ಖಾದಿಗೂ ಬಂತು ಬೇಡಿಕೆ


Team Udayavani, Jun 28, 2019, 5:00 AM IST

30

ಫ್ಯಾಶನ್‌ ಲೋಕದಲ್ಲಿ ವಿನೂತನ ರೀತಿಯ ಬಟ್ಟೆಗಳು ಬರುವುದು ಸಾಮಾನ್ಯ. ಆದರೆ ಮೊದಲು ತುಂಬಾ ಪ್ರಚಲಿತದಲ್ಲಿದ್ದ ಖಾದಿ ವಸ್ತ್ರದ ಬಳಕೆಯ ಟ್ರೆಂಡ್‌ ಮತ್ತೆ ಶುರುವಾಗಿದೆ.

ಮೊದಲು ಕುರ್ತಾ ಎಂದರೆ ಹಬ್ಬ ಹರಿ ದಿನಗಳಲ್ಲಿ ಮಾತ್ರ ತೋಡುವ ಬಟ್ಟೆ ಎಂದಾಗಿತ್ತು ಆದರೆ ಇಂದು ಅವು ಸರ್ವೆ ಸಾಮಾನ್ಯವಾಗುತ್ತಿದ್ದು ಅದರಲ್ಲಿಯೂ ಖಾದಿಯನ್ನು ಇಷ್ಟ ಪಡುವ ಹುಡುಗಿಯರ ಸಂಖ್ಯೆ ಅಧಿಕವಾಗಿದೆ.

ಎಲ್ಲ ಬಟ್ಟೆಗಳಿಗೂ ಸೂಕ್ತ
ಖಾದಿ ಕುರ್ತಿಗಳನ್ನು ಸ್ಕರ್ಟ್‌, ಜಿನ್ಸ್‌ ಪ್ಯಾಂಟ್‌, ಲೆಗ್ಗಿಂಗ್ಸ್‌, ದೋತಿ ಪ್ಯಾಂಟ್‌, ಉದ್ದಲಂಗ, ಥ್ರಿ ಫೋರ್ಥ್ ಮತ್ತು ಪ್ಯಾರಲರ್‌ ಪ್ಯಾಂಟ್‌ಗಳ ಜತೆ ತೊಡಬಹುದಾಗಿದ್ದು, ಎಲ್ಲ ಋತುಗಳಲ್ಲೂ ತೊಡಬಹುದಾದಂತಹ ಬಟ್ಟೆ. ಇದನ್ನು ಯಾವ ಸಮಯದಲ್ಲೂ, ಎಲ್ಲ ಕಡೆಗಳಿಗೂ ತೊಟ್ಟು ತಿರುಗಾಡಬಹುದಾಗಿದೆ.

ಆಯ್ಕೆಗಳು ಹೆಚ್ಚು
ಸಾಮಾನ್ಯವಾಗಿ ಇದರಲ್ಲಿ ತಿಳಿ ಬಣ್ಣದ ಬಟ್ಟೆಗಳು ಮಾತ್ರ ಲಭ್ಯದ್ದವು. ಆದರೆ ಈಗ ಎಲ್ಲ ರೀತಿಯ ಬಣ್ಣಗಳಲ್ಲೂ ದೊರೆಯುತ್ತವೆ. ಇದರಲ್ಲಿ ಉದ್ದ ತೋಳಿನ ಕುರ್ತಿ, ಬೆಲ್‌ ಬಾಟಂ ತೋಳು, ಮುಕ್ಕಾಲು ತೋಳು, ಪುಶ್‌ ಅಪ್‌ ತೋಳು, ಗುಂಡಿಗಳು ಬರುವ ತೋಳು ಹೀಗೆ ವಿವಿಧ ಬಗೆಯ ಆಯ್ಕೆಗಳಿವೆ.

ಇತ್ತೀಚೆಗೆ ಹೊಸದಾದ ರೇಖಾ ಚಿತ್ರಗಳು, ಹಾವಿನ ಆಕೃತಿ, ಗಣಿತದ ಕೆಲವು ಆಕೃತಿಗಳು ಮೂಡಿ ಬರುತ್ತಿದ್ದು ಆಶ್ಚರ್ಯವೆಂದರೆ ಬುದ್ಧನ ಚಿತ್ರ, ನಾಣ್ಯಗಳ ಚಿತ್ರ, ಬೇರೆ ಬೇರೆ ಭಾಷೆಯ ಲಿಪಿಗಳ ಅಕ್ಷರ, ದಿನ ಪತ್ರಿಕೆಗಳಂತೆ ಟಾಪ್‌ಗ್ಳು ಲಭ್ಯವಿವೆ.

ಕೆಲವು ಅಂಗಡಿಯವರು ಖಾದಿಯ ರೀತಿಯ ಬಟ್ಟೆಗಳನ್ನು ತೋರಿಸಿ ಮೋಸ ಮಾಡುವ ದಂಧೆ ಹೆಚ್ಚಾಗಿರುತ್ತವೆ. ಖಾದಿ ಭಂಡಾರವಿರುವ ಕಡೆ ಇವುಗಳು ಚೆನ್ನಾಗಿ ದೊರೆಯುತ್ತವೆ. ನಮ್ಮ ಊಹೆಗೂ ಮೀರಿದ ವಿನ್ಯಾಸಗಳು ಮಾರುಕಟ್ಟೆ, ಆನ್‌ಲೈನ್‌ಗಳಲ್ಲಿಯೂ ಲಭ್ಯವಾಗುತ್ತಿದೆ ಅಥವಾ ನಿಮಗೆ ಬೇಕಾಗುವ ಡಿಸೈನ್‌ಗಳನ್ನು ಆನ್‌ಲೈನ್‌ ವ್ಯಾಪಾರಿಗಳಲ್ಲಿ ತಿಳಿಸಿದಲ್ಲಿ ನಿಮಗೆ ಬೇಕಾದ ರೀತಿಯ ಡಿಸೈನ್‌ಗಳನ್ನು ಮಾಡಿಕೊಡುತ್ತಾರೆ.

ತಾರೆಯರಿಗೂ ಇಷ್ಟ
ತಾರೆಯರಿಗೂ ಖಾದಿ ಧಿರಿಸುಗಳು ಬಲು ಇಷ್ಟವಾಗಿದ್ದು ಪಾರ್ಟಿ, ಶೂಟಿಂಗ್‌ಗಳಲ್ಲಿ ಈ ಬಟ್ಟೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದಾರೆ. ಇದು ಬೇರೆಯವರಿಗೂ ತುಂಬಾ ಇಷ್ಟವಾಗಿದ್ದು ತಾರೆಯರಿಂದ ಅನುಸರಿಸುತ್ತಿದ್ದಾರೆ.

ಬೆಲೆಯ ಬಗ್ಗೆ ಗಮನವಿರಲಿ
ಕೆಲವೆಡೆ ಖಾದಿ ಎಂದು ಹೆಚ್ಚಿನ ಬೆಲೆ ನಿಗದಿ ಮಾಡಿ ಮೋಸ ಮಾಡುತ್ತಾರೆ. ಬಣ್ಣ ಹೊಗುವುದು, ಸುಂಭು ಏಳುವುದು, ತುಂಬಾ ಸಲ ತೊಳೆದ ಅನಂತರ ಹಳೆ ಬಟ್ಟೆ ಕಂಡ ಹಾಗೇ ಕಾಣಿಸುವ ಸಮಸ್ಯೆ ಇರುತ್ತವೆ ಇದನ್ನು ತಪ್ಪಿಸಲು ಆದಷ್ಟು ಗೊತ್ತಿರುವವರ ಅಥವಾ ಶುಭ್ರ ಖಾದಿಯನ್ನು ಆಯ್ಕೆ ಮಾಡಿ ಕೊಳ್ಳಿ.

-   ಪ್ರೀತಿ ಭಟ್‌ ಗುಣವಂತೆ

ಟಾಪ್ ನ್ಯೂಸ್

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

xgdtgret

ಫ್ಯಾಶನ್ ಶೋ  ‘ಮೆಟ್ ಗಾಲಾ’ದಲ್ಲಿ ಗಣೇಶ ವಿಗ್ರಹ ಜೊತೆ ಕಾಣಿಸಿಕೊಂಡ ಸುಧಾ ರೆಡ್ಡಿ

Basavana-hulu

ಗೋದಾವರಿ ನದಿ ತೀರದಲ್ಲಿ ಬೃಹತ್ ಗಾತ್ರದ ಬಸವನ ಹುಳು ಪತ್ತೆ, ಇದರ ಬೆಲೆ ಎಷ್ಟು ಗೊತ್ತಾ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು1

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.