ನೋವಿನಲ್ಲಿ ಜತೆಯಾದ ಗೆಳತಿಗೆ ಧನ್ಯವಾದ


Team Udayavani, Jun 17, 2019, 5:41 AM IST

novu

ಜೀವನದಲ್ಲಿ ಬರುವ ದುಃಖ ಆ ಕ್ಷಣಕ್ಕೆ ದೊಡ್ಡದೆನಿಸುತ್ತದೆ. ಅದಕ್ಕಿಂತ ದೊಡ್ಡ ನೋವು ಇನ್ನೊಂದಿಲ್ಲ ಎನಿಸಿಬಿಡುತ್ತದೆ. ಆದರೆ ಸಮಯ ಸರಿದಂತೆ ಅವು ಕ್ಷುಲ್ಲಕವೆನಿಸುತ್ತವೆ. ಆ ಕಷ್ಟ ನೋವು ನಂತರ ದೊಡ್ಡದಲ್ಲವೆನಿಸಿದರೂ ಆ ಸಮಯದಲ್ಲಿ ನಮ್ಮೊಂದಿಗಿದ್ದು ನಮ್ಮ ನೋವಲ್ಲಿ ಒಬ್ಬರಾಗುವುದು ಖಂಡಿತಾ ಸಣ್ಣ ವಿಷಯವಲ್ಲ. ಆದರೆ ಆ ಸಮಯದಲ್ಲಿ ನಮ್ಮ ಮುಖದಲ್ಲಿ ನಗು ತರಲು ಪ್ರಯತ್ನಿಸುವ ಜೀವವೊಂದಕ್ಕೆ ಧನ್ಯವಾದ ಸಲ್ಲಿಸದಷ್ಟು ಕ್ರೂರಿಯಾಗಿಬಿಡುತ್ತೇವೆ ಒಮ್ಮೊಮ್ಮೆ…

ಮುಃಖದಲ್ಲಿದ್ದಾಗ ಮೌನ ನಮ್ಮನ್ನು ಆವರಿಸುತ್ತದೆ. ಮಾತು ಮರೆತು ಹೋಗುತ್ತವೆೆ. ಹೇಳಬೇಕಾದ ಎಷ್ಟೋ ಮಾತುಗಳು ನಮ್ಮಲ್ಲೇ ಉಳಿದು ಹೋಗುತ್ತವೆ. ಸಮಯ ಕಳೆದಂತೆ, ದುಃಖ ಕಳೆದು ಖುಷಿಯಲ್ಲಿರುವಾಗ ಮತ್ತೆ ನೋವನ್ನು ನೆನಪಿಸಲಿಷ್ಟವಿಲ್ಲದೆ ಹೇಳಬೇಕಾದ ಮಾತುಗಳು ಮತ್ತೆ ಉಳಿದುಹೋಗುತ್ತವೆೆ.

ಅದು ಪಿಯುಸಿಯಲ್ಲಿದ್ದಾಗ ನಡೆದ ಘಟನೆ. ನಮ್ಮೂರಿನಿಂದ ದೂರದಲ್ಲಿರುವ ಕಾಲೇಜಿಗೆ ಸೇರಿಕೊಂಡ ನನಗೆ ಅಲ್ಲಿದ್ದವರೆಲ್ಲಾ ಅಪರಿಚಿತರು. ಹಳ್ಳಿಯಿಂದ ಬಂದ ನನಗೆ ಅದು ಹೊಸ ವಾತಾವರಣ. ಒಂದಿಷ್ಟು ಅಳಕು ಭಯದೊಂದಿಗೆ ಕಾಲೇಜಿಗೆ ಹೋದ ನನಗೆ ಒಂದೇ ದಿನದಲ್ಲಿ ಇಡೀ ತರಗತಿ ಪರಿಚಿತವಾಗುವಂತೆ ಮಾಡಿದ್ದು ಒಂದು ಹುಡುಗಿ. ನನಗೆ ಆಕೆಯ ಬಗ್ಗೆ ಗೊತ್ತಿದ್ದ‌ದ್ದೂ ಬರೀ ಅಷ್ಟೇ. ಕಾಲೇಜು ಸೇರಿ ದಿನಗಳೂ ಮೆಲ್ಲನೆ ಸರಿಯುತ್ತಿತ್ತು. ಪರೀಕ್ಷೆಯೂ ಬಂತು. ಬರೀ ಮುಗುಳುನಗೆಯೊಂದಿಗೆ ನನ್ನ ಆಕೆಯ ಮಾತು ಮುಗಿಯುತ್ತಿತ್ತು.

ಎಸೆಸೆಲ್ಸಿವರೆಗೆ ಉತ್ತಮ ಅಂಕ ಗಳಿಸುತ್ತಿದ್ದ ನನಗೆ ಪಿಯುಸಿಯ ಮೊದಲ
ಪರೀಕ್ಷೆಯಲ್ಲಿಯೇ ಫೇಲ್‌ ಎಂದಾಗ ಕಣ್ಣು ತೇವವಾಯಿತು. ನನ್ನ ಪಕ್ಕದಲ್ಲೇ ಕುಳಿತಿದ್ದ ಆ ಹುಡುಗಿ ನನ್ನ ನೋವನ್ನು ಅರಿತು ದಿನವಿಡೀ ನನ್ನನ್ನು ಮಾತಿಗೆಳೆಯುತ್ತಿದ್ದಳು. ಮುಂದಿನ ಪರೀಕ್ಷೆಯಲ್ಲಿ ಆಕೆಯ ಮಾತುಗಳನ್ನು ಗಂಭೀರವಾಗಿ ತೆಗೆದುಕೊಂಡ ನಾನು ಉತ್ತಮ ಅಂಕ ಪಡೆದು ತರಗತಿಗೆ ಮೊದಲನೆಯವಳಾದೆ. ನನ್ನ ಕ್ಷಣಿಕ ನೋವಿಗೆ ಸ್ಪಂದಿಸಿದ ಆ ಮುಗಳುನಗೆಯ ಹುಡುಗಿ ನನ್ನ ಆತ್ಮೀಯ ಗೆಳತಿಯಾದಳು.

ಕಾಲೇಜಿನ ಇಡೀ ಎರಡು ವರ್ಷಗಳಲ್ಲಿ ನನ್ನ ಜತೆಗಿದ್ದು, ನನ್ನ ನೊವು ನಲಿವಿಗೆ ಜತೆಯಾದ ನನ್ನ ಗೆಳತಿಗೆ ಧನ್ಯವಾದ.. ಮತ್ತು ಈಗ ಮೊದಲಿನಷ್ಟು ಮಾತಿಗೆ ಸಿಗದೆ, ನನ್ನದೇ ಲೋಕದಲ್ಲಿದ್ದೇನೆ ಎಂಬ ಭಾವನೆ ನಿನ್ನಲ್ಲಿ ಮೂಡಿಸುವಷ್ಟು ಬ್ಯುಸಿಯಾಗಿದ್ದಾಗಿ ಕ್ಷಮೆಯಿರಲಿ..

-  ರಂಜಿನಿ ಎಂ.

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.