ವಾಸ್ತವ ಬದುಕಾಗಲಿ


Team Udayavani, Aug 12, 2019, 6:49 AM IST

vastava

ಭೂಮಿಯ ಸಕಲ ಜೀವರಾಶಿಗಳಲ್ಲಿ ಯೋಚಿಸಿ ಕಾರ್ಯರೂಪಿಸುವ ವರ ಮನುಷ್ಯನಿಗೆ ಮಾತ್ರವಂತೆ, ಆದರೆ ಅದರ ಬೆನ್ನಲ್ಲೆ ಚಿಂತೆ ಎಂಬ ಶಾಪವು ಅಂಟಿಕೊಂಡಿದೆ. ಯೋಚನೆ ಮತ್ತು ಚಿಂತೆ ಒಂದೇ ಅನಿಸಿದರು ಅವುಗಳ ಪರಿಣಾಮ ಬೆರೆಯದ್ದೆ ಆಗಿರುತ್ತದೆ. ಇಲ್ಲಿ ಯಾವುದೇ ಒಂದು ಕಾರ್ಯದ ಬಗ್ಗೆ ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ಯೋಚನೆ ಎಂದರೆ, ಹಿಂದೆ ಘಟಿಸಿಹೋದ ಯಾವುದೋ ಒಂದು ನೋವು ವಿಫ‌ಲತೆಗಳನ್ನು ಸದಾ ಯೋಚನೆ ಮಾಡಿ ಕೊರಗುವುದನ್ನು ಚಿಂತೆ ಎಂದು ಹೇಳಬಹುದು.

ಯಾವುದೋ ಒಂದು ಮೂಲೆಯಲ್ಲಿ ಚಿಂತಿಸುತ್ತಾ ಕೂರುವುದನ್ನು ಬಿಟ್ಟು ಸುತ್ತಮುತ್ತಲಿನ ಜನರ ನಡುವೆ ಪ್ರಕೃತಿಯ ಸೊಬಗಿನ ಮಧ್ಯೆ ಬೆರೆತು ವಾಸ್ತವದಲ್ಲಿ ಜೀವಿಸಿದಾಗ ಮನಸ್ಸು, ದೇಹ ಎರಡೂ ಆರೋಗ್ಯವಾಗಿರುತ್ತವೆ.ಕಾಲಚಕ್ರದಲ್ಲಿ ಘಟಿಸಿಹೋದ ಘಟನೆಗಳನ್ನು ಪುನಃ ಹೋಗಿ ಸರಿಪಡಿಸಲು ಸಾಧ್ಯವಿಲ್ಲವೆಂದಾಗ ಅದನ್ನು ಚಿಂತಿಸುವುದಕ್ಕಿಂತ ಮುಂದಿನ ಜೀವನವನ್ನು ಯೋಚಿಸುವುದು ಒಳಿತು. ಏಕೆಂದರೆ ಈ ನೋವುಗಳು ಯಾರಿಗೆ ಇಲ್ಲ ಹೇಳಿ. ಕುಚೇಲನಿಂದ ಹಿಡಿದು ಕುಬೇರನವರೆಗೆ ಎಲ್ಲರೂ ಒಂದಲ್ಲ ಒಂದು ಕೊರಗಿನಲ್ಲಿ ಇರುವವರೇ, ಹಾಗೆಂದ ಮಾತ್ರಕ್ಕೆ ಜೀವನವೇ ಮುಗಿದು ಹೋಯಿತು ಎಂದು ಕೂರುವುದರಲ್ಲಿ ಯಾವುದೇ ಅರ್ಥವಿಲ್ಲ.

ಒಬ್ಬ ಬಸ್‌ ಚಾಲಕನನ್ನು ನೋಡಿ ಅವನು ಎಷ್ಟೇ ಚಿಂತೆಗಳಿದ್ದರೂ ವಾಸ್ತವದಲ್ಲೇ ವಾಹನ ಚಲಾಯಿಸುತ್ತಿರುತ್ತಾನೆ. ಏಕೆಂದರೆ ಅವನಿಗೆ ಚಲಿಸಿದ ದಾರಿಗಿಂತ ಮುಂದಿನ ದಾರಿಯಲ್ಲಿ ಯಾವುದೇ ಅನಾಹುತ ಆಗದಂತೆ ಚಲಿಸಿ ಪ್ರಯಾಣಿಕರನ್ನು ಅವರ ಸ್ಥಳಗಳಿಗೆ ತಲುಪಿಸುವುದೇ ಮುಖ್ಯವಾಗಿರುತ್ತದೆ. ನಮ್ಮ ನಿತ್ಯ ಜೀವನವು ಅಷ್ಟೆ ಕಳೆದು ಹೋದ ನೋವುಗಳಲ್ಲಿ ಜೀವನ ನಡೆಸುವುದಕ್ಕಿಂತ ಮುಂಬರುವ ಸನ್ನಿವೇಶಗಳನ್ನು ಎದುರಿಸಲು ಸಿದ್ಧವಾಗಿರಬೇಕು. ಯಾಕೆಂದರೆ ಸಾಧಿಸುವವನಿಗೆ ಆಯಸ್ಸು ತುಂಬಾ ಕಡಿಮೆ. ಮನುಷ್ಯ ಎಷ್ಟು ವರ್ಷ ಬದುಕಿದ ಎನ್ನುವುದಕ್ಕಿಂತ ಏನು ಮಾಡಿದ ಎನ್ನುವುದೇ ಇತಿಹಾಸ ಪುಟದಲ್ಲಿ ದಾಖಲಾಗುತ್ತದೆ. ಆದ್ದರಿಂದ ಸದಾ ಚಿಂತಿಸುವುದನ್ನು ಬಿಟ್ಟು ವಾಸ್ತವದಲ್ಲಿ ಜೀವಿಸಿ.

ಕೊನೆಯದಾಗಿ ಒಂದು ಮಾತು, ಚಿಂತೆ ಮತ್ತು ಚಿತೆಗಳೆರಡರ ಮಧ್ಯೆ ತುಂಬಾ ವ್ಯತ್ಯಾಸವೇನಿಲ್ಲ. ಚಿತೆ ಸತ್ತ ದೇಹವನ್ನು ಸುಟ್ಟರೆ ಚಿಂತೆ ಜೀವ ಇರುವ ಮನುಷ್ಯನನ್ನು ಸುಡುತ್ತದೆ.

– ಮೋಹನ್‌ ಕೋಟ್ಯಾನ್‌ ಪಡ್ಡಂದಡ್ಕ

ಟಾಪ್ ನ್ಯೂಸ್

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

13-good-friday

ಶುಭ ಶುಕ್ರವಾರ: ಸಾಮಾಜಿಕ ನ್ಯಾಯದ ಪ್ರತೀಕ ಯೇಸು ಕ್ರಿಸ್ತ

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

12-kejriwal

Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.