ಆದಾಯಕಾರಿ ಉಪಬೆಳೆ ಜಾಯಿಕಾಯಿ


Team Udayavani, Jul 21, 2019, 5:38 AM IST

jaikai

ಒಂದೇ ಬೆಳೆಯನ್ನು ನಂಬಿ ಕೃಷಿ ಮಾಡಿದಲ್ಲಿ ಕೈಸುಟ್ಟುಕೊಳ್ಳಬೇಕಾದ ಸಾಧ್ಯತೆ ಹೆಚ್ಚು. ಆದ್ದರಿಂದಲೇ ಮುಖ್ಯ ಕೃಷಿಯೊಡನೆ ಉಪ ಬೆಳೆಗಳನ್ನೂ ಬೆಳೆಯಬೇಕು ಎನ್ನುವುದು ಕೃಷಿ ತಜ್ಞರ ಅಭಿಪ್ರಾಯ. ಈ ನಿಟ್ಟಿನಲ್ಲಿ ರೈತರಿಗೆ ಕಡಿಮೆ ವೆಚ್ಚದಲ್ಲಿ ಬೆಳೆಯಬಹುದಾದ ಉಪ ಬೆಳೆ ಜಾಯಿ ಕಾಯಿ. ತೆಂಗಿನ ಅಥವಾ ಅಡಿಕೆ ತೋಟಗಳ ನಡುವೆ ಇದನ್ನು ಉಪ ಬೆಳೆಯಾಗಿ ಬೆಳೆಯಬಹುದು.

ಬೆಳೆ ಹೇಗೆ?

ಸಾಮಾನ್ಯವಾಗಿ ಗಿಡಗಳನ್ನು ನೆಡುವಾಗ ಒಂದೂವರೆ ಅಡಿಗಿಂತ ಹೆಚ್ಚು ಎತ್ತರ ಬೆಳೆದಿರುವ ಗಿಡಗಳನ್ನೇ ಆಯ್ಕೆ ಮಾಡಿಕೊಳ್ಳಬೇಕು. ಕಸಿ ಸಸಿಗಳಿಗಿಂತ ಬೀಜದಿಂದ ಮೊಳಕೆ ಒಡೆದ ಸಸಿಗಳೇ ಉತ್ತಮ. ಕಸಿ ಗಿಡಗಳು ಫ‌ಸಲು ನೀಡಲು ಸಾಮಾನ್ಯವಾಗಿ 3 ವರ್ಷಗಳನ್ನು ತೆಗೆದು ಕೊಂಡರೆ ಸಾಮಾನ್ಯವಾಗಿ ಮೊಳಕೆಯೊಡೆದ ಗಿಡಗಳು 6 ವರ್ಷಗಳನ್ನು ತೆಗೆದುಕೊಳ್ಳುತ್ತವೆ. ಈ ಗಿಡಗಳಿಗೆ ನೆರಳಿನ ಆವಶ್ಯಕತೆಯಿದ್ದು, ಬೇಸಗೆಯಲ್ಲಿ ಗಿಡಗಳು ಹೆಚ್ಚಾಗಿ ಬಾಡಲು ಆರಂಭಿಸುವುದರಿಂದ ನೀರಿನ ಪೂರೈಕೆ ಮಾಡಬೇಕಾಗುತ್ತದೆ.

ಈ ಗಿಡಗಳಿಗೆ ಜಾಸ್ತಿ ಆರೈಕೆಯ ಆವಶ್ಯಕತೆಯಿರುವುದಿಲ್ಲ. ವರ್ಷಕ್ಕೊಮ್ಮೆ ಗೊಬ್ಬರ, ಪೊಟ್ಯಾಷಿಯಂಗಳನ್ನು ಹಾಕಿದರೆ ಸಾಕಾಗುತ್ತದೆ. ಗಿಡ ಬೆಳೆದ ಹಾಗೆ ಫ‌ಸಲಿನ ಪ್ರಮಾಣವೂ ಹೆಚ್ಚುತ್ತ ಹೋಗುತ್ತದೆ. ಈ ಗಿಡಗಳು ಸಾಮಾನ್ಯವಾಗಿ ವರ್ಷಕ್ಕೆ ಎರಡು ಬಾರಿ ಫ‌ಲ ನೀಡುತ್ತವೆ. ಜೂನ್‌ನಿಂದ ಸೆಪ್ಟಂಬರ್‌ ತಿಂಗಳ ಅವಧಿ ಹೇರಳವಾಗಿ ಜಾಯಿಕಾಯಿ ಫ‌ಸಲು ನೀಡುವ ಕಾಲವಾಗಿದೆ.

ಉತ್ತಮ ಬೆಲೆ
ಸಾಂಬಾರ ಪದಾರ್ಥವಾಗಿ ಜಾಯಿಕಾಯಿ ಹೆಚ್ಚು ಬಳಕೆಯಾಗುವುದರಿಂದ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿದೆ. ಜಾಯಿಕಾಯಿ ಮತ್ತು ಅದರ ಪತ್ರೆಗೆ ಬೆಲೆಯ ನಡುವೆ ವ್ಯತ್ಯಾಸವಿದ್ದು, ಪತ್ರೆ ಹೆಚ್ಚು ಬೆಲೆ ಬಾಳುತ್ತದೆ. ಒಂದು ಎಕರೆಯಲ್ಲಿ ಸಾಮಾನ್ಯವಾಗಿ 125-150 ಗಿಡಗಳನ್ನು ನೆಡಬಹುದಾಗಿದ್ದು, ಗಿಡವೊಂದರ ಕನಿಷ್ಠ ಆಯಸ್ಸು ಸುಮಾರು 150 ವರ್ಷಗಳಾಗಿವೆ. ಗೊಂಚಲು ಗೊಂಚಲುಗಳಲ್ಲಿ ಈ ಗಿಡಗಳು ಫ‌ಲ ನೀಡಲಿದ್ದು, ಬೆಳೆದ ಜಾಯಿಕಾಯಿಗಳು ಓಡಿನಿಂದ ಬೇರ್ಪಟ್ಟು ನೆಲಕ್ಕೆ ಬೀಳುತ್ತವೆ. ಇವುಗಳನ್ನು ಆಯ್ದು ಪತ್ರೆಯನ್ನು ಬೇರ್ಪಡಿಸಿ ಒಣಗಿಸಬೇಕಾಗುತ್ತದೆ. ಸಾಮಾನ್ಯವಾಗಿ ಮಳೆ ಸಮಯದಲ್ಲಿಯೇ ಬೆಳೆ ಹೆಚ್ಚಿರುವ ಕಾರಣ ಇವುಗಳನ್ನು ಒಣಗಿಸಲು ಬಿಸಿಲು ಇರುವುದಿಲ್ಲ. ಹಾಗಾಗಿ ಮನೆಯ ಅಡುಗೆ ಕೋಣೆಯ ಸ್ಟೌಗಳ ಕೆಳಗೆ ಅಥವಾ ಪ್ರತ್ಯೇಕ ಕಟ್ಟಿಗೆಯ ಗೂಡನ್ನು ತಯಾರಿಸಿ ಅವುಗಳಲ್ಲಿ ಒಣಗಿಸುವ ಪದ್ಧತಿಗಳು ಹಳ್ಳಿಗಳಲ್ಲಿ ಇರುವುದನ್ನು ಗಮನಿಸಬಹುದು.

ಟಾಪ್ ನ್ಯೂಸ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

6-jp-hegde

Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

5-karkala

Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್‌; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ

Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.