ಪುತ್ತೂರಿನ “ದಾಮಾಯಣ’
Team Udayavani, Oct 3, 2019, 4:13 AM IST
ಕುಡ್ಲ ಮೂಲದ “ದಾಮಾಯಣ’ ಕೋಸ್ಟಲ್ವುಡ್ನಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. ದಾಮೋದರ ಎಂಬಾತರ ಹಾಸ್ಯದ ವ್ಯಕ್ತಿತ್ವವೇ ಸಿನೆಮಾದ ಹೈಲೈಟ್ಸ್. ವಿಶೇಷವೆಂದರೆ, ದಾಮೋದರನ ಪಾತ್ರವನ್ನು ಸ್ವತಃ ಚಿತ್ರದ ನಿರ್ದೇಶಕ ಶ್ರೀಮುಖ ನಿರ್ವಹಿಸಿದ್ದಾರೆ.
ಮಂಗಳೂರು ಸೊಗಡಿನ ಕನ್ನಡದಲ್ಲಿ ಮಾತನಾಡುವ ಯುವಕ ದಾಮೋದರ ಪುತ್ತೂರಿನವ. ದಾಮೋದರನಿಗೆ ತಾನೊಬ್ಬ ಪ್ರತಿಭಾವಂತ ಎನ್ನುವ ಹೆಮ್ಮೆ. ಆದರೆ ಅವನ ಪ್ರತಿಭೆಗೆ ಎಟುಕಿದ್ದು ಮನೆಯ ಅಂಗಳದಿಂದ ಅಡಿಕೆ ಕದಿಯುವ ಹಾಗೂ ಟಿಕ್-ಟಾಕ್ನಲ್ಲಿ ಹಾಡುವ ಚಾಳಿಗಳು. ದಾಮೋದರನ ತಂದೆ ಕೃಷಿಕ, ತಾಯಿ ಗೃಹಿಣಿ. ದಾಮೋದರನಿಗೆ ಮಾತ್ರ- ತಾನು ಪೇಟೆಗೆ ಹೋಗಿ ಹೆಸರು ಮಾಡಬೇಕು ಎನ್ನುವ ಬಯಕೆ.. ಹೀಗೆ ಸಾಗುವ ಟೀಸರ್ ಸಾಕಷ್ಟು ನಿರೀಕ್ಷೆ ಮೂಡಿಸಿದೆ.
ಟೀಸರ್ನಲ್ಲಿನ ಸನ್ನಿವೇಶಗಳಿಗೆ ಕೀರ್ತನ್ ಬಾಳಿಲ ಅವರ ಮ್ಯೂಸಿಕ್ “ಮ್ಯಾಜಿಕಲ್ ಟಚ್’ ನೀಡಿದೆ. ಛಾಯಾಗ್ರಾಹಕ ಸಿದ್ದು ಜಿ. ಎಸ್., ಸಂಕಲನಗಾರ ಕಾರ್ತಿಕ್ ಕೆ. ಎಂ., ಕಲರಿಸ್ಟ್ ಕಾರ್ತಿಕ್ ಮುರಲಿ ಹಾಗೂ ವಿ.ಎಫ್.ಎಕ್ಸ್. ಕಲಾವಿದ ಗುರುರಾಜ್ ತಮ್ಮ ಕೈಚಳಕ ತೋರಿಸಿದ್ದಾರೆ. ಟೀಸರ್ನಲ್ಲಿ ಬರುವ ಪ್ರತಿ ಪಾತ್ರಗಳೂ ಹೊಸ ಮುಖಗಳೇ ಆಗಿವೆ ಎನ್ನುವುದು ವಿಶೇಷ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್