ಕೂದಲಿನ ಆರೈಕೆಗೆ ತೆಂಗಿನೆಣ್ಣೆ
Team Udayavani, Jul 30, 2019, 5:00 AM IST
ಕರಾವಳಿಯಲ್ಲಿ ಆಹಾರ ತಯಾರಿಕೆಯಲ್ಲಿ ತೆಂಗಿನೆಣ್ಣೆಗೆ ಮಹತ್ವವಿದೆ. ತೆಂಗಿನೆಣ್ಣೆ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಈ ತೆಂಗಿನೆಣ್ಣೆ ಕೇವಲ ಅಡುಗೆಗೆ ಮಾತ್ರವಲ್ಲ ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ಕೂಡ ಪ್ರಮುಖ ಪಾತ್ರವಹಿಸುತ್ತದೆ. ಕೂದಲಿನಿಂದ ಹಿಡಿದು ಕಾಲಿನವರೆಗೂ ದೇಹದ ರಕ್ಷಣೆ ಮಾಡುವಲ್ಲಿ ತೆಂಗಿನೆಣ್ಣೆ ಸಹಕಾರಿ. ಅದರಲ್ಲೂ ಕೂದಲಿನ ಆರೈಕೆಗೆ ತೆಂಗಿನೆಣ್ಣೆ ಹೇಳಿ ಮಾಡಿಸಿದ ಎಣ್ಣೆಯಾಗಿದೆ. ಕೂದಲಿನ ಆರೋಗ್ಯ ತೆಂಗಿನೆಣ್ಣೆ ಹೇಗೆ ಸಹಕರಿಸಬಹುದು ಎಂಬ ಮಾಹಿತಿ ಇಲ್ಲಿದೆ.
1. ಒಣ ಕೂದಲು, ನೆತ್ತಿಯನ್ನು ತೇವಗೊಳಿಸುವುದು
ಹೆಚ್ಚಿನ ತೈಲಗಳು ಕೂದಲಿನ ಮೇಲ್ಮೆ„ಯಲ್ಲಿ ಕುಳಿತುಕೊಳ್ಳುತ್ತವೆ. ಆದರೆ ತೆಂಗಿನೆಣ್ಣೆ ಕೂದಲಿನ ಬುಡಕ್ಕೆ ಆಳವಾಗಿ ತೂರಿಕೊಳ್ಳುತ್ತದೆ ಎಂದು ಸಂಶೋಧನೆಗಳು ಹೇಳಿವೆ. ಈ ತೈಲ ಕೂದಲನ್ನು ಮೃದುವಾಗಿಸುತ್ತದೆ. ಕೂದಲು ಶಾಫ್ಟ್ ತುಂಬಲು ಇದು ಸಹಕಾರಿ. ಕೂದಲನ್ನು ತೊಳೆಯುವ ಮುನ್ನ ತೆಂಗಿನೆಣ್ಣೆಯನ್ನು ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ ಒಂದು ಗಂಟೆಯ ಬಳಿಕ ಸ್ನಾ ಮಾಡಿದರೆ ಒಣ ಕೂದಲು ಹಾಗೂ ನೆತ್ತಿ ತೇವಗೊಳ್ಳುವುದು.
2. ಕೂದಲು ಬೆಳೆಯಲು ಸಹಕಾರಿ
ಅನೇಕರು ತೆಂಗಿನೆಣ್ಣೆ ಕೂದಲು ಉದುರುವಿಕೆ ಕಡಿಮೆಗೊಳಿಸಿ, ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. 2015ರಲ್ಲಿ ಇಲಿಗಳ ಮೇಲೆ ನಡೆದ ಅಧ್ಯಯನದಲ್ಲಿ ತೆಂಗಿನೆಣ್ಣೆ ಕೂದಲಿನ ಬೆಳವಣಿಗೆ ಹಾಗೂ ಕೂದಲನ್ನು ದಪ್ಪವನ್ನು ಹೆಚ್ಚಿಸುತ್ತದೆ ಎಂದು ತಿಳಿದು ಬಂದಿದೆ. ತೆಂಗಿನೆಣ್ಣೆ ಪರಿಸರ ಮಾಲಿನ್ಯದಿಂದ ಕೂದಲನ್ನು ರಕ್ಷಿಸುತ್ತದೆ ಹಾಗೂ ಉದುರುವಿಕೆಯನ್ನು ಕಡಿಮೆ ಮಾಡುತ್ತದೆ.
3. ರಾಸಾಯನಿಕ ಹಾನಿಯನ್ನು ತಡೆಯುತ್ತದೆ
ತೆಂಗಿನೆಣ್ಣೆ ಕೂದಲಿನ ಬುಡದಲ್ಲಿ ತುಂಬುವುದರಿಂದ ಹಾನಿಕಾರಕ ಪದಾರ್ಥಗಳಿಂದ ಕೂದಲನ್ನು ರಕ್ಷಿಸುತ್ತದೆ. ಕ್ಲೋರಿನೇಟೆಡ್ ಕೊಳದಲ್ಲಿ ಈಜಲು ಬಯಸುವ ವ್ಯಕ್ತಿ ತೆಂನ ಎಣ್ಣೆಯನ್ನು ಉಪಯೋಗಿಸಿದರೆ ಕೂದಲಿಗೆ ಬರುವ ಕ್ಲೋರಿನ್ ಪ್ರಮಾಣವನ್ನು ಕಡಿಮೆ ಮಾಡಬಹುದು.
4. ಹೊಳಪು ನೀಡುತ್ತದೆ
ಇತರ ಎಣ್ಣೆಗಳಂತೆ ತೆಂಗಿನೆಣ್ಣೆ ಕೂದಲನ್ನು ಹೊಳೆಯುವಂತೆ ಮಾಡುತ್ತದೆ. ಒಣ ಕೂದಲಿನ ಮೇಲೆ ಶೈನ್ ಸೀರಮ್ ಆಗಿ ತೆಂಗಿನೆಣ್ಣೆಯನ್ನು ಹನಿಗಳನ್ನು ಬಳಸುತ್ತಾರೆ. ಸಿಲಿಕೋನ್ ಮತ್ತು ಅಂತಹುದೇ ಪದಾರ್ಥಗಳನ್ನು ತಪ್ಪಿಸಲು ಬಯಸುವ ಜನರು ತೆಂಗಿನೆಣ್ಣೆಯಣ್ನು ಬಳಸಬಹುದು. ಕೂದಲ ಆರೈಕೆಗೆ ತೆಂಗಿನೆಣ್ಣೆ ಪ್ರಯೋಜನಕಾರಿ. ಆದರೆ ಮಾರುಕಟ್ಟೆಯಲ್ಲಿ ದೊರೆಯುವ ತೆಂಗಿನೆಣ್ಣೆಗಳಿಗೆ ರಾಸಾಯನಿಕಗಳಿಂದ ಕೂಡಿದ್ದು ಕೂದಲಿಗೆ ಮಾರಕವಾಗಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ
ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ