ಟಿಎಂಆರ್‌ ಪದ್ಧತಿ ಜಾನುವಾರು ಆಹಾರಕ್ಕೆ ವರದಾನ


Team Udayavani, Oct 13, 2019, 5:37 AM IST

e-21

ನಮ್ಮಲ್ಲಿ ಭತ್ತದ ಹುಲ್ಲು, ಕರಡ ಹೆಚ್ಚಾಗಿ ಲಭ್ಯವಿರುವ ಜಾನುವಾರು ಆಹಾರವಾಗಿದೆ. ಅವುಗಳನ್ನು ಸೇವಿಸುವ ಪ್ರಮಾಣ ಶೇ. 1ರಿಂದ 15ರಷ್ಟು ಮಾತ್ರ ಅಂದರೆ 10 ಕೆ.ಜಿ. ತಿನ್ನುವ ಜಾನುವಾರು 5 ಕೆ.ಜಿ. ಮಾತ್ರ ತಿನ್ನುತ್ತದೆ. ಇದರಿಂದ 5 ಕೆ.ಜಿ. ಒಣ ಪದಾರ್ಥ ಕಡಿಮೆಯಾಗಿ ಅದರಲ್ಲೂ ನಾರಿನಂಶ ಕಡಿಮೆಯಾಗಿ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತದೆ. ಅದಕ್ಕಾಗಿ ಟಿಎಂಆರ್‌ ತಣ್ತೀ ಅಳವಡಿಸಿದಲ್ಲಿ ಸಮಸ್ಯೆ ಪರಿಹಾರ.

ಕರಾವಳಿ ಮತ್ತು ಮಲೆನಾಡಿನಲ್ಲಿ ನಮ್ಮ ರೈತರು ಜಾನುವಾರುಗಳಿಗೆ ಸಾಕಷ್ಟು ಆಹಾರ ನೀಡಿದರೂ ಬಯಲು ಸೀಮೆಯ ರೈತರ ಜಾನುವಾರುಗಳಿಗೆ ಹೋಲಿಸಿದರೆ ಅಷ್ಟೊಂದು ಆರೋಗ್ಯವಂತವಾಗಿರುವುದಿಲ್ಲ ಎಂಬ ಕೊರಗು ಇಲ್ಲಿಯ ರೈತರಲ್ಲಿದೆ. ಸಾಮಾನ್ಯವಾಗಿ ಭತ್ತದ ಹುಲ್ಲು, ಕರಡ, ಹಸಿರು ಮೇವು, ಹಿಂಡಿ ಮಿಶ್ರಣವನ್ನು ಇಲ್ಲಿಯವರು ಉಪಯೋಗಿಸಿದರೆ, ಬಯಲು ಸೀಮೆಯವರು ಜೋಳದ ದಂಟು, ಭತ್ತದ ಹುಲ್ಲು ಹಾಕುತ್ತಾರೆ. ಅವರು ಹಿಂಡಿಯನ್ನು ಅಷ್ಟಾಗಿ ಬಳಸುವುದಿಲ್ಲ. ಹವಾಮಾನ ವ್ಯತ್ಯಾಸ ಒಂದನ್ನು ಬಿಟ್ಟರೆ ಆಹಾರದ ಮೂಲದಲ್ಲಿ ವ್ಯತ್ಯಾಸ ಇಲ್ಲದಿದ್ದರೂ ಆರೋಗ್ಯದಲ್ಲಿ ಮಾತ್ರ ಅಜಗಜಾಂತರ ಇದೆ.

ಆರೋಗ್ಯವಂತ ಜಾನುವಾರುಗಳಿಗೆ ತನ್ನ ದೇಹ ತೂಕದ ಶೇ. 2ರಿಂದ 3ರಷ್ಟು ಒಣ ಪದಾರ್ಥದ ಆವಶ್ಯಕತೆ ಇದೆ. ಒಣಹುಲ್ಲು, ತಿಂಡಿ ಮಿಶ್ರಣ ಸೇರಿ ಇದನ್ನು ನಿರ್ಧರಿಸಬೇಕು. ಒಟ್ಟಾರೆ ಶೇ. 70ರಿಂದ 75ರಷ್ಟು ನಾರಿನ ಪದಾರ್ಥಗಳಾದ ಹುಲ್ಲು, ಸೊಪ್ಪು, ಕರಡ, ಜೋಳದ ದಂಟು ಇತ್ಯಾದಿ ಇರಬೇಕು. ಒಣ ಪದಾರ್ಥ ಸೇವನೆ ಕಡಿಮೆಯಾಗುತ್ತಿದ್ದಂತೆ ಹಿಂಡಿ ಮಿಶ್ರಣ ಹಾಕಿ ಜಾಸ್ತಿ ಮಾಡಿದರೂ ನಾರಿನಂಶದ ಕೊರತೆಯಿಂದ ಇವುಗಳು ಆರೋಗ್ಯವಂತವಾಗಿರುವುದಿಲ್ಲ.

ಜಾನುವಾರುಗಳು ಮೂಲತಃ ಒಣಹುಲ್ಲು, ಕರಡ, ಸೊಪ್ಪು ಇತ್ಯಾದಿ ತಿಂದು ಬದುಕುವ ಪ್ರಾಣಿ. ಹೆಚ್ಚು ಉತ್ಪಾದನೆ ಮಾಡುವುದಕ್ಕೆ ಹಿಂಡಿ ಮಿಶ್ರಣ ಹಾಕಲಾಗುತ್ತದೆ. ಆದರೆ ಒಣಹುಲ್ಲು, ಕರಡ ಕಡಿಮೆ ಮಾಡಿದಲ್ಲಿ ಅವುಗಳ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತದೆ. ಹುಲ್ಲನ್ನು ಹಾಕದೇ ಬರೀ ಹಿಂಡಿ ಮಿಶ್ರಣದಿಂದ ಯಾವ ಜಾನುವಾರುಗಳೂ ಬದುಕಲಾರವು. ಅದೇ ಉತ್ತಮ ಗುಣಮಟ್ಟದ ಹುಲ್ಲನ್ನು ಹಾಕಿದರೆ ಹಿಂಡಿಯ ಮಿಶ್ರಣ ಇಲ್ಲದೆ ಇವುಗಳು ಆರೋಗ್ಯವಾಗಿ ಇರಬಲ್ಲವು. ಆದ್ದರಿಂದ ರೈತರು ಆಹಾರ ಹಾಕುವ ಪದ್ಧತಿಯಲ್ಲಿ ಬದಲಾವಣೆ ಮಾಡಿ ಟಿಎಂಆರ್‌ ತಣ್ತೀ ಅಳವಡಿಸಿದಲ್ಲಿ ಈ ಎಲ್ಲ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಇದರ ಹೊರತಾಗಿ ಇನ್ನೂ ಅನೇಕ ಪರೋಕ್ಷ ಪ್ರಯೋಜನವನ್ನು ಈ ಪದ್ಧತಿಯಲ್ಲಿ ಪಡೆಯಬಹುದು. ಹೈನುಗಾರಿಕೆ, ಸಂಕಷ್ಟದಲ್ಲಿರುವ ಈ ಸಮಯದಲ್ಲಿ ಈ ತಣ್ತೀ ಅಳವಡಿಸಿದಲ್ಲಿ ಯಾವುದೇ ಹೆಚ್ಚು ಖರ್ಚು ಇಲ್ಲದೆ ಇದ್ದ ವ್ಯವಸ್ಥೆಯಲ್ಲೇ ಹೆಚ್ಚು ಹಾಲಿನ ಉತ್ಪಾದನೆ ಮಾಡಬಹುದಾಗಿದೆ.

ಟಿಎಂಆರ್‌ ಪದ್ಧತಿ ಎಂದರೇನು?: ಟಿಎಂಆರ್‌ ಪದ್ಧತಿ ಎಂದರೆ (ಟೋಟಲ್‌ ಮಿಕ್ಸ್‌ಡ್‌ ರೇಶನ್‌) ಒಟ್ಟಾರೆ ಮಿಶ್ರಣ ಆಹಾರ ಎಂದರ್ಥ. ಈ ಪದ್ಧತಿಯಲ್ಲಿ ಹುಲ್ಲು, ಹಸಿಹುಲ್ಲು, ಕರಡ ಇತ್ಯಾದಿಗಳನ್ನು ಸಣ್ಣದಾಗಿ ಕತ್ತರಿಸಿ ಅವುಗಳಿಗೆ ನಿರ್ದಿಷ್ಟ ಪ್ರಮಾಣದಲ್ಲಿ ಹಿಂಡಿ, ಲವಣ ಮಿಶ್ರಣ, ಉಪ್ಪು, ಬೆಲ್ಲ ಸೇರಿಸಿ ಜಾನುವಾರು ಗಳಿಗೆ ನೀಡುವ ಪದ್ಧತಿಯೇ “ಟಿಎಂಆರ್‌ ಪದ್ಧತಿ’ ಎಂದು ಕರೆಯುತ್ತಾರೆ. ಇದನ್ನು ಇವುಗಳ ದೇಹದ ತೂಕ, ಹಾಲಿನ ಉತ್ಪಾದನೆ, ಗರ್ಭಧಾರಣೆಗೆ ಅನುಗುಣವಾಗಿ ನೀಡಬೇಕು.

ಟಿಎಂಆರ್‌ ಪದ್ಧತಿಯ ಉಪಯೋಗ
1 ಒಟ್ಟಾರೆ ಒಣ ಪದಾರ್ಥ ಸೇವನೆ ಹೆಚ್ಚಳ. ಹುಲ್ಲು ರುಚಿಕರವಾಗಿರುವುದರಿಂದ ಜಾನುವಾರುಗಳು ಕಷ್ಟಪಟ್ಟು ತಿನ್ನದೇ ಇಷ್ಟಪಟ್ಟು ತಿನ್ನುತ್ತವೆ.
2 ಒಣ ಹುಲ್ಲು ಪೋಲು ತಡೆಗಟ್ಟಬಹುದು.
3 ಹಾಲಿನ ಪ್ರಮಾಣದಲ್ಲಿ ಹೆಚ್ಚಳ. ಪ್ರತಿಯೊಂದು ಕೆ.ಜಿ. ಒಣ ಮೇವಿನ ಹೆಚ್ಚುವರಿ ಸೇವನೆಯಿಂದ 0.9ರಿಂದ 1.5 ಲೀಟರ್‌ ಹಾಲು ಹೆಚ್ಚು ಉತ್ಪಾದನೆ ಮಾಡಬಹುದು.
4 ಜಿಡ್ಡಿನ ಪ್ರಮಾಣದಲ್ಲಿ ಹೆಚ್ಚಳ. ಜಾನುವಾರಿನ ಹೊಟ್ಟೆಯಲ್ಲಿ ರಸಸಾರ 6.2ರಿಂದ 6.8 ಇರುವುದರಿಂದ ಹೊಟ್ಟೆಯಲ್ಲಿ ಕ್ರಿಮಿಗಳು ಹೆಚ್ಚು ತಯಾರಾಗಿ ನೀರಿನ ಪದಾರ್ಥದ ಜೀರ್ಣಕ್ರಿಯೆ ಹೆಚ್ಚಾಗಿ ಆ್ಯಸಿಟಿಕ್‌ ಆಮ್ಲ ಹೆಚ್ಚು ತಯಾರಾಗಿ ಹಾಲಿನಲ್ಲಿ ಜಿಡ್ಡಿನ ಪ್ರಮಾಣ ಹೆಚ್ಚಳವಾಗುತ್ತದೆ.
5 ಆಹಾರ ಪದ್ಧತಿಯ ಏರುಪೇರಿನಿಂದ ಆಗುವ ಅಜೀರ್ಣ ತಡೆಗಟ್ಟಿದಂತಾಗುತ್ತದೆ.
6 ಗಮನಾರ್ಹವಾದ ಸಸಾರಜನಕ ಉತ್ಪಾದನೆಯಾಗುತ್ತದೆ. ರಸಸಾರ 6.2ರಿಂದ 6.8ರಲ್ಲಿ ಹೊಟ್ಟೆಯಲ್ಲಿರುವ ಕ್ರಿಮಿ ವೃದ್ಧಿಯಾಗಿ ಸಸಾರಜನಕ ಪ್ರಮಾಣ ಹೆಚ್ಚಳವಾಗುತ್ತದೆ.
7 ಲವಣ, ಹಿಂಡಿ ಮಿಶ್ರಣ ಪ್ರತ್ಯೇಕವಾಗಿ ನೀಡುವ ಆವಶ್ಯಕತೆ ಇಲ್ಲ.
8 ಈ ಪದ್ಧತಿಯಲ್ಲಿ ಜಾನುವಾರುಗಳು ಹುಲ್ಲು, ಹಿಂಡಿಯನ್ನು ಸಾವಕಾಶವಾಗಿ ಜಗಿದು ತಿನ್ನುವುದರಿಂದ ಜೊಲ್ಲಿನ ಪ್ರಮಾಣ ಹೆಚ್ಚಳವಾಗುತ್ತದೆ. ಇದು ಆಹಾರದೊಂದಿಗೆ ಸರಿಯಾಗಿ ಬೆರೆತು ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತದೆ.
9 ರೈತರು ಈ ಮಿಶ್ರಣವನ್ನು ಕನಿಷ್ಠ 3ರಿಂದ 4 ಬಾರಿ ನೀಡಬೇಕು. ಇದರಿಂದ ಆಹಾರ ಸಮಪ್ರಮಾಣದಲ್ಲಿ ಹೊಟ್ಟೆಗೆ ಸೇರಿ ತಿಂದ ಆಹಾರದ ಸಂಪೂರ್ಣ ಪ್ರಯೋಜನ ಇದಕ್ಕೆ ಲಭಿಸುತ್ತದೆ.
10 ಹಸಿರು ಮೇವು ಬಳಸುವಾಗ ಬಾಡಿಸಿ ನೀಡುವುದು ಉತ್ತಮ.
11 ಒಣ ಮೇವನ್ನು ಪುಷ್ಪೀಕರಿಸಿ ನೀಡುವ ಪದ್ಧತಿ ಅನುಸರಿಸುವ ರೈತರೂ ಸಹ ಈ ಹುಲ್ಲನ್ನು ಟಿಎಂಆರ್‌ ಪದ್ಧತಿ ಬಳಸಿ ನೀಡಬಹುದಾಗಿದೆ.
12 ಮಲೆನಾಡಿನಲ್ಲಿ ಹಾಳೆ, ಹೊಂಬಾಳೆ ಇತ್ಯಾದಿ ಕೃಷಿ ಉತ್ಪನ್ನ ಸಹ ಕಟಾವು ಮಾಡಿ ಈ ಪದ್ಧತಿ ಬಳಸಿ ನೀಡಬಹುದಾಗಿದೆ.
13 ಹಸಿ, ಒಣಹುಲ್ಲು ಎರಡೂ ಲಭ್ಯವಿದ್ದಾಗ ಶೇ. 50 ಒಣ ಹುಲ್ಲು, ಶೇ. 50 ಹಸಿಹುಲ್ಲು ಬೆರೆಸಿ ನೀಡುವುದು ಒಳ್ಳೆಯದು.
14 ಈ ತಣ್ತೀದಲ್ಲಿ ಅತಿ ಕೆಳಮಟ್ಟದ ಸಾಮಾನ್ಯ ಕ್ರಮದಲ್ಲಿ ಉಪಯೋಗಿಸಲಾಗದೆ ಇರುವ ಪದಾರ್ಥಗಳನ್ನು ಬಳಸಬಹುದಾಗಿದೆ. ಉದಾ: ಕಬ್ಬಿನ ಸಿಪ್ಪೆ.

-  ಜಯಾನಂದ ಅಮೀನ್‌, ಬನ್ನಂಜೆ

ಟಾಪ್ ನ್ಯೂಸ್

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.