ನಿಮ್ಮನ್ನು ನೀವು ಪ್ರೀತಿಸಿ ನೋಡಿ


Team Udayavani, Jul 29, 2019, 5:14 AM IST

SEE

ನಾವು ನಮ್ಮನ್ನು ಎಷ್ಟು ಪ್ರೀತಿಸುತ್ತೇವೆ? ಈ ಪ್ರಶ್ನೆಯನ್ನೊಮ್ಮೆ ಎಲ್ಲರ ಮುಂದಿಟ್ಟು ನೋಡಿ.ಹೆಚ್ಚಿನವರ ಬಳಿ ಇದಕ್ಕೆ ಉತ್ತರವಿಲ್ಲ. ಏಕೆಂದರೆ ನಮ್ಮಲ್ಲಿ ಹೆಚ್ಚಿನವರು ಇತರರನ್ನು ಪ್ರೀತಿಸುವ ಭರದಲ್ಲಿ ನಮ್ಮನ್ನು ನಾವು ಪ್ರೀತಿ ಮಾಡುವಲ್ಲಿ ಸೋತು ಹೋಗಿರುವವರೇ ಇರುವುದು. ಆತ/ಕೆ ನನ್ನನ್ನು ಬಿಟ್ಟು ಹೋದಳು, ಅಯ್ಯೋ ಅವರು ನಮ್ಮನ್ನು ಕಡೆಗಣಿಸಿದರಲ್ಲ ಎನ್ನುವ ಯೋಚನೆಗಳಲ್ಲೇ ಜೀವಿತಾವಧಿಯ ಹೆಚ್ಚು ಸಮಯವನ್ನು ಕಳೆಯುವ ಬದಲಾಗಿ ನಾವೇಕೆ ನಮ್ಮನ್ನೇ ಪ್ರೀತಿ ಮಾಡುವುದಕ್ಕೆ ಶುರುವಿಟ್ಟುಕೊಳ್ಳಬಾರದು? ಒಮ್ಮೆ ಯೋಚಿಸಿ.

ಹೌದು, ನಮ್ಮ ಜೀವನವನ್ನು ಪರರು ಮೆಚ್ಚಬೇಕು ಎನ್ನುವ ಹಂಬಲದಲ್ಲಿ ನೋವುಣ್ಣುವ ಬದಲು ನಾವೇ ಮೆಚ್ಚಿಕೊಂಡ ಜೀವನ ಕ್ರಮಗಳನ್ನು ಅಳವಡಿಸಿಕೊಂಡು ನಾವಂದುಕೊಂಡ ಜೀವನವನ್ನು ಏಕೆ ಬದುಕಬಾರದು? ಆಗಲೇ ತಾನೆ ಬದುಕು ಬಂಗಾರವಾಗುವುದು ಸಾಧ್ಯ.

ಇತ್ತೀಚೆಗೆ ಇಬ್ಬರು ಉದ್ಯಮಿಗಳು ಪಾರ್ಕ್‌ ಒಂದರಲ್ಲಿ ಮಾತನಾಡಿಕೊಳ್ಳುತ್ತಿದ್ದರು. ಅದರಲ್ಲಿ ಒಬ್ಬರಿಗೆ ಶುಗರ್‌, ಬಿಪಿ ಸೇರಿದಂತೆ ಈ ಕಾಯಿಲೆಗಳ ಅಣ್ಣತಮ್ಮಂದಿರು ಸಹ ಅವರ ಶರೀರದಲ್ಲಿ ವಾಸ ಮಾಡುವುದಕ್ಕೆ ಆರಂಭಿಸಿದ್ದಾರೆ ಎಂದು ಅವರು ತಮ್ಮ ಸ್ನೇಹಿತರ ಬಳಿ ತಮ್ಮ ದುಃಖ ತೋಡಿಕೊಳ್ಳುತ್ತಿದ್ದರು. ಅದಕ್ಕೆ ಪ್ರತಿಯಾಗಿ ಇನ್ನೊಬ್ಬರು ಸಹ ತಮ್ಮ ಪರಿಸ್ಥಿತಿಯೂ ಅದಕ್ಕಿಂತ ಭಿನ್ನವಲ್ಲ ಎಂದು ತಮ್ಮ ಅಳಲನ್ನು ಹಂಚಿಕೊಳ್ಳುವ ಕೆಲಸ ಮಾಡುತ್ತಿದ್ದರು. ಹೀಗೆ ಕಷ್ಟ ಸುಖಗಳೆಲ್ಲದರ ಬಗ್ಗೆ ಚರ್ಚೆ ಮಾಡುತ್ತಾ ಮಾತಿನ ಮಧ್ಯೆ ಅವರಲ್ಲಿ ಯಾರೋ ಒಬ್ಬರು ತಮ್ಮ 75ನೇ ವಯಸ್ಸಿನಲ್ಲಿ ದೈಹಿಕ ವ್ಯಾಯಾಮ ಮಾಡುತ್ತಾರೆ. ಜಿಮ್‌ಗೆ ಹೋಗುತ್ತಾರೆ. ಆದಷ್ಟು ತಮ್ಮ ದೇಹವನ್ನು ಹೆಚ್ಚು ಫಿಟ್‌ ಅÂಂಡ್‌ ಫೈನ್‌ ಆಗಿ ಇಟ್ಟುಕೊಳ್ಳುವಲ್ಲಿ ಹೆಚ್ಚು ಆಸ್ಥೆ ವಹಿಸುತ್ತಿದ್ದಾರೆ ಎಂದು.

ಈ ಇಬ್ಬರು ಗೆಳೆಯರ ಗೊಂದಲಕ್ಕೆ, ಸಮಸ್ಯೆಗೆ ಅವರಲ್ಲಿಯೆ ಔಷಧವಿತ್ತು. ಅವರ ಕಣ್ಣೆದುರಿದ್ದ ಆ ವೃದ್ಧನೇ ಜೀವನ ಪ್ರೀತಿಯ ಸಾರವನ್ನು ಅವರಿಗೆ ತಿಳಿಸಿದ್ದರು. ಆದರೆ ಉದ್ಯಮ, ಸಂಸಾರದ ಜಂಜಡಗಳ ಮಧ್ಯೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಮಾತ್ರ ಸಮಯವೇ ಸಾಲಲಿಲ್ಲ. ಹಣ ಕೂಡಿಡುವುದು, ಸಂಸಾರವನ್ನು ಚೆನ್ನಾಗಿ ನೋಡಿಕೊಳ್ಳುವುದಕ್ಕೆ ನೀಡಿದ ಕಾಳಜಿಯನ್ನು ಶರೀರದ ಪ್ರೀತಿಗೂ ಮೀಸಲಿಟ್ಟಿದ್ದರೆ ಅವರಿಗೆ ಇಳಿವಯಸ್ಸಿನಲ್ಲಿ ಆರೋಗ್ಯ ಸಮಸ್ಯೆ ಕೊಂಚ ಮಟ್ಟಿಗೆ ತಪ್ಪುತ್ತಿತ್ತು. ಇದರರ್ಥ ಪರರನ್ನು ಪ್ರೀತಿಸಬಾರದು ಎಂದಲ್ಲ. ಆದರೆ ಈ ಮಧ್ಯೆ ನಮ್ಮ ಸಂತೋಷಗಳಿಗೂ ಒಂದಷ್ಟು ಕಾಳಜಿ ವಹಿಸಿದರೆ ಬದುಕು ಅದೆಷ್ಟು ಸುಂದರವಾಗಬಹುದು ಎಂದು.

ಆನಂದದ ಮೂಲವನ್ನು ಹುಡುಕುವ ಚಾಕಚಕ್ಯತೆ, ಸಂತೋಷವನ್ನು ಸೃಷ್ಟಿಸಿಕೊಳ್ಳುವ ಮುಗ್ಧತೆ, ಬಂದದ್ದೆಲ್ಲವನ್ನೂ ಅರಗಿಸಿಕೊಂಡು ಮುಂದೆ ನುಗ್ಗುವ ಛಲವೊಂದು ನಮ್ಮ ಬದುಕು ಬದಲಾಯಿಸಬಲ್ಲದು. ಇದಕ್ಕೆ ಬೇಕಾದದ್ದು ನಮ್ಮನ್ನು ನಾವು ಪ್ರೀತಿಸುವ ಮುದ್ದು ಹೃದಯ.

-ಭುವನ ಬಾಬು, ಪುತ್ತೂರು

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.