ಅಮ್ಮ ಹೇಳಿದ ಅನುಭವದ ಕಥೆ


Team Udayavani, Mar 2, 2020, 5:41 AM IST

AMMA

ನನ್ನ ತಾಯಿಗೆ ಅತೀವ ತಾಳ್ಮೆ. ನನ್ನ ತಂದೆಯ ಯಾವ ಮಾತಿಗೂ ಮರು ಮಾತನಾಡುತ್ತಿರಲಿಲ್ಲ. ತನ್ನಷ್ಟಕ್ಕೇ ಕೆಲಸದಲ್ಲಿ ಬ್ಯುಸಿಯಾಗಿರುತ್ತಿದ್ದಳು, ಕೆಲವೊಮ್ಮೆ ಅಮ್ಮನನ್ನು ಮತ್ತೂಬ್ಬರ ಎದುರು ಅಪಹಾಸ್ಯ ಮಾಡುತ್ತಿದ್ದ ಪ್ರಸಂಗಗಳೂ ಇದ್ದವು. ಅಂಥ ಸಂದರ್ಭದಲ್ಲೆಲ್ಲ ನನ್ನ ಕೋಪವನ್ನು ಅಮ್ಮನ ಬಳಿಯೇ ತೋರಿಸಿಕೊಳ್ಳುತ್ತಿದ್ದೆ. ಪ್ರತಿಯೊಂದಕ್ಕೂ ಸುಮ್ಮನಿರುವುದರಿಂದಲೇ ಹೀಗೆ ಎಂದು ಬುದ್ಧಿ ಹೇಳಲು ಹೋಗುತ್ತಿದ್ದೆ. ಆಗೆಲ್ಲ ಅಮ್ಮ ಮುಗುಳ್ನಗು ಬೀರಿ, ಏನಾದರೂ ತಿನ್ನಲಿಕ್ಕೆ ಕೈಗೆ ಕೊಟ್ಟು ವಿಷಯ ಮರೆಸುತ್ತಿದ್ದಳು.

ಒಮ್ಮೆ ನನ್ನ ಮನೆಯಲ್ಲಿ ಇಂಥದ್ದೇ ಒಂದು ಸಂದರ್ಭ ಬಂದು ಪತಿಯೊಂದಿಗೆ ಜಗಳವಾಡಿದೆ. ನನಗೆ ತೀರಾ ಬೇಸರವೆನಿಸಿತು. ಏನು ಮಾಡುವುದೆಂದೇ ತೋಚಲಿಲ್ಲ, ನೇರವಾಗಿ ಅಮ್ಮನ ಮನೆಗೆ ಹೋದೆ. ಅಮ್ಮ ಎಂದಿನಂತೆ ಮುಗುಳ್ನಗೆಯಿಂದ ಸ್ವಾಗತಿಸಿದಳು. ನಾನು ಎಲ್ಲವನ್ನೂ ಹೇಳಿಕೊಂಡೆ. ಆಗಲೂ ಅಮ್ಮನ ಮುಖ ದಲ್ಲಿನ ಚಹರೆ ಬದಲಾಗಲಿಲ್ಲ. ಒಂದು ಒಳ್ಳೆಯ ಕಾಫಿ ಮಾಡಿಕೊಟ್ಟಳು. ನಾನು ಅದನ್ನು ಕುಡಿಯುವಾಗ, ಹೇಗಿದೆ ಕಾಫಿ? ಅದರ ಪರಿಮಳ? ಎಂದು ಕೇಳಿದಳು.

ಆಗಲೇ ಕಾಫಿಯ ಕೊನೆಯಲ್ಲಿದ್ದೆ. ಕೆಳಗೆ ಉಳಿದಿದ್ದ ಚರಟವನ್ನು ಬಿಟ್ಟು, ಚೆನ್ನಾಗಿದೆ ಎಂದೆ. ಅದಕ್ಕೆ ಕಾಫಿ ಚೆನ್ನಾಗಿದೆ, ಪರಿಮಳ? ಎಂದು ಮತ್ತೆ ಪ್ರಶ್ನೆ ಕೇಳಿದಳು. ನನಗೆ ವಿಚಿತ್ರವೆನಿಸಿದರೂ ಎರಡೂ ಚೆನ್ನಾಗಿದೆ ಎಂದೆ. ಅದಕ್ಕೆ ಪ್ರತಿಯಾಗಿ ಅಮ್ಮ, “ಪುಟ್ಟಿ, ಕಾಫಿಯ ಸೌಂದರ್ಯ ಎರಡರಲ್ಲಿದೆ. ಅದನ್ನು ಅನುಭವಿಸುವುದರಲ್ಲಿ ಮತ್ತು ಅದನ್ನು ಆಸ್ವಾದಿಸುವುದಲ್ಲಿ. ಕಾಫಿಯ ರುಚಿ ಆಸ್ವಾದನೆಯಲ್ಲಿದೆ, ಪರಿಮಳದ ಸೊಬಗು ಅನುಭವಿಸುವುದರಲ್ಲಿದೆ. ಪರಿಮಳವನ್ನು ಅನುಭವಿಸಲು ಆಸ್ವಾದನೆಗಿಂತ ಹೆಚ್ಚು ತಾಳ್ಮೆಯ ಅಗತ್ಯವಿದೆ’ ಎಂದಳು.

ಅವಳ ಮಾತುಗಳನ್ನು ಕೇಳಿ ಒಬ್ಬ ಸಂತ ನುಡಿಯುತ್ತಿದ್ದಂತೆ ಎನಿಸಿತು. ಮರುದಿನವೇ ಸಂತೋಷದಿಂದ ನನ್ನ ಮನೆಗೆ ವಾಪಸು ಹೋದೆ. ಅಮ್ಮನ ತಾಳ್ಮೆಯ ಶಕ್ತಿ ತಿಳಿದದ್ದೇ ಆಗ.

-ಸುಧಾ, ಸಾಲಿಗ್ರಾಮ

ಟಾಪ್ ನ್ಯೂಸ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.