ಮುಖದ ನೆರಿಗೆ ಹೋಗಲಾಡಿಸಿ ತ್ವಚೆ ಕಾಪಾಡಿಕೊಳ್ಳಿ
Team Udayavani, Dec 24, 2019, 5:16 AM IST
ಇತ್ತೀಚಿನ ದಿನಗಳಲ್ಲಿ ವಾತಾವರಣ, ಸೂಕ್ತ ಕಾಳಜಿ ಇಲ್ಲದೆ ಇರುವುದರಿಂದ ಕೂಡ ಮುಖದಲ್ಲಿ ನೆರಿಗೆ ಗಟ್ಟಲು ಆರಂಭವಾಗುತ್ತದೆ. ತ್ವಜೆ ಆದ್ರತೆ ಕಳೆದುಕೊಂಡಾಗ ಈ ಸಮಸ್ಯೆ ತಲೆದೂರುತ್ತದೆ. ಹಾಗಾಗಿ ಆದಷ್ಟು ಸೂಕ್ತ ಆರೈಕೆ ಮಾಡಿಕೊಂಡು ತ್ವಚೆಯನ್ನು ಕಾಪಾಡಿಕೊಳ್ಳಬೇಕು.
ನೆರಿಗೆ ಗಟ್ಟಲು ವಯಸ್ಸು ಮುಖ್ಯ ಕಾರಣವಾಗಿದ್ದರೂ ಕೂಡ ವಾತಾವರಣ, ಕೆಲವು ಅನುವಂಶೀಯ ಗುಣಗಳು ಪ್ರಭಾವ ಬೀರುತ್ತವೆ. ಅದಲ್ಲದೆ ಕೆಲವರಿಗೆ ಬಿಸಿಲಿನ ಪ್ರಮಾಣ ಜಾಸ್ತಿಯಿಂದಾಗಿ ಧೂಳು ಪ್ರದೂಷಣೆ, ಅತಿಯಾದ ಧೂಮಪಾನ ಮಾಡುವುದು ಇವೆಲ್ಲವೂ ನೆರಿಗೆಗಟ್ಟಲು ಕಾರಣ.ಅದಕ್ಕಾಗಿ ಇದನ್ನು ತಡೆಗಟ್ಟಲು ಕೆಲವು ಸರಳ ಉಪಯೋಗ ಇಲ್ಲಿದೆ.
ಲಿಂಬೆರಸ
ನಿಂಬೆಹಣ್ಣಿನ ರಸವನ್ನು ಒಂದು ಚಿಕ್ಕ ಬೌಲ್ನಲ್ಲಿ ತೆಗೆದಿಟ್ಟುಕೊಂಡು 5 ನಿಮಿಷಗಳ ಬಳಿಕ ಅದನ್ನು ನೆರಿಗೆ ಕಟ್ಟಿದ ಜಾಗಕ್ಕೆ ಚೆನ್ನಾಗಿ ಲೇಪಿಸಿಕೊಳ್ಳಿ. ಮುಖದಲ್ಲಿ ಮೊಡವೆ ಅಥವಾ ಗಾಯವಾದ ಸ್ಥಳಕ್ಕೆ ಹಚ್ಚುವುದು ಸೂಕ್ತವಲ್ಲ. ಬದಲಾಗಿ ಮುಖದಲ್ಲಿ ಕಪ್ಪು ಕಲೆ ಮುಂತಾದೆಡೆ ನಯವಾಗಿ ಹಚ್ಚಿ 20 ನಿಮಿಷಗಳ ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆದಾಗ ಮೂರು ದಿನದೊಳಗೆ ಮುಖ ಕಾಂತಿಯುತವಾಗಿ ಸುಕ್ಕು ಗಟ್ಟಿದ ನೆರಿಗೆ ಗಳು ಮಾಯವಾಗಿರುತ್ತವೆ.
ಬಾಳೆಹಣ್ಣು
ಬಾಳೆಹಣ್ಣು ನಿಮ್ಮ ಮುಖದ ಕಾಂತಿಯನ್ನು ಇಮ್ಮಡಿಗೊಳಿಸಿ ಸುಕ್ಕು ಗಟ್ಟಿದ ತ್ವಚೆಯನ್ನು ನಿವಾರಿಸುತ್ತದೆ. ಎರಡು ಹಣ್ಣುಗಳ ತಿರುಳು ತೆಗೆದು ಚೆನ್ನಾಗಿ ಕಿವುಚಿಕೊಂಡು ನಯವಾದ ಲೇಪ ತಯಾರಿಸಿಕೊಂಡು ಮುಖದ ಮೇಲೆ ಹಚ್ಚಿ ಅರ್ಧ ಗಂಟೆ ಹಾಗೇ ಬಿಡಿ. ಅನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಿ. ಈಗ 3ರಿಂದ 4ದಿನ ಮಾಡಿ.
ಇದರಿಂದ ತ್ವಚೆಯ ಸುಕ್ಕುಗುಟ್ಟುವಿಕೆ ತಡೆದು ತ್ವಚೆ ನಯವಾಗಿ ಸುಂದರವಾಗಿ ಇರುವಂತೆ ನೋಡಿಕೊಳ್ಳಬಹುದಾಗಿದೆ.
ಲೋಳೆರಸ
ಆಲೋವೆರಾದಲ್ಲಿರುವ ಮ್ಯಾಲಿಕ್ ಆಮ್ಲ ಚರ್ಮದ ಸೆಳೆತವನ್ನು ಹೆಚ್ಚಿಸುವ ಗುಣ ಹೊಂದಿರುವುದರಿಂದ ಇದರ ತಿರುಳು ತೆಗೆದು ಮುಖಕ್ಕೆ ಹಚ್ಚಿ ಒಣಗಿದ 15 ನಿಮಿಷದ ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದರೆ ಸುಕ್ಕು ಗಟ್ಟುವಿಕೆಯನ್ನು ಹೋಗಲಾಡಿಸಿಕೊಳ್ಳಬಹುದು.
-ಪ್ರೀತಿ ಭಟ್ ಗುಣವಂತೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್