ತ್ಯಾಜ್ಯ ವಿಲೇವಾರಿಗೆ ಪೈಪ್‌ ಕಾಂಪೋಸ್ಟ್‌ ಸಹಕಾರಿ


Team Udayavani, Mar 16, 2019, 8:01 AM IST

16-march-12.jpg

ಮನೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದ ನಿರ್ಮೂಲನೆಗೆ ಸುಲಭ ಪರಿಹಾರ ಕಂಡುಕೊಳ್ಳಲು ಕೊಳವೆ (ಪೈಪ್‌) ಕಾಂಪೋಸ್ಟ್‌ ವಿಧಾನವನ್ನು ಬಳಸಬಹುದಾಗಿದೆ. ನೈರ್ಮಲ್ಯ, ಸಾಂಕ್ರಾಮಿಕ ರೋಗ ಮುಕ್ತ ಪರಿಸರ ನಿರ್ಮಾಣಕ್ಕೆ ಹಾಗೂ ಸ್ವಚ್ಚ ಭಾರತದ ಕನಸು ನನಸಾಗಿಸಲು ಈ ವಿಧಾನ ಬಹಳ ಸಹಕಾರಿ.

ಪೈಪ್‌ ಕಾಂಪೋಸ್ಟ್‌ ಸರಳವಾದ ಜೈವಿಕ ಗೊಬ್ಬರ ತಯಾರಿಕಾ ವಿಧಾನ. ತರಕಾರಿ, ಮಾಂಸದ ತ್ಯಾಜ್ಯ ಸಹಿತ ಇತರ ಮಾಲಿನ್ಯಗಳು ಮಣ್ಣಿನೊಡನೆ ಸೇರಿ ಕೊಳೆತು ಕ್ರಿಮಿಗಳು, ಬ್ಯಾಕ್ಟೀರಿಯಾಗಳು ಉತ್ಪಾದನೆಯಾಗಿ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುತ್ತವೆ. ಅದನ್ನು ತಡೆಯಲು ಮನೆಯಲ್ಲಿ ಪ್ರತಿ ದಿನ ಉತ್ಪತ್ತಿಯಾಗುವ ತ್ಯಾಜ್ಯದ ಸುಲಭ ವಿಲೇವಾರಿಗೆ ಪೈಪ್‌ ಕಾಂಪೋಸ್ಟ್‌ ವಿಧಾನ ಬಹಳ ಉಪಯುಕ್ತ.

ಪ್ರಯೋಜನಗಳು
ಅತ್ಯಂತ ಸರಳ ಮತ್ತು ಪರಿಸರದ ಸ್ವಚ್ಚತೆಗೆ ಮಹತ್ವ ನೀಡುವ ಈ ಯೋಜನೆಯ ನಿರ್ವಹಣೆಗೆ ಅಧಿಕ ಸ್ಥಳ ಬೇಕಾಗಿಲ್ಲ. ಕನಿಷ್ಠ ಪಕ್ಷ 3 ಸೆಂಟ್ಸ್‌ ಸ್ಥಳದಲ್ಲಿ ಮನೆ ಕಟ್ಟಿದವರು ಕೂಡ ಇದನ್ನು ನಿಭಾಯಿಸಬಹುದು. ಮಾತ್ರವಲ್ಲದೆ ಈ ಪೈಪ್‌ ಕಂಪೋಸ್ಟ್‌ ನಿಂದ ಲಭಿಸಿದ ಸಾವಯವ ಗೊಬ್ಬರವನ್ನು
ನಮ್ಮ ಮನೆಯ ಹೂ, ತರಕಾರಿ ಸಹಿತ ಇನ್ನಿತರ ಬೆಳೆಗಳಿಗೆ ಬಳಸಬಹುದು. ತ್ಯಾಜ್ಯಗಳನ್ನು ತೆರೆದ ಸ್ಥಳದಲ್ಲಿ ಎಸೆಯದೆ ಇಂತಹ ಕಂಪೋಸ್ಟ್‌ ಮಾಡುವುದರಿಂದ ಸೊಳ್ಳೆ ಇನ್ನಿತರ ಜೀವಿಗಳಿಂದ ಹರಡುವ ಸಾಂಕ್ರಾಮಿಕ ರೋಗಗಳಿಂದಲೂ ಮುಕ್ತರಾಗಬಹುದು. ಪೈಪ್‌ ಕಾಂಪೋಸ್ಟ್‌ ವ್ಯವಸ್ಥೆ ಅಳವಡಿಸಲು ಒಟ್ಟು ಒಂದು ಸಾವಿರ ರೂ.ಗಿಂತ ಕಡಿಮೆ ವೆಚ್ಚ ತಗಲುತ್ತದೆ. 

ಕಾಂಪೋಸ್ಟ್‌ ಮಾಡುವ ವಿಧಾನ
ಒಂದು ಮೀ. ಉದ್ದದ 20 ಸೆಂ.ಮೀ. ವ್ಯಾಸದ 2 ಪಿವಿಸಿ ಅಥವಾ ಸಿಮೆಂಟ್‌ ಪೈಪ್‌ ಬಳಸಿ ಕಾಂಪೋಸ್ಟ್‌ ತಯಾರಿಸಲಾಗುತ್ತದೆ. ಎರಡು ಪೈಪ್‌ ಗಳನ್ನು  ಪ್ರತ್ಯೇಕವಾಗಿ 30 ಸೆಂ.ಮೀ. ಮಣ್ಣಿನ ತಳದಲ್ಲಿ ಹೂಳಬೇಕು. ಈ ಪೈಪ್‌ ಒಳಗಡೆ ನಿತ್ಯ ಮಾಲಿನ್ಯಗಳನ್ನು ಹಾಕಿ ಪ್ರತ್ಯೇಕ ಮುಚ್ಚಳದಿಂದ ಮುಚ್ಚುವುದರ ಜತೆಗೆ ಒಂದಷ್ಟು ಸೆಗಣಿ ನೀರು, ಮಜ್ಜಿಗೆ ನೀರು ಅಥವಾ ಬೆಲ್ಲದ ನೀರು ಯಾ ಸಕ್ಕರೆ ನೀರನ್ನು ಚಿಮುಕಿಸಬೇಕು. ಹೀಗೆ ಒಂದು ತಿಂಗಳಾಗುತ್ತಿದ್ದಂತೆ ಒಂದು ಪೈಪ್‌ ಭರ್ತಿಯಾಗುತ್ತದೆ. ಬಳಿಕ ಎರಡನೇ ಪೈಪ್‌ ತುಂಬುತ್ತಿದ್ದಂತೆ ಮೊದಲಿನ ಪೈಪ್‌ನೊಳಗಿನ ಮಾಲಿನ್ಯ ಗೊಬ್ಬರವಾಗಿ ಮಾರ್ಪಟ್ಟಿರುತ್ತದೆ.

 ಗಣೇಶ ಕುಳಮರ್ವ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.