ಆರ್ಥಿಕ ಶಿಸ್ತಿಗೆ ಜಪಾನಿನ ಕಾಕಿಬೋ ಸೂತ್ರ


Team Udayavani, Jan 13, 2020, 5:43 AM IST

plant-growing-on-pile-of-coins-money-1024×685

ಜಗತ್ತಿನಲ್ಲಿ ಹಣಕಾಸಿನ ಸಮಸ್ಯೆ ಎಲ್ಲರನ್ನೂ ಕಾಡುವಂತಹದ್ದೇ. ಇದು 15 ಸಾ. ರೂ. ವೇತನ ಪಡೆಯುವವನಿಂದ ಲಕ್ಷ ಮಾಸಿಕ ಸಂಬಳ ಪಡೆ ಯುವ ವ್ಯಕ್ತಿಯದು ಅದೇ ಗೋಳು. ಎಲ್ಲರಲ್ಲೂ ಖರ್ಚು ಮತ್ತು ಉಳಿತಾಯಗಳು ನಿಯಂತ್ರಣಕ್ಕೆ ಬರದೇ ಈ ಸಮಸ್ಯೆಗಳು ಹೆಚ್ಚಾಗುತ್ತವೆ.

ಆರ್ಥಿಕ ಶಿಸ್ತು ಉಲ್ಲಂಘನೆಯಾಗುತ್ತಿರುವ ವೇಳೆ ಯಲ್ಲಿಯೆ ಎಚ್ಚೆತ್ತುಕೊಂಡರೆ ಈ ಸಂಭಾವ್ಯ ಆರ್ಥಿಕ ಅನಾಹುತದಿಂದ ತಪ್ಪಿಸಿಕೊಳ್ಳಬಹುದು. ಈ ಕುರಿತಂತೆ ಜಪಾನಿನಲ್ಲಿ ಒಂದು ಒಳ್ಳೆಯ ಉಳಿತಾಯ ವ್ಯವಸ್ಥೆ ಇದೆ.

“ಕಾಕಿಬೋ’ ಜಪಾನ್‌ ಮೂಲದ ಹಣ ಉಳಿಸುವ ಸರಳ ವಿಧಾನವಾಗಿದ್ದು, ಮೊಟೊಕೊ ಹನಿ ಎಂಬ ಪತ್ರಕರ್ತೆ 1094ರಲ್ಲಿ ಈ ಒಂದು ಸ್ವಯಂಪ್ರೇರಿತ ಹಣ ಉಳಿತಾಯ ಮಾರ್ಗೋ ಪಾಯವನ್ನು ಪರಿಚಯಿಸಿದ್ದರು. ಬಳಿಕ ಇದು ಆ ದೇಶದಲ್ಲಿ ಹೆಚ್ಚು ಪಾಲಕರನ್ನು ಪಡೆಯಿತು. ಮೊಟೊಕೊ ಹನಿ ಜಪಾನ್‌ ದೇಶದ ಮೊದಲ ಮಹಿಳಾ ನಿಯತಕಾಲಿಕದ ಸ್ಥಾಪಕರಾಗಿದ್ದು, ಖರ್ಚು ವೆಚ್ಚಗಳನ್ನು ಹೇಗೆ ನಿಯಂತ್ರಿಸಬಹುದು ಎಂಬ ತಂತ್ರಗಾರಿಕೆ ಇದರಲ್ಲಿದೆ. ಹಣದ ಕೊರತೆ ನೀಗಿಸಲು ಕಾಕಿಬೋ ನೆರವಾಗಲಿದ್ದು, ಸರಳ ಹಣ ಉಳಿತಾಯ ಮಾರ್ಗಗಳನ್ನು ಸೂಚಿಸಲಿದೆ.

ಬರೆದಿಟ್ಟುಕೊಳ್ಳುವಿಕೆ
ಒಂದು ನೋಟ್‌ಬುಕ್‌ ಮತ್ತು ಪೆನ್‌ ನಿಮ್ಮ ಹಣವನ್ನು ಉಳಿಸಲು ನೆರವಾಗಲಿದೆ. ದುಂದು ವೆಚ್ಚಕ್ಕೆ ಮೊದಲ ಕಾರಣವೆಂದರೆ ಸರಿಯಾದ ಬಜೆಟ್‌ ಇಲ್ಲದೇ ಇರುವುದು. ಬೇಕಾಬಿಟ್ಟಿಯಾಗಿ ಹಣ ಖರ್ಚು ಮಾಡಿ, ಕೊನೆಗೆ ಹಣ ಹೇಗೆ ಖರ್ಚಾ ಗಿ ಹೋಯ್ತು ಎಂದು ಲೆಕ್ಕ ಹಾಕುವುದರಲ್ಲೇ ಹೆಚ್ಚು ಕಾಲ ಕಳೆಯಬೇಕಾಗುತ್ತದೆ. ನಿಮ್ಮ ಖರ್ಚು ವೆಚ್ಚಗಳ ವಿವರಗಳನ್ನು ಪುಸ್ತಕದಲ್ಲಿ ಬರೆದಿಡಲು ಸೂಚಿಸುತ್ತದೆ. ಈ ಮೂಲಕ ತಿಂಗಳಿಗೆ ಎಷ್ಟು ಹಣ ಖರ್ಚು ಮಾಡುತ್ತೀರಿ ಎಂಬ ಲೆಕ್ಕ ಒಂದೇ ಕಡೆ ಲಭ್ಯವಾಗಿ, ಖರ್ಚಿನ ನಿಯಂತ್ರಣವಾಗುತ್ತದೆ.

ಯಾವುದಕ್ಕೆ ಆದ್ಯತೆ
ಕಡಿಮೆ ವೇತನವಿದ್ದರೂ ಕೂಡ ಚೆನ್ನಾಗಿ ಬಾಳಲು ಸಾಧ್ಯವಿದೆ. ಹಣವಿದ್ದಾಗ ಮತ್ತು ಇಲ್ಲದಿದ್ದಾಗ ಒತ್ತಡ ಇರುವುದು ಸಹಜ. ಆದರೆ ಶಾಂತವಾಗಿ ಯೋಚಿಸಿ. ಹಣವನ್ನು ಆವಶ್ಯಕತೆಗೆ ತಕ್ಕಂತೆ ಮಿತವಾಗಿ, ಹಿತವಾಗಿ ಬಳಸಿ. ನಿಮಗೆ ಅಗತ್ಯವೆನ್ನಿಸುವ ವಸ್ತುಗಳ ಮೇಲೆ ಮಾತ್ರ ಹಣ ವ್ಯಯಿಸಬೇಕು. ಕಾಕಿಬೋ ನಿಮ್ಮ ಖರ್ಚುಗಳು ಮತ್ತು ಆದಾಯದ ಆಧಾರದ ಮೇಲೆ ನಿಮ್ಮ ಅಗತ್ಯ ವಸ್ತುಗಳ ಪಟ್ಟಿ ಮಾಡಲು ಸೂಚಿಸುತ್ತದೆ. ಈ ಮೂಲಕ ಉಳಿತಾಯವನ್ನು ಹೇಗೆ ಆರಂಭಿ ಸಬೇಕು ಎಂಬುದರ ಕುರಿತು ನಿಮಗೆ ಸ್ಪಷ್ಟವಾದ ಆಲೋಚನೆ ಲಭ್ಯವಾಗುತ್ತದೆ.

ಬ್ಯಾಂಕ್‌ ಬ್ಯಾಲೆ®Õ… ಚೆಕ್‌ ಮಾಡಿ
ನಿಮ್ಮ ಬಜೆಟ್‌ ಹಾಗೂ ಉಳಿತಾಯ ಖಾತೆಗಳ ಮೇಲೆ ಕಣ್ಣಿಡಿ. ಬಜೆಟ್‌ ಹಾಗೂ ಉಳಿತಾಯವು ಯಾವ ಪ್ರಮಾಣದಲ್ಲಿ ಆಗುತ್ತಿದೆ ಎಂಬುದರ ಕುರಿತು ಗಮನವಿರಲಿ. ಆಗಾಗ ಉಳಿತಾಯ ಖಾತೆಗಳ ಮೊತ್ತವನ್ನು ಪರಿಶೀಲಿಸಿ. ಒಂದು ವೇಳೆ ಅಂದುಕೊಂಡಷ್ಟು ಉಳಿತಾಯ ಸಾಧ್ಯವಾಗುತ್ತಿಲ್ಲ ಎಂದು ಅರಿವಾದರೆ, ಅದಕ್ಕೆ ಅಡ್ಡಿಯಿರುವ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುತ್ತದೆ.

ನಗದು ರಹಿತ ವ್ಯವಹಾರ ನಿಗಾ ಇರಲಿ
ವ್ಯಾಪಾರ ವಹಿವಾಟು ಖರೀದಿಗಾಗಿ ಕಾರ್ಡ್‌ ಗಳನ್ನು ಸ್ವೆ „ಪ್‌ ಮಾಡುವ ಬದಲು ನೇರವಾಗಿ ಹಣ ನೀಡಲು ಪ್ರಯತ್ನಿಸಿ. ಅವಕಾಶವಿದ್ದಲ್ಲಿ ನಗದು ರೂಪದಲ್ಲಿ ಹೆಚ್ಚು ಖರ್ಚು ಮಾಡಲು ಪ್ರಯತ್ನಿಸಿ. ಕೈಯಲ್ಲಿ ಕ್ರೆಡಿಟ್‌/ಡೆಬಿಟ್‌ ಕಾರ್ಡ್‌ ಇದ್ದರೆ ಶಾಪಿಂಗ್‌ ಮಾಡುವಾಗ ಮನಸ್ಸಿನ ಮೇಲೆ ನಿಯಂತ್ರಣ ಇರುವುದಿಲ್ಲ. ಈ ಮೂಲಕ ಹಣದ ಉಳಿತಾಯ ಮಾಡಬಹುದು.

ಆನ್‌ಲೈನ್‌ ಶಾಪಿಂಗ್‌ ಮೂಲಕ ಡಿಜಿಟಲ್‌ ಉತ್ಪನ್ನಗಳಿಗಾಗಿ ಹಣ ಪಾವತಿಸಬೇಡಿ. ಈ ಉತ್ಪನ್ನಗಳು ಮುಖ್ಯವಾಗಿ ಸಾಫ್ಟ್ವೇರ್‌ ಮತ್ತು ಡೌನೊÉàಡ್‌ ಮಾಡಬಹುದಾದ ಸಾಮಗ್ರಿಗಳನ್ನು ಹೊಂದಿರುತ್ತವೆ. ಕಾರ್ಡ್‌ ಮೂಲಕ ಪಾವತಿಸಿ ಇಂತಹ ಉತ್ಪನ್ನಗಳನ್ನು ಖರೀದಿಸುದಕ್ಕಿಂತ ಶಾಪ್‌ಗ್ಳಿಂದ ಖರೀದಿಸಿ.

 -ಸುಶ್ಮಿತಾ ಜೈನ್‌

ಟಾಪ್ ನ್ಯೂಸ್

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.