ್ಲಿವೆ. ನಗರದ ಕಾಂಕ್ರೀಟ್ ರಸ್ತೆಗೆ ಸಮನಾಗಿ ಅಳವಡಿಸಲಾಗಿದ್ದ ಇಂಟರ್ಲಾಕ್ಗಳು ಕುಸಿಯುತ್ತಿದ್ದು, ಕಾಂಕ್ರೀಟ್ನ ಅಂಚಿಗೆ ಹೋದ ದ್ವಿಚಕ್ರ ವಾಹನಗಳು ಆಯತಪ್ಪಿ ಬೀಳುತ್ತಿದೆ. ಇಂಟರ್ಲಾಕ್ ಅಳವಡಿಸಿದ ಬಹುತೇಕ ಕಡೆ ಸಮಸ್ಯೆ ಎದುರಾಗುತ್ತಿದೆ. ಅಲ್ಲದೆ ಇನ್ನೇನೂ ಮಳೆಗಾಲ ಆರಂಭವಾಗಲಿದ್ದು, ಈ ಸಮಯದಲ್ಲಿ ರಸ್ತೆಗಳ ನಡುವಿನ ಅಂತರ
ಮತ್ತಷ್ಟು ಸಮಸ್ಯೆ ತಂದೊಡ್ಡಲಿದೆ. ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು.
– ಪ್ರಜ್ಞಾ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಮಕ್ಕಳ ಅಶ್ಲೀಲ ಫೋಟೋ, ವಿಡಿಯೋ ವೀಕ್ಷಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಸೆರೆ
B Y Vijayendra: ಕಾಂಗ್ರೆಸ್ನವರು ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ?
Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ
Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ
Video Viral: ಕಚ್ಚಿದ ಹಾವನ್ನೇ ಕೊಂದು ಆಸ್ಪತ್ರೆಗೆ ತಂದ ಮಹಿಳೆ… ಕಂಗಾಲಾದ ವೈದ್ಯರು