ದೊಡ್ಡ ಗಾತ್ರದ ಟಯರ್‌ ಹಾಕಿದ್ರೆ ಏನಾಗುತ್ತೆ?


Team Udayavani, Aug 3, 2018, 3:24 PM IST

3-agust-13.jpg

ವಾಹನಗಳಿಗೆ ದೊಡ್ಡ ಗಾತ್ರದ ಟಯರ್‌ ಹಾಕುವುದು ಒಂದು ಕ್ರೇಜ್‌. ಲುಕ್‌ ಚೆನ್ನಾಗಿರಬೇಕು ಎನ್ನುವ ಕಾರಣಕ್ಕೆ ಕಾರು, ಎಸ್‌ಯುವಿಗಳಿಗೆ ದೊಡ್ಡ ಗಾತ್ರದ ಟಯರ್‌ನ್ನು ಹಾಕುವುದನ್ನು ಯುವಕರೇ ಹೆಚ್ಚು ಇಷ್ಟ ಪಡುತ್ತಾರೆ. ಹೀಗೆ ದೊಡ್ಡ ಟಯರ್‌ ಹಾಕಿದ್ರೆ ಏನಾಗುತ್ತೆ? ನೋಡೋಣ ಬನ್ನಿ!

ಉತ್ತಮ ಹ್ಯಾಡ್ಲಿಂಗ್‌
ದೊಡ್ಡ ಟಯರ್‌ ಹಾಕುವುದರಿಂದ ವಾಹನ ಚಾಲನೆ ವೇಳೆ ಉತ್ತಮ ಹ್ಯಾಂಡ್ಲಿಂಗ್‌ ಸಾಧ್ಯವಾಗುತ್ತದೆ. ತಿರುವಿನಲ್ಲಿ ಹೆಚ್ಚು ಗ್ರಿಪ್‌ ಇರುತ್ತದೆ. ವಾಹನ ಹೆಚ್ಚು ಸ್ಥಿರವಾಗಿ ರಸ್ತೆಯಲ್ಲಿ ಸಾಗಲು ದೊಡ್ಡ ಟಯರ್‌ ನೆರವು ನೀಡುತ್ತದೆ. ದೊಡ್ಡ ಟಯರ್‌ಗಳ ಬಟನ್‌ಗಳೂ ದೊಡ್ಡದಿರುವುದರಿಂದ ಸ್ಲಿಪ್‌ ಆಗುವ ಸಮಸ್ಯೆ ಇತ್ಯಾದಿಗಳು ಕಡಿಮೆ.

ಬೆಲೆ ಹೆಚ್ಚು
ದೊಡ್ಡ ಟಯರ್‌ಗಳಿಗೆ ಸಹಜವಾಗಿ ಬೆಲೆ ಹೆಚ್ಚು. ವಾಹನದ ಸೌಂದರ್ಯ ವೃದ್ಧಿಗಾಗಿಯೇ ಹೆಚ್ಚಿನವರು ದೊಡ್ಡ ಟಯರ್‌ ಅನ್ನು ಆರಿಸುತ್ತಾರೆ. ಆದರೆ ಇದಕ್ಕೆ ಹೆಚ್ಚು ಬೆಲೆ ಕೊಡಬೇಕಾದ್ದೂ ಅನಿವಾರ್ಯ. ಕಂಪೆನಿಗಳಿಗೆ ಅನುಸಾರವಾಗಿ ಬೆಲೆಯಲ್ಲಿ ವ್ಯತ್ಯಾಸವಿರುತ್ತದೆ.

ಚಾಲನೆ ಸುಖಕರವಲ್ಲ!
ದೊಡ್ಡ ಟಯರ್‌ ನಿಂದ ಚಾಲನೆ ಹೆಚ್ಚು ಸುಖಕರವಾಗಿ ಇರಲಾರದು. ಸಣ್ಣ ಹಂಪ್ಸ್‌ಗಳಲ್ಲಿ ಎತ್ತಿ ಹಾಕಿದಂತೆ ಭಾಸವಾಗಬಹುದು. ಕಾರಣ ನಿರ್ದಿಷ್ಟ ಟಯರ್‌ ಗಾತ್ರಕ್ಕೆ ಅನುಗುಣವಾಗಿ ವಾಹನಗಳಲ್ಲಿ ಶಾಕ್‌ ಅಬ್ಸಾರ್ಬರ್‌ಗಳು ಇರುತ್ತವೆ. ದೊಡ್ಡ ಗಾತ್ರದ ಟಯರ್‌ಗಳಿಗೆ ಪೂರಕವಾಗಿ ಇದು ಪ್ರತಿಕ್ರಿಯಿಸದೇ ಇರುವುದರಿಂದ ಸಮಸ್ಯೆಯಾಗಲು ಸಾಧ್ಯವಿದೆ. ಜತೆಗೆ ಸ್ಟೀರಿಂಗ್‌ ಹೆಚ್ಚು ಭಾರವಿದ್ದಂತೆ ಗಟ್ಟಿಯಾದಂತೆ ಭಾಸವಾಗಬಹುದು. ದೊಡ್ಡ ಟಯರ್‌ ತಿರುಗಿಸಲು ಹೆಚ್ಚಿನ ಬಲಪ್ರಯೋಗ ಅಗತ್ಯವಿರುವುದರಿಂದ ಹೀಗಾಗುತ್ತದೆ.

ಬೇಗನೆ ಸವೆತ
ದೊಡ್ಡ ಟಯರ್‌ನ ಮೇಲೆ ಹೆಚ್ಚಿನ ಒತ್ತಡ, ಶಾಕ್‌ ಅಬ್ಸಾರ್ಬರ್‌ಗಳು ಪರಿಣಾಮಕಾರಿಯಾಗಿ ಕೆಲಸ ಮಾಡದೇ ಇರುವುದರಿಂದ ನಿರ್ದಿಷ್ಟ ಗಾತ್ರಕ್ಕಿಂತ ದೊಡ್ಡ ಟಯರ್‌ ಅಳವಡಿಸಿದರೆ ಬೇಗನೆ ಸವೆಯುವ ಸಾಧ್ಯತೆ ಇದೆ. ಜತೆಗೆ ಟಯರ್‌ಗಳು ವಾಹನದ ಬಾಡಿಗೆ ತಾಗಿ ಸವೆತ, ಮಡ್‌ಗಾರ್ಡ್‌ಗೆ ತಾಗುವ ಸಮಸ್ಯೆಗಳು ಉದ್ಭವಾಗಬಹುದು.

ಸ್ಪೀಡೋ ಮೀಟರ್‌ ಮಾಪನ ಬದಲು
ದೊಡ್ಡ ಗಾತ್ರದ ಟಯರ್‌ ಹಾಕಿದ್ದರೆ ವಾಹನದ ಸ್ಪೀಡೋ ಮೀಟರ್‌ ಮಾಪನದಲ್ಲೂ ವ್ಯತ್ಯಾಸವಾಗುತ್ತದೆ. ಉದಾ 16 ಇಂಚಿನ ಬದಲಿಗೆ 19 ಇಂಚಿನ ಟಯರ್‌ ಹಾಕುವುದರಿಂದ ಅದರ ವ್ಯಾಸದಲ್ಲಿ ಬದಲಾವಣೆಯಾಗಿ ಸ್ಪೀಡೋ ಮೀಟರ್‌ ಮಾಪನ ಬದಲಾಗುತ್ತದೆ. ಹೀಗೆ ಬದಲಾವಣೆಯಿಂದ ಸುಮಾರು ಶೇ.10ರಷ್ಟು ನೈಜ ಮಾಪನದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇರುತ್ತದೆ. ಅರ್ಥಾತ್‌ ಕಾರು 60 ಕಿ.ಮೀ. ವೇಗದಲ್ಲಿ ಹೋಗುತ್ತಿದೆ ಎಂದು ಸ್ಪೀಡೋ ಮೀಟರ್‌ ತೋರಿಸಿದರೆ ನೈಜ ವೇಗ 65 ಕಿ.ಮೀ.ಯಲ್ಲಿರಬಹುದು. 

 ಈಶ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.