ಸ್ಮಾರ್ಟ್ ಹೆಲ್ತ್ ಕೇರ್ ಆದ್ಯತೆಯಾಗಲಿ
Team Udayavani, Dec 23, 2018, 12:48 PM IST
ದೇಶದ ಆಸ್ಪತ್ರೆಗಳ ಸ್ಥಿತಿ ಇಂದು ಅರಣ್ಯರೋದನದಂತಿದೆ. ಮೂಲ ಸೌಲಭ್ಯ ಹಾಗೂ ಸಿಬಂದಿ ಕೊರತೆಯಿಂದಾಗಿ ಹಲವು ಬಾರಿ ರೋಗಿಗಳು ನರಳಾಡುವಂತೆ ಮಾಡುತ್ತದೆ. ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಗಳಾಗಿದ್ದರೂ ಕೆಲವೊಂದು ಆಸ್ಪತ್ರೆಗಳ ಸ್ಥಿತಿ ಇಂದಿಗೂ ಅಯೋಮಯ. ಸರಕಾರವೂ ಆರೋಗ್ಯಕ್ಕೆ ಪೂರಕವಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದರೂ, ಸಮರ್ಪಕ ಅನುಷ್ಠಾನದ ಕೊರೆತೆಯಿಂದಾಗಿ ಸಮಸ್ಯೆ ಹೆಚ್ಚಾಗುತ್ತಲೇ ಇದೆ.
ಗಗನಚುಂಬಿ ಕಟ್ಟಡಗಳು, ಬೃಹದಾದ ರಸ್ತೆಗಳಷ್ಟೇ ನಗರೀಕರಣವಲ್ಲ. ಶಿಕ್ಷಣ, ಪರಿಸರ ಕಾಳಜಿ ಹಾಗೂ ಆರೋಗ್ಯ ಕ್ಷೇತ್ರಗಳ ಅಭಿವೃದ್ಧಿಯನ್ನು ಕೂಡ ನಾವು ಬೆಳೆಯುತ್ತಿರುವ ನಗರದ ಆದ್ಯತೆಯಾಗಿ ಪರಿಗಣಿಸಬೇಕಾಗಿದೆ. ಸುವ್ಯವಸ್ಥಿತ ಆಸ್ಪತ್ರೆ ಹಾಗೂ ವಿಶ್ವ ವಿದ್ಯಾಲಯ ನಿರ್ಮಾಣ ಕೂಡ ನಗರೀಕರಣದ ಭಾಗವಾಗಬೇಕಿದೆ. ಆಸ್ಪತ್ರೆಗಳಿಗೆ ಮೂಲ ಸೌಲಭ್ಯ ನೀಡಿ, ಇನ್ನಷ್ಟೂ ಸ್ಮಾರ್ಟ್ ಆಗಿಸಬೇಕಿದೆ. ಈ ಲೆಕ್ಕದಲ್ಲಿ ನಮಗೆ ಸಿಂಗಾಪುರ, ಜಪಾನ್ ಹಾಗೂ ದಕ್ಷಿಣ ಕೊರಿಯಾ ದೇಶಗಳು ಅಳವಡಿಸಿಕೊಂಡಿರುವ ಸ್ಮಾರ್ಟ್ ಹೆಲ್ತ್ ಕೇರ್ ವ್ಯವಸ್ಥೆ ಮಾದರಿಯಾಗಬೇಕಿದೆ.
ಏನಿದು ಸ್ಮಾರ್ಟ್ ಹೆಲ್ತ್ ಕೇರ್ ವ್ಯವಸ್ಥೆ?
ಸ್ಮಾರ್ಟ್ ಹೆಲ್ತ್ ಕೇರ್ ವ್ಯವಸ್ಥೆ ಅಭಿವೃದ್ಧಿ ಹೊಂದಿದ ತಂತ್ರಜ್ಞಾನ ಪೂರಿತವಾದ ವ್ಯವಸ್ಥೆಯಾಗಿದೆ. ಆರೋಗ್ಯ ಕ್ಷೇತ್ರದ ಡಯಾಗ್ನೋಸಿಸ್ ಉಪಕರಣಗಳು ಹಾಗೂ ಔಷಧ, ಚಿಕಿತ್ಸೆಗೆ ತಂತ್ರಜ್ಞಾನ ಪೂರಿತವಾಗಿ ನೀಡುವ ವ್ಯವಸ್ಥೆಗೆ ಸ್ಮಾರ್ಟ್ ಹೆಲ್ತ್ ಕೇರ್ ಎನ್ನಲಾಗುತ್ತದೆ. ದೇಶದ ಬಹುತೇಕ ಮೂಲ ಸೌಲಭ್ಯಗಳಿಂದ ಬಳಲುತ್ತಿರುವ ಆಸ್ಪತ್ರೆಗಳಿಗೆ ಈ ಮುಂದುವರಿದ ತಂತ್ರಜ್ಞಾನ ಪೂರಕವಾಗಬಲ್ಲದೇ ಎಂಬ ಪ್ರಶ್ನೆಗೆ ದೇಶವೂ ಈಗಾಗಲೇ ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ ಸಹಿತ ಸ್ಮಾರ್ಟ್ ಸಿಟಿ ಎಂಬ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಂಡಿರುವಾಗ, ನಮ್ಮ ನಗರಗಳ ಆಸ್ಪತ್ರಗಳಿಗೆ ಸ್ಮಾರ್ಟ್ ಹೆಲ್ತ್ ಕೇರ್ ವ್ಯವಸ್ಥೆ ಅಳವಡಿಸಿಕೊಳ್ಳುವುದು ದೊಡ್ಡದೇನಲ್ಲ.
ಸಿಂಗಾಪೂರ್ ಮಾದರಿ
ಸಿಂಗಾಪೂರ್, ದಕ್ಷಿಣ ಕೊರಿಯಾ ಹಾಗೂ ಜಪಾನ್ ದೇಶಗಳೂ ಸ್ಮಾರ್ಟ್ ಹೆಲ್ತ್ ಕೇರ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಂಡಿವೆ. ಸಿಂಗಾಪೂರದ ಚೆಂಗೈ ಕೇಂದ್ರೀಯ ಆಸ್ಪತ್ರೆಯಲ್ಲಿ ರೋಗಿಗಳ ತಪಾಸಣೆಗೆ ತಂತ್ರಜ್ಞಾನದ ಮೂಲಕ ಚಿಕಿತ್ಸೆಯನ್ನು ನೀಡಲಾಗುತ್ತದೆ. ಈ ಆಸ್ಪತ್ರೆಯಲ್ಲಿ ಬಹುತೇಕ ವೈದ್ಯರಂತೆ ರೋಬೋಗಳನ್ನು ನಿರ್ಮಿಸಲಾಗಿದ್ದು, ಅಪರೇಶನ್ ಹಾಗೂ ಚಿಕಿತ್ಸೆ ನೀಡುವಾಗ, ಮೆಡಿಸಿನ್ ಸಂಬಂಧಿಸಿದಂತೆ ಮಾಹಿತಿಗಳನ್ನು ಮಾನವ ನಿರ್ಮಿತ ರೋಬೋಗಳೇ ನೀಡುತ್ತವೆ. ಅಲ್ಲದೇ ಈ ಆಸ್ಪತ್ರೆಯಲ್ಲಿ ರೋಗಿಗಳಿಗೆ ಉಪಯೋಗವಾಗಲು ಹಲವಾರು ಹೈಟೆಕ್ ತಂತ್ರಜ್ಞಾನದ ಆರೋಗ್ಯ ಸೌಲಭ್ಯಗಳನ್ನು ನೀಡಲಾಗಿದೆ. ಇದೊಂದು ಜನಪರವಾದ ಯೋಜನೆಯಾಗುವುದಂತೂ ಸತ್ಯ.
ಅಂತೆಯೇ ಭಾರತದ ಆಸ್ಪತ್ರೆಗಳ ಸ್ಥಿತಿಯೇನೂ ಅಷ್ಟು ಕೆಟ್ಟಿಲ್ಲ. ನಿರ್ಲಕ್ಷ್ಯ ದಿಂದಾಗಿ ಕೆಲವೊಮ್ಮೆ ಮೂಲ ಸೌಲಭ್ಯಗಳ ಕೊರತೆ ಕಾಣಬಹುದು ಅಷ್ಟೇ. ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿರುವ ಮಂಗಳೂರು ಮಹಾನಗರದ ಆಸ್ಪತ್ರೆಗಳೂ ಇಂತಹ ಸಮಸ್ಯೆಗಳಿಂದ ಆಗಾಗ ಪತ್ರಿಕೆಯಲ್ಲಿ ವರದಿಯಾಗು ತ್ತಿರುತ್ತವೆ. ಸ್ಮಾರ್ಟ್ ಸಿಟಿಯ ಆದ್ಯತೆಯಲ್ಲಿ ನಗರದಲ್ಲಿ ರಸ್ತೆಗಳು, ಕಟ್ಟಡಗಳು ಇನ್ನಿತರಗಳನ್ನು ನಿರ್ಮಿಸಿದಂತೆ, ಆಡಳಿತ ವ್ಯವಸ್ಥೆಯೂ ನಗರದ ಆಸ್ಪತ್ರೆಗಳಿಗೆ ಸ್ಮಾರ್ಟ್ ಹೆಲ್ತ್ ಕೇರ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳವು ದನ್ನು ಮರೆಯಬಾರದು.
ಶಿವ ಸ್ಥಾವರಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು
New Jersey: ಸ್ಥಳೀಯ ಶಾಪ್ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ
College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ
Mangaluru; ಪೆಟ್ರೋಲ್ ಬದಲು ಡೀಸೆಲ್ ತುಂಬಿಸಿದ ಆರೋಪ: ಕೋರ್ಟ್ಗೆ ಮೊರೆ
RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್