ಓಟ್ಸ್‌ ಸೇವನೆ ಇರಲಿ ಎಚ್ಚರ


Team Udayavani, May 28, 2019, 6:00 AM IST

w-19

ದೇಹದ ತೂಕ ಇಳಿಸಿಕೊಳ್ಳಬೇಕೆಂದು ಬಯಸುವವರಿಗೆ ಬೆಳಗ್ಗಿನ ಉಪಾಹಾರದಲ್ಲಿ ಓಟ್ಸ್‌ ಸೇವನೆ ಅತ್ಯುತ್ತಮ. ಓಟ್ಸ್‌ ಆಹಾರವನ್ನು ಮೈಕ್ರೋವೆವ್‌ ಅಥವಾ ನೆನೆಸಿಟ್ಟು ಉಪಯೋಗಿಸುತ್ತೀರಾ ಎಂಬುದು ಇಲ್ಲಿ ಪ್ರಯೋಜನಕ್ಕೆ ಬಾರದಿದ್ದರೂ ಈ ಧಾನ್ಯ ಹಸಿವನ್ನು ನೀಗಿಸಿ, ತೆಳ್ಳಗಿನ ಮೈಕಟ್ಟು ಹೊಂದಲು ಸಹಕರಿಸುತ್ತದೆ. ಆದರೆ ಇದರಿಂದ ಆರೋಗ್ಯಕ್ಕೆ ಸಮಸ್ಯೆಗಳಿಲ್ಲ ಎಂದು ಹೇಳಲಾಗದು. ಓಟ್ಸ್‌ ಸೇವನೆಯ ವೇಳೆ ಕೆಲವೊಂದು ಅಂಶಗಳನ್ನು ಪರಿಗಣಿಸದೇ ಇದ್ದರೆ ದೇಹದ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಅಲ್ಲದೇ ದೇಹದ ತೂಕ ಇಳಿಸುವ ಆಹಾರ ಸಕ್ಕರೆಯಾಂಶ ಹೆಚ್ಚಿಸುವ ಆಹಾರವಾಗಿ ಬದಲಾಗಿ ಸಮಸ್ಯೆಗೆ ಕಾರಣಬಾಗಬಹುದು.

ಸಮಸ್ಯೆಗೆ ಕಾರಣವಾಗ ಬಹುದಾದ ಅಂಶಗಳು
ಸಕ್ಕರೆಯ ಪ್ರಮಾಣ ಏರಿಸುವುದು
ತೂಕ ಇಳಿಸಿಕೊಳ್ಳಲು ಓಟ್ಸ್‌ ಸೇವನೆ ಒಳ್ಳೆಯದೆ. ಆದರೆ ಓಟ್ಸ್‌ಗೆ ಹೆಚ್ಚಿನ ಪ್ರಮಾಣದ ಸಕ್ಕರೆ ಸೇರಿಸಿ ಆಹಾರ ತಯಾರಿಸಿಕೊಳ್ಳುವುದು ಉತ್ತಮವಲ್ಲ. ಬ್ರೌನ್‌ ಶುಗರ್‌ ಅಥವಾ ವೈಟ್‌ಶುಗರ್‌ ಯಾವುದಾದರೂ ಇರಲಿ ಅತೀ ಹೆಚ್ಚು ಸಕ್ಕರೆ ಡಯೆಟ್‌ಗೆ ಪೂರಕವಲ್ಲ. ಹೆಚ್ಚು ಸಕ್ಕರೆಯಾಂಶ ಸೇರಿಸುವುದರಿಂದ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗುತ್ತದೆ. ಓಟ್ಸ್‌ ಸಿಹಿಯಿಂದ ಕೂಡಿರಬೇಕು ಎಂದು ಬಯಸಿದರೆ ತಾಜಾ ಹಣ್ಣು, ದಾಲ್ಚಿನ್ನಿಯನ್ನು ಬಳಸಬಹುದು.

ಸುವಾಸನೆ ಭರಿತ, ಪ್ಯಾಕ್‌ ಆಗಿರುವ ಓಟ್ಸ್‌
ಪ್ಯಾಕ್‌ ಮತ್ತು ಸುವಾಸನೆಭರಿತ ಓಟ್ಸ್‌ ಆಹಾರ ತಯಾರಿಸುವಿಕೆ ಸಮಯ ಉಳಿಸುತ್ತವೆ ನಿಜ. ಆದರೆ, ಅದರಲ್ಲಿ ಅಷ್ಟೇ ರಾಸಾಯನಿಕ ಮತ್ತು ಸಕ್ಕರೆ ಅಂಶಗಳಿರುತ್ತವೆ. ಕೆಲವೊಂದು ಪ್ಯಾಕ್‌ ಆಗಿರುವ ಓಟ್ಸ್‌ಗಳು 14 ಗ್ರಾಂನಷ್ಟು ಸಕ್ಕರೆ ಮತ್ತು ಕೃತಕ ಬಣ್ಣಗಳನ್ನು ಹೊಂದಿರುತ್ತದೆ. ಹೀಗಾಗಿ ಸುವಾಸೆಯಿಲ್ಲದ, ಪ್ಯಾಕ್‌ ಮಾಡಿರದ ಓಟ್ಸ್‌ಗಳನ್ನು ಖರೀದಿಸುವುದು ಉತ್ತಮ.

ಹೆಚ್ಚು ಸೇವನೆ
ಮುಂಜಾನೆಯ ಉಪಹಾರ ಮುಖ್ಯವಾದುದು. ಆದರೆ ಅತೀ ಹೆಚ್ಚು ಸೇವನೆ ಒಳ್ಳೆಯ ದಲ್ಲ. ಇದು ಹೊಟ್ಟೆಗೆ ತೊಂದರೆ ನೀಡುವುದಲ್ಲದೆ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಒಂದು ಬಾರಿಗೆ ಅರ್ಧಕಪ್‌ನಷ್ಟು ಒಣ ಓಟ್ಸ್‌ನ್ನು ಮಾತ್ರ ಸೇವಿಸುವ ಅಭ್ಯಾಸವಿರಲಿ.

ಅತೀ ಹೆಚ್ಚು ಟಾಪಿಂಗ್ಸ್‌
ಒಂದು ಬೌಲ್‌ ಓಟ್ಸ್‌ ಆಹಾರದ ಮೇಲೆ ಹೆಚ್ಚು ಅಲಂಕಾರವನ್ನು ಬಳಸುತ್ತಿದ್ದರೇ ತೂಕ ಇಳಿಕೆ ಯೋಜನೆ ಕೆಡುವುದು ಖಂಡಿತ. ಆಹಾರದ ಮೇಲೆ ಬಾದಾಮಿ, ದ್ರಾಕ್ಷಿ, ತಾಜಾ ಹಣ್ಣು ಮೊದಲಾದವುಗಳನ್ನು ಬಳಸಿದರೆ ಸೇವಿಸುವ ಒಟ್ಟು ಕ್ಯಾಲೋರಿ ಪ್ರಮಾಣ ಹೆಚ್ಚಾಗುತ್ತದೆ. ಒಂದು ವೇಳೆ ಟಾಪಿಂಗ್ಸ್‌ ಹಾಕಲೇಬೇಕೆಂದಾದರೇ ಎಲ್ಲ ಸೇರಿ 150 ಗ್ರಾಮ್‌ ಕ್ಯಾಲೋರಿಗಿಂತ ಹೆಚ್ಚಾಗುವುದು ಬೇಡ. ಸಣ್ಣ ಪ್ರಮಾಣದಲ್ಲಿ ಟಾಪಿಂಗ್ಸ್‌ ಇರಲಿ.

ಸರಿಯಾದ ಟಾಪಿಂಗ್ಸ್‌ ಇಲ್ಲದಿರುವುದು
ಓಟ್ಸ್‌ ಆರೋಗ್ಯಕರ. ಆದರೆ ಟಾಪಿಂಗ್ಸ್‌ನಲ್ಲಿ ಒಂದು ಚಮಚದಷ್ಟು ನ್ಯೂಟ್ರೇಲಾ ಅಥವಾ ಚಾಕೋಚಿಪ್ಸ್‌ ಬಳಸುವುದು ಉತ್ತಮ ಆಹಾರವನ್ನು ಕೆಡಿಸುತ್ತದೆ. ಟಾಪಿಂಗ್ಸ್‌ಗೆ ಉತ್ತಮವಾದುದನ್ನು ಆರಿಸುವುದು ಫಿಟ್‌ ಮತ್ತು ಆರೋಗ್ಯಕರವಾಗಿರಲು ಒಳ್ಳೆಯದು. ಹಿಡಿಯಷ್ಟು ಬಾದಾಮಿ ಅಥವಾ ತಾಜಾ ಹಣ್ಣುಗಳನ್ನು ಬಳಸಬಹುದು. ಚಾಕೋಚಿಪ್‌ ಬದಲು ಕೋಕೋ ಪೌಡರ್‌ ಬಳಸಬಹುದು. ಚಾಕೋಚಿಪ್‌ಗಿಂತ ಕೋಕೋ ಪೌಡರ್‌ ಶುದ್ಧವಾಗಿದ್ದು, ಕಬ್ಬಿಣ ಮತ್ತು ರೋಗ ನಿರೋಧಕ ಅಂಶಗಳಿಂದ ಕೂಡಿದೆ.

ಟಾಪ್ ನ್ಯೂಸ್

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Health

ಮಳೆಗಾಲದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

Karibevu

ಉತ್ತಮ ಆರೋಗ್ಯಕ್ಕೆ ಕರಿಬೇವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wewewe

Congress;ಪ್ರತಾಪ್‌ಚಂದ್ರ ಶೆಟ್ಟಿ-ಜೆ.ಪಿ.ಹೆಗ್ಡೆ ಭೇಟಿ: ಕಾರ್ಯತಂತ್ರದ ಸಮಾಲೋಚನೆ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

1-qwqeqewq

Kunigal:ನವಮಿಯಂದು ಪಾನಕ ಕುಡಿದ 60 ಮಂದಿ ಅಸ್ವಸ್ಥ, ಮೂವರು ಗಂಭೀರ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.