ಆ ಮಗುವಿನ ಮುಖ ಕಲಿಸಿದ ಪಾಠ


Team Udayavani, Feb 17, 2020, 5:42 AM IST

kashi2

ಕಾಶಿಯನ್ನು ನೋಡಬೇಕೆಂದು ನಮ್ಮೆಲ್ಲ ಕುಟುಂಬದೊಂದಿಗೆ ತೆರಳಿದ್ದೆವು. ಅಲ್ಲಿ ಗಂಗಾ ನದಿಯನ್ನು ಕಂಡು ಖುಷಿಯಾಯಿತು. ಸಂಜೆ ಗಂಗಾವಿಹಾರ ಮುಗಿಸಿ ಮತ್ತೂಮ್ಮೆ ಕಾಶಿ ವಿಶ್ವನಾಥನನ್ನು ನೋಡಬೇಕೆನಿಸಿತು. ಅದಕ್ಕೆಂದು ಸಾಲಿನಲ್ಲಿ ನಿಂತುಕೊಂಡೆವು. ಸುಮಾರು ಅರ್ಧ ಕಿ.ಮೀ. ನಷ್ಟು ಸಾಲಿತ್ತು.

ಪರಪಟ್ಟಣ, ಪರ ಭಾಷೆ. ನಾವು ಸುಮ್ಮನೆ ನಮ್ಮಷ್ಟಕ್ಕೇ ಮಾತನಾಡಿಕೊಳ್ಳುತ್ತಿದ್ದೆವು. ಬಹಳ ನಿಧಾನವಾಗಿ ಸಾಲು ಕರಗುತ್ತಿತ್ತು. ಒಂದು ಮಗುವನ್ನು ಹಿಡಿದುಕೊಂಡ ತಾಯಿ ನಮ್ಮಲ್ಲಿಗೆ ಬಂದು ಅವಳ ಹಿಂದಿ ಭಾಷೆಯಲ್ಲಿ ಏನನ್ನೋ ಕೇಳಿದಳು. ನನಗೆ ಅರ್ಥವಾಗಲಿಲ್ಲ, ನಮ್ಮ ಯಜಮಾನರು ಏನನ್ನೋ ಹೇಳಿ ಕಳುಹಿಸಿದರು.

ಸ್ವಲ್ಪ ಸಮಯವಾದ ಬಳಿಕ ನಾನು ಕುತೂಹಲದಿಂದ ಆ ಹೆಂಗಸಿಗೆ ಏನಾಗಬೇಕಿತ್ತು ? ಎಂದು ಕೇಳಿದೆ. ಅದಕ್ಕೆ ಅವರು, ಏನಿಲ್ಲ, ಊಟ ಮಾಡಲಿಲ್ಲವಂತೆ. ಅದಕ್ಕೇ ದುಡ್ಡು ಬೇಕಂತೆ ಎಂದರು. ನನಗೆ ಬಾಯಿ ತಪ್ಪಿ, ಹತ್ತು ರೂ. ಕೊಟ್ಟು ಬಿಡಬೇಕಿತ್ತು ಎಂದೆ. ಅಂಥವರು ನೂರು ಮಂದಿ ಇರ್ತಾರೆ, ಹಾಗೆಲ್ಲಾ ಕೊಡೋಕೆ ಆಗುತ್ತಾ ? ಅದರಲ್ಲೂ ಅವರದ್ದು ನಾಟಕ. ಹಣವನ್ನೆಲ್ಲಾ ಕುಡಿಯೋಕೆ ಹಾಕ್ತಾರೆ ಎಂದರು. ಮರು ಮಾತನಾಡಲಿಲ್ಲ, ದೇವರ ದರ್ಶನ ಮುಗಿಸಿ ಬಂದೆವು. ಆ ಸಮಯದಲ್ಲಿ ಹತ್ತಿರದ ಹೊಟೇಲೊಂದರ ಬಾಗಿಲಲ್ಲಿ ಈ ಅಮ್ಮ-ಮಗು ಕುಳಿತಿದ್ದರು. ಮಗುವಿಗೆ ಅಮ್ಮ ತಿಂಡಿ ತಿನ್ನಿಸುತ್ತಿದ್ದಳು. ಕೂಡಲೇ, ನಮ್ಮವರಲ್ಲಿ “ನೋಡಿ, ಆ ಮಗು-ಅಮ್ಮ’ಎಂದು ತೋರಿಸಿದೆ. ಅವರು ನೋಡಿಯೂ ನೋಡದವರಂತೆ, ಬಾ ಬೇಗ, ಬಸ್ಸು ಹೊರಡುತ್ತೆ ಎಂದು ಕರೆದೊಯ್ದರು. ನಾವು ಉಳಿದುಕೊಂಡು ಬಂದ ಕೋಣೆಗೆ ಬಂದರೂ ಆ ಮಗುವಿನ ಮುಖ ಮಾಯವಾಗಲಿಲ್ಲ.

ಅಂದಿನಿಂದ ನಾನು ಯಾವುದೇ ಊರಿಗೆ ಹೋದರೂ, ಯಾರಾದರೂ ತಿಂಡಿ, ಊಟದ ಬಗ್ಗೆ ಕೇಳಿದರೆ ಇಲ್ಲ ಎನ್ನುವುದಿಲ್ಲ. ಹಣ ಕೊಡುವುದಿಲ್ಲ, ಅವರಿಗೆ ಬೇಕಾದ ತಿಂಡಿ ಕೊಡಿಸುತ್ತೇನೆ. ನಿಜಕ್ಕೂ, ಒಂದು ತೀರ್ಥಕ್ಷೇತ್ರದಲ್ಲಿ ಕಲಿತ ಜೀವನದ ಪಾಠವೆಂದೇ ಸ್ವೀಕರಿಸಿದ್ದೇನೆ.

-  ಜಾನಕಿ, ಸಾಲಿಗ್ರಾಮ

ಟಾಪ್ ನ್ಯೂಸ್

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

11

ಆಲೆಟ್ಟಿ: ಅರಣ್ಯಕ್ಕೆ ತಗುಲಿದ ಬೆಂಕಿ

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

death

Kollegala: ಕಾಡಾನೆ ದಾಳಿಗೆ ವ್ಯಕ್ತಿ ಬಲಿ

Tiger

Ponnampet; ಹುಲಿ ದಾಳಿಗೆ ಅಸ್ಸಾಂ ಮೂಲದ ಕಾರ್ಮಿಕ ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.