ವಿಜ್ಞಾನ ಪರೀಕ್ಷೆ ಎದುರಿಸಲು ನಿಮ್ಮ ತಯಾರಿ ಹೀಗಿರಲಿ

ಎಸ್‌ಎಸ್‌ಎಲ್‌ಸಿ ಸಕ್ಸಸ್ ಸೂತ್ರ

Team Udayavani, Feb 22, 2020, 5:29 AM IST

kala-21

ಪ್ರಿಯ ವಿದ್ಯಾರ್ಥಿಗಳೇ,
ಎಸೆಸೆಲ್ಸಿ ಪರೀಕ್ಷೆಗಳು ಸಮೀಪಿಸುತ್ತಿವೆ. ಈಗಾಗಲೇ ಶಾಲಾ ಹಂತದಲ್ಲಿ ಮತ್ತು ಜಿಲ್ಲಾ ಹಂತದಲ್ಲಿ ಪೂರ್ವಸಿದ್ಧತಾ ಪರೀಕ್ಷೆಗಳು ಮುಗಿದಿವೆ. ಬದಲಾಗಿರುವ ಪ್ರಶ್ನೆಪತ್ರಿಕೆ ವಿನ್ಯಾಸ, ಅಂಕಗಳನ್ನು ಹಂಚಿಕೆ ಮಾಡಿರುವ ರೀತಿ, ಹೊಸದಾಗಿ ಸೇರ್ಪಡೆಯಾಗಿರುವ 5 ಅಂಕದ ಪ್ರಶ್ನೆ, ಹೆಚ್ಚಾಗಿರುವ ವಿವರಣಾತ್ಮಕ ಉತ್ತರ ಬಯಸುವ ಪ್ರಶ್ನೆಗಳು -ಎಲ್ಲವನ್ನೂ ಗಮನಿಸಿದ್ದೀರಿ. ಇನ್ನುಳಿದ ಕೆಲವೇ ದಿನಗಳಲ್ಲಿ ಇನ್ನಷ್ಟು ನಿಖರವಾಗಿ, ಆತ್ಮವಿಶ್ವಾಸದಿಂದ ವಿಜ್ಞಾನ ವಿಷಯವನ್ನು ಅಭ್ಯಾಸ ಮಾಡಲು ಕೆಲವು ಸೂತ್ರಗಳು ಇಲ್ಲಿವೆ.

– 12 ಅಂಕಗಳ ಪ್ರಶ್ನೆಗಳಿಗೆ ಚಿತ್ರಗಳನ್ನು ನಿಗದಿ ಮಾಡಿ ಈಗಾಗಲೇ ಪಟ್ಟಿ ನೀಡಲಾಗಿದೆ. ಚಿತ್ರಗಳನ್ನು ಹೆಚ್ಚು ವೇಗವಾಗಿ, ಆದರೆ ಅಂದವಾಗಿ ಬಿಡಿಸಲು ಪ್ರಯತ್ನಿಸಿ. ಭಾಗಗಳನ್ನು ಕಡ್ಡಾಯವಾಗಿ ನೆನಪಿಟ್ಟುಕೊಳ್ಳಿ. ವಿಶೇಷವಾಗಿ ಜೀವಶಾಸ್ತ್ರದ ಚಿತ್ರಗಳಲ್ಲಿ ಕೆಲವು ಭಾಗಗಳ ಕಾರ್ಯಗಳನ್ನೂ ನೆನಪಿನಲ್ಲಿಡಿ.

– ಓದಿದ್ದನ್ನು ಮರೆಯದಿರಲು “ಚಿತ್ರಣ’ ಒಳ್ಳೆಯ ಉಪಾಯ. ಓದಿದ ವಿಷಯಗಳನ್ನು ಚಿತ್ರಗಳು, ಸಂಕೇತಗಳು, ರೇಖಾ ವಿನ್ಯಾಸಗಳು, ಚಾರ್ಟ್‌ ಗಳ ಮೂಲಕ ಚಿತ್ರೀಕರಿಸಿಕೊಳ್ಳಿ. ಇವನ್ನು ನೋಡಿದ ತತ್‌ಕ್ಷಣ ಓದಿದ ವಿಷಯ ಜ್ಞಾಪಕವಾಗುವಂತಿರಬೇಕು. ಉದಾಹರಣೆಗೆ: ಸಸ್ಯಗಳ ಸಂತಾನೋತ್ಪತ್ತಿಗೆ ಸಂಬಂಧಿಸಿದಂತೆ ಹಂತಗಳು: ಪರಾಗಸ್ಪರ್ಶ – ನಿಶೇಚನ – ಯುಗ್ಮಜ – ಭ್ರೂಣ – ಬೀಜ- ಮೊಳೆಯುವಿಕೆ (pollination, fertilisation, zygote, embryo, egg, germination).

– ಪದೇಪದೇ ಮರೆತು ಹೋಗುವ ಕೆಲವು ವಿಷಯ ಗಳನ್ನು – ಉತ್ತರಗಳನ್ನು ನೆನಪಿಡಲು ನಿಮ್ಮವೇ ಆದ ಸ್ಮರಣತಂತ್ರಗಳನ್ನು ರಚಿಸಿಕೊಳ್ಳಲು ಪ್ರಯತ್ನಿಸಿ. ಉದಾ.: “ಆನೀಕೆ’- ಆಮ್ಲಗಳು ನೀಲಿ ಲಿಟ್ಮಿಸ್‌ ಅನ್ನು ಕೆಂಪು ಮಾಡುತ್ತವೆ. “ಅಆ’ – ಅಶುದ್ಧ ತಾಮ್ರ ಘಟಕವನ್ನು ಆ್ಯನೋಡ್‌ಗೆ ಜೋಡಿಸಿ.

ಪಠ್ಯವನ್ನು ಪುನಃ ಓದಲು ತೊಡಗಿದಾಗ ಕ್ಲಿಷ್ಟವೆನಿಸಿದರೆ ಇಂತಹ ತಂತ್ರಗಳನ್ನು ರಚನೆ ಮಾಡಿ ಬರೆದುಕೊಂಡಿರಿ. ಪರೀಕ್ಷಾ ಸಮಯದಲ್ಲಿ ಒಮ್ಮೆ ನೋಡಿದರೆ ಉತ್ತರಗಳು ನೆನಪಿಗೆ ಬರುತ್ತವೆ.

– ವಿದ್ಯುಚ್ಛಕ್ತಿ – ಬೆಳಕು ಪ್ರತಿಫ‌ಲನ ಮತ್ತು ವಕ್ರೀಭವನ (Electricity, Light – Reflection and Refraction) ಅಧ್ಯಾಯಗಳಲ್ಲಿ ಕೆಲವು ಸೂತ್ರಗಳಿವೆ. ಅವುಗಳನ್ನು ಒಂದೆಡೆ ಪಟ್ಟಿ ಮಾಡಿಡಿ. ಆ ಸಂಕೇತಾಕ್ಷರಗಳು ಏನನ್ನು ಪ್ರತಿನಿಧಿಸುತ್ತವೆ ಎಂಬುದನ್ನು ಪದೇಪದೇ ನೆನಪು ಮಾಡಿಕೊಳ್ಳಿ. ಇದು ಗಣಿತದ ಸಮಸ್ಯೆಗಳನ್ನು ಬಿಡಿಸಲು ನೆರವಾಗುತ್ತದೆ.

– ಹೋಲಿಕೆ ಮತ್ತು ವ್ಯತ್ಯಾಸಗಳ ಮೂಲಕ ಅಧ್ಯಯನ ಮಾಡುವುದು ವಿಜ್ಞಾನಕ್ಕೆ ಹೆಚ್ಚು ಸೂಕ್ತ ಮತ್ತು ಇದರಿಂದ ಸುಲಭವಾಗಿ ನೆನಪಿನಲ್ಲುಳಿಯುತ್ತದೆ.

ಉದಾ: ರಾಸಾಯನಿಕ ಸಂಯೋಗ (Chemical Reaction) ಎಂದರೇನು?
ಉದಾಹರಣೆ ಕೊಡಿ: ಈ ಪ್ರಶ್ನೆಗೆ ಉತ್ತರವನ್ನು ನೇರವಾಗಿ ಕಲಿತುಕೊಳ್ಳುವ ಬದಲು ರಾಸಾಯನಿಕ ಸಂಯೋಗ ಮತ್ತು ವಿಭಜನೆಗಳ ನಡುವಿನ ವ್ಯತ್ಯಾಸ ಕಲಿತುಕೊಳ್ಳಿ. ಇದರಿಂದ ವ್ಯಾಖ್ಯೆ – ಉದಾಹರಣೆ – ವ್ಯತ್ಯಾಸ ಹೀಗೆ ಬೇರೆ ಬೇರೆ ಆಯಾಮಗಳ ಪ್ರಶ್ನೆಗಳನ್ನು ಒಮ್ಮೆಲೆ ಉತ್ತರಿಸುವ ಸಾಮರ್ಥ್ಯ ಬೆಳೆಸಿಕೊಳ್ಳುವಿರಿ.

– ಹೊಸದಾಗಿ ಉನ್ನತ ಮಟ್ಟದ ಆಲೋಚನ ಕೌಶಲದ 4 ಅಂಕದ ಪ್ರಶ್ನೆಗಳು ಸೇರ್ಪಡೆಯಾಗಿವೆ. ಪಠ್ಯವಸ್ತುವಿನಲ್ಲಿರುವ ಚಟುವಟಿಕೆ – ಪ್ರಯೋಗಗಳು, ಇತರ ಚಿತ್ರಗಳು – ಅಂಕಿಅಂಶಗಳತ್ತ ಸ್ವಲ್ಪ ಗಮನಹರಿಸಿ. ಈ ಪ್ರಶ್ನೆಗಳು ಅಂಕಿಅಂಶಗಳ ಆಧಾರಿತ ಅಥವಾ ಚಿತ್ರಾಧಾರಿತವಾಗಿರಬಹುದು. ಪ್ರಯೋಗಗಳ ವೀಕ್ಷಣೆಗಳ ಆಧಾರದ ಮೇಲೆ ಫ‌ಲಿತಾಂಶವನ್ನು ನಿರ್ಣಯಿಸುವ ರೂಪದಲ್ಲಿರಬಹುದು, ಗ್ರಾಫ್ ಆಧಾರಿತವಾಗಿರಬಹುದು. ಹಳೆಯ ಅಥವಾ ಮಾದರಿ ಪ್ರಶ್ನೆಪತ್ರಿಕೆಗಳಲ್ಲಿ ಇರುವ ಅಂತಹ ಪ್ರಶ್ನೆಗಳನ್ನು ಗಮನಿಸಿಕೊಳ್ಳಿ.

– 5 ಅಂಕದ 1 ಪ್ರಶ್ನೆ, ಈ ವರ್ಷದ ಇನ್ನೊಂದು ಬದಲಾವಣೆ. ಅದು ಭೌತಶಾಸ್ತ್ರ, ರಸಾಯನ ಶಾಸ್ತ್ರ ಅಥವಾ ಜೀವಶಾಸ್ತ್ರದ ಮೇಲಿರಬಹುದು. ಅಂತಹ ಅಧ್ಯಾಯಗಳು ಯಾವುದಿವೆ ಎಂದು ಗುರುತು ಮಾಡಿಕೊಂಡು, ಪ್ರಶ್ನಿಸಬಹುದಾದ ಪಠ್ಯ ಭಾಗಗಳನ್ನು ಪುನರಾವರ್ತನೆ ಮಾಡಿ. ನಮ್ಮ ಪರಿಸರ – ಶಕ್ತಿಯ ಆಕರಗಳು – ಧಾತುಗಳ ಆವರ್ತನೀಯ ವರ್ಗೀಕರಣ – ನೈಸರ್ಗಿಕ ಸಂಪನ್ಮೂಲಗಳು (Our Environment, Sources of Energy, Periodic Classification of Elements, Sustainable Management of Natural Resources)ಇಂತಹ ಚಿಕ್ಕ – ಚಿಕ್ಕ ಅಧ್ಯಾಯಗಳಿಂದ 5 ಅಂಕದ ಪ್ರಶ್ನೆಗಳನ್ನು ನಿರೀಕ್ಷಿಸಬೇಡಿ.

– ವೈಜ್ಞಾನಿಕ ಕಾರಣ ನೀಡುವುದು, ಉಪಯೋಗ ಪಟ್ಟಿ ಮಾಡುವುದು, ನಿಯಮಗಳನ್ನು ನಿರೂಪಿಸುವುದು, ವ್ಯತ್ಯಾಸ ತಿಳಿಸುವುದು, ಮೊದಲಾದ ವಿವಿಧ ಪ್ರಶ್ನೆಗಳನ್ನು ಪ್ರತ್ಯೇಕವಾಗಿ ಪಟ್ಟಿ ಮಾಡಿಟ್ಟಿರಿ. ಪುನರ್‌ಮನನಕ್ಕೆ ಸಹಾಯವಾಗುತ್ತದೆ.

– ಹಳೆಯ ಪ್ರಶ್ನೆಪತ್ರಿಕೆಗಳು- ಮಾದರಿ ಪ್ರಶ್ನೆಪತ್ರಿಕೆಗಳನ್ನು ಸಾಧ್ಯವಾದಷ್ಟು ಹೆಚ್ಚು ಬಿಡಿಸಿ. ಇದರಿಂದ ಒಂದೇ ಕಲಿಕಾಂಶದ ಮೇಲೆ ಬೇರೆ ಬೇರೆ ಮಾದರಿಯ ಪ್ರಶ್ನೆಗಳನ್ನು ನೋಡುವಿರಿ. ಪ್ರಶ್ನೆಪತ್ರಿಕೆಯನ್ನು ಅರ್ಥ ಮಾಡಿಕೊಳ್ಳಲು ಇದು ಹೆಚ್ಚು ಸಹಾಯಕವಾಗುತ್ತದೆ.

– ಅರ್ಥೈಸಿಕೊಂಡು ಓದಿ (ಅರ್ಥಗ್ರಹಣ), ಓದಿದ್ದನ್ನು ನೆನಪಿಗೆ ತಂದುಕೊಳ್ಳಿ (ಸ್ಮರಣ), ಓದಿದ ವಿಷಯ ಗಳು ಮನಸ್ಸಿನಲ್ಲಿ ಮೂಡಲಿ (ಚಿತ್ರಣ), ಪಠ್ಯದ ಸಾರಾಂಶವನ್ನು ನಿಮ್ಮದೇ ವಾಕ್ಯ ಗಳಲ್ಲಿ ಬರೆಯಲು ಪ್ರಯತ್ನಿಸಿ (ಚಿಂತನ), ಪರೀಕ್ಷೆ ಹತ್ತಿರವಾದಾಗ ಬರೆದುಕೊಂಡ -ಚಿತ್ರಿಸಿಕೊಂಡ ಅಂಶಗಳನ್ನು ಪುನಃ ನೆನಪಿಗೆ ತಂದುಕೊಳ್ಳಿ (ಪುನರಾವರ್ತನ).

 ಕೃಷ್ಣಮೂರ್ತಿ, ವಿಜ್ಞಾನ ಶಿಕ್ಷಕರು, ಉಡುಪಿ

ಟಾಪ್ ನ್ಯೂಸ್

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

9-udupi

ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Bhuvanam gaganam Teaser: ಭುವನಂ ಗಗನಂ ಟೀಸರ್‌ ಬಂತು

Bhuvanam gaganam Teaser: ಭುವನಂ ಗಗನಂ ಟೀಸರ್‌ ಬಂತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.