ಐವತ್ತರ ಅನಂತರ ಆರೋಗ್ಯದ ಬಗ್ಗೆ ಇರಲಿ ಕಾಳಜಿ


Team Udayavani, Apr 30, 2019, 6:00 AM IST

HEALTHA

ಯೌವನದಲ್ಲಿ ದೇಹದ ಬಗ್ಗೆ ಕಾಳಜಿ ಹೊಂದಿರುವ ಅದೆಷ್ಟೋ ಮಂದಿ 50 ದಾಟಿದಂತೆ ದೇಹಾರೋಗ್ಯದ ಮೇಲಿನ ಉತ್ಸಾಹವನ್ನೇ ಕಳೆದುಕೊಂಡು ಬಿಡುತ್ತಾರೆ. ಇದರಿಂದಾಗಿ ವೃದ್ಧಾಪ್ಯದಲ್ಲಿ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.50 ವರ್ಷ ದಾಟಿದ ಬಳಿಕ ಆರೋಗ್ಯದಲ್ಲಿ ಏರುಪೇರಾಗುವುದು ಸಾಮಾನ್ಯ. ಆದರೆ ಒಳ್ಳೆಯ ಜೀವನ ಕ್ರಮದಿಂದ ದೇಹವನ್ನು ಚುರುಕಾಗಿರಿಸಲು ಸಾಧ್ಯ. ನಿಯಮಿತ ಆಹಾರ ಸೇವನೆ, ಸಮಯಕ್ಕೆ ಸರಿಯಾಗಿ ನಿದ್ದೆ, ಒತ್ತಡ ರಹಿತ ಜೀವನ ಇವೆಲ್ಲ ಆರೋಗ್ಯ ಸಮತೋಲನಕ್ಕೆ ಕಾರಣಗಳಾಗಿ ರುತ್ತದೆ.

ಆಹಾರ ಮಿತವಾಗಿರಲಿ
ಆಹಾರ ಕ್ರಮದಲ್ಲಿ ನಿಯಂತ್ರಣವಿದ್ದರೆ 50ರ ಬಳಿಕ ಟೈಪ್‌ 2 ಡಯಾಬಿಟೀಸ್‌, ಸ್ಥೂಲಕಾಯಿಲೆಯಂಥ ಕಾಯಿಲೆಗಳನ್ನು ತಡೆಗಟ್ಟಬಹುದಾಗಿದೆ. ಹೆಚ್ಚು ತರಕಾರಿ, ಹಣ್ಣು ಹಂಪಲು, ಡ್ರೈ ಫ‌ೂಟ್ಸ… , ಕೊಬ್ಬು ರಹಿತ ಆಹಾರ , ಮೀನು, ಪ್ರೋಟಿನ್‌ ಉಳ್ಳ ಪದಾರ್ಥಗಳ ಸೇವನೆ ಮಾಡಬೇಕು. ಉಪ್ಪು, ಹುಳಿ, ಖಾರ, ಸಕ್ಕರೆ ಪದಾರ್ಥ ಮಿತವಾಗಿ ಬಳಸಿದಷ್ಟು ಉತ್ತಮ.

ಆರೋಗ್ಯ ತಪಾಸಣೆ
ಪಾರಂಪರಿಕ ಕಾಯಿಲೆಗಳು ಕೆಲವೊಮ್ಮೆ 50 ವರ್ಷದ ಬಳಿಕ ಬಾಧಿಸುವ ಸಾಧ್ಯತೆ ಇದೆ. ಬಿಪಿ, ಡಯಾಬಿಟಿಸ್‌ ಇತ್ಯಾದಿಗಳು ವಂಶ ಪಾರಂಪರ್ಯದಿಂದ ಬರುವುದರಿಂದ ತಿಂಗಳಿಗೆ ಒಂದು ಬಾರಿ ದೇಹದ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಿಸಬೇಕು. ನುರಿತ ವೈದ್ಯರಿಂದ ಸಲಹೆ ಪಡೆದು ಕಣ್ಣಿನ ತಪಾಸಣೆ, ರಕ್ತದೊತ್ತಡ ಕುರಿತು ಜಾಗರೂಕರಾಗಿರಬೇಕು. ವೈದ್ಯರು ನೀಡುವ ಮಾತ್ರೆಗಳನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳುವ ಮೂಲಕ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು.

ಯೋಗಾಸನಗಳಿಗೆ ಸಮಯವಿರಲಿ
50 ವರ್ಷ ದಾಟಿದ ಬಳಿಕ ಪ್ರತಿನಿತ್ಯ ಬೆಳಗ್ಗೆ ಬೇಗ ಎದ್ದು ಒಂದು ತಾಸು ನಡಿಗೆ, ದಿನಕ್ಕೆ 7ರಿಂದ 8 ತಾಸು ನಿದ್ದೆ, ಯೋಗಾಸನಗಳು ಅವಶ್ಯ. ದುರಾಭ್ಯಾಸದಿಂದ ದೂರ ಉಳಿದಲ್ಲಿ ಮತ್ತಷ್ಟು ಆರೋಗ್ಯ ಉತ್ತಮವಾಗಿರುತ್ತದೆ. ದಿನಕ್ಕೆ 2ರಿಂದ 3 ಲೀಟರ್‌ ನೀರು ಸೇವನೆ ಚಯಾಪಚನ ಕ್ರಿಯೆಗೆ ಸಹಾಯವಾಗಲಿದೆ. ರೋಗ ಲಕ್ಷಣ ಗೋಚರಿಸುವ ಮೊದಲು ಆರೋಗ್ಯ ಕಾಳಜಿ ಇದ್ದಲ್ಲಿ ಸಂಭವಿಸಬಹುದಾದ ಆಘಾತವನ್ನು ತಡೆಯಬಹುದು. ಸ್ನಾಯು ಸಂಬಂಧಿಸಿದ‌ ವ್ಯಾಯಾಮ ತೂಕವನ್ನು ಸಮತೋಲದಲ್ಲಿ ಇರಿಸುತ್ತದೆ. ಪ್ರಾಣಾಯಾಮ ಮಾಡುವುದರಿಂದ ಒತ್ತಡ ನಿವಾರಣೆಯಾಗಿ ಮನಸ್ಸು ದಿನ ಪೂರ್ತಿ ಸಕ್ರಿಯವಾಗುತ್ತದೆ.

-ಧನ್ಯಾ ಶ್ರೀ ಬೋಳಿಯಾರ್‌

ಟಾಪ್ ನ್ಯೂಸ್

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Health

ಮಳೆಗಾಲದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

Karibevu

ಉತ್ತಮ ಆರೋಗ್ಯಕ್ಕೆ ಕರಿಬೇವು

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.