ಸ್ವಾವಲಂಬನೆಗೆ ಬೇಕು ಶೂನ್ಯ ಬಂಡವಾಳ ಕೃಷಿ

ನೈಸರ್ಗಿಕ ಕೃಷಿಯ ಚಕ್ರಗಳು

Team Udayavani, Jul 7, 2019, 5:00 AM IST

m-24

ಶೂನ್ಯ ಬಂಡವಾಳ ಕೃಷಿ ಎಂದರೆ ದುಡ್ಡು ಖರ್ಚು ಮಾಡದೆ ಬೆಳೆ ಬೆಳೆಯುವುದು. ಬಿತ್ತನೆ ಬೀಜ, ಕೀಟನಾಶಕ ಎಂದು ಸಬ್ಸಿಡಿಯಲ್ಲಿ ದೊರೆಯುವ ರಸಗೊಬ್ಬರಕ್ಕಾಗಿ ಸರದಿಯಲ್ಲಿ ಕಾದು ನಿಂತು ಹಣ ಖರ್ಚು ಮಾಡಿ ಬೆಳೆ ಬೆಳೆಯುವುದರ ಬದಲು ಕೊಟ್ಟಿಗೆಯಲ್ಲಿನ ಆಕಳಿನ ಸಗಣಿ, ಗಂಜಲ, ಬದುವಿನ ಮಣ್ಣು, ಬೆಲ್ಲ, ದ್ವಿದಳ ಧಾನ್ಯಗಳನ್ನು ಬಳಸಿ ಬೆಳೆ ಬೆಳೆಯುವುದೇ ನೈಸರ್ಗಿಕ ಕೃಷಿ.

ಇಲ್ಲಿ ರಸಗೊಬ್ಬರ, ಕೀಟನಾಶಕಗಳ ಅಗತ್ಯವಿಲ್ಲ. ಕೊಟ್ಟಿಗೆಯಲ್ಲಿ ಒಂದು ದೇಸಿ ಆಕಳು ಇದ್ದರೆ ಸಾಕು, ಇದರಿಂದ ಸುಮಾರು 30 ಎಕರೆಯಲ್ಲಿ ನೈಸರ್ಗಿಕ ಕೃಷಿ ಮಾಡಬಹುದು ಎನ್ನುತ್ತಾರೆ ಈಗಾಗಲೇ ಕೃಷಿಯಲ್ಲಿ ಯಶಸ್ಸು ಕಂಡಿರುವವರು. ಕೀಟದ ಸಮಸ್ಯೆ ತಡೆಯಲು ಮನೆಯಲ್ಲಿಯೇ ಕೀಟನಾಶಕ ತಯಾರಿಸಿಕೊಳ್ಳಬಹುದು. ಅದಕ್ಕಾಗಿ ಬೇಕಾದ ಔಷಧೀಯ ಸಸ್ಯಗಳನ್ನು ತೋಟದಲ್ಲಿ ಬೆಳೆಯಬಹುದು. ಉಳುಮೆಯ ಅಗತ್ಯವೂ ಕಡಿಮೆ. ಕೇವಲ ಅಲ್ಪಾವಧಿಯ ಬೆಳೆಗಳಿಗಷ್ಟೇ ಉಳುಮೆ ಮಾಡುವ ಅಗತ್ಯವಿದೆ. ಹೀಗಾಗಿ ಇದನ್ನು ಶೂನ್ಯ ಬಂಡವಾಳ ಕೃಷಿ ಎಂದು ಕರೆಯಲಾಗಿದೆ.

ಕೆಲವು ಮುಖ್ಯ ತಣ್ತೀಗಳು
·ಪ್ರಕೃತಿಯಿಂದ ಸುಲಭ, ಉಚಿತವಾಗಿ ಸಿಗುವ ಸಂಪನ್ಮೂಲ.
·ವಿಷಕಾರಿಯಲ್ಲದ ಉತ್ಪಾದನೆ
·ರಸಗೊಬ್ಬರ, ರಾಸಾಯನಿಕಗಳಿಂದ ಮುಕ್ತ.
·ನೈಸರ್ಗಿಕ ರೋಗನಿರೋಧಕ ರಕ್ಷಣೆ
·ನೆಲದ ಮಣ್ಣಿನ ರಕ್ಷಣೆ
·ನಿರಂತರ ಆದಾಯ
·ಕಡಿಮೆ ಬಂಡವಾಳದ ಬೇಸಾಯ
·ಪ್ರಕೃತಿಯ ಒಳಹರಿವು (ನೆಲಕ್ಕೆ ಪ್ರಕೃತಿ ರಕ್ಷಣೆ)
·ಮಣ್ಣಿನ ಮೇಲ್ಪದರ ಹೊದಿಕೆ.
·ಬಹುಬೆಳೆಗಳು
ದೇಸೀ ಆಕಳು ಅಗತ್ಯ
ನೈಸರ್ಗಿಕ ಕೃಷಿಗೆ ದೇಸೀ ಆಕಳು ಅತ್ಯಗತ್ಯ. ಇದರ ಸೆಗಣಿಯಲ್ಲಿ ಹೇರಳವಾದ ಜೀವಾಣುಗಳಿವೆ ಎನ್ನಲಾಗಿದೆ. ಅದರ ಗಂಜಲದಲ್ಲಿ ಅನೇಕ ಪೋಷಕಾಂಶಗಳಿವೆ. ಒಂದು ಗ್ರಾಂ ಸೆಗಣಿಯಿಂದ ಕೋಟ್ಯಂತರ ಜೀವಾಣು ಪಡೆಯಬಹುದು ಎನ್ನಲಾಗುತ್ತದೆ. ಒಂದು ದೇಸಿ ಹಸು ದಿನವೊಂದಕ್ಕೆ ಸುಮಾರು 10 ಕೆ.ಜಿ. ಸಗಣಿ ಹಾಕುತ್ತದೆ. 30 ಎಕರೆ ಕೃಷಿ ಮಾಡಲು ಒಂದು ದನ ಸಾಕಾಗುತ್ತದೆ.

ತರಕಾರಿ ಬೆಳೆಯಿರಿ
ಶೂನ್ಯ ಬಂಡವಾಳಕ್ಕೆ ಏಕಬೆಳೆ ಬೆಳೆಯುವ ಬದಲು ಅಂತರ ಬೆಳೆಯಾಗಿ 30 ದಿನಗಳಲ್ಲಿ ಬೆಳೆಯುವ ತರಕಾರಿ ಬೆಳೆಯಬೇಕು. ಈ ಪದ್ಧತಿ ಅಳವಡಿಸಿಕೊಂಡ ರೈತರು ಯಾವುದೇ ಸಾಲಬಾಧೆ ಅನುಭವಿಸಿಲ್ಲ.

ಮುಚ್ಚಿಗೆ
ಇದಕ್ಕೆ ಹಸಿ ಗೊಬ್ಬರ ಎಂದೂ ಕರೆಯ ಲಾಗುತ್ತದೆ. ಜೀವಾಮೃತ ಪೂರೈಕೆಯಾದ ಅನಂತರ ಹಿಕ್ಕೆಯ ರೂಪದ ಅನ್ಯದ್ರವ್ಯಗಳನ್ನು ಎರೆಹುಳುಗಳು ಭೂಮಿಯ ಮೇಲ್ಪದರಕ್ಕೆ ತಂದು ಹಾಕುತ್ತವೆ. ಇದರಲ್ಲಿ ಕೋಟ್ಯಂತರ ಸೂಕ್ಷ್ಮ ಜೀವಿಗಳು ಕಾರ್ಯನಿರ್ವಹಿಸುತ್ತವೆ. ಬೆಳೆಯ ಬೆಳವಣಿಗೆಗೆ ಸೂರ್ಯನ ಬಿಸಿಲಿನಿಂದ ಇವುಗಳ ರಕ್ಷಣೆ ಅಗತ್ಯ. ಮಣ್ಣಿನಿಂದ ಅಥವಾ ಕಸಕಡ್ಡಿಗಳನ್ನು ಹಾಕಿ ಅವುಗಳ ರಕ್ಷಣೆ ಮಾಡಲಾಗುತ್ತದೆ.

ಬೀಜಾಮೃತ
ಬಿತ್ತನೆ ಬೀಜಗಳಲ್ಲಿ ಇರಬಹುದಾದ ಶಿಲೀಂಧ್ರ, ಬ್ಯಾಕ್ಟೀ ರಿಯಾ ಅಥವಾ ಅವುಗಳ ತತ್ತಿಗಳು ಪೈರಿನ ಉತ್ತಮ ಬೆಳವಣಿಗೆಗೆ ಅಡ್ಡಿಯಾಗುತ್ತವೆೆ. ಅವುಗಳನ್ನು ಪ್ರಾರಂಭಿಕ ಹಂತಗಳಲ್ಲಿ ಇಲ್ಲವಾಗಿಸಲು ಬೀಜಾಮೃತ ಬಳಸಲಾಗುತ್ತದೆ. 100 ಕೆ.ಜಿ. ಬಿತ್ತನೆ ಬೀಜಕ್ಕೆ 5 ಕೆ.ಜಿ. ದೇಸಿ ಆಕಳ ಸಗಣಿ, 5 ಲೀಟರ್‌ ಗಂಜಲ, 50 ಗ್ರಾಂ ಸುಣ್ಣ, 20 ಲೀಟರ್‌ ನೀರು ಬೆರೆಸಿ ಸಿದ್ಧಪಡಿಸಿದ ದ್ರಾವಣವೇ ‘ಬೀಜಾಮೃತ.’ ಬಿತ್ತನೆಯ ಹಿಂದಿನ ದಿನ ರಾತ್ರಿಯೇ ಇದನ್ನು ಸಿದ್ಧಪಡಿಸಲಾಗುತ್ತದೆ. ಬಿತ್ತನೆಗೆ ಮುಂಚೆ ಬೀಜಗಳನ್ನು ಇದರಲ್ಲಿ ಅದ್ದಲಾಗುತ್ತದೆ. ಇದರಲ್ಲಿ ಟ್ರೈಕೋಡರ್ಮಾ ಎಂಬ ಜೀವಾಣುವಿದ್ದು , ಇದು ಬೀಜಗಳ ರಕ್ಷಣೆ ಮಾಡುತ್ತದೆ.

ಜೀವಾಮೃತ
ಇದನ್ನು ನೈಸರ್ಗಿಕ ಕೃಷಿಯ ಜೀವದ್ರವ್ಯ ಎಂದು ಕರೆಯಲಾಗುತ್ತದೆ. 200 ಲೀಟರ್‌ ನೀರಿಗೆ 10 ಕೆ.ಜಿ. ದೇಸಿ ಆಕಳಿನ ಸಗಣಿ, 10 ಲೀಟರ್‌ ಗಂಜಲ, 2 ಕೆ.ಜಿ. ಕಪ್ಪು ಬೆಲ್ಲ, 2 ಕೆ.ಜಿ. ದ್ವಿದಳ ಧಾನ್ಯಗಳ ಹಿಟ್ಟು, 2 ಹಿಡಿ ಹೊಲದ ಬದುವಿನ ಮಣ್ಣನ್ನು ಬೆರೆಸಲಾಗುತ್ತದೆ. ರಾಸಾಯನಿಕ ಗೊಬ್ಬರದ ಬದಲಾಗಿ ಈ ಮಿಶ್ರಣವನ್ನು ಬಳಸಲಾಗುತ್ತದೆ. ಇದು ನೆಲದಾಳದಲ್ಲಿರುವ ದೇಸಿ ಎರೆಹುಳುಗಳನ್ನು ಬಡಿದೆಬ್ಬಿಸುತ್ತದೆ. ತಿಂಗಳಿಗೆ ಎರಡು ಬಾರಿಯಂತೆ ಇದನ್ನು ಸಿಂಪಡಿಸಬೇಕು.

ಗಾಳಿಯಾಡುವಿಕೆ
ಮಣ್ಣಿನಲ್ಲಿ ಗಾಳಿಯಾಡುವಿಕೆಗೆ ರೈತರು ನಿಗಾ ವಹಿಸಬೇಕಿದೆ. ಬೆಳೆಯ ಬೆಳವಣಿಗೆಗೆ ಇದು ಅತ್ಯಗತ್ಯ. ಈ ನಾಲ್ಕು ಚಕ್ರಗಳನ್ನು ರೈತರು ಸರಿಯಾಗಿ ನಿಭಾಯಿಸಿದರೆ ಬಹುಪಾಲು ನೈಸರ್ಗಿಕ ಕೃಷಿ ಮುಕ್ತಾಯವಾದಂತೆ. ಇನ್ನಿತರ ಎಲ್ಲ ಕೃಷಿ ಪದ್ಧತಿ ಮಾದರಿಗಳಿಗೆ ಹೋಲಿಸಿದರೆ ನೈಸರ್ಗಿಕ ಕೃಷಿ ಪದ್ಧತಿ ಸುಲಭ, ಖರ್ಚೂ ಇಲ್ಲದೆ ಹೆಚ್ಚಿನ ಇಳುವರಿ ಪಡೆಯಬಹುದು.

·ಹೊರಗಡೆ ಯಾವುದೇ ಪದಾರ್ಥ ಕೊಳ್ಳುವಂತಿಲ್ಲ. ಗಿಡದ ಬೆಳವಣಿಗೆಗೆ ಬೇಕಾದ ಅಗತ್ಯತೆ ನಾವು ಕೃಷಿ ಭೂಮಿಯಿಂದಲೇ ಪಡೆಯಬಹುದು.

·ಶೇ. 98ರಿಂದ 98.5ರಷ್ಟು ಪೋಷಕಾಂಶ, ಗಾಳಿ, ನೀರು ಹಾಗೂ ಸೌರಶಕ್ತಿಯಿಂದ ಪಡೆಯಬಹುದು.

·ಉಳಿದ ಶೇ. 1.5 ಪೋಷಕಾಂಶ ಮಣ್ಣಿನಿಂದ ಅದೂ ಕೂಡ ಸಂಪೂರ್ಣ ಉಚಿತವಾಗಿ ಅತ್ಯುನ್ನತ ಪೋಷಕಾಂಶ ಹೊಂದಿದ ಮಣ್ಣಿನಿಂದ ಪಡೆಯಬಹುದು.

ಜಯಾನಂದ ಅಮೀನ್‌ ಬನ್ನಂಜೆ

ಟಾಪ್ ನ್ಯೂಸ್

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

10-editorial

Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.