ಅಂದ ಹೆಚ್ಚಿಸುವ ಟ್ರೆಂಡಿ ಕೈ ಗಡಿಯಾರ


Team Udayavani, Feb 22, 2019, 7:49 AM IST

22-february-9.jpg

ಯಾವುದೇ ಕೆಲಸದಲ್ಲಿ ತೊಡಗಿಕೊಳ್ಳಬೇಕಾದರೂ ಮನುಷ್ಯನಿಗೆ ಕೊಂಚ ಟೈಂ ಸೆನ್ಸ್‌ ಅನ್ನೋದು ಇರಬೇಕು, ಸಮಯವನ್ನು ತಿಳಿದುಕೊಳ್ಳುವುದಕ್ಕಾಗಿ ಹಿಂದಿನ ಕಾಲದಲ್ಲಿ ಜನರು ಸೂರ್ಯನ ಚಲನೆಯನ್ನು ಅವಲಂಬಿಸಿಕೊಂಡಿದ್ರೆ, ಈಗ ಕಾಲ ಬದಲಾಗಿದೆ. ಗಂಟೆ ತಿಳಿದುಕೊಳ್ಳುವುದಕ್ಕಾಗಿ ಗಡಿಯಾರ, ವಾಚ್‌ ಲಭ್ಯ. ಗಂಟೆಯ ಲೆಕ್ಕಾಚಾರಕ್ಕಾಗಿ ಆರಂಭವಾದ ವಾಚ್‌(ಕೈಗಡಿಯಾರ) ಇಂದು ಫ್ಯಾಶನ್‌ ಆಗಿಬಿಟ್ಟಿದೆ.

ನೀವು ಯಾವುದೇ ಬಟ್ಟೆ ತೊಟ್ಟುಕೊಳ್ಳಿ. ಅದಕ್ಕೆ ಸ್ಯೂಟೇಬಲ್‌ ಆದಂತಹ ಕೈ ಗಡಿಯಾರ ಕೈಯಲ್ಲಿ ಮಿಂಚುತ್ತಿದ್ದರೆ ಅದರ ಲುಕ್ಕೇ ಬೇರೆ. 2019 ರ ಎಸ್‌ಐಎಚ್‌ಎಚ್‌ ವಾಚ್‌ ಫೇರ್‌ನಲ್ಲಿ ಗಮನ ಸೆಳೆದ ಸ್ಟೈಲಿಷ್‌ ವಾಚ್‌ಗಳ ಬಗ್ಗೆ ಇಲ್ಲಿದೆ ಒಂದು ನೋಟ.

ಸ್ಮೋಕಿಂಗ್‌ ಸಲ್ಮಾನ್‌
ಸುಂದರವಾದ ರೆಟ್ರೋ ಮಾಂಟ್‌ಬ್ಲ್ಯಾಕ್‌ ಹೆರಿಟೇಜ್‌ ಪಲ್ಸಾಗ್ರಫಿ  ಅಳವಡಿಸಿರುವ ಈ ವಾಚ್‌ ನಿಮ್ಮ ರಕ್ತದೊತ್ತಡವನ್ನು ಓದುವ ಸಾಮರ್ಥ್ಯವನ್ನು ಹೊಂದಿದೆ. ನೀವು ಯಾವುದೇ ರೀತಿಯ ಉಡುಗೆಯನ್ನೇ ತೊಟ್ಟರೂ ಅದಕ್ಕೆ ರಾಯಲ್‌ ಲುಕ್‌ ತಂದುಕೊಡುವ ಕೆಲಸವನ್ನು ಈ ವಾಚ್‌ ಮಾಡುತ್ತದೆ. ನ್ಯಾವೀ ಕಾಶ್ಮೀರ್‌ ಸ್ಯೂಟ್‌ ಗಳಿಗಂತೂ ಈ ವಾಚ್‌ ಹೇಳಿ ಮಾಡಿಸಿದಂತಿದೆ. ಟೈಂ ಜತೆಯಲ್ಲಿ ನ್ಯಾವಿಗೇಷನ್‌ ತಂತ್ರಜ್ಞಾನವನ್ನೂ ಅಳವಡಿಸಲಾಗಿದೆ.

ಆಲ್‌ ಬ್ಲೂ ಅರ್ಥಾಂಗ್‌
ನೀಲಿ ಬಣ್ಣಗಳಲ್ಲಿನ ಆಲ್‌ ಬ್ಲೂ ಅರ್ಥಾಂಗ್‌ವಾಚ್‌ ನಿಮ್ಮ ಕೈಯ ಸೌಂದರ್ಯವನ್ನು ಎದ್ದು ಕಾಣುವಂತೆ ಮಾಡುತ್ತದೆ. ಗಿಲ್ಲೋಚ್ಡ್ ಡಯಲ್‌ ಮತ್ತು ನೀಲಿ ಬಣ್ಣದ ಕ್ಲಾಸಿಕ್‌ ಆಲ್ಟ್ರಾ ಥಿನ್‌ ಮಾದರಿಯಲ್ಲಿ ಈ ಕೈ ಗಡಿಯಾರವನ್ನು ತಯಾರಿಸಲಾಗಿದೆ. ಇದರ ಬೆಲ್ಟ್
ಕೂಡಾ ನೀಲಿ ಬಣ್ಣದಿಂದ ಕೂಡಿದೆ. ಸರಳ ಮತ್ತು ಸಂಕೀರ್ಣ ಮಾದರಿಯಲ್ಲಿದ್ದು, ಫಾರ್ಮಲ್‌ ಡ್ರೆಸ್‌ಗಳಿಗೆ ಹೆಚ್ಚು ಹೊಂದಿಕೆಯಾಗುತ್ತದೆ. ನಿಮ್ಮ ವಾರ್ಡ್‌ ರೋಬ್‌ನಲ್ಲಿ ಇದಕ್ಕೂ ಒಂದು ಸ್ಥಾನ ನೀಡಬಹುದು.

ಹೈಡ್ರೋ ಕಾಂಕ್ವೆಸ್ಟ್‌ ಕಲೆಕ್ಷನ್‌
ನೀರಿಗೆ ಸಂಬಂಧಿಸಿದ ಕ್ರೀಡೆಗಳಲ್ಲಿ ತೊಡಗಿಸಿಕೊಂಡವರಿಗೆಂದೇ ಈ ವಾಚ್‌ ಅನ್ನು ಕಂಡು ಹುಡುಕಿದಂತಿದೆ. ಆಧುನಿಕ ವೈಶಿಷ್ಟ್ಯ ಮತ್ತು ವಿನ್ಯಾಸಗಳನ್ನು ತನ್ನೊಳಗೆ ಅಡಕಗೊಳಿಸಿಕೊಂಡಿರುವ ಇದು ನೀರಿಗೆ ಬಿದ್ದರೂ ಕೆಟ್ಟು ಹೋಗುವುದಿಲ್ಲ. ಸ್ಕ್ರೀವ್‌ ಡೌನ್‌ ಕ್ರೌನ್‌ ಮತ್ತು ಹ್ಯಾಕ್ಸ್‌ ಬ್ಯಾಕ್‌ಗಳು ಇದರ ವಿಶಿಷ್ಟತೆಯಾಗಿದೆ. ಸೆಕ್ಯೂರಿಟೀ ಫೋಲ್ಡಿಂಗ್‌ ಕ್ಲ್ಯಸ್ಪ್ , ನೀರು ನಿರೋಧಕ ಗುಣ, ಮತ್ತು ಬಣ್ಣದ ಸಿರಾಮಿಕ್‌ ಇನ್ಸ್‌ಟ್ರೋನೊಂದಿಗೆ ಈ ಕಾಲಕ್ಕೆ ಹೊಂದುವಂತಹ ಸ್ಟೈಲ್‌ ಗಳಲ್ಲಿದನ್ನು ತಯಾರಿಸಲಾಗಿದೆ. ಬೂದು, ಕಪ್ಪು ಮತ್ತು ನೀಲಿ ಬಣ್ಣಗಳಲ್ಲಿ ಈ ವಾಚ್‌ ಮಾರುಕಟ್ಟೆಯಲ್ಲಿ ಲಭ್ಯ.

ಈ ಜಮಾನದಲ್ಲಿ ವಾಚ್‌ ಮೇಲೆ ಕ್ರೇಜ್‌ ಇಲ್ಲದವರು ಕಡಿಮೆ ಎಂದೇ ಹೇಳಬಹುದು. ಕೆಲವರಿಗಂತೂ ವಾಚ್‌ ಕಲೆಕ್ಟ್ ಮಾಡೋ ಹುಚ್ಚು ಕೂಡಾ ಇರುತ್ತದೆ. ಅವರೆಲ್ಲರಿಗಾಗಿ ಈ ಮಾಹಿತಿ. ಹೊಸತು, ಖರೀದಿಸಿ ನೋಡಿ. 

ಬ್ಯಾಕ್‌ ಟು ಬೇಸಿಕ್‌
ಯಾವುದೇ ಟ್ರೆಂಡ್‌ ಬೇಕಾದರೂ ಆರಂಭವಾಗಲಿ. ಕೆಲವರು ಇಷ್ಟ ಪಡುವುದು ಬೇಸಿಕ್‌, ನಾರ್ಮಲ್‌ ಮತ್ತು ಸಿಂಪಲ್‌ ಆಗಿರುವಂತಹ ವಸ್ತುಗಳನ್ನೇ. ಯುವ ಜನರನ್ನೇ ಗುರಿಯಗಿಸಿಟ್ಟುಕೊಂಡು ಆರಂಭಿಸಲಾದ ವಾಚ್‌ ಒಂದು ಇಲ್ಲಿದೆ. ಐಷಾರಾಮಿ ಕೈ ಗಡಿಯಾರದ ಲಿಸ್ಟಿನಲ್ಲಿ ಹಿಂದಿನ ಮಾಡೆಲ್‌  ಮತ್ತೆ ಬಂದಿರುವುದೇ ಇದರ ವಿಶೇಷತೆ. ಹಾರೋಲಾಜಿಕಲ್‌ ಅಚ್ಚರಿಗಳನ್ನು ಹೊಂದಿರುವ ಬಿಟಿಬಿ ಎಲ್ಲ ವಿಧದ ಬಟ್ಟೆಗಳ ಸೌಂದರ್ಯವನ್ನು ಹೆಚ್ಚಿಸುವಲ್ಲಿ ನಿಮ್ಮ ಜತೆ ನಿಲ್ಲುತ್ತದೆ. ಕೇವಲ ಗಂಟೆ ಮತ್ತು ನಿಮಿಷದ ಮುಳ್ಳುಗಳನ್ನು ಮಾತ್ರವೇ ಹೊಂದಿರುವ ಈ ವಾಚ್‌ ಸಿಂಪಲ್ಲಾಗಿದೆ. ಸರ್ವಕಾಲಕ್ಕೂ ಪ್ರಸ್ತುತವಾಗಿದೆ.

ಭುವನ ಬಾಬು, ಪುತ್ತೂರು

ಟಾಪ್ ನ್ಯೂಸ್

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

16

ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ

1-gadaga

Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ

15

ಶರ್ಟ್‌ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

LS Polls: ಮಹಿಳಾ ಮೀಸಲಾತಿ ಕೊಟ್ಟಿದ್ದು ಮೋದಿ, ಕಾಂಗ್ರೆಸ್‌ನಿಂದ ಸುಳ್ಳಿನ ರಾಜಕಾರಣ: BYR

LS Polls: ಮಹಿಳಾ ಮೀಸಲಾತಿ ಕೊಟ್ಟಿದ್ದು ಮೋದಿ, ಕಾಂಗ್ರೆಸ್‌ನಿಂದ ಸುಳ್ಳಿನ ರಾಜಕಾರಣ: BYR

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.