ನೀವು ಬರೆದ್ರೇ ಚೆನ್ನಾಗಿರುತ್ತೆ ಸರ್
Team Udayavani, Feb 13, 2020, 5:56 AM IST
ಮಿಸ್ಟರ್ ಡಿಪೆಂಡೆಬಲ್ ಅನಿಸಿಕೊಂಡಾತ ರಾಹುಲ್ ದ್ರಾವಿಡ್. ಖ್ಯಾತಿಯ ಶಿಖರವೇರಿದ ನಂತರವೂ ತನ್ನ ವಿನಯದ ಮಾತುಗಳಿಂದಲೇ ಎಲ್ಲರಿಗೂ ಇಷ್ಟವಾದದ್ದು ದ್ರಾವಿಡ್ ಅವರ ಹೆಚ್ಚುಗಾರಿಕೆ. ಅವರ ಸರಳತೆ, ಸೌಜನ್ಯಕ್ಕೆ ಸಾಕ್ಷಿಯಾಗುವ ಪ್ರಸಂಗವೊಂದು ಹೀಗಿದೆ: ದ್ರಾವಿಡ್ ಓದಿದ್ದು ಬೆಂಗಳೂರಿನ ಸೇಂಟ್ ಜೋಸೆಫ್ ಶಾಲೆ, ಕಾಲೇಜಿನಲ್ಲಿ.
ಚಿಕ್ಕಂದಿನಿಂದಲೂ ಅವರಿಗೆ ಕ್ರಿಕೆಟ್ನಲ್ಲಿ ಆಸಕ್ತಿಯಿತ್ತು. ಶಾಲೆ ಕಾಲೇಜಿನಲ್ಲಿದ್ದಾಗ, ಕ್ರಿಕೆಟ್ನಲ್ಲಿ ಗೆದ್ದಾಗಲೆಲ್ಲ ಒಂದು ಚಿತ್ರ ಮತ್ತು ವರದಿಯೊಂದಿಗೆ ಇಂಡಿಯನ್ ಎಕ್ಸ್ಪ್ರೆಸ್ ಕಚೇರಿಗೆ ಹೋಗುತ್ತಿದ್ದರು ದ್ರಾವಿಡ್. ಅಲ್ಲಿದ್ದ ಹಿರಿಯ ಕ್ರೀಡಾ ವರದಿಗಾರ ವೇದಂ ಜೈಶಂಕರ್ ಅವರ ಎದುರು ನಿಂತು, “ಸರ್, ನಿನ್ನೆ ಟೂರ್ನಮೆಂಟ್ ಇತ್ತು. ನಾವೇ ಗೆದ್ದಿದ್ದು. ದಯವಿಟ್ಟು ಈ ಸುದ್ದಿಯನ್ನು ನಾಳಿನ ಪತ್ರಿಕೆಯಲ್ಲಿ ಪ್ರಕಟಿಸಿ’ ಎನ್ನುತ್ತಿದ್ದರು. ವೇದಂ, “ಆಯ್ತಪ್ಪ ಹಾಕ್ತೇನೆ. ಆದ್ರೆ ಒಂದು ಷರತ್ತು. ಎಲ್ಲ ಪಂದ್ಯಗಳಲ್ಲೂ ನೀನು ಚೆನ್ನಾಗಿ ಆಡಬೇಕು’ ಎನ್ನುತ್ತಿದ್ದರಂತೆ. ಆನಂತರದಲ್ಲಿ ಪದೇಪದೇ ಕ್ರೀಡಾ ಸುದ್ದಿಯೊಂದಿಗೆ ದ್ರಾವಿಡ್, ಎಕ್ಸ್ಪ್ರಸ್ ಬಿಲ್ಡಿಂಗಿನ ಮೆಟ್ಟಿಲೇರುವುದು, ವೇದಂ ಜೈಶಂಕರ್ ಅವರ ಮೆಚ್ಚುಗೆಗೆ ಪಾತ್ರನಾಗುವುದು ಮಾಮೂಲಾಯಿತು.
ಹೀಗೇ ಹತ್ತು ವರ್ಷ ಕಳೆದಾಗ, ದ್ರಾವಿಡ್ ಕ್ರಿಕೆಟ್ ಅಂಗಳದ ದಂತಕಥೆ ಅನ್ನಿಸಿಕೊಂಡರು. ದಾಖಲೆಗಳ ವೀರನಾದರು. ದ ವಾಲ್ ಅನ್ನುವ ಹೆಗ್ಗಳಿಕೆಗೆ ಪಾತ್ರರಾದರು. ಆಗಲೇ ಅವರ ಬದುಕಿನ ಕಥೆ ಬರೆಯಲು ಕ್ರೀಡಾ ಪತ್ರಕರ್ತರು ಸಾಲುಗಟ್ಟಿ ನಿಂತರು. ನಿಮ್ಮ ಕಥೆ ಬರೆಯಲು ಅವಕಾಶ ಕೊಡಿ ಸರ್ ಎಂದು ಕೇಳಿಕೊಂಡರು. ಆಗ ದ್ರಾವಿಡ್ ಏನು ಮಾಡಿದರು ಗೊತ್ತೇ? ಸೀದಾ ವೇದಂ ಜೈಶಂಕರ್ ಬಳಿಗೆ ಬಂದು, “ಸರ್ ನನ್ನನ್ನು ತುಂಬಾ ಹತ್ತಿರದಿಂದ ಕಂಡಿರುವುದು ನೀವೇ. ನನ್ನ ಕಥೆಯನ್ನು ನೀವೇ ಬರೆಯಿರಿ, ಆಗ ಮಾತ್ರ ಅದು ಚೆನ್ನಾಗಿರುತ್ತೆ’ ಅಂದರು. ವೇದಂ ಬರೆದಿರುವ ಪುಸ್ತಕ, ನಾಲ್ಕು ಭಾಷೆಗಳಿಗೆ ಅನುವಾದವಾಗಿದೆ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ