ಮೌನದೊಳಗೊಂದು ಹೊಸ ಜೀವನ


Team Udayavani, Dec 9, 2019, 5:57 AM IST

mouna-kanive

ವಸಂತ ಬದುಕಿನ ಹಾದಿಯುದ್ದಕ್ಕೂ ವಿಧವಿಧದ ಬಣ್ಣಗಳ ಚಿತ್ತಾರ, ಭಾವ ಜಗತ್ತನ ನಂಬಿಕೆಯ ಹಾದಿಯಲ್ಲಿ ಮೌನದ ಆಗಮನ. ಹೊಸ ಪರ್ವದ ನವ ಭಾವನೆಗಳ ಜತೆಯಲ್ಲಿ ಒಂಟಿತನದಲ್ಲೂ ಜೀವ ಕಳೆ ತುಂಬುವ ಸಂಗಾತಿ. ನೂರು ನೋವುಗಳನ್ನು ಕಾಣದೂರಿನ ಬೆಟ್ಟದಲ್ಲಿ ಬಚ್ಚಿಟ್ಟರೂ ಮರುಕಳಿಸಿತು ಅದೇ ಹಳೆ ನೆನಪುಗಳ ಸಾಲು. ನೀ ಮರುಕ ಪಡಿದಿರು ಎನುತಾ ಬೆನ್ನು ತಟ್ಟಿ ಬಡಿದೆಬ್ಬಿಸಿ ಮುನ್ನಡೆ ಎಂದಿದೆ ಈ ಮೌನ.

ಕಳೆದು ಹೋದ ಏಳು ಬೀಳುಗಳ ಮರೆವಿನಂಚಿನಲ್ಲಿ,ಹೊಸ ರೂಪಿನಂತೆ ಕಾಡುತ್ತಿರುವ ಹೊಟ್ಟೆಕಿಚ್ಚಿನ ಮರಿಗಳು ಕವಲೊಡೆದು ದ್ವೇಷ ಸಾಧಿಸುವಲ್ಲಿಯೂ ಕಣಿವೆಯ ಹಾದಿಯಲ್ಲಿಯೂ ಸಾಧನೆ ಸಾಧ್ಯ ಎಂದಿದೆ ಮೌನ. ಸೇರು ನಿನ್ನಯ ನಾಳೆಗಳ ಅಣೆಕಟ್ಟು ನಾನಿರುವೆ ಎಂದಿಗೂ ಯಾರಿಲ್ಲದಿರಲು ನಿನ್ನ ಜತೆ ಇನ್ನಾರು ಬೇಕು. ಸಾಧಿಸಲು ನೀ ಅಂದುಕೊಂಡಿರುವುದನು. ಸಾಗುತಲಿರುವುದು ವಸಂತ ಬದುಕಿನ ಹಾದಿ ಮತ್ತೂಂದು ತಿರುವಿನಂಚು ತಲುಪುವವರೆಗೂ ಸಾಗುತಿರಲಿ ನಿನ್ನಯ ಹಾದಿ ಎನುವ ಒಂದೇ ಜೀವ ನಿನ್ನಯ ಮೌನ. ಜನರ ಜೀವನಕ್ಕೆ ಹತ್ತಿರದ ಸಂಗಾತಿ ನೀನಲ್ಲದೇ ಇರಲು ಬೇರಾರೂ ಇಲ್ಲ. ಹಾಗಾದರೆ ಕೆಲ ಸಂದರ್ಭದಲ್ಲಿ ನೀ ಮನವ ತಾಳಿ ಮೌನಕ್ಕು ಇನ್ನೊಂದು ಅರ್ಥ ಬೆಸೆಯುವಂತೆ ಮಾಡುವೆ. ಮನದ ಮೂಲೆಯಲಿ ಮಾಸದಂತೆ ಮರಗಟ್ಟಿ ನಿಂತ ನೋವು ಮರೆಸಿ ಹೊಸ ಚಿಗುರು ಮೂಡುವಂತೆ ಮಾಡುತಿದೆ ಮನಸೊಳಗಿನ ಮೌನ. ಒಂಟಿತನವೆಂದು ಎಂದಿಗೂ ಮರುಗದಿರಿ, ರಾತ್ರಿ ಬಾನಲಿ ಮೂಡು ಬೆಳಕು ಒಂದು ಹೊಸ ನಗುವ ಚೆಲ್ಲಿ ಮಂದಹಾಸವನ್ನು ಮೂಡಿಸೋ ಹಾಗೆ ಮೌನ ನಿಮ್ಮೊಳಗಿನ ಭಾವನೆಗಳನ್ನು ಓದಿ ಮಗದೊಂದು ಸಾರ್ಥಕತೆಯ ಜೀವನವನ್ನು ರೂಪಿಸಲು ಸಹಕರಿಸುತ್ತದೆ.

ಬಾಳಿನ ಪಯಣವೆಂದರೆ ಕೇವಲ ಖುಷಿಯೊಂದಲ್ಲ, ಇಲ್ಲಿ ಅನೇಕ ಅಡೆತಡೆಗಳು ಎದುರಾದಾಗ ಒಮ್ಮೆ ಯೋಚಿಸಿ. ಮನಸ್ಸನ್ನು ಪ್ರಶ್ನಿಸಿ ಉತ್ತರಗಳು ತನ್ನಿಂದ ತಾನಾಗಿಯೇ ಕಣ್ಣಮುಂದೆ ಮಿಂಚಿನಂತೆ ಬರುತಿರುತ್ತವೆ. ಆ ನೆನಪುಗಳ ಸಾಲು ಮಾಡಿರುವ ತಪ್ಪುಗಳ ಸಮರ್ಥನೆಯೊಂದಿಗೆ ಬಯಸದೇ, ಬಂದಿರುವ ಕಷ್ಟ -ನೋವು ನೋವಿನಂತೆ ಕಾಣದು. ಮುಂದಾಗುವ ಬದಲಾವಣೆಯನ್ನು ತೋರಿ ನವೀನ ಆಸೆಗಳ ಜತೆ ಹೊಸದೊಂದು ಬದುಕು ರೂಪುಗೊಳ್ಳುತ್ತದೆ. ಇಲ್ಲಿ ಮೌನದ ಪಾತ್ರ ಅತೀ ಮುಖ್ಯ. ಒಂದು ಹೆಜ್ಜೆ ಮುನ್ನಡೆಯಲು ಜೀವನದ ಆಗು ಹೋಗುಗಳ ಸಾಲಲ್ಲಿ ಆಪತಾºಂಧವನಂತೆ ಜತೆಗಿರುತ್ತದೆ. ಮೌನದೊಳಗೊಂದು ಹೊಸ ಜೀವನ, ಹೊಸ ಸಾಧನೆ ಪ್ರತಿಬಾರಿಯೂ ರೂಪುಗೊಳ್ಳುತ್ತದೆ.

-   ವಿಜಿತಾ, ಬಂಟ್ವಾಳ

ಟಾಪ್ ನ್ಯೂಸ್

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

5-bng

Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ

ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ

ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.