ಸ್ಮಾರ್ಟ್ ಫೂಟ್ ಪಾತ್ ಮಂಗಳೂರಿಗೂ ಬರಲಿ


Team Udayavani, Jun 30, 2019, 5:46 AM IST

foot-path

ನಗರ ಎಂದಿಗೂ ಹೊಸ ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳುತ್ತಲೇ ಇರುತ್ತದೆ. ನಗರಗಳನ್ನು ಅಭಿವೃದ್ಧಿ ವಿಷಯದಲ್ಲಿ ವಿಶೇಷವಾಗಿ, ವಿಭಿನ್ನವಾಗಿ ಸೃಷ್ಟಿಸುವ ಆಲೋಚನ ಪರಿ ಪ್ರತಿಯೊಬ್ಬ ನಾಗರಿಕನಲ್ಲೂ ಇರುತ್ತದೆ. ನಾವು ಅದ್ಯಾವುದೋ ನಗರಕ್ಕೆ ಹೋದಾಗ ಅಲ್ಲಿನ ವಿಶೇಷತೆಗಳು ನಮ್ಮ ನಗರಗಳಲ್ಲಿ ಅಳವಡಿಕೆಯಾಗಲಿ ಎನ್ನುವ ಬಯಕೆ ಮನದಲ್ಲಿ ಮೂಡುತ್ತದೆ ಮತ್ತು ನಮ್ಮ ನಗರವನ್ನು ಆ ದೃಷ್ಟಿಕೋನದಲ್ಲಿ ನೋಡುವಂತೆ ಮಾಡುತ್ತದೆ. ಇದು ಸಹಜ. ನಮ್ಮ ನಗರ ಹೀಗಿಲ್ಲವಲ್ಲಾ ಎಂದುಕೊಳ್ಳುತ್ತಾ ನಗರದ ಮೇಲಿನ ಪ್ರೀತಿ, ಕಾಳಜಿ, ಆಲೋಚನೆಗಳು ಆ ಸಮಯದಲ್ಲಿ ವ್ಯಕ್ತವಾಗುತ್ತವೆೆ. ಇದೇ ರೀತಿ ಅನಿಸಿಕೊಳ್ಳುವ ಇಲ್ಲೊಂದು ವಿಭಿನ್ನ ತಂತ್ರಜ್ಞಾನದ ವಿವರಣೆ ಇಲ್ಲಿದೆ.

ನಗರ ಅಂದರೆ ಗೊತ್ತಲ್ಲವೇ ಹಬ್ಬದಂತೆ ಜನಸಂದಣಿಯಿಂದ ತುಂಬಿ ತುಳುಕುತ್ತಿರುತ್ತದೆ. ಇಲ್ಲೊಂದು ನಗರ ಇದನ್ನೇ ಲಾಭ ಪಡೆದು ಹೊಸತನ್ನು ಅನ್ವೇಷಿಸಿದೆ.

ಹೌದು ನಗರಗಳು ಅಂದರೇ ನಿಲ್ಲದ ಜನಸಂಚಾರ. ಇದನ್ನು ಸಮಸ್ಯೆಯೆಂದು ಪರಿಗಣಿಸದೆ ಪಾದಚಾರಿ ರಸ್ತೆಯನ್ನು ಶಕ್ತಿಯಾಗಿ ಉಪಯೋಗಿಸಿದ್ದಾರೆ. ಇಂತಹದ್ದೊಂದು ಪ್ರಯೋಗಕ್ಕೆ ಒಳಪಟ್ಟು ಯಶಸ್ವಿಯಾಗಿದ್ದು ಲಂಡನ್‌ನ ನಗರ.

ಶೇ. 95 ಮರುಬಳಕೆಯ ಟಯರ್‌ಗಳಿಂದ ತಯಾರಿಸಿದ ಮತ್ತು ಕೆಲವೊಂದು ತಂತ್ರಜ್ಞಾನಗಳನ್ನು ಜೋಡಿಸಿದ ಲಂಡನ್‌ ಮೂಲದ ಕಂಪೆನಿ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ- ಇದು ಹೆಜ್ಜೆ ಹಾಕಿದಾಗ 5 ಮಿ.ಮೀ.ಗೆ ಬಾಗುತ್ತದೆ. ಇದರ ಪರಿಣಾಮವಾಗಿ ಹೆಜ್ಜೆ ಗುರುತು ಅವಧಿಯಲ್ಲಿ 8 ವ್ಯಾಟ್‌ಗಳಷ್ಟು ಚಲನಶಕ್ತಿ ಉತ್ಪಾದನೆಯಾಗುತ್ತದೆ. ಇದು 30 ಸೆಕೆಂಡ್‌ಗಳ ಕಾಲ ಎಲ್ಇಡಿ ದಾರಿ ದೀಪವನ್ನು ಬೆಳಗಿಸುತ್ತದೆ. ಪ್ರತಿಯೊಂದು ಟೈಲ್ ಅನನ್ಯ ವೈಯರ್‌ ಲೆಸ್‌ ಸಂವಹನ ತಂತ್ರಜ್ಞಾನವನ್ನೂ ಹೊಂದಿದೆ. ಇವುಗಳಿಂದ ಮತ್ತೂಂದು ಉಪಯೋಗ ಎಂದರೆ ನಗರಕ್ಕೆ ಬರುವವರ ಸಂಖ್ಯೆ ಮತ್ತು ಉತ್ಪತ್ತಿಯಾಗುವ ಶಕ್ತಿಯ ಬಗ್ಗೆ ಡೇಟಾವನ್ನು ಪಡೆಯಲು ಸಹಾಯ ಮಾಡುತ್ತದೆ. ಇದು ನಗರದ ಅಧಿಕಾರಿಗಳು ಮತ್ತು ವ್ಯಾಪಾರ ಪ್ರಕಾರಗಳು ಎಷ್ಟು ಜನರು ಒಂದು ಪ್ರದೇಶದ ಮೂಲಕ ಹಾದುಹೋಗುತ್ತಿದ್ದಾರೆ ಎಂಬುದನ್ನು ನೋಡಬಹುದು. ಅನಂತರ ಹೆಚ್ಚುವರಿ ಶಕ್ತಿಯನ್ನು ಬಳಸುವ ವಿಧಾನದ ಬಗ್ಗೆ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಈ ಪಾದಚಾರಿ ರಸ್ತೆಯಿಂದ ಉತ್ಪತ್ತಿಯಾಗುವ ಶಕ್ತಿಗಳು ಹಗಲು ಹೊತ್ತಿನಲ್ಲಿ ಹಕ್ಕಿಗಳ ಶಬ್ದಗಳನ್ನು ಮೂಡಿಸಿದರೆ ರಾತ್ರಿ ಬೆಳಕನ್ನು ಸೂಕ್ತವಾಗಿ ಒದಗಿಸುತ್ತದೆ. ಈ ತಂತ್ರಜ್ಞಾನವನ್ನು ಪಾರ್ಕ್‌, ಮಾಲ್, ಮಾರ್ಕೆಟ್ ವಲಯಗಳಲ್ಲಿ ನಿರ್ಮಿಸಬಹುದು.

ಮಂಗಳೂರಿನಲ್ಲಿ ಸೃಷ್ಟಿಯಾಗಲಿ

ಸ್ಮಾರ್ಟ್‌ ನಗರಯಾಗಿ ವೇಗವಾಗಿ ಮತ್ತು ಯೋಜಿತವಾಗಿ ಮುಂದುವರಿಯುತ್ತಿರುವ ಮಂಗಳೂರು ನಗರದಲ್ಲೂ ಇಂತಹ ಯೋಜನೆಗಳನ್ನು ತಂತ್ರಜ್ಞಾನವನ್ನು ಪರಿಚಯಿಸಿ ಲಾಭ ಪಡೆಯಬಹುದು. ಇವುಗಳ ನಿರ್ಮಾಣ ಕೇವಲ ನಗರದ ಆಡಳಿತ ಮಂಡಳಿಗಳ ಬಳಿ ಮಾಡದೇ ಮಾಲ್ಗಳು, ಮಾರುಕಟ್ಟೆಗಳಲ್ಲಿ ಇವುಗಳನ್ನು ಉಪಯೋಗಿಸಬಹುದು.

– ವಿಶ್ವಾಸ್‌ ಅಡ್ಯಾರ್‌

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.