ಸದ್ಗುಣಗಳಿದ್ದಾಗ ಭೂಮಿಯೇ ಸ್ವರ್ಗ


Team Udayavani, Mar 16, 2020, 5:41 AM IST

ಸದ್ಗುಣಗಳಿದ್ದಾಗ ಭೂಮಿಯೇ ಸ್ವರ್ಗ

ಬಟ್ಟೆಯಲ್ಲಿನ ಗಾಢ ಕೊಳೆಯ ಮುಂದೆ ಸಾಬೂನು ಸೋಲುವಂತೆ ದುರ್ಗುಣಗಳ ಮುಂದೆ ಸದ್ಗುಣಗಳು ಸೋಲುತ್ತವೆ. ಬಣ್ಣದ ಮಾತುಗಳ ಮುಂದೆ ಸತ್ಯ ವಾಕ್ಯಗಳು ಧ್ವನಿ ಕಳೆದುಕೊಳ್ಳುತ್ತವೆ. ಕುಕರ್ಮಗಳ ಮುಂದೆ ಸತ್ಕರ್ಮಗಳು ಗೌಣವಾಗುತ್ತವೆ. ಆದರೂ ಸುದೈವವಶಾತ್‌ ಅಂತಿಮ ವಿಜಯವು ವಿರುದ್ಧ ರೀತಿಯದ್ದಾಗಿರುತ್ತದೆ. ಏಕೆಂದರೆ, ಸಾಬೂನು ಸೋತರೂ ಕಲೆ, ಕೊಳೆಯ ಅಸ್ತಿತ್ವವು ಅತ್ಯಲ್ಪ ಕಾಲದ್ದು. ಹಾಗೆಯೇ ದುರ್ಗುಣಗಳು, ಕುಕರ್ಮಗಳು, ಬಣ್ಣದ ಮಾತುಗಳು. ಒಳಿತಿಗೆ ಬಾಳಿಕೆ ಹೆಚ್ಚು.

ಡಿ.ವಿ.ಜಿ. ಹೇಳುತ್ತಾರೆ:
ಸತ್ಯವಂತನನರಸಲೆನುತ ಪೇಟೆಗಳೊಳಗೆ |
ಹಟ್ಟಹಗಲೊಳೆ ದೀವಿಗೆಯ ಹಿಡಿದು ನಡೆದು ||
ಕೆಟ್ಟುದೀ ಜಗವೆಂದು ತೊಟ್ಟಿಯೊಳೆ ವಸಿಸಿದನು |
ತಾತ್ತಿÌಕ ಡಯೋಜೆನಿಸ್‌-ಮಂಕುತಿಮ್ಮ ||
ಕ್ರಿ.ಶ. 412-322 ರ ಕಾಲದಲ್ಲಿ ಗ್ರೀಸ್‌ ದೇಶದ ಡಯೋಜೆನಿಸ್‌ ಎಂಬವನು ಸತ್ಯವಂತನಾದವನನ್ನು ಕಾಣಬೇಕೆಂದು ನಡುಹಗಲಿನಲ್ಲಿ ದೀವಟಿಗೆ ಹಿಡಿದು ಹುಡುಕಾಡಿ, ಸತ್ಯವಂತರು ಎಲ್ಲೂ ಕಾಣ ಸಿಗಲಿಲ್ಲ, ಇಂತಹ ಈ ಲೋಕದ ಸಹವಾಸ ನನಗೆ ಬೇಡ ಎಂದು ಲೋಕಸಂಪರ್ಕದಿಂದ ದೂರವಾಗುವುದಕ್ಕಾಗಿ ಒಂದು ತೊಟ್ಟಿಯ ಒಳಗೆ ವಾಸ ಮಾಡಿದನಂತೆ.

ಆ ಕಾಲದಲ್ಲಿಯೇ ಸತ್ಯವಂತರು ಆತನಿಗೆ ಕಾಣಸಿಗಲಿಲ್ಲ. ಆದರೂ ಕಾಲ ಪೂರ್ತಿ ಕೆಟ್ಟುಹೋಗಿಲ್ಲ. ಒಳಿತು ಅಲ್ಲೊ ಇಲ್ಲೊ ಆದರೆ ಎಲ್ಲೆಲ್ಲೂ ಇದೆ. ಸತ್ಯವಂತರು ಭರವಸೆ ಕಳೆದುಕೊಳ್ಳಬೇಕಾಗಿಲ್ಲ. ದೀವಟಿಗೆ ಹಿಡಿದು ಹುಡುಕಿದರೆ ಸತ್ಯವಂತರು ಸಿಗುತ್ತಾರೋ ಇಲ್ಲವೋ; ಅಂತರಂಗದ ಕಣ್ಣು ತೆರೆದು ನೋಡಿದರೆ ಸತ್ಯವಂತರೇ ಏಕೆ? ಸತ್ಯವೇ ಗೋಚರಿಸುತ್ತದೆ. ಸದ್ಗುಣಗಳು, ನಮಗೆ ಒಳಿತನ್ನೇ ನೀಡುತ್ತವೆ. ಸತ್ಕರ್ಮಗಳನ್ನು ಮಾಡುವುದು ನಮ್ಮ ಸ್ವಭಾವವಾಗಬೇಕು.

ನರಕ ತಪ್ಪಿತು ಧರ್ಮಜಂಗೆ, ದಿಟ, ಆದೊಡೇಂ |
ನರಕದರ್ಶನದುಃಖ ತಪ್ಪದಾಯಿತಲ? ||
ದುರಿತತರುವಾರು ನೆಟ್ಟುದೊ, ನಿನಗಮುಂಟು ಫ‌ಲ |
ಚಿರಋಣದ ಲೆಕ್ಕವದು-ಮಂಕುತಿಮ್ಮ ||
ಕುರುಕ್ಷೇತ್ರ ಯುದ್ಧದಲ್ಲಿ ಶ್ರೀಕೃಷ್ಣ “ಹತೋಶ್ವತ್ಥಾಮೋ ನಾಮ ಕುಂಜರಃ’ ಎಂದು ಧರ್ಮರಾಜನ ಬಾಯಿಯಿಂದ ಕೂಗಿಸಿ, “ಹತೋಶ್ವತ್ಥಾಮೋ..’ ಎಂದ ಕೂಡಲೇ ಪಾಂಚಜನ್ಯ ಮೊಳಗಿಸಿದ್ದರಿಂದ ದ್ರೋಣರು ತನ್ನ ಮಗ ಅಶ್ವತ್ಥಾಮನೇ ಸತ್ತನೆಂದು ಭ್ರಮಿಸಿ ಶಸ್ತ್ರಸಂನ್ಯಾಸ ಮಾಡಿ ಶತ್ರುಗಳಿಂದ ಹತನಾಗುತ್ತಾನೆ. ಇದರಿಂದ ಧರ್ಮರಾಜನಿಗೆ ಮೊದಲು ನರಕದರ್ಶನ ಮಾಡಿ ಬಳಿಕ ಸ್ವರ್ಗಕ್ಕೆ ಹೋಗಬೇಕಾಯಿತು. ಜೀವನ ಪೂರ್ತಿ ಸತ್ಯಸಂಧನಾಗಿದ್ದು, ಇಲ್ಲಿ ಪೂರ್ತಿ ಸತ್ಯವೂ ಅಲ್ಲದ, ಪೂರ್ತಿ ಸುಳ್ಳೂ ಅಲ್ಲದ ಮಾತನ್ನು ಆಡಿದುದಕ್ಕಾಗಿ ಈ ಪ್ರಮೇಯ ಎದುರಾಯಿತು. ಹಾಗಾಗಿ ಸ್ವರ್ಗ ಸಿಗುತ್ತದೆಯೋ ಇಲ್ಲವೋ, ಸತ್ಯ, ಸದ್ಗುಣಗಳಿದ್ದಾಗ ಜೀವನವೇ ಸ್ವರ್ಗ.

- ಕುದ್ಯಾಡಿ ಸಂದೇಶ್‌ ಸಾಲ್ಯಾನ್‌

ಟಾಪ್ ನ್ಯೂಸ್

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

26

ಅಮೆರಿಕ ತಂಡಕ್ಕೆ ಸ್ಟುವರ್ಟ್‌ ಕೋಚ್‌!

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.