ಹತ್ತು ದಿನ ಕಳೆದರೆ ಕುಡಿಯುವ ನೀರಿಗೆ ಹರಸಾಹಸ ಅನಿವಾರ್ಯ!


Team Udayavani, Mar 15, 2017, 12:17 AM IST

Maravoor-Dam-600.jpg

ಬಜಪೆ: ಮಳವೂರು, ಬಜಪೆ, ಪೆರ್ಮುದೆ ಮತ್ತು ಎಕ್ಕಾರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಪ್ರದೇಶಗಳಲ್ಲಿ ಹತ್ತು ದಿನಗಳೊಳಗೆ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಲಿದೆ. ಈ ಮಧ್ಯೆ ಕಾಮಗಾರಿ ಮುಗಿದಿರುವ ವೆಂಟೆಡ್‌ ಡ್ಯಾಂ ಉದ್ಘಾಟನೆಗೆ ಸಚಿವರು ಪುರುಸೊತ್ತು ಮಾಡಿಕೊಂಡು ಬಂದರೆ ಈ ಗ್ರಾ.ಪಂ.ಗಳ ನೀರಿನ ಕೊರತೆ ಸ್ವಲ್ಪ ದಿನಗಳಿಗಾದರೂ ಕರಗಲಿದೆ. ಈ ಗ್ರಾಮ ಪಂಚಾಯತ್‌ಗಳು ಮಳವೂರು ವೆಂಟೆಡ್‌ ಡ್ಯಾಂನ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಸೌಲಭ್ಯ ಸಿಗುತ್ತದೆಂದು ಕಾದು ಕುಳಿತಿವೆ. ಇದರ ಉದ್ಘಾಟನೆ ಮುಂದೂಡುತ್ತಿರುವುದೇ ಸಮಸ್ಯೆಗೆ ಕಾರಣವಾಗಿದೆ. ನೀರಿನ ಸಮಸ್ಯೆ ಶೀಘ್ರ ಪರಿಹಾರಕ್ಕಾಗಿ ಟ್ಯಾಂಕರ್‌ಗಳಿಂದ ನೀರು ಸರಬರಾಜು ಮಾಡಬೇಕಾದ ಅನಿವಾರ್ಯ ಗ್ರಾ.ಪಂ.ಗಳದ್ದು. ಕುಡಿಯುವ ನೀರಿಗೆ ಕೊಳವೆ ಬಾವಿಯನ್ನೇ ಅವಲಂಬಿಸಿರುವ ಈ ಗ್ರಾಮ ಪಂಚಾಯತ್‌ಗಳಿಗೆ ಜಲಕ್ಷಾಮ ತಟ್ಟುವ ಭೀತಿ ಇದೆ. ಈಗಾಗಲೇ ಕೆಲವು ಕೊಳವೆ ಬಾವಿಗಳು ಬತ್ತಿ ಹೋಗಿದ್ದು, ಇನ್ನೂ ಕೆಲವೆಡೆ ನೀರಿನ ಹರಿವು ಕುಸಿತ ಕಂಡಿದೆ.

ಎಲ್ಲೆಲ್ಲಿ ಸಮಸ್ಯೆ?
ಮಳವೂರು 

ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಕೆಂಜಾರು ಗ್ರಾಮದ ತತ್ತಾಡಿ, ಮರವೂರು ಗ್ರಾಮದ ಸಿದ್ಧಾರ್ಥ ನಗರ, ಗುಂಡಾವು ಪದವು, ಶಾಂತಿಗುಡ್ಡೆ, ಪಾಂಚಕೋಡಿಯಲ್ಲಿ ಈಗಾಗಲೇ ಸಮಸ್ಯೆ ಆರಂಭವಾಗಿದೆ. ಕೊಳವೆ ಬಾವಿಗಳ ಅಂತರ್ಜಲ ಮಟ್ಟ ಕುಸಿತದಿಂದ ಈ ಸಮಸ್ಯೆ ತಲೆದೋರಿದೆ. ಟ್ಯಾಂಕರ್‌ನಿಂದಲೇ ನೀರು ನೀಡಬೇಕಾದ ಸ್ಥಿತಿ ಇದೆ. 

ಬಜಪೆ
ಇಲ್ಲಿ ಒಂದನೇ ವಾರ್ಡ್‌ ಮತ್ತು ಮೂರನೇ ವಾರ್ಡ್‌ ಪ್ರದೇಶದಲ್ಲಿ ನೀರಿನ ಸಮಸ್ಯೆ ಇದೆ. ಒಂದನೇ ವಾರ್ಡ್‌ನಲ್ಲಿ ಸ್ವಾಮಿಲಪದವು, ದೊಡ್ಡಿಕಟ್ಟ,ಅಡ್ಕಬಾರೆ, ಮೂರನೇ ವಾರ್ಡ್‌ನಲ್ಲಿ ಬಜಪೆ ಪೇಟೆ ಪ್ರದೇಶ, ಕಲ್ಲಜರಿಯಲ್ಲಿ  ಕುಡಿಯುವ ನೀರಿನ ಸಮಸ್ಯೆ ಕಾಡಲಿದೆ. ಹದಿನೈದು ದಿನಗಳೊಳಗೆ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಲಿದೆ. ಈ ಬಾರಿ ಹೊಸ ಕೊಳವೆಬಾವಿಯಿಂದ ಇಂಟರ್‌ ಲಿಂಕ್‌ ಮಾಡಿ ನೀರು ಪೂರೈಸಲಾಗುತ್ತಿದೆ. ಸಾರ್ವಜನಿಕರು ನೀರಿನ ಸದ್ಬಳಕೆ ಮಾಡಿದರೆ ಒಂದು ತಿಂಗಳು ಪರವಾಗಿಲ್ಲ. 

ಪೆರ್ಮುದೆ 
ಪಂಚಾಯತ್‌ ಸಮೀಪದ  ಕೊಳವೆ ಬಾವಿ ಬತ್ತಿದೆ. ಈಗಾಗಲೇ ನೀರಿನ ಸಮಸ್ಯೆ ಉಂಟಾಗಿದ್ದು, ಸುಮಾರು 80 ಮನೆಗಳು ಈ ವ್ಯಾಪ್ತಿಯಲ್ಲಿ ಇವೆ. ಕುತ್ತೆತ್ತೂರು ಗ್ರಾಮದ ಮೂಡುಪದವು ಮೆಣಸುಕಾಡಿನ ಕೊಳವೆ ಬಾವಿ ಬತ್ತಿದೆ.ಒಂದೇ ಕೊಳವೆ ಬಾವಿಯಿಂದ ಸುಮಾರು 180  ಮನೆಗಳಿಗೆ ನೀರು ಪೂರೈಸಲಾಗುತ್ತಿದೆ. ಈಗಾಗಲೇ ಕೊಳವೆ ಬಾವಿಯ ಅಂತರ್ಜಲ ಮಟ್ಟ ಕುಸಿದಿದೆ.

ಎಕ್ಕಾರು 
ತೆಂಕ ಎಕ್ಕಾರು ಗ್ರಾಮದ ರೋಯಲ್‌ ಬಸ್‌ ನಿಲ್ದಾಣ, ಹುಣ್ಸೆಕಟ್ಟೆ, ಕಾವರಬೆಟ್ಟು, ಪಲ್ಲದ ಕೋಡಿ, ಬಡಗ ಎಕ್ಕಾರು ಗ್ರಾಮದ ಬುಡುಗಾಡು,ಮೇಲೆಕ್ಕಾರು, ಮಚ್ಚಾರು ಪ್ರದೇಶದಲ್ಲಿ ಈಗಾಗಲೇ ನೀರಿನ ಅಭಾವ ಕಂಡು ಬಂದಿದೆ. 2 ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಬುಡಿಗಾಡು ಪ್ರದೇಶಕ್ಕೆ ವಾರದೊಳಗೆ ಹೊಸ ಕೊಳವೆಬಾವಿ ಕೊರೆದು ನೀರು ನೀಡಲಾಗುವುದು. ಇನ್ನೂ ಮಳವೂರು ವೆಂಟೆಡ್‌ ಡ್ಯಾಂ ನೀರು ಬರದಿದ್ದರೆ ತಿಂಗಳೊಳಗೆ ನೀರಿನ ಕಠಿನ ಸಮಸ್ಯೆ ಬರಲಿದೆ.

ಮಳವೂರು ವೆಂಟೆಡ್‌ ಡ್ಯಾಂ ಕಾಮಗಾರಿ ಪೂರ್ಣಬಹುಗ್ರಾಮ ನೀರಿನ ಯೋಜನೆಯಾದ ಮಳವೂರು ವೆಂಟೆಡ್‌ ಡ್ಯಾಂನ ಕಾಮಗಾರಿ ಬಹುತೇಕ ಮುಗಿದಿದ್ದು, ಉದ್ಘಾಟನೆಗೆ ಸಚಿವರನ್ನು ಕಾಯಲಾಗುತ್ತಿದೆ. ಈಗಾಗಲೇ ಹಲವು ಬಾರಿ ಮುಂದೂಡಲಾಗಿದೆ. ಉದ್ಘಾಟನೆಗೆ ಇನ್ನೂ ದಿನ ಮುಂದೂಡಿದರೆ ನೀರಿನ ಸಮಸ್ಯೆ ಬರುವುದು ಗ್ರಾ.ಪಂ.ನ ಜನರಿಗೆ. ಈ ನಾಲ್ಕು ಗ್ರಾ.ಪಂ.ಗಳು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಬರುವಂಥವು.

ಟಾಪ್ ನ್ಯೂಸ್

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Ireland postponed Aussie series

Dublin; ಆಸೀಸ್‌ ಸರಣಿ ಮುಂದೂಡಿದ ಐರ್ಲೆಂಡ್‌

“Will not play T20 World Cup for West Indies”: Sunil Narine

T20 Cricket: “ವಿಂಡೀಸ್‌ ಪರ ಟಿ20 ವಿಶ್ವಕಪ್‌ ಆಡಲ್ಲ’: ಸುನೀಲ್‌ ನಾರಾಯಣ್‌ ಸ್ಪಷ್ಟ ನುಡಿ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

Shotgun

Shotgun ಶೂಟಿಂಗ್‌ ಅರ್ಹತಾ ಸುತ್ತಿನಲ್ಲಿ ಕರಣ್‌: ವಿವಾದ

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.