ಮಾರುಕಟ್ಟೆಗೆ ಲಗ್ಗೆ ಇಟ್ಟ ಆಂಧ್ರದ ಮಾವು
Team Udayavani, Mar 6, 2017, 5:55 PM IST
ಬಜಪೆ: ಜಿಲ್ಲೆಯಲ್ಲಿ ಮಾವಿನ ಮಿಡಿಗಳೇ ಕಾಣಸಿಗುತ್ತಿದ್ದು, ಹಣ್ಣಾಗಲು ಇನ್ನೂ ಕೆಲಕಾಲ ಕಾಯಬೇಕಾಗಿದೆ. ಅದರೆ ಮಾರುಕಟ್ಟೆಗೆ ಈಗಾಗಲೇ ಆಂಧ್ರದ ಮಾವಿನ ಹಣ್ಣು ಲಗ್ಗೆಯಿಟ್ಟಿದ್ದು, ಸಖತ್ ಮಾರಾಟವೂ ಆಗುತ್ತಿದೆ. ಮಾವಿನ ಹಣ್ಣಿನ ರುಚಿ ನೋಡುವ ತವಕದಲ್ಲಿ ಗ್ರಾಹಕರು ದರದ ಬಗ್ಗೆ ಚಿಂತಿಸುತ್ತಿಲ್ಲ, ಸಿಹಿ ಹಾಗೂ ತಾಜಾ ಇದ್ದರೆ ಸಾಕು ಎಂದು ಖರೀದಿಸುತ್ತಿದ್ದಾರೆ. ಜನವರಿಯಲ್ಲಿ ಕೇರಳದ ಬಾದಾಮಿ, ನೀಲಂ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಬಂದಿದ್ದವು. ತಮಿಳುನಾಡಿನಿಂದ ತೋತಾಪುರಿ, ಮಲಗೋವಾ ಮಾವು ಸದ್ಯ ಮಾರುಕಟ್ಟೆಯಲ್ಲಿದೆ. ಈಗ ಆಂಧ್ರದಿಂದ ತೋತಾಪುರಿ, ಬಾದಾಮಿ ಹಾಗೂ ಬೆಂಗಾನ್ಪಲ್ಲಿ ಮಾರುಕಟ್ಟೆಗೆ ಬಂದಿದೆ. ಈಗಾಗಲೇ ಮಾರುಕಟ್ಟೆಗೆ ಆಂಧ್ರದಿಂದ ಬಂದ ಮಾವಿನ ಹಣ್ಣಿನ ದರ ಅಷ್ಟೇನು ಹೆಚ್ಚಾಗಿಲ್ಲ. ಕೆ.ಜಿ.ಗೆ 50ರಿಂದ 80 ರೂ.ವರೆಗೆ ಇದೆ. ಆಗಸ್ಟ್ವರೆಗೆ ಆಂಧ್ರದ ಮಾವಿನ ಹಣ್ಣು ಮಾರುಕಟ್ಟೆಗೆ ಲಭ್ಯವಿರುತ್ತದೆ. ಜಿಲ್ಲೆಯಲ್ಲಿ ಈ ಬಾರಿ ಮಾವಿನ ಹಣ್ಣು ಕಡಿಮೆ,ಇನ್ನೂ ಒಂದು ತಿಂಗಳು ಕಾಯಬೇಕು. ಊರಿನಲ್ಲಿ ಈಗ ಹೆಚ್ಚಾಗಿ ಮಾವಿನ ಮಿಡಿಗಳು ಮಾತ್ರ ಕಾಣಿಸುತ್ತಿವೆ. ಇದರ ದರವೂ ಕೆ.ಜಿ.ಗೆ 125ರಿಂದ 150 ರೂ.
ಜಿಲ್ಲೆಯಲ್ಲಿ ಹವಾಮಾನ ಬದಲಾವಣೆಯು ಮಾವು ಕೃಷಿಯ ಮೇಲೆ ಪರಿಣಾಮ ಬೀರುತ್ತಿದೆ. ಬೆಳ್ಳಾರಿ, ಕದ್ರಿ, ಕಾಟು ಮಾವಿನ ಹಣ್ಣುಗಳು ಮಾತ್ರ ಈಗ ಲಭ್ಯವಿದ್ದು, ಮಾವಿನ ಮರಗಳೂ ಕಡಿಮೆಯಾಗುತ್ತಿವೆ. ಗುಡ್ಡದಲ್ಲಿರುವ ಬೃಹತ್ ಮರಗಳು, ಅಸಮರ್ಪಕ ರಸ್ತೆ, ಮಾವಿನ ಹಣ್ಣು ಕೊಯ್ಯುವವರಿಲ್ಲದೆ ಇದರ ಸಾಗಾಟ ವೆಚ್ಚವೇ ಕೆ.ಜಿ.ಗೆ 15 ರೂ. ಆಗುತ್ತದೆ. ಆಂಧ್ರದಲ್ಲಿ ಹೆಚ್ಚಾಗಿ ಕಸಿ ಹಾಗೂ ಗಿಡ್ಡ ತಳಿಯ ಮಾವಿನ ಮರಗಳಿರುವುದರಿಂದ ಹಣ್ಣು ಕೊಯ್ಯುಲು ಸುಲಭ. ಆಂಧ್ರ, ತಮಿಳುನಾಡು, ಕೇರಳ ಮಾವಿನ ಹಣ್ಣು ಇಲ್ಲಿನ ಮಾರುಕಟ್ಟೆಯಲ್ಲಿ ವರ್ಷವಿಡೀ ಸಿಗುತ್ತದೆ. ಸ್ಥಳೀಯ ಮಾವಿನ ಹಣ್ಣಿನ ದರಕ್ಕಿಂತ ಕಡಿಮೆ ದರದಲ್ಲಿ ಸಿಗುತ್ತದೆ. ಇಲ್ಲಿನ ಮಾವಿನ ಹಣ್ಣಿಗೆ ಈಗ ಕೆ.ಜಿ.ಗೆ ಸುಮಾರು 100 ರೂ. ಗಿಂತ ಜಾಸ್ತಿ ಬೆಲೆ ಇದೆ ಎನ್ನುತ್ತಾರೆ ಬಜಪೆ ಮಾರುಕಟ್ಟೆಯಲ್ಲಿ ಸುಮಾರು 40 ವರ್ಷಗಳಿಂದ ಹಣ್ಣುಗಳ ವ್ಯಾಪಾರ ಮಾಡುತ್ತಿರುವ ಇಸ್ಮಾಯಿಲ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’
Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್ ಹೆಗ್ಡೆ
Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ
Subramanya ಏನೆಕಲ್ಲು: ಕಾರಿಗೆ ಗೂಡ್ಸ್ ಆಟೋ ಢಿಕ್ಕಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ