ಕಡಿಮೆ ಖರ್ಚಿನ ಸುಲಭ ಬೆಳೆ ಸೋರೆ


Team Udayavani, Jul 7, 2019, 5:00 AM IST

m-23

ಅವಿಭಜಿತ ದಕ್ಷಿಣ ಕನ್ನಡದಲ್ಲಿ ಹೆಚ್ಚಾಗಿ ಬೆಳೆಯುವ ಸೋರೆ ಕಾಯಿ ಕಡಿಮೆ ಖರ್ಚಿನ ಸುಲಭ ಕೃಷಿ.

ಸೋರೆ ‘ಕುಕುರ್ಬಿಟೇಸೀ’ ಎಂಬ ಸಸ್ಯ ಕುಟುಂಬಕ್ಕೆ ಸೇರಿದೆ. ಸೋರೆ ಬಳ್ಳಿಯು ತಿಳಿ ಹಸುರು ಬಣ್ಣದಿಂದ ಕೂಡಿದ್ದು, ಮೇಲ್ಮೈ ನಯವಾದ ಹೊಳಪಿನ ಹೊದಿಕೆ ಹೊಂದಿರುತ್ತದೆ.

ಹೇರಳ ಪೌಷ್ಟಿಕಾಂಶ ಹೊಂದಿರುವ ತರಕಾರಿ ಕೂಡ ಹೌದು. ಆಯುರ್ವೇದ ಔಷಧಗಳ ತಯಾರಿಯಲ್ಲಿ ಸೋರೆಕಾಯಿಯನ್ನು ಬಳಸಲಾಗುತ್ತದೆ. ಕೊಬ್ಬು, ಪೊಟ್ಯಾಶಿಯಂ, ಕಬ್ಬಿಣ, ಶರ್ಕರಪಿಷ್ಟ, ಪ್ರೊಟೀನ್‌, ಖನಿಜಾಂಶ, ಕ್ಯಾಲ್ಸಿಯಂ, ರೈಬೋಫ್ಲೆವಿನ್‌, ರಂಜಕ, ‘ಸಿ’ ಜೀವಸತ್ವ ಇತ್ಯಾದಿ ಪೌಷ್ಟಿಕಾಂಶಗಳು ಹೇರಳವಾಗಿವೆ.

ಸೋರೆಕಾಯಿಯಲ್ಲಿ ಎರಡು ವಿಧಗಳನ್ನು ಕಾಣಬಹುದು. ಒಂದು ದುಂಡಗಿನದ್ದು, ಇನ್ನೊಂದು ದುಂಡಗಾಗಿದ್ದು ಉದ್ದವಿರುತ್ತದೆ. ಕೃಷಿ ವಿಜ್ಞಾನಿಗಳು ಸೋರೆಕಾಯಿಯಲ್ಲೂ ಹಲವಾರು ತಳಿಗಳನ್ನು ಸಂಶೋಧಿಸಿದ್ದಾರೆ. ಮುಖ್ಯವಾಗಿ ಪೂಸಾಸಮ್ಮರ್‌ ಪ್ರಾಲಿಫಿಕ್‌ ಲಾಂಗ್‌, ಪೂಸಾಪ್ರಾಲಿಫಿಕ್‌ ರೌಂಡ್‌, ಅರ್ಕಾಬಹಾರ್‌, ಪೊಸಾಮೇಘದೂತ್‌, ಪೂಸಮಂಜರಿ ಇತ್ಯಾದಿ.

ಮಣ್ಣು, ಹವಾಗುಣ
ಸೋರೆ ಕೃಷಿಗೆ ಮರಳು ಮಿಶ್ರಿತ ಕೆಂಪು ಅಥವಾ ಕಪ್ಪು ಗೋಡು ಮಣ್ಣು ಉತ್ತಮ. ಇದು ಸಾಮಾನ್ಯವಾಗಿ ಉಷ್ಣ, ಸಮಶೀತೋಷ್ಣ ಪ್ರದೇಶಗಳಲ್ಲಿ ಬೆಳೆಯುತ್ತದೆ. ಶೀತ ಹವಾಗುಣ ಈ ಬೆಳೆಗೆ ಅಷ್ಟು ಸಹಕಾರಿಯಲ್ಲ. ದೀರ್ಘ‌ ಬೆಳಕು, ಹೆಚ್ಚಿನ ಉಷ್ಣತೆ ಇದ್ದಾಗ ಸೋರೆಯಲ್ಲಿ ಹೂಗಳು ಅಧಿಕ ಸಂಖ್ಯೆಯಲ್ಲಿ ಮೂಡುತ್ತವೆ.

ಹೀಗೆ ಬೆಳೆಸಿ
ಸೋರೆಗೆ ಜೂನ್‌- ಜುಲೈ, ಅಕ್ಟೋಬರ್‌- ನವೆಂಬರ್‌ ಅಥವಾ ಫೆಬ್ರವರಿ- ಮಾರ್ಚ್‌ ಸೂಕ್ತ. ಸುಮಾರು 2 ಫೀಟ್ ಅಗಲದ ಮಡಿ ತಯಾರಿಸಿ. ಮಡಿ ತಯಾರಿ ವೇಳೆ ಸ್ವಲ್ಪ ಸುಡುಮಣ್ಣು ಅಥವಾ ಬೂದಿ ಮಿಶ್ರ ಮಾಡಿ. ಅದರಲ್ಲಿ ಒಂದೂವರೆಯಿಂದ 2 ಫೀಟ್ ದೂರದಲ್ಲಿ ಸಣ್ಣ ಗುಳಿಗಳನ್ನು ಮಾಡಿ ಬೀಜ ಬಿತ್ತಬೇಕು. ಆ ಗುಳಿಗಳಲ್ಲಿ 3-4 ಬೀಜ ಹಾಕಿ. ಮೊಳಕೆ ಬಂದಾಗ ಹೆಚ್ಚುವರಿ ಗಿಡಗಳನ್ನು ಕೀಳಬೇಕು. ಬಿತ್ತನೆಯ ಒಂದು ವಾರದಲ್ಲಿ ಗಿಡ ಮೊಳಕೆ ಬರುತ್ತವೆ. ಮೊಳಕೆ ಬಂದು ವಾರದಲ್ಲಿ ಸೊಪ್ಪು ಹಾಗೂ ಸ್ವಲ್ಪ ಹಟ್ಟಿಗೊಬ್ಬರ ಹಾಕಬೇಕು. ಮತ್ತೂಂದು ವಾರ ಬಳ್ಳಿ ಹಬ್ಬಲು ಸಹಕಾರಿಯಾಗುವಂತೆ ಗಿಡದ ಬುಡದಲ್ಲಿ ಕೋಲುಗಳನ್ನು ಆಸರೆಯಾಗಿ ಇಡಬೇಕು. ಬಳ್ಳಿ ಬೆಳೆಯಲು ಚಪ್ಪರ ಹಾಕಿದರೆ ಉತ್ತಮ ಅಥವಾ ಸ್ಥಳಾವಕಾಶವಿದ್ದರೆ ನೆಲದಲ್ಲಿಯೇ ಹಬ್ಬಲು ಬಿಡಬಹುದು. ನೀರುಣಿಸುವುದು ಅಗತ್ಯ. ಕಾಯಿ ಎಳತಾಗಿರುವಾಗಲೇ ಕೊಯ್ಲು ಮಾಡಬೇಕು. ಕಾಯಿಗಳ ಮೇಲೆ ಉಗುರಿನ ತುದಿಯಿಂದ ಚುಚ್ಚಿದರೆ ಬಹಳ ಬೇಗನೆ ಗಾಯಗಳಾದರೆ ಅದು ಎಳತಾಗಿದೆ ಎಂದರ್ಥ. ಎಳತು ಕಾಯಿಗೆ ಬೇಡಿಕೆ ಹೆಚ್ಚು.

ಔಷಧ ಬಳಕೆ
ಕೀಟಭಾದೆ ತಡೆಗೆ ಬೋರ್ಡೋ ಮಿಶ್ರಣವನ್ನು ತಿಂಗಳಿಗೊಮ್ಮೆ ಸಿಂಪಡಣೆ ಅಥವಾ ಕಾಸರಕ್ಕಾನ ಮರದ ಎಲೆ, ಕಹಿಬೇವಿನ ಹಿಂಡಿ, ಆಡುಸೋಗೆ ಜಜ್ಜಿ, 5 ಲೀ. ನೀರು ಸೇರಿಸಿ ಹಿಂಡಿ ರಸ ತೆಗೆದು 100 ಲೀ. ನೀರು ಸೇರಿಸಿ 10 ದಿನಕ್ಕೊಮ್ಮೆ ಸಿಂಪಡಿಸಬಹುದು. ಇದರಿಂದ ಬಳ್ಳಿ ರೋಗ ಮುಕ್ತವಾಗುತ್ತದೆ.•

•ಗಣೇಶ ಕುಳಮರ್ವ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.