ಹಿರಿಯರಿಗೂ ಬೇಕು ವ್ಯಾಯಾಮ

ಇಲ್ಲಿವೆ ಕೆಲವು ವ್ಯಾಯಾಮ

Team Udayavani, May 27, 2019, 6:00 AM IST

w-23

ಆಧುನಿಕ ಜೀವನ ಪದ್ಧತಿಯಲ್ಲಿ ಹಿರಿಯರು ವ್ಯಾಯಾಮಕ್ಕೂ ಆದ್ಯತೆ ನೀಡುವುದು ಅಗತ್ಯ. ಚಟುವಟಿಕೆ ರಹಿತ ಜೀವನದಿಂದ ದೇಹದಲ್ಲಿ ಶಕ್ತಿಯ ಕೊರತೆಯುಂಟಾಗಿ ನಿತ್ಯದ ಕೆಲಸಗಳನ್ನು ನಿರ್ವಹಿಸುವುದೂ ಕಷ್ಟವಾಗಬಹುದು. ಹಾಗಾಗಿ, ನಿತ್ಯ ಕೆಲವು ಸರಳ ವ್ಯಾಯಾಮವನ್ನು ಮಾಡುವುದು ಆರೋಗ್ಯಕ್ಕೆ ಪೂರಕ. ನಿಯಮಿತ ವ್ಯಾಯಾಮದಿಂದ ದೇಹವು ಸಮತೋಲನ ಕಾಯ್ದುಕೊಳ್ಳು ವುದಲ್ಲದೆ, ಮಾನಸಿಕ ಆರೋಗ್ಯವೂ ಲಭಿಸುತ್ತದೆ.

ವಾಕಿಂಗ್‌, ಜಾಗಿಂಗ್‌, ನಿಧಾನ ಓಟ: ಗಂಟುನೋವು, ಬ್ಯಾಲೆನ್ಸ್‌ ಸಮಸ್ಯೆ ಇರುವವರಿಗೆ ಸರಳ ನಡಿಗೆ ಒಂದು ಉತ್ತಮ ವ್ಯಾಯಾಮ. ವಾಕಿಂಗ್‌ನಿಂದ ಕೊಬ್ಬು ಕರಗುತ್ತದೆ. ಸ್ಥಿತಿಸ್ಥಾಪಕತ್ವ ಗುಣ (ಉಲ್ಲಾಸಶೀಲತೆ) ಹೆಚ್ಚಾಗುತ್ತದೆ. ಆರೋಗ್ಯವಾಗಿರಲು ಮುಂಜಾನೆ ಮತ್ತು ಸಂಜೆಯ ನಡಿಗೆ ರೂಢಿಸಿಕೊಳ್ಳುವುದು ಉತ್ತಮ. ಜಾಗಿಂಗ್‌, ನಿಧಾನ ಓಟ ಹೃದಯದ ಆರೋಗ್ಯಕ್ಕೆ ಪೂರಕವಾಗುತ್ತದೆ.

ಈಜು: ಬೇಸಗೆಯಲ್ಲಿ ಈಜು ಹಿತವಾಗಿರುತ್ತದೆ. ಅಷ್ಟೇ ಅಲ್ಲ, ಈಜಿನಿಂದ ಕೈಕಾಲುಗಳ ಚಲನೆ ಸುಲಲಿತವಾಗುತ್ತದೆ. ಮಾಂಸಖಂಡ, ಎಲುಬುಗಳು ಬಲಗೊಳ್ಳುತ್ತವೆ.
ಕುಳಿತು ಏಳುವ ವ್ಯಾಯಾಮ: ಕುರ್ಚಿಯ ಮೇಲೆ ಕುಳಿತು ತತ್‌ಕ್ಷಣ ಎದ್ದು ನಿಲ್ಲುವ ಪ್ರಕ್ರಿಯೆ ಇದು. ಸ್ಥಿರ (ಒಂದು ಹಂತದ) ವೇಗದೊಂದಿಗೆ ಆರಂಭಿಸಿ ಕ್ರಮೇಣ ನಿಮ್ಮ ಅನುಕೂಲಕ್ಕೆ ತಕ್ಕಂತೆ ವೇಗ ಹೆಚ್ಚಿಸಿ. ಹೀಗೆ ಸಾಕಷ್ಟು ಬಾರಿ ಮಾಡಿ. ಇದರಿಂದ ಕಾಲಿನ ಮಾಂಸಖಂಡಗಳು ಬಲಗೊಳ್ಳುತ್ತವೆ.

ಯೋಗ: ಉಸಿರಿನ ನಿಯಂತ್ರಣ ಮತ್ತು ವಿಶ್ರಾಂತಿಯ ಮೂಲಕ ಆರೋಗ್ಯ ವರ್ಧನೆಯ ಉದ್ದೇಶ ಹೊಂದಿರುವವರಿಗೆ ಯೋಗ, ಧ್ಯಾನ ಸಹಕಾರಿ. ದೇಹ ಮತ್ತು ಮನಸ್ಸಿನ ನಡುವೆ ಸಮತೋಲನ ಸಾಧಿಸಲು ಯೋಗ ನೆರವಾಗುತ್ತದೆ. ಒತ್ತಡ ದೂರವಾಗುತ್ತದೆ. ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

ಪೃಷ್ಠ ವ್ಯಾಯಾಮ: ಪೃಷ್ಠದ ಮಾಂಸಖಂಡಗಳನ್ನು ಬಿಗಿಯಾಗಿ ಹಿಡಿದು ಬಿಡುವ ವ್ಯಾಯಾಮವನ್ನು ಸುಮಾರು 10 ಬಾರಿ ಮಾಡುಬಹುದು.

ನೃತ್ಯ: ಲೈವಿ ಆದ ವ್ಯಾಯಾಮ. ಇದಕ್ಕೆ ಪ್ರಚಂಡ ನೃತ್ಯಪಟುವಾಗಬೇಕಿಲ್ಲ. ಸಂಗೀತಕ್ಕೆ ಲಘುವಾಗಿ ನೃತ್ಯ ಮಾಡುವುದರಿಂದ ದೇಹ ಉಲ್ಲಸಿತವಾದೀತು. ಕ್ಯಾಲೊರಿ ಕರಗಲು ನೃತ್ಯ ಸಹಕಾರಿ.

ನಗು: ಎಲ್ಲ ರೀತಿಯ ಕಾಯಿಲೆ, ನೋವುಗಳಿಗೆ ನಗು ಒಂದು ಅತ್ಯುತ್ತಮ ಔಷಧದಂತೆ. ಲಾಫಿಂಗ್‌ ಕ್ಲಬ್‌ಗಳು ಈಗ ಪ್ರಸಿದ್ಧ. ಹಾಸ್ಯದ ಸನ್ನಿವೇಶಗಳಿರುವ ಡಿವಿಡಿ ಬಳಸಿ, ಸ್ಮಾರ್ಟ್‌ಫೋನ್‌ ಮೂಲಕ ಹಾಸ್ಯ, ವಿನೋದಾವಳಿಗಳನ್ನು ನೋಡುತ್ತ ಬಾಯ್ತುಂಬ ನಗುವುದು ಆರೋಗ್ಯಕ್ಕೆ ಉತ್ತಮ. ಒತ್ತಡ ನಿವಾರಣೆಯಾಗುತ್ತದೆ.

ಸೈಕ್ಲಿಂಗ್‌: ಸೈಕಲ್‌ ಸವಾರಿಯಿಂದ ಮಾಂಸಖಂಡಗಳು ಬಲಗೊಳ್ಳುತ್ತವೆ. ಹೃದಯಕ್ಕೂ ಉತ್ತಮ. ಮಾನಸಿಕ ಆರೋಗ್ಯಕ್ಕೂ ಪೂರಕ. ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.

– ಎಸ್ಕೆ

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Health

ಮಳೆಗಾಲದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

Karibevu

ಉತ್ತಮ ಆರೋಗ್ಯಕ್ಕೆ ಕರಿಬೇವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.