ರೈನ್‌ಕೋಟ್‌ ಹೆಚ್ಚಿದ ಬೇಡಿಕೆ


Team Udayavani, Jun 7, 2019, 5:50 AM IST

f-37

ಮಳೆಗಾಲ ಬಂತು. ಇನ್ನೇನಿದ್ದರೂ ರಸ್ತೆಗಳಲ್ಲಿ ಕಲರ್‌ಫ‌ುಲ್‌ ಕೊಡೆ, ರೈನ್‌ಕೋಟ್‌ಗಳದ್ದೇ ಹವಾ. ಎಲ್ಲಿ ನೋಡಿದರೂ ಕಣ್ಣಿಗೆ ಕಾಣುವುದು ಮಳೆಯಿಂದ ರಕ್ಷಿಸುವ ರಕ್ಷಾಕವಚಗಳೇ. ಪ್ರತಿವರ್ಷ ಮಳೆಗಾಲ ಬಂತೆಂದರೆ ಕೊಡೆ, ರೈನ್‌ಕೋಟ್‌ ಖರೀದಿದಾರರ ಸಂಖ್ಯೆ ಏರುತ್ತಲೇ ಹೋಗುತ್ತದೆ. ಇದಕ್ಕೆ ತಕ್ಕಂತೆಹೊಸಹೊಸ ವಿನ್ಯಾಸ, ಜನರನ್ನು ಸೆಳೆಯುವ ಆಕರ್ಷಕ ಕೊಡೆಗಳು ಮಾರುಕಟ್ಟೆಗೆ ಲಗ್ಗೆಯಿಡುತ್ತವೆ.

ಹೊರಗಡೆ ದೋ ಎಂದು ಸುರಿಯುವ ಮಳೆ. ಅಗತ್ಯದ ಕೆಲಸಕ್ಕಾಗಿ ಮನೆ ಹೊರಗಡೆ ಕಾಲಿಡಬೇಕಾದ ಅನಿವಾರ್ಯ ಪರಿಸ್ಥಿತಿ. ಈ ವೇಳೆ ಎಲ್ಲರಿಗೂ ರಕ್ಷಾಕವಚವಾಗಿ ನಿಲ್ಲುವುದು ಕೊಡೆ ಅಥವಾ ರೈನ್‌ಕೋಟ್‌ಗಳು. ಉಳಿದ ದಿನಗಳಲ್ಲಿ ಮೂಲೆಗುಂಪಾಗುವ ಇವುಗಳು ಮಳೆಗಾಲ ಆರಂಭವಾದ ಕೂಡಲೇ ಹೊರ ಬಂದು ಎಲ್ಲೆಡೆ ರಾರಾಜಿಸುತ್ತದೆ. ಇದರಂತೆ ಪ್ರತಿ ವರ್ಷ ಹೊಸ ಕೊಡೆ, ರೈನ್‌ಕೋಟ್‌ಗಳ ಮೇಲಿನ ಬೇಡಿಕೆ ಕೂಡ ಅಷ್ಟೇ ಹೆಚ್ಚುತ್ತದೆ. ಬಟ್ಟೆ, ಮೊಬೈಲ್‌ ಮೊದಲಾದ ವಸ್ತುಗಳಲ್ಲಿ ಹೊಸತನ ಹುಡುಕುವ ಜನರು ಕೊಡೆ, ರೈನ್‌ಕೋಟ್‌ ವಿಷಯದಲ್ಲೂ ಹೊಸತನ ಬಯಸುತ್ತಾರೆ ಎಂಬುದಕ್ಕೆ ಮಾರುಕಟ್ಟೆಗೆ ಲಗ್ಗೆ ಇಡುವ ಹೊಸ, ವಿಶಿಷ್ಟ ವಿನ್ಯಾಸ ಕೊಡೆಗಳೇ ಸಾಕ್ಷಿ.

ಮಳೆಗಾಲ ಬಂತೆಂದರೆ ಕೊಡೆ, ರೈನ್‌ಕೋಟ್‌ಗಳ ವ್ಯಾಪಾರ ಬಹು ಜೋರು. ಶಾಲೆಗೆ ಹೊರಟ ಮಕ್ಕಳಿಂದ ಹಿಡಿದು, ವಾಕಿಂಗ್‌ ಹೋಗುವ ಹಿರಿಯರೂ ಹಳೆ ಕೊಡೆಗಳನ್ನು ಬಿಸಾಡಿ ಹೊಸ ಕೊಡೆಗಳನ್ನು ಖರೀದಿ ಮಾಡಲು ಮುಂದಾಗುತ್ತಾರೆ. ಖರೀದಿದಾರರ ಅಭಿರುಚಿಗೆ ತಕ್ಕಂತೆ ರೈನ್‌ ಕೋಟ್‌, ಕೊಡೆಗಳು ಮಾರುಕಟ್ಟೆಗೆ ಎಂಟ್ರಿಯಾಗುತ್ತವೆ. ಕಿಸೆಯಲ್ಲಿ ಹಿಡಿಯುವಂತಹ ಕೊಡೆ, ಪಾರದರ್ಶಕ ಕೊಡೆ ಹಾಗೂ ರೈನ್‌ಕೋಟ್‌ಗಳಿಗಿಂದು ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ.

ಪಾಕೆಟ್‌ ಅಂಬ್ರಲ್ಲಾ ಲಾಂಗ್‌ ಅಂಬ್ರಲ್ಲಾ ಹವಾ
ಪ್ರಸ್ತುತ ಮಾರುಕಟ್ಟೆಯಲ್ಲಿ ಪಾಕೆಟ್‌ ಅಂಬ್ರಲ್ಲಾ ಹಾಗೂ ಲಾಂಗ್‌ ಅಂಬ್ರಲ್ಲಾ ಹವಾ ಜೋರಾಗಿದೆ. ಪಾಕೆಟ್‌ ಅಂಬ್ರಲ್ಲಾ ಚಿಕ್ಕಗಾತ್ರದಾಗಿದ್ದು, ಕಿಸೆ ಒಳಗೆ ಇಟ್ಟು ಕೊಳ್ಳಬಹುದಾಗಿದೆ ಬ್ಯಾಗ್‌ನಲ್ಲಿ ಇರಿಸಲು ಸುಲಭ ಎಂಬ ಕಾರಣಕ್ಕಾಗಿ ಮಹಿಳೆಯರು ಈ ಕೊಡೆಗಳನ್ನು ಹೆಚ್ಚು ಕೊಂಡುಕೊಳ್ಳುತ್ತಾರೆ. ತ್ರಿ ಪೋಲ್ಡ್‌, ಡಬಲ್‌ ಲೇಯರ್‌ ಕೊಡೆಗಳಿಗೂ ಬೇಡಿಕೆ ಇದೆ.

ಪ್ರಿಂಟ್‌ ಕೊಡೆ
ಕೊಡೆಗಳಲ್ಲಿ ನ್ಯೂಸ್‌ ಪೇಪರ್‌ ಪ್ರಿಂಟ್‌ ಇರುವ, ಬಣ್ಣ ಬಣ್ಣದ ಚಿತ್ರಗಳಿರುವ ಕೊಡೆಗಳನ್ನು ು ಕೇಳುತ್ತಾರೆ. ಕಳೆದ ಬಾರಿ ಬಂದ ವಿನ್ಯಾಸದ ಕೊಡೆಗಳು ಬೇಡ ಈ ಬಾರಿಯ ಲೇಟೆಸ್ಟ್‌ ಕೊಡೆಗಳನ್ನು ತೋರಿಸಿ ಎನ್ನುತ್ತಾರೆ. ಕಪ್ಪು ಬಣ್ಣದ ಕೊಡೆಗಳ ಕಾಲ ಹೋಗಿದೆ. ಈಗ ಬಣ್ಣದ ಕೊಡೆಗಳಿಗೆ ಬೇಡಿಕೆ ಹೆಚ್ಚು . ಅದರಲ್ಲೂ ವಿಭಿನ್ನತೆಯನ್ನು ಬಯಸುವ ಯುವಕರು ರಿವರ್ಸ್‌ ಫೋಲ್ಡಿಂಗ್‌ ಕೊಡೆಗಳನ್ನು ಕೇಳುತ್ತಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿ 500ರೂ.ನಿಂದ 2,000ರೂ. ವರೆಗಿನ ವಿವಿಧ ಬ್ರ್ಯಾಂಡ್‌ಗಳ ಕೊಡೆ ಮಾರುಕಟ್ಟೆಯಲ್ಲಿದೆ ಎಂದು ಅಂಗಡಿ ಮಾಲಕರು ಹೇಳುತ್ತಾರೆ.

ರೈನ್‌ ಕೋಟ್‌ಗಳಿಗೆ ಮೊದಲ ಸ್ಥಾನ
ರೈನ್‌ ಕೋಟ್‌ನಲ್ಲಿ ಹಲವಾರು ವಿನ್ಯಾಸಗಳಿರುತ್ತವೆ. ಯುವಕ , ಯುವತಿಯರು ಆಕರ್ಷಕ ವಿನ್ಯಾಸದ ರೈನ್‌ಕೋಟ್‌ಗಳನ್ನು ಖರೀದಿಸಿದರೇ, ಕೆಲಸಕ್ಕೆ ಹೋಗುವ ಪುರುಷರು, ಮಹಿಳೆಯರು ಸಿಂಪಲ್‌ ಆಗಿರುವ ವಿನ್ಯಾಸಗಳಿಗೆ ಹೆಚ್ಚು ಒತ್ತು ನೀಡುತ್ತಾರೆ. ಪುರುಷರು ಹೆಚ್ಚಾಗಿ ಪ್ಯಾಂಟ್‌, ಶರ್ಟ್‌ ಖರೀದಿಸುತ್ತಾರೆ. ಮಕ್ಕಳು, ಮಹಿಳೆಯರು ಉದ್ದನೆಯ ರೈನ್‌ಕೋಟ್‌ಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದಾರೆ. . ಮಕ್ಕಳ ರೈನ್‌ ಕೋಟ್‌ 400ರೂ. ನಿಂದ 2,000ರೂ., ಮಹಿಳೆಯರ 800ರೂ.ನಿಂದ 3,500ರೂ., ಪುರುಷರ 900ರೂ.ನಿಂದ 4,000ರೂ. ವರೆಗಿನ ಬೆಲೆಯ ರೈನ್‌ಕೋಟ್‌ ಸದ್ಯ ಮಾರುಕಟ್ಟೆಯಲ್ಲಿದೆ.

ಆನ್‌ಲೈನ್‌ಗಳಲ್ಲೂ ಸದ್ದು
ಮಾರುಕಟ್ಟೆಗಳಲ್ಲಿ ಮಾತ್ರವಲ್ಲದೆ ಆನ್‌ಲೈನ್‌ ಶಾಪಿಂಗ್‌ ವೆಬ್‌ಸೈಟ್‌ಗಳಲ್ಲೂ ಕೊಡೆ, ರೈನ್‌ಕೋಟ್‌ ಮಾರಾಟಗಳು ಜೋರಾಗಿವೆ. ಒಂದೊಂದು ವೆಬ್‌ಸೈಟ್‌ಗಳಲ್ಲಿ ಆಫರ್‌ಗಳಲ್ಲಿ ಕೊಡೆಗಳು ಲಭ್ಯವಿದೆ. ಮಾರುಕಟ್ಟೆಗಳಿಗೆ ಹೋಗಿ ಖರೀದಿಸಲು ಸಮಯ ಇಲ್ಲದವರು ಆನ್‌ಲೈನ್‌ಗಳಲ್ಲಿ ಆರ್ಡರ್‌ ಮಾಡಿ ಇರುವಲ್ಲಿ ರೈನ್‌ಕೋಟ್‌, ಕೊಡೆಗಳನ್ನು ತರಿಸಿಕೊಳ್ಳುತ್ತಾರೆ.

ಪಾರದರ್ಶಕ ಆಕರ್ಷಕ
ಸಾಮಾನ್ಯವಾಗಿ ಕೊಡೆಗಳು ಕಪ್ಪು ಅಥವಾ ಬಣ್ಣಗಳಿಂದ ಕೂಡಿರುತ್ತವೆ. ಆದರೆ ಇತ್ತೀಚೆಗೆ ಪಾರದರ್ಶಕ ಕೊಡೆಗಳು ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಗಿಟ್ಟಿಸಿಕೊಂಡಿವೆ. ಮಳೆಯ ಅಬ್ಬರ ಈ ಪಾರದರ್ಶಕಗಳಲ್ಲಿ ಸ್ಪಷ್ಟವಾಗಿ ಕಂಡರೆ, ರೈನ್‌ಕೋಟ್‌ಗಳಲ್ಲಿ ಜನರು ತೊಟ್ಟ ಬಟ್ಟೆಗಳು ಎದ್ದು ಕಾಣುತ್ತದೆ. ಇದರೊಂದಿಗೆ ಪಾಕೆಟ್‌ನಲ್ಲಿ ಇಡಬಹುದಾದ ಕೊಡೆಗಳು ಕೂಡ ಇಂದು ಯುವ ಜನತೆಯನ್ನು ಸೆಳೆಯುತ್ತಿವೆ.

-   ಪ್ರಜ್ಞಾ ಶೆಟ್ಟಿ

ಟಾಪ್ ನ್ಯೂಸ್

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

16

ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ

1-gadaga

Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ

15

ಶರ್ಟ್‌ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

16

ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ

1-gadaga

Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ

15

ಶರ್ಟ್‌ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.