ಪಾರ್ಕ್‌ ಗಳಲ್ಲಿ ನಿರ್ಮಾಣವಾಗಲಿ “ಸ್ಟ್ರೇಂಜರ್‌ ಎಕ್ಸೇಂಜ್‌’


Team Udayavani, Jul 28, 2019, 5:37 AM IST

q-21

ನಗರವಾಸಿಗಳು ತಮ್ಮ ಯಾಂತ್ರಿಕ ಜೀವನದಿಂದ ಹೊರಬರಲು, ಮನಸ್ಸಿನ ವಿಶ್ರಾಂತಿಗಾಗಿ ಸದ್ದು ಗದ್ದಲವಿಲ್ಲದ ಪ್ರಶಾಂತ ಸ್ಥಳವನ್ನು ಆಯ್ಕೆ ಮಾಡುತ್ತಾರೆ. ಸಾಮಾನ್ಯವಾಗಿ ನಗರ ಜೀವನಕ್ಕೆ ಒಗ್ಗಿಕೊಂಡವರು ಪಾರ್ಕ್‌ಗಳನ್ನು ತುಂಬಾ ನೆಚ್ಚಿಕೊಂಡಿರುತ್ತಾರೆ. ಪಾರ್ಕ್‌ ಕೂಡ ಅಷ್ಟೇ ವಿಶ್ರಾಂತಿ ಎಂದು ಬರುವ ಜನರಿಗೆ ಪ್ರಶಾಂತ ವಾತಾವರಣವನ್ನು ಕಲ್ಪಿಸುತ್ತದೆ. ಪಾರ್ಕ್‌ಗಳನ್ನೂ ಕೂಡ ಕಾಲಕ್ಕೆ ತಕ್ಕಂತೆ ಅಭಿವೃದ್ಧಿ ಪಡಿಸಿ ಹೆಚ್ಚು ಹೆಚ್ಚು ಜನರನ್ನು ಆಕರ್ಷಿಸುತ್ತದೆ.

ಇದರಂತೆ ಜಾನ್‌ ವಿಲ್ಸನ್‌ ಬೋಸ್ಟನ್‌ ರಸ್ತೆ ಪ್ರವಾಸ ಕೈಗೊಂಡಾಗ ಚಿಕಾಗೋದಲ್ಲಿ ಪಾರ್ಕ್‌ಗೆ ಬರುವ ಜನರಿಗೆ ಹೊಸತನ್ನು ಕೊಡಲು ನಿರ್ಧರಿಸುತ್ತಾರೆ ಹಾಗೂ ಈ ಪ್ರಯತ್ನದಲ್ಲಿ ಅವರು ಯಶಸ್ವಿಯಾಗಿದ್ದಾರೆ ಕೂಡ. ಡ್ರಾಪ್‌ ಬಾಕ್ಸ್‌ ಅನ್ನು ಕಂಡ ಅವರು ಅದನ್ನು ವಿನೂತನವಾಗಿ “ಸ್ಟ್ರೇಂಜರ್‌ ಎಕ್ಸೇಂಜ್‌’ ಎಂದು ಹೆಸರಿಸಿ ನೂತನ ಪ್ರಯೋಗವನ್ನು ಮಾಡಿದ್ದಾರೆ. ಹೆಸರೇ ಹೇಳುವಂತೆ ಇದು ಪರಿಚಯಿಲ್ಲದವರೊಂದಿಗಿನ ಸಂವಹನ. ಇಲ್ಲಿ ವಸ್ತುಗಳು ವಿನಿಮಯವಾಗಬಹುದು ಹಾಗೂ ಸ್ನೇಹ ಸಂಬಂಧಗಳು ಬೆಳೆಯಬಹುದು. ನಮಗೆ ಅಗತ್ಯವಿಲ್ಲದ ಹಾಗೂ ಇನ್ನೊಬ್ಬರಿಗೆ ಅಗತ್ಯವಿರುವ ವಸ್ತುಗಳನ್ನು ಉಚಿತವಾಗಿ ಒಂದು ಕಡೆ ಇಡುವುದೇ ಈ ‘ಸ್ಟ್ರೇಂಜರ್ ಎಕ್ಸೇಂಜ್‌’ ನ ಉಪಯೋಗ.

ಸ್ಟ್ರೇಂಜರ್‌ ಎಕ್ಸೇಂಜ್‌
ಈ ಮೊದಲು ಇದೇ ರೀತಿಯ ಒಂದು ಬುಕ್‌ ಬಾಕ್ಸ್‌ ಅನ್ನು ಪರಿಚಯಿಸಿದ್ದೇವೆ. ಆದರೆ ಈ ಸ್ಟ್ರೇಂಜರ್‌ ಎಕ್ಸೇಂಜ್‌ ಅದಕ್ಕಿಂತ ಸ್ವಲ್ಪ ವಿಭಿನ್ನ. ಇದರಲ್ಲಿ ಉಪಯೋಗಿಸಬಹುದಾದ ವಸ್ತುಗಳನ್ನು ಉಚಿತವಾಗಿ ಅಪರಿಚಿತರಿಗೆ ಅಂದರೆ ಅದರ ಅಗತ್ಯ ಇರುವವರಿಗೆ ಕೊಡುವುದಾಗಿದೆ. ಅದು ನೇರವಾಗಿ ಕೊಡುವುದಲ್ಲ . ಪಾರ್ಕ್‌ನ ಕೆಲವು ಕಡೆ ಇರುವಂತಹ ಸ್ಟ್ರೇಂಜರ್‌ ಬಾಕ್ಸ್‌ ನೊಳಗೆ ವಸ್ತುಗಳನ್ನು ಹಾಕಬಹುದು. ಆ ಪಾರ್ಕ್‌ ಗೆ ಬರುವ ಅಪರಿಚಿತ ವ್ಯಕ್ತಿ ಅದರಲ್ಲಿನ ವಸ್ತುಗಳನ್ನು ತೆಗೆಯಬಹುದಾಗಿದೆ. ಕೊಟ್ಟ ವ್ಯಕ್ತಿಯ ಹೆಸರು ಮತ್ತು ಸಂಪರ್ಕ ಸಾಧಿಸುವುದಾದರೆ ಸ್ಟ್ರೇಂಜರ್‌ ಎಕ್ಸೇಂಜ್‌ನ ವೆಬ್‌ ಸೈಟ್‌ಗಳು ಇಲ್ಲಿವೆ . ಇದರಲ್ಲಿ ಸಿನೆಮಾ ಡಿ.ವಿಡಿ ಗಳು. ಪುಸ್ತಕಗಳು, ಚಿತ್ರಗಳು, ಕಲಾಕೃತಿಗಳು ಕಾಣ ಸಿಗುತ್ತವೆ. ನಮ್ಮಲ್ಲಿರುವ ಉತ್ತಮವಾದುದನ್ನು ಹಂಚಿಕೊಂಡು ಅದರಲ್ಲಿ ಖುಷಿಪಡುವವರಿಗೆ ಇದೊಂದು ಉತ್ತಮ ವೇದಿಕೆಯಾಗಿದೆ ಮತ್ತು ಬೇರೆಯವರಿಗೂ ಇಂತಹ ಸಂಹ‌ನ ಉತ್ತಮ ಸಂದೇಶವಾಗಿದೆ.

ಮಂಗಳೂರಿಗೂ ಬರಲಿ
ವಿದೇಶದಲ್ಲಿನ ಈ ಹೊಸ ಹೊಸ ವಿನೂತನ ಆಲೋಚನೆಗಳನ್ನು ನಮ್ಮಲ್ಲಿಯೂ ಅಳವಡಿಸಬಹುದು. ಖರ್ಚು, ವೆಚ್ಚವಿಲ್ಲದೆ ಹೊಸ ಯೋಜನೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಮಂಗಳೂರನ್ನು ನೋಡಲು ಬರುವವರಿಗೆ ವಾವ್‌ ಅನ್ನಿಸುವಂತಹ ಉದ್ಘಾರಗಳು ನಮ್ಮಲ್ಲಿ ನಿರ್ಮಾಣವಾಗಬೇಕಿದೆ. ಈ ಸ್ಟ್ರೇಂಜರ್‌ ಬಾಕ್ಸ್‌ ಅನ್ನು ಮಂಗಳೂರಿನ ಕದ್ರಿ ಪಾರ್ಕ್‌, ತಣ್ಣೀರು ಬಾವಿಯಲ್ಲಿ ಟ್ರೀ ಪಾರ್ಕ್‌, ಬಾವುಟಗುಡ್ಡೆಯಲ್ಲಿನ ಠಾಗೋರ್‌ ಪಾರ್ಕ್‌ ಮೊದಲಾದವುಗಳಲ್ಲಿ ಇಂತಹ ಸ್ಟ್ರೇಂಜರ್‌ ಎಕ್ಸೇಂಜ್‌ಗಳನ್ನು ಪಾರ್ಕ್‌ಗಳಲ್ಲಿ ನಿರ್ಮಿಸಬಹುದಾಗಿದೆ.

•ವಿಶ್ವಾಸ್‌ ಅಡ್ಯಾರ್‌

ಟಾಪ್ ನ್ಯೂಸ್

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.