ಜೀವನದ ಜಾತ್ರೆಯಲ್ಲಿ ನಮ್ಮ ನಾವೆ ಯಾವುದು?


Team Udayavani, Apr 15, 2019, 6:14 AM IST

PTI6_25_2018_000188B

ಮನಸ್ಸು ಹೇಗೇ ಇರಲಿ, ಅದರಲ್ಲಿ ಒಳ್ಳೆಯದೇ ತುಂಬಿರಲಿ.

ಒಂದೂರಿನಲ್ಲಿ ಒಬ್ಬ ವ್ಯಕ್ತಿಯಿದ್ದ. ಸರಿಸುಮಾರು 70 ವರ್ಷವಾಗಿರಬಹುದು. ಸದಾ ಖುಷಿ ಖುಷಿಯಲ್ಲಿರುತ್ತಿದ್ದ. ಅವನನ್ನು ಕಂಡವರಿಗೆಲ್ಲಾ ಅಚ್ಚರಿ. ಹೇಗೆ ಈತ ಸದಾ ನಗುತ್ತಿರುತ್ತಾನೆ?

ಈ ವಿಷಯ ಊರಿಂದ ಊರಿಗೆ ಹರಡಿ ಬಹಳ ರಾಜನ ಕಿವಿಗೂ ಬಿತ್ತು. ಅವನಿಗೂ ಆಚ್ಚರಿಯಾಯಿತು. ಎಲ್ಲ ಸುಖ ಸಂಪತ್ತುಗಳಿವೆ, ಅಧಿಕಾರವಿದೆ, ಅಂತಸ್ತಿದೆ. ಆದರೂ ಬದುಕು ಯಾಕಯ್ನಾ ಬೇಕು ಎಂದು ಎನ್ನಿಸುವುದುಂಟು. ಅಂಥದ್ದರಲ್ಲಿ ಅವನು ಹೇಗೆ ಖುಷಿಯಾಗಿರುತ್ತಾನೆ ಎಂಬ ಕುತೂಹಲ ಮೂಡಿತು. ತನ್ನ ಮಂತ್ರಿವರ್ಯರನ್ನು ಕರೆದು ಅವನನ್ನು ಕರೆತರುವಂತೆ ಆದೇಶಿಸಿದ.

ಮಂತ್ರಿವರ್ಯರು ಸಕಲ ವ್ಯವಸ್ಥೆಗಳೊಂದಿಗೆ ಆ ವ್ಯಕ್ತಿಯಿದ್ದ ಕಡೆಗೆ ಹೊರಟರು. ಕುದುರೆ ಸವಾರಿ. ಬೇಕಾಗುವಷ್ಟು ಆಹಾರ ಸಾಮಗ್ರಿಗಳ ಜತೆಗೆ ಕಂಡಾಪಟ್ಟೆ ಎನ್ನುವಷ್ಟು ಚಿನ್ನಾಭರಣಗಳನ್ನು ಶೇಖರಿಸಿಕೊಂಡು ಹೊರಟಿದ್ದರು. ಅದಕ್ಕೆ ಕಾರಣ, ಯಾವ ಬೆಲೆಯನ್ನಾದರೂ ತೆತ್ತು ಅವನನ್ನು ಕರೆದುಕೊಂಡು ಹೋಗುವುದು. ಊರಿನವರು ವಿರೋಧಿಸಿದರೂ ಸೂಕ್ತ ಬೆಲೆಯನ್ನು ಕೊಟ್ಟು ಬರಲೂ ಸಿದ್ಧರಾಗಿದ್ದರು. ಎರಡು ದಿನಗಳ ಪಯಣದ ಬಳಿಕ ಆ ಊರು ಸಿಕ್ಕಿತು. ಹೆಬ್ಟಾಗಿಲಲ್ಲೇ ಜನರಿಗೆ ಈ ರಾಶಿ ರಾಶಿ ಕುದುರೆ ಮತ್ತು ಜನರನ್ನು ಕಂಡು ದಿಗಿಲಾಯಿತು. ಅಷ್ಟರಲ್ಲಿ ಹಿರಿಯ ಮಂತ್ರಿಯೊಬ್ಬ ಜನರಲ್ಲಿ ಕೈ ಮುಗಿದು ತಾವು ಬಂದ ಉದ್ದೇಶವನ್ನು ವಿವರಿಸಿದ. ಇದನ್ನು ಕೇಳಿದ ಜನರು ಇಡೀ ಸೈನ್ಯವನ್ನು ಕರೆದುಕೊಂಡು ಅಚ್ಚರಿ ವ್ಯಕ್ತಿಯ ಬಳಿ ಕರೆದೊಯ್ದರು.

ಸಣ್ಣ ಗುಡಿಸಲು. ಅಂಗಳದಲ್ಲಿ ಹತ್ತಾರು ಹೂವುಗಳು ಅರಳಿದ್ದವು. ಒಂದೊಂದರಲ್ಲೂ ಒಂದೊಂದು ಬಣ್ಣ. ಕಣ್ಣ ತುಂಬಿಕೊಂಡಷ್ಟೂ ಬಣ್ಣ. ಸುತ್ತಲೂ ಹಸಿರು. ಮನೆಯ ಹಿಂದೆ ಬೆಟ್ಟದ ರಾಶಿ. ಮನಸ್ಸು ಪ್ರಫ‌ುಲ್ಲಗೊಳ್ಳುವಂಥ ವಾತಾವರಣ. ಮನೆಯ ಬಾಗಿಲು ತೆರೆದೇ ಇತ್ತು. ಊರಿನ ವ್ಯಕ್ತಿಯೊಬ್ಬ ಮನೆಯೊಳಗೆ ಹೋಗಿ ಅಚ್ಚರಿ ವ್ಯಕ್ತಿಗೆ ವಿಷಯ ತಿಳಿಸಿದ. ಆಯಿತೆಂದು ತಲೆ ಆಡಿಸಿಕೊಂಡು ಹೊರ ಬಂದ ವ್ಯಕ್ತಿ ಎಲ್ಲರಿಗೂ ಕೈ ಮುಗಿದ.

ಮಂತ್ರಿ ಅವನಲ್ಲಿ ತನ್ನ ಉದ್ದೇಶವನ್ನು ತಿಳಿಸಿ, ರಾಜನಲ್ಲಿಗೆ ಬರುವಂತೆ ವಿನಂತಿಸಿಕೊಂಡ. ಕೆಲ ಕ್ಷಣ ಆಲೋಚಿಸಿದವ ಬಳಿಕ ಒಪ್ಪಿಕೊಂಡ. ಸಣ್ಣದೊಂದು ಬಟ್ಟೆಯ ಗಂಟನ್ನು ಹಿಡಿದುಕೊಂಡು ಸಿದ್ಧನಾದ ಅಚ್ಚರಿ ವ್ಯಕ್ತಿ. ಮಂತ್ರಿ ತಂದ ಆಭರಣಗಳನ್ನೆಲ್ಲಾ ಕೊಡಲು ಮುಂದಾದಾಗ ಅದೇ ಅಚ್ಚರಿ ವ್ಯಕ್ತಿ ಜನರತ್ತ ಕೈ ತೋರಿಸಿದ. ರಾಜನ ಕಡೆಯವರು ಅವುಗಳನ್ನೆಲ್ಲಾ ಊರಿಗೇ ಹಂಚಿ ಬಿಟ್ಟರು.

ಎಲ್ಲರಿಗೂ ಬಯಸದೇ ಬಂದ ಭಾಗ್ಯದಿಂದ ಆದ ಖುಷಿ ಅಷ್ಟಿಷ್ಟಲ್ಲ. ಎಂಥ ಒಳ್ಳೆಯ ವ್ಯಕ್ತಿ ಆತ, ತನಗೇನೂ ಇಟ್ಟುಕೊಳ್ಳದೇ ನಮಗೆ ನೀಡಲು ಹೇಳಿದವನು ಎಂದೆಲ್ಲಾ ಹೊಗಳಿದರು. ಆದರೂ ವ್ಯಕ್ತಿಯ ಮುಖದ ಮೇಲಿನ ಮುಗುಳ್ಳಗೆಯ ಬಣ್ಣ ಬದಲಾಗಲಿಲ್ಲ.

ಬಟ್ಟೆ ಗಂಟು ತಲೆಯ ಮೇಲಿಟ್ಟುಕೊಂಡು ನಡೆದು ಹೊರಟ. ಮಂತ್ರಿಗಳು ಕುದುರೆ ಮೇಲೆ ಹತ್ತುವಂತೆ ಕೋರಿದರು. ಅದಕ್ಕೆ ಆತ ಸದ್ಯಕ್ಕೆ ಅಗತ್ಯವಿಲ್ಲ, ಬೇಕಾದಾಗ ಹೇಳುವೆ ಎಂದು ಬೀಸು ನಡೆ ಹಾಕತೊಡಗಿದ. ಇಡೀ ರಾಜನ ಸೈನ್ಯವೇ ಅವನನ್ನು ಹಿಂಬಾಲಿಸತೊಡಗಿತು.
(ಮುಂದಿನವಾರ : ಆ ಮುಗುಳ್ನಗೆಯ ಮೌಲ್ಯ ತಿಳಿದದ್ದೇ ಆಗ)

ಟಾಪ್ ನ್ಯೂಸ್

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

10-screenshot

Students Notes: ಸ್ಕ್ರೀನ್‌ ಶಾರ್ಟ್‌ಗಳೆಂದು ಪುಸ್ತಕವಾಗದಿರಲಿ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.