ಹೊಸ ವರ್ಷಕ್ಕೆ ಹೊಸ ಆಫರ್‌ ನಿರೀಕ್ಷೆಯೂ ಹಲವು


Team Udayavani, Dec 27, 2019, 4:55 AM IST

27

ಇನ್ನೇನು ಕೆಲವು ದಿನಗಳಲ್ಲಿ ಹೊಸ ವರ್ಷ ಕಾಲಿಡಲಿದ್ದು, ದಿನ ಬಳಕೆಯ ವಸ್ತುಗಳಿಗೆ ವಿಶೇಷ ಆಫರ್‌ಗಳು ಒಂದೆಡೆಯಾದರೆ ಹೊಸ ವರ್ಷ ಯಾವೆಲ್ಲ ಹೊಸ ಟ್ರೆಂಡ್‌ ಮಾರುಕಟ್ಟೆ ಪ್ರವೇಶಿಸಬಹುದು ಎಂಬ ಕುತೂಹಲವೂ ಸಾಮಾನ್ಯವಾಗಿರುತ್ತದೆ.

ಹೊಸ ವರ್ಷಕ್ಕೆಂದು ಎಲೆಕ್ಟ್ರಾನಿಕ್‌ ವಸ್ತುಗಳಾದ ಎಲ್‌ಇಡಿ ಟಿ.ವಿ., ರೆಫ್ರಿಜರೇಟರ್‌, ಲ್ಯಾಪ್‌ಟಾಪ್‌, ಎ.ಸಿ., ಕೂಲರ್‌, ಮೈಕ್ರೋವೇವ್‌, ವಾಷಿಂಗ್‌ ಮೆಶಿನ್‌ ಖರೀದಿಗೆ ಪ್ರಮುಖ ಎಲೆಕ್ಟ್ರಾನಿಕ್‌ ಅಂಗಡಿಗಳಲ್ಲಿ ಆಫರ್‌ ಇದ್ದು, ಬಡ್ಡಿ ರಹಿತ ಕಂತುಗಳು, ಶೇ. 20ರವರೆಗೆ ಕ್ಯಾಶ್‌ಬ್ಯಾಕ್‌ ಸಹಿತ ಹಲವಾರು ಬಹುಮಾನಗಳನ್ನು ಈಗಾಗಲೇ ಘೋಷಿಸಿವೆ.

ಹಬ್ಬದ ಆಫರ್‌ ಇರುವ ಕಾರಣ ಮೊಬೈಲ್‌ ಶಾಪ್‌ಗ್ಳಲ್ಲಿ ಜನಜಂಗುಳಿ ಇದೆ. ಹೆಚ್ಚಿನ ಮೊಬೈಲ್‌ಗ‌ಳಿಗೆ ಆಫರ್‌ ಇದ್ದು, ಹೊಸ ಮೊಬೈಲ್‌ ಖರೀದಿಗೆ ಸಾರ್ವಜನಿಕರು ಆಸಕ್ತಿ ತೋರುತ್ತಿದ್ದಾರೆ. ಹೊಸ ಮೊಬೈಲ್‌ ಖರೀದಿಗೆ ಗಿಫ್ಟ್‌ ವೋಚರ್‌, ಶೇ. 0 ಬಡ್ಡಿದರದಲ್ಲಿ ಡೌನ್‌ ಪೇಮೆಂಟ್‌, ಹೆಡ್‌ಸೆಟ್‌, ಪವರ್‌ ಬ್ಯಾಂಕ್‌ ಮತ್ತಿತರ ಕೊಡುಗೆಗಳು, ಮೊಬೈಲ್‌ ಮೂಲ ದರದ ಮೇಲೆ ರಿಯಾಯಿತಿ, ಕೂಪನ್‌ಗಳು, ಅದೃಷ್ಟಶಾಲಿಗಳಿಗೆ ಬಹುಮಾನ ಸೇರಿದಂತೆ ವಿವಿಧ ಆಫರ್‌ಗಳಿವೆ.

ಆನ್‌ಲೈನ್‌ನಲ್ಲೂ ಆಫ‌ರ್‌
ಹೊಸ ವರ್ಷದ ಪ್ರಯುಕ್ತ ಪ್ರಮುಖ ಶಾಪಿಂಗ್‌ ತಾಣಗಳಾದ ಫ್ಲಿಪ್‌ಕಾರ್ಟ್‌, ಸ್ನಾಪ್‌ಡೀಲ್‌, ಅಮೇಜಾನ್‌ ಸೇರಿದಂತೆ ವಿವಿಧ ತಾಣಗಳಲ್ಲಿ ಆಫರ್‌ಗಳನ್ನು ನೀಡಲಾಗಿದೆ. ಮುಖ್ಯವಾಗಿ ಮೂಲಬೆಲೆಗಿಂತ ಶೇ.30, 40ರಷ್ಟು ಕಡಿಮೆ ಬೆಲೆ, ಉಚಿತ ಆನ್‌ಲೈನ್‌ ಡೆಲಿವೆರಿ, ಎಕ್ಸ್‌ಚೇಂಜ್‌ ಆಫರ್‌, ಶೇ. 0 ಬಡ್ಡಿದರದಲ್ಲಿ ಇಎಂಐ ಮತ್ತು ಡೀಲ್‌ ಆಫ್‌ ದಿ ಡೇ ಎಂದು ಕೊಂಡುಕೊಳ್ಳುವ ವಸ್ತುಗಳಿಗೆ ಅತ್ಯುತ್ತಮ ಆಫರ್‌ ನೀಡಲಾಗುತ್ತಿದೆ.

ಹಳೆಯ ಫ್ಯಾಷನ್‌ ಮೂಲಕ ಆಚರಣೆ
ಕೆಲವು ಮಂದಿ ಹೊಸ ವರ್ಷವನ್ನು ಹಳೆಯ ಫ್ಯಾಷನ್‌ ಬಟ್ಟೆಗಳ ಮೂಲಕ ಆಚರಿಸಲು ತಯಾರಾಗಿದ್ದಾರೆ. ಅದಕ್ಕೆಂದೇ ಕೆಲವರು ಚೆಕ್ಸ್‌ ಪ್ಯಾಂಟ್‌ ಖರೀದಿಸುತ್ತಿದ್ದಾರೆ. ಯಾಕೆಂದರೆ ಈ ಪ್ಯಾಂಟ್‌ ಧರಿಸಿದರೆ ಅದಕ್ಕೆ ಶರ್ಟ್‌ಗಳ ಆಯ್ಕೆಗೆ ಹೆಚ್ಚು ತಲೆಗೆಡಿಸಿಕೊಳ್ಳಬೇಕೆಂದಿಲ್ಲ. ಏಕೆಂದರೆ ಮಾಮೂಲಿ ಎಲ್ಲ ಬಣ್ಣದ ಶರ್ಟ್‌ ಸೂಕ್ತವೆನಿಸುತ್ತದೆ. ಯುವತಿಯರು ಕೂಡ ಈ ಟ್ರೆಂಡ್‌ಗಳ ಬಟ್ಟೆಗೆ ಹೊರತಾಗಿಲ್ಲ. ಲಾಂಗ್‌ ಸ್ಕರ್ಟ್‌ ಖರೀದಿ ಮಾಡುತ್ತಿದ್ದು, ಉದ್ದ ಮತ್ತು ಎತ್ತರದ ಹುಡುಗಿಯರಿಗೆ ಈ ರೀತಿಯ ಬಟ್ಟೆಗಳು ಉತ್ತಮ ಎನಿಸುತ್ತದೆ. ಇವಿಷ್ಟೇ ಅಲ್ಲದೆ ಹುಡುಗಿಯರು ಚೆಕ್ಸ್‌ ಸಲ್ವಾರ್‌, ಕುರ್ತಾ ಜೀನ್ಸ್‌, ಸೀರೆ, ಜಾಕೆಟ್‌ಗೆ ಮೊರೆ ಹೋಗುತ್ತಿದ್ದಾರೆ.

ಬಿಳಿ ಶರ್ಟ್‌ಗೆ ಬೇಡಿಕೆ
ಆರಾಮ ದಾಯಕ ಧಿರಿಸಿಗೆಂದು ಮಾರುಕಟ್ಟೆಯಲ್ಲಿ ಪುರುಷರು ಬಿಳಿ ಶರ್ಟ್‌ ಕಡೆಗೆ ವಾಲುತ್ತಿದ್ದಾರೆ. ಅದಕ್ಕೆಂದು ಬಿಳಿ ಬಣ್ಣದಲ್ಲಿಯೇ ಕುರ್ತಾ, ಟೀಶರ್ಟ್‌, ಫಾರ್ಮಲ್‌ ಶರ್ಟ್‌ಗಳಲ್ಲಿ ವಿವಿಧ ವಿನ್ಯಾಸಗಳು ಬಂದಿವೆ. ಅದರಂತೆಯೇ ಯುವತಿಯರು ಕೂಡ ನೀಲಿ ಬಣ್ಣದ ಪ್ಯಾಂಟ್‌ಗೆ ಬಿಳಿ ಟಾಪ್‌ಗ್ಳನ್ನು ಹೆಚ್ಚಾಗಿ ಆಯ್ಕೆ ಮಾಡುತ್ತಿದ್ದಾರೆ. ಇದು ಫಿಟ್‌ ಮತ್ತು ಕಂಫರ್ಟ್‌ ಇರುತ್ತದೆ. ಅದಲ್ಲದೆ ಬಿಳಿ ಬಣ್ಣದ ಧಿರಿಸುಗಳು ಯಾವ ಕಾಲದಲ್ಲೂ ಧರಿಸಲು ಉಪಯುಕ್ತವಾಗುತ್ತವೆ. ಇದನ್ನು ಲೆಗ್ಗಿಂಗ್ಸ್‌, ಕುರ್ತಾ, ಪಟಿಯಾಲ, ಕಪ್ಪು ಬಣ್ಣದ ಪ್ಯಾಂಟ್‌ಗಳಿಗೂ ಧರಿಸಬಹುದಾಗಿದೆ.

ಮೊಬೈಲ್‌ ಕ್ಷೇತ್ರದಲ್ಲಿ ಹೊಸ ನಿರೀಕ್ಷೆ
ಈಗಾಗಲೇ ಕೆಲವು ಕಂಪೆನಿಗಳು 5ಜಿ ಮೊಬೈಲ್‌ಗ‌ಳನ್ನು ಪರಿಚಯಿಸಿದ್ದು, ಬೆಲೆ ಕೊಂಚ ದುಬಾರಿಯಾಗಿದೆ. ಸ್ಪರ್ಧೆ ನೀಡುವಂತೆ ಕಡಿಮೆ ಬೆಲೆಯಲ್ಲಿ 5ಜಿ ಮೊಬೈಲ್‌ ನೀಡಲು ನೋಕಿಯಾ ಮುಂದಾಗಿದೆ. ಬದಲಾಗುತ್ತಿರುವ ಮಾರುಕಟ್ಟೆ ಟ್ರೆಂಡ್‌ಗೆ ಒಗ್ಗಿಕೊಳ್ಳಲು ಮುಂದಾಗಿರುವ ನೋಕಿಯಾ ಸಂಸ್ಥೆ ಇದೀಗ 5ಜಿ ಸಾಮರ್ಥ್ಯದ ಮೊಬೈಲ್‌ಗ‌ಳನ್ನು 2020ರಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ. ಅದೇ ರೀತಿ ಹೊಸ ಅಪ್‌ಗ್ರೇಡ್‌ ಫೀಚರ್‌ ಒಳಗೊಂಡ ರೆಡ್‌ ಮಿ 9 ಮೊಬೈಲ್‌ ಕೂಡ ಹೊಸ ವರ್ಷದಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ. ಇದರಲ್ಲಿ ಇನ್‌ ಸ್ಕ್ರೀನ್‌ ಫಿಂಗರ್‌ ಪ್ರಿಂಟ್‌ ಸೆನ್ಸಾರ್‌ ಇರಲಿದ್ದು, ವಿಯರ್‌ ರೆಸಿಸ್ಟೆಂಟ್‌ ಮತ್ತು ಶೇಫಿಯರ್‌ ಗ್ಲಾಸ್‌ ಕೆಮರಾ ಹೊಂದಿರಲಿದೆ. ಶಿಯೋಮಿ ಎಂಐ ಮಿಕ್ಸ್‌ 4, ರೆಡ್‌ಮಿ ವೈ 4, ರೆಡ್‌ ಮಿ ನೋಟ್‌ 9, ಶಿಯೋಮಿ ಎಂಐ 10 ಸೇರಿದಂತೆ ಇನ್ನಿತರ ಕಂಪೆನಿ ಮೊಬೈಲ್‌ ಹೊಸ ವರ್ಷಕ್ಕೆ ಮಾರುಕಟ್ಟೆಗೆ ಲಗ್ಗೆ ಇಡಲಿವೆ.

-  ನವೀನ್‌ ಭಟ್‌ ಇಳಂತಿಲ

ಟಾಪ್ ನ್ಯೂಸ್

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.