ಗೆಲುವಿನ‌ ಓಟದೆಡೆಯಲ್ಲಿ ಮರೆವು ಇರಬಾರದು


Team Udayavani, Nov 11, 2019, 5:12 AM IST

Maa

ಗೆಲುವು ಎಲ್ಲರಿಗೂ ಅಗತ್ಯ. ಅದಕ್ಕಿಂತಲೂ ಹೆಚ್ಚಾಗಿ ಗೆಲುವು ಆತ್ಮ ವಿಶ್ವಾಸವನ್ನು ನೀಡುತ್ತದೆ. ಅದು ಹಾಗೇ ಅಲ್ವೇ.. ಮಾತೊಂದರಂತೆ ಗೆದ್ದ ಎತ್ತಿನ ಬಾಲ ಹಿಡಿಯಬೇಕು ಎಂಬುದು ಜಗದ ನಿಯಮ. ಹಾಗೇ ಗೆಲುವಿನ ಓಟ ಜೀವನದಲ್ಲಿ ನಿರಂತರವಾಗಿರುತ್ತದೆ. ಮಗುವೊಂದು ಶಾಲೆಗೆ ಹೋಗುವಾಗ ಸಣ್ಣ ಸಣ್ಣ ವಿಷಯಗಳಿಗೆ ಸಿಕ್ಕಿದ ಗೆಲುವಿನಿಂದ ಹಿಡಿದು ಉದ್ಯೋಗದಲ್ಲಿ ಭರ್ತಿ ಹೊಂದುವುದು ಕೂಡಾ ಗೆಲುವಿನ ಲೆಕ್ಕಾಚಾರವೇ.

ಪ್ರತಿಯೊಬ್ಬ ಮನುಷ್ಯನಿಗೂ ಜೀವನದಲ್ಲಿ ಯಾವತ್ತಾದರೂ ಒಮ್ಮೆ ಜೀವನದಲ್ಲಿ ಗೆಲ್ಲಲೇ ಬೇಕೆಂಬ ಹಠವಿರುತ್ತದೆ. ಅದಕ್ಕಾಗಿ ಸಣ್ಣಸಣ್ಣ ಸೋಲುಗಳನ್ನು ಅವನು ನಿಲ್ಯìಕ್ಷಿಸುತ್ತಾ ಬರುತ್ತಾನೆ. ಒಮ್ಮೆ ಗೆದ್ದಾಗ ಹಿಂದೆ ಅನುಭವಿಸಿದ ಸೋಲುಗಳೆಲ್ಲ ಆತನಿಗೆ ನಗಣ್ಯವಾಗಿ ತೋರುತ್ತದೆ. ಇದು ಸಂತೋಷವೇ ಆದರೆ ಗೆಲುವಿನ ಓಟದೆಡೆಯಲ್ಲಿ ಉಂಟಾಗುವ ಮರೆವು ಮಾತ್ರ ಎಂದಿಗೂ ಆಪತ್ತು ಉಂಟು ಮಾಡುವಂತದ್ದು ಆಗಿದೆ. ಅದು ಕೇವಲ ಮರೆವಲ್ಲ ಅಹಂಕಾರದ ಮತ್ತೂಂದು ರೂಪ. ಜೀವನ ಮತ್ತು ಸೋಲುಗಳಲ್ಲಿ ನಮ್ಮ ಜತೆಗಿದ್ದವರನ್ನು ಗೆದ್ದಾಗಲೂ ಜತೆಗೆ ಕರೆದುಕೊಂಡು ಹೋಗಬೇಕು. ಅಥವಾ ನಮ್ಮ ನೋವಿಗೆ ಸಾಂತ್ವನ ಹೇಳಿದವರನ್ನು ನೋವು ಮರೆತಾಗ ಮರೆತು ಬಿಡಬಾರದು.

ಈ ಮರೆವು ಸ್ವಾಭಾವಿಕವಲ್ಲ. ಅದರ ಹಿಂದೆ ನಮ್ಮ ಮನಃ ಸ್ಥಿತಿ ಅಡಗಿರುತ್ತದೆ. ಗೆಲುವು ನಮ್ಮ ಆತ್ಮಸ್ಥೈರ್ಯವನ್ನು ಹೆಚ್ಚಿಸುವುದರ ಜತೆಗೆ ನಮ್ಮ ಮನೋಬಲವನ್ನೂ ಹೆಚ್ಚಿಸುತ್ತದೆ. ಜತೆಗೆ ಯಾರೂ ಇಲ್ಲದಿದ್ದರೂ ನಾವು ಬದುಕು ಬಲ್ಲೆವೆಂಬ ಯೋಚನೆ ಯಾವಾಗ ನಮ್ಮ ತಲೆಯೊಳಗೆ ಹೊಕ್ಕುತ್ತದೆಯೋ ಅಲ್ಲಿಗೆ ನಮ್ಮ ಸ್ವಭಾವವೂ ಬದಲಾಗುತ್ತದೆ. ಎಲ್ಲರನ್ನು ಕಡೆಗಣಿಸಲು ಆರಂಭಿಸುತ್ತೇವೆ. ಸ್ನೇಹ, ಪ್ರೀತಿಗೆ ಅಲ್ಲಿ ಜಾಗವಿರುವುದಿಲ್ಲ. ಹೀಗೆ ಗೆಲುವಿನ ಪಯಣ ಒಂಟಿಯಾಗುತ್ತದೆ.

ಒಂಟಿ ಪಯಣ ಯಾವತ್ತಿದ್ದರೂ ಉತ್ತಮವೇ. ಆದರೆ ಕೆಲವೊಂದು ಬಾರಿ ಜೀವನ ಸಾರ್ಥಕತೆಯನ್ನು ಪಡೆಯಬೇಕಾದರೆ ಖುಷಿ ಹಂಚಿಕೊಳ್ಳಲು ನಮ್ಮ ಜತೆ ಯಾರಾದರೂ ಇರಲೇ ಬೇಕು. ಅದು ರಕ್ತ ಸಂಬಂಧವೇ ಆಗಬೇಕೆಂದಿಲ್ಲ. ನಮ್ಮ ಹೆಸರು ಕೇಳಿ ಖುಷಿ ಪಡುವ ಒಂದೆರಡು ಸ್ನೇಹಿತರಿದ್ದರೆ ಸಾಕು. ಅಂತೂ ಯಾರೂ ಇಲ್ಲದಿದ್ದರೆ ಮುಂದೊಂದು ದಿನ ಗೆಲುವು ನೀರಸವಾಗಿ ಬಿಡುತ್ತದೆ. ಗೆಲುವಿನೆಡೆಗಿನ ಓಟದಲ್ಲಿ ನಮ್ಮವರನ್ನೂ ಕರೆದುಕೊಂಡು ಓಡೋಣ.. ಆಗ ಸೋಲೇ ಆದರೂ ಹಂಚಿಕೊಳ್ಳಲು ಜತೆಗೆ ಜನರಿರುತ್ತಾರೆ.

-ಸುಶ್ಮಿತಾ ಶೆಟ್ಟಿ ಸಿರಿಬಾಗಿಲು

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.