ವಾಟರ್‌ ಟವರ್‌: ಸ್ಮಾರ್ಟ್‌ಸಿಟಿಯ ಆದ್ಯತೆಯಾಗಲಿ


Team Udayavani, Aug 25, 2019, 5:00 AM IST

r-13

ಭಾರತ ನಗರೀಕರಣಕ್ಕೆ ತೆರೆದುಕೊಂಡಿದೆ. ಇದಕ್ಕೆ ಪೂರಕವಾಗಿಯೇ ದೇಶದಲ್ಲಿ ನಗರಗಳನ್ನು ನಿರ್ಮಿಸಲಾಗುತ್ತಿದೆ. ರಸ್ತೆ, ಬಹುಮಹಡಿ ಕಟ್ಟಡ, ಹೊಟೇಲ್, ರೆಸ್ಟೋರೆಂಟ್, ಪಾರ್ಕ್‌ , ಬಸ್‌ ನಿಲ್ದಾಣ ಸಹಿತ ಹಲವಾರನ್ನು ಅತ್ಯಾಧುನಿಕವಾಗಿ ನಿರ್ಮಿಸಿ ನಗರವನ್ನು ಶ್ರೀಮಂತಗೊಳಿಸುತ್ತಿದ್ದೇವೆ. ಆದರೆ ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗೆ ಇದು ಎಷ್ಟು ಪೂರಕವಾಗಬಲ್ಲದು. ಇದು ಎಲ್ಲರಿಗೂ ವಾಸಿಸಲು ವಸತಿ ಸೌಲಭ್ಯ ಸಿಗಲಿದೆಯೇ ಎಂಬ ಪ್ರಶ್ನೆ ಮೂಡುವುದು ಸಹಜ.

ಆದರೆ ಈ ಪ್ರಶ್ನೆಗೆ ಉತ್ತರವಾಗಿ ನಾವು ಮಿಕ್ಸ್‌ ಯೂಸ್ಡ್ ಬಿಲ್ಡಿಂಗ್‌ (ಮಿಶ್ರ ಕಟ್ಟಡ ಮಾದರಿ)ಯಲ್ಲಿ ನಿರ್ಮಿಸಿದಾಗ ಸಮರ್ಪಕವಾಗಿ ನಗರದ ಎಲ್ಲ ಜನರಿಗೂ ವಸತಿ ದೊರಕಿಸಬಹುದು ಎಂದು ಈ ಹಿಂದೆ ತಿಳಿಸಲಾಗಿತ್ತು. ಈ ಮಾದರಿಯ ಬಹುಮಹಡಿ ಕಟ್ಟಡದಲ್ಲಿ ಒಂದೇ ಸೂರಿನಡಿ ಹಲವು ಮಾದರಿ ಪ್ರಯೋಗಗಳನ್ನು ಮಾಡಬಹುದು. ಅಂದರೆ ವಾಸಿಸುವ ಬಹುಮಹಡಿ ಕಟ್ಟಡದಲ್ಲಿ ಆಫೀಸ್‌, ಮನೆ, ರೆಸ್ಟೋರೆಂಟ್, ಥಿಯೇಟರ್‌ ಸಹಿತ ನಿರ್ಮಿಸಿ ನಾವು ಮಾದರಿಯಾಗಿ ವಾಸಿಸಬಹುದು. ಹಾಗೆಯೇ ಇದೇ ಮಿಕ್ಸ್‌ ಯೂಸ್ಡ್ ಬಿಲ್ಡಿಂಗ್‌ ಮಾದರಿಯಲ್ಲಿ ಡೆನ್ಮಾರ್ಕ್‌ನ ಜೇಗಸ್ಬರ್ಗ್‌ ಎಂಬಲ್ಲಿ ಬಹುಮಹಡಿ ಕಟ್ಟಡಲ್ಲಿ ವಾಟರ್‌ ಟವರ್‌ ನಿರ್ಮಿಸಿ ಎಲ್ಲ ಬೆಳೆಯುತ್ತಿರುವ ನಗರಗಳಿಗೆ ಮಾದರಿಯಾಗಿದ್ದಾರೆ.

ಒಂದೇ ಸೂರಿನಡಿ ಹಲವು ಉಪಯೋಗ
ಇದರ ನಿರ್ಮಾಣದಿಂದ ನಾವು ನಗರೀಕರಣಕ್ಕೆ ಆಶಯವಾಗಿ ಉಪಯೋಗವಾಗಿ ಪಡೆದುಕೊಳ್ಳಬಹುದು. ಒಂದು ಕಟ್ಟಡ ಹಲವು ಮಾದರಿಯಲ್ಲಿ ಉಪಯೋಗವಾದಾಗ ಜನಸಂಖ್ಯೆ ವಾಸಿಸಲು ಜಾಗ ಮಾಡಿಕೊಳ್ಳಬಹುದು. ಒಂದು ಕಟ್ಟಡವನ್ನು ಕೇವಲ ವಾಸಿಸಲು ಮಾತ್ರವಲ್ಲದೇ ನೀರಿನ ಸಂಗ್ರಹಕ್ಕೆ, ಮಳೆ ನೀರಿನ ಕೊಯ್ಲುಗೆ ಮಾದರಿಯಾಗಿ ವಾಟರ್‌ ಟವರ್‌ನಿಂದ ಉಪಯೋಗಿಸಿಕೊಳ್ಳಬಹುದಾಗಿದೆ. ಜನ ವಸತಿಗೆ ಇದು ಪೂರಕವಾಗವಬಹುದು. ಇಂದು ಭಾರತದಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ದೇಶದಲ್ಲಿ ವಸತಿ ಸಮಸ್ಯೆಯೇ ಒಂದು ದೊಡ್ಡ ತಲೆ ನೋವಾಗಿದೆ. ಈ ಮಾದರಿಯಲ್ಲಿ ನಾವು ಅಳವಡಿಸಿಕೊಂಡರೇ ಸ್ವಲ್ಪ ಪ್ರಮಾಣದಲ್ಲಾದರೂ ಪರಿಹಾರ ಕಂಡುಕೊಳ್ಳಬಹುದು. ಹೀಗಾಗಿ ಭಾರತದಂತ ದೇಶಗಳಿಗೆ ಡೆನ್ಮಾರ್ಕ್‌ನ ಜೇಗಸ್ಬರ್ಗ್‌ ಈ ಮಾದರಿ ತುಂಬಾ ಅನುಕೂಲವಾಗಲಿದೆ. ವಾಸ್ತವದಲ್ಲಿ ಸರಿಹೊಂದಲಿದೆ. ಮಂಗಳೂರಿಗೆ ಬರಲಿ

ಇನ್ನು ಇದಕ್ಕೆ ಉತ್ತರವೆಂಬಂತೆ, ಮಂಗಳೂರು ನಗರವೂ ಸ್ಮಾರ್ಟ್‌ ಸಿಟಿಯಾಗಿ ಬೆಳೆಯುತ್ತಿದ್ದು, ನಗರದಲ್ಲಿ ಹಲವು ಮಾದರಿ ಗಗನ ಚುಂಬಿ ಹಾಗೂ ಬಹುಮಹಡಿ ಕಟ್ಟಡಗಳು ಕಾಣಬಹುದು. ಈ ಕಟ್ಟಡಗಳು ಕೇವಲ ಒಂದೇ ಉಪಯೋಗಕ್ಕಾಗಿ ಬಳಸದೇ ವಾಟರ್‌ ಟವರ್‌ ನಿರ್ಮಿಸಿ ಬಹು ಮಾದರಿಯಾಗಿ ಬಳಕೆ ಮಾಡಿದಾಗ ನಗರೀಕರಣ ಹಲವು ಸಮಸ್ಯೆಗಳಿಗೆ ಉತ್ತರವಾಗಲಿದೆ. ಇನ್ನು ಆಡಳಿತ ವ್ಯವಸ್ಥೆಯೂ ಕೂಡ ಸ್ಮಾರ್ಟ್‌ ಸಿಟಿ ಆದ್ಯತೆಗಳಲ್ಲಿ ಮಿಶ್ರ ಕಟ್ಟಡ ಮಾದರಿಯಾಗಿ ವಾಟರ್‌ ಟವರ್‌ ನಿರ್ಮಿಸಿದಾಗ ಕಳೆದ ಬೇಸಗೆಯಲ್ಲಿ ಬಂದಿದ್ದ ನೀರಿನ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಬಹುದಾಗಿದೆ.

ನಿರ್ಮಾಣ ಹೇಗೆ?
ವಾಟರ್‌ ಟವರ್‌ ನಿರ್ಮಾಣವೂ ಬಹುತೇಕ ತಂತ್ರಜ್ಞಾನ ಪೂರಿತವಾಗಿ ನಿರ್ಮಿಸಲಾಗಿದೆ. ಡೆನ್ಮಾರ್ಕ್‌ ಜನರ ಅಗತ್ಯ ಹಾಗೂ ಸ್ಥಳದ ಅಭಾವವನ್ನು ಗಮನದಲ್ಲಿ ಟ್ಟುಕೊಂಡು ಒಂದೇ ಸೂರಿನಡಿ, ಹಲವು ಉಪಯೋಗ ಎಂಬಂತೆ ವಾಟರ್‌ ಟವರ್‌ನ್ನು ನಿರ್ಮಿಸಲಾಗಿದೆ. ಈ ವಾಟರ್‌ ಟವರ್‌ ಸಂಪೂರ್ಣ ಕಾಂಕ್ರೀಟ್ನಿಂದ ರಚಿಸಲಾಗಿದೆ. ಕಟ್ಟಡದ ಒಂದು ಹೊರ, ಒಂದು ಒಳಗಿನ ಕಾಲಮ್‌ಗಳು ಮಹಡಿ ಗಳಿಗೆ ಹೊಂದಿಕೊಂಡುನಿರ್ಮಿಸಲಾಗಿದೆ.

ಏನಿದು ವಾಟರ್‌ ಟವರ್‌
ವಾಟರ್‌ ಟವರ್‌ ಬಿಲ್ಡಿಂಗ್‌ ಇದು ಮಿಕ್ಸ್‌ ಯೂಸ್ಡ್ ಬಿಲ್ಡಿಂಗ್‌ (ಮಿಶ್ರ ಕಟ್ಟಡ ಮಾದರಿ)ಗೆ ಪೂರಕವಾಗಿ ನಿರ್ಮಿಸಲಾಗಿದೆ. ಡೆನ್ಮಾರ್ಕ್‌ನ ಜೇಗಸºರ್ಗ್‌ನ ಸುಮಾರು 12 ಅಂತಸ್ತಿನಲ್ಲಿ ಬಹು ಮಹಡಿ ಕಟ್ಟಡದಲ್ಲಿ ನಿರ್ಮಿಸಲಾಗಿದೆ. ಕೆಳಗಡೆ ವಾಸಿ ಸುವ ಮನೆಗಳಿದ್ದು, ಮೇಲೆ ವಾಟರ್‌ ಟವರ್‌ನ್ನು ಅತ್ಯಾಧುನಿಕವಾಗಿ ಮಳೆ ನೀರನ್ನು ಸಂಗ್ರಹಿಸಲು, 12 ಅಂತಸ್ತಿನ ಕಟ್ಟಡದ ಜನರಿಗೆ ನೀರು ಪೊರೈಸಲು ಈ ಮಾದರಿ ವಾಟರ್‌ಟವರ್‌ ಸಹಾಯವಾಗಿದೆ.

•ಶಿವ ಸ್ಥಾವರಮಠ

ಟಾಪ್ ನ್ಯೂಸ್

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

9-udupi

ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.